Monday, September 23, 2013

ಎಂದೂ ಮುಗಿಯದ ಯುದ್ಧ

ಜಗದೀಶ್ ಕೊಪ್ಪ ಅವರ ನಕ್ಸಲ್ ಇತಿಹಾಸ ಕಥನ, ಎಂದೂ ಮುಗಿಯದ ಯುದ್ಧ ಓದಿದೆ. ರಕ್ತಸಿಕ್ತ ಹೆಜ್ಜೆ ಗುರುತುಗಳ ಬಳಿ ಕೂತು, ಪ್ರತೀ ಹೆಜ್ಜೆಯ ಹಿಂದಿನ ಕಥೆಯನ್ನಾಲಿಸಿದಂತಾಯ್ತು. ಚಾರು ಮುಜಮ್ದಾರ್, ವೆಂಟಟಾಪು ಸತ್ಯನಾರಾಯಣ, ಕೊಬಡ್ ಗಾಂಡಿ, ಅನುರಾಧ, ಕೊಂಡಪಲ್ಲಿ ಸೀತಾರಾಮಯ್ಯ ಎಲ್ಲರ ಜೀವನ, ಹೋರಾಟಗಳ ಪರಿಚಯವಿದೆ ಇದರಲ್ಲಿ. ಪ್ರತೀ ಮಾಹಿತಿಯನ್ನೂ, ಅದಕ್ಕೆ ಸಂಬಂಧಿಸಿದ ಅಂಕಿ -ಅಂಶಗಳನ್ನು ಕೊಪ್ಪ ಅವರು ಕಲೆ ಹಾಕಿದ ರೀತಿ ಆಶ್ಚರ್ಯ ಹುಟ್ಟಿಸುತ್ತದೆ. ಕಥನದದ್ದುಕ್ಕೂ ಕಾಡುವ ವಿಷಾದವನ್ನು ಕೊಪ್ಪ ಓದುಗರೊಂದಿಗೆ ಹಂಚಿಕೊಳ್ಳುತ್ತಾ ಹೋಗುತ್ತಾರೆ. ಕೂಲಿ ಕಾರ್ಮಿಕರ, ಆದಿವಾಸಿಗಳ , ಸಣ್ಣ ಹಿಡುವಳಿದಾರರ , ಗೇಣಿದಾರರ , ಬಡ ರೈತರ ಹೀಗೆ ಎಲ್ಲರ ಅಸಹನೆ-ಆಕ್ರೋಶಕ್ಕೂ, ಅಷ್ಟೇ ಅಲ್ಲ, ನಿಟ್ಟುಸಿರು - ಕಣ್ಣೀರಿಗೂ ಸಕಾರಣಗಳನ್ನು ವಿವರಿಸುತ್ತಾ ಹೋಗುತ್ತದೆ ಈ ಪುಸ್ತಕ. ಬೇರೆ ಬೇರೆ ಆಯಾಮಗಳಲ್ಲಿ ನಕ್ಸಲರ, ಮಾವೋವಾದಿಗಳ ಧೋರಣೆ, ಅಭಿಪ್ರಾಯಗಳನ್ನು ತೆರೆದಿಡುತ್ತದೆ. ಕೇವಲ ನಕ್ಸಲರಷ್ಟೇ ಅಲ್ಲ, ಜಮೀನುದಾರರ, ಪೋಲಿಸರ ಹತ್ಯೆಗಳ ಬಗೆಯೂ ನಿಖರವಾಗಿ ಹೇಳುತ್ತಾರೆ ಕೊಪ್ಪ ಅವರು. ಜಿಜ್ಞಾಸೆ, ತರ್ಕ, ವಿವೇಚನೆಗಳಿಗೆ ನಿಲುಕದ ಕೊಲೆಗಳು, ಅಮಾನುಷ ಮುಖಗಳೂ ಪುಸ್ತಕ ಮಡಚಿಟ್ಟ ಮೇಲೂ ಕಾಡುತ್ತವೆ, ಬೊಬ್ಬಿಲಿ ಕಥಾ ಕಿವಿಯಲ್ಲಿ ಬೊಬ್ಬಿರಿಯುತ್ತದೆ. ಗದ್ದಾರ್ ಹಾಡೂ ಕೇಳಿ ಬರುತ್ತದೆ. ವಿಷಾದದ ನಿಟ್ಟುಸಿರೂ ಹೊರ ಹೊಮ್ಮುತ್ತದೆ. ಕೋಶಿಯ ಜೀವನ ಕಥೆ, ವ್ಯಥೆಯೂ ಮನಸ್ಸ ಹಿಂಡಿತು.


ನಾನೆಂದೂ ನೋಡದ, ತಿಳಿಯದ ಇಂತಹ ಮಾಹಿತಿಗಳ ಕೊಟ್ಟಿದುದ್ದಕ್ಕಾಗಿ ಧನ್ಯವಾದಗಳು ಸರ್

No comments:

Post a Comment