Sunday, June 23, 2013

ಹೊಳೆದದ್ದು

ಯಾವುದೇ ಕೃತಿಯನ್ನು ಓದುವಾಗ ಒಳಾರ್ಥಗಳು ಒಮ್ಮೆಯೇ ಹೊರ ಹೊಮ್ಮಲಾರವು. ಮತ್ತೆ ಮತ್ತೆ ಓದಬೇಕು. ಮತ್ತಿಷ್ಟು, ಮಗದಿಷ್ಟು, ಮೊಗೆದಷ್ಟೂ  ಚಿಂತನೆಗಳು ಹುಟ್ಟಬೇಕು, ಧಾರೆಯಾಗಿ ಹರಿಯಬೇಕು. ಬಲ್ಲವರಿಂದ ಅರ್ಥಗಳನ್ನು  ಕೇಳಬೇಕು. ನಮ್ಮ ಅರಿವಿಗೆ ನಿಲುಕಿದ ಅರ್ಥಗಳಿಗೂ, ಅವರ ದೃಷ್ಟಿಯಲ್ಲಿರುವ ಅರ್ಥಗಳಿಗೂ ತುಲನೆ ಮಾಡಬೇಕು. ಕೊನೆಗೂ ತನಗೇನು ಬೇಕು ಅದನ್ನು ಮನದಲ್ಲಿಟ್ಟುಕೊಳ್ಳುವ ಸ್ವಾತಂತ್ರ್ಯ ಓದುಗನಿಗಿದ್ದೇ ಇರುತ್ತದೆ. 

ಪ್ರತೀ ಓದಿಗೂ ಹೊಸ ಚಿಂತನೆಗಳು ಹುಟ್ಟಿದರಷ್ಟೇ ಓದು ಸಾರ್ಥಕ. ಬರಹಗಾರನ ಪ್ರಯತ್ನವೂ ಸಾರ್ಥಕ. ಅಲ್ಲವೇ? 

No comments:

Post a Comment