tag:blogger.com,1999:blog-770352799503243482024-03-05T20:05:20.825-08:00Manave...Sowmyahttp://www.blogger.com/profile/04986610432583636943noreply@blogger.comBlogger266125tag:blogger.com,1999:blog-77035279950324348.post-69121474586487245282023-06-23T04:06:00.004-07:002023-06-23T04:06:46.674-07:00ಕಸೂತಿ<p></p><p><br /></p><p> Hurt people hurt people</p><p> ― Yehuda Berg</p><p><br /></p><p>ಬಸ್ಸಿಳಿಯುವಾಗಲೇ ಪೂರ್ತಿ ಕತ್ತಲು ಕವಿದಿತ್ತು. ಕೈಲಿದ್ದ ಮೊಬೈಲಿನ ಟಾರ್ಚು ಆನ್ ಮಾಡಿ ಕಲ್ಲಿನ ಚಪ್ಪಡಿಗಳ ಸಂಕದ ಮೇಲೆ ಕಾಲಿಟ್ಟು ನಡೆಯುವಾಗ ‘ಅರೇ ಈ ಚಪ್ಪಡಿಗಳು ಅದೆಷ್ಟು ವರ್ಷಗಳಿಂದ ಬಿದ್ದುಕೊಂಡಿವೆಯಲ್ಲಾ?, ಈ ಕೊಂಪೆಯಲ್ಲಿ ಏನೂ ಬದಲಾಗಿಲ್ಲ, ಆಗುವುದೂ ಇಲ್ಲ’ ಅಂದುಕೊಂಡೆ. ಬಂದು ಏಳು ವರ್ಷಗಳಾಯ್ತಲ್ಲ ಎಂದು ಆ ಕ್ಷಣಕ್ಕೇ ಹೊಳೆಯಿತು. ಅದರಿಂದ ಕೆಳಕ್ಕಿಳಿದು ನಡೆಯುತ್ತಿದ್ದಂತೆ ದಾರಿ ಮಹೇಶನ ಮನೆಯ ಪಕ್ಕಕ್ಕೆ ಹೊರಳಿತು. ಮಂದ ಬೆಳಕಿನಲ್ಲಿ ಆರಾಮವಾಗಿ ಬಿದ್ದುಕೊಂಡ ಅವರ ಮನೆಯ ನಾಯಿ ಬೊಗಳಲು ಶುರು ಮಾಡಿತು. ಮನೆಯೊಳಗಿಂದ “ಏರ್ ಅವು (ಯಾರದು)” ಎಂಬ ಪ್ರಶ್ನೆಗೆ “ನಾನು” ಎಂದಷ್ಟೇ ಹೇಳಿದೆ. “ಓಹ್! ಬಾಬಣ್ಣ ಈಗ ಬರುವುದಾ?, ಗಿರ್ಜತ್ತೆ ಹೇಗಿದ್ದಾರೆ ಈಗ? ಎಂಥ ತಡ ಮಾಡಿ ಹೊರಟ್ರಿಯಾ?” ಎಂಬ ಮಾತಿನೊಂದಿಗೆ ಮಹೇಶನ ಆಕೃತಿ ಮಸುಕಾಗಿ ಕುಂಟುತ್ತಾ ಹೊರಬಂದದ್ದು ಕಂಡಿತು. “ಹೂಂ, ಮಹೇಶಣ್ಣ, ಕಾಲೇಜು ಬಿಟ್ಟು ಮನೆಗೆ ಹೋಗಿ ಹೊರಟು ಬರುವಾಗ ತಡವಾಯ್ತು, ಅಮ್ಮ ಆರಾಮಿದ್ದಾಳೆ, ಕಾಲು ಹೇಗಿದೆ ಇವಾಗ?” ಎಂದು ನಡೆಯುತ್ತಲೇ ಕೇಳಿದೆ. ಅವನು “ಹೂಂ ಪರ್ವಾಗಿಲ್ಲ ಬಾಬಣ್ಣ, ಜಾಗ್ರತೆ ಹೋಗಿ”ಎಂದ. ಮಹೇಶ ಅಮ್ಮನ ದೂರದ ಸಂಬಂಧಿ, ಮಾಧ್ವಿಯತ್ತೆಯ ಎಲ್ಲಾ ಸಮಾಚಾರಗಳನ್ನು ಅಮ್ಮನಿಗೆ ತಿಳಿಸುವಾತ. ಅಡಿಕೆ ಮರಗಳ ಸಪೂರ, ಉದ್ದ ಕಪ್ಪು ನೆರಳುಗಳ ಮಧ್ಯೆ ನಡೆಯುತ್ತಾ ಹೋದಂತೆ, ಮಿಣುಕುಹುಳಗಳ ಮಿಂಚಿ ಮಾಯವಾಗುವ ಬೆಳಕು, ಜೀರುಂಡೆಗಳ ಸದ್ದು, ಕಪ್ಪೆಗಳ ವಟವಟಗಳ ನಡುವೆ ಈ ಕತ್ತಲ ಪ್ರಪಂಚದಲ್ಲಿ ಸುಖವೆನಿಸಿತು. ಕತ್ತಲಿದ್ದರೂ ಸುತ್ತಣ ಏನಿದೆ, ಏನಿಲ್ಲ ಎಂಬುದರ ಅರಿವು ಚೆನ್ನಾಗಿಯೇ ಮನಸ್ಸಿಗೆ ತಿಳಿದಿತ್ತು. ಜಯ, ಸುಧೀ ಇಬ್ಬರೂ ಹತ್ತಿ ಕೂತು ದಾರಿ ಕಾಯುತ್ತಿದ್ದ ಮಾವಿನ ಮರ, ಅದರಾಚೆಗೆ ಸಣ್ಣ ಹೊಂಡ, ಅದರ ಸುತ್ತ ಬೆಳೆದ ಜರಿ ಗಿಡ, ದಂಡೆಯಂಚಿಗೆ ಬೆಳೆದ ಕತ್ತರಿ ದಾಸವಾಳದ ಗಿಡ, ಅದರ ಪಕ್ಕದ ಜಂಬೂ ನೇರಳೆ ಮರ, ಮೈ ತುಂಬ ಹೂ ಬಿಡುತ್ತಿದ್ದ ಕರವೀರ ಮತ್ತದರ ಗಟ್ಟಿ ಕಾಯಿಗಳು ಎಲ್ಲವೂ ಬೆಳಕಿದ್ದಾಗ ಹೇಗೆ ಕಾಣಿಸುತ್ತಿತ್ತೋ ಅಷ್ಟೇ ನಿಚ್ಚಳವಾಗಿ ಮನದ ಕಣ್ಣಿಗೆ ಗೋಚರಿಸುತ್ತಿತ್ತು. ಆ ಕರವೀರದ ಕಾಯಿಗಳಲ್ಲಿ ಜಯಾ ಅದೆಷ್ಟು ಚೆನ್ನಾಗಿ ಪೊಕ್ಕ ಆಡ್ತಿದ್ದಳು! </p><p>ಅತ್ತೆ ಮನೆಯ ದೀಪದ ಬೆಳಕು ಕಾಣಿಸುತ್ತಿದ್ದಂತೆ ರಾಜನ್ ನಾಯಿ ಜೋರಾಗಿ ಬೊಗಳುತ್ತಾ ಸ್ವಾಗತಿಸಿದ. “ಎಂಥಾ ಮಾರಾಯ, ಅಜ್ಜ ಆಗಿದ್ದೀಯಲ್ಲಾ? ನನ್ನ ಗುರ್ತ ಸಿಗುವುದಿಲ್ಲ ಅಲ್ಲಾ ನಿಂಗೀಗ, ಕಾಟು ಎಲ್ಲಾದ್ರೂ ತಂದು” ಅನ್ನುತ್ತಾ ಬೈದು ಅದರ ಹತ್ತಿರ ಹೋದರೆ, ಬಾಲ ಆಡಿಸುತ್ತಾ, ಶೇಲೆ ಮಾಡುತ್ತಾ ಕಾಲು, ಕೈ ನೆಕ್ಕಲು ಶುರು ಮಾಡಿದ. ಅದರ ಸಂಭ್ರಮ ಮುಗಿದ ಮೇಲೆ, ತಪ್ಪಲೆಯಲ್ಲಿಟ್ಟಿದ್ದ ನೀರಿನಲ್ಲಿ ಕೈ ಕಾಲು ತೊಳೆಯುತ್ತಾ ಬಲಗಡೆ ಕಣ್ಣು ಹಾಯಿಸಿದರೆ, ದೊಡ್ಡ ಚಾವಡಿಯ ಮೂಲೆಯಲ್ಲಿ ರಾಶಿ ಬಟ್ಟೆಗಳಲ್ಲಿ ಮುಳುಗಿರುವ ತಲೆಯೊಂದು ಕಾಣಿಸಿತು. ನಾಯಿ ಬೊಗಳಿದರೂ ಕೇಳಲಿಲ್ವಾ ಇವಳಿಗೆ ಅಂದುಕೊಂಡು ಚಾವಡಿಯ ಕಡೆ ನಡೆದು ಮೆಟ್ಟಲು ಹತ್ತುತ್ತಿದ್ದಂತೆ ಎಮರ್ಜೆನ್ಸಿ ದೀಪದ ಹತ್ತಿರ ಕೂತು, ರಾಶಿ ರಾಶಿ ಬಟ್ಟೆಯ ತುಂಡುಗಳು, ಬೇರೆ ಬೇರೆ ಸೈಜಿನ ರಿಂಗುಗಳು, ಬಣ್ಣ ಬಣ್ಣದ ಹೊಳೆಯುವ ಮಣಿಗಳು, ಬಗೆ ಬಗೆಯ ದಾರಗಳು ಎಲ್ಲವನ್ನೂ ಪುಟ್ಟ ಪುಟ್ಟ ತಟ್ಟೆಗಳಲ್ಲಿ ಹರಡಿಸಿಕೊಂಡು ಅದರ ಮಧ್ಯೆ ಕಸೂತಿ ಹಾಕುತ್ತಾ ಕೂತಿದ್ದಳು ಮಾಧ್ವಿಯತ್ತೆ… ಯಾವುದೋ ಬೇರೆ ಲೋಕಕ್ಕೆ ಬಂದಂತನಿಸಿತು. “ಅತ್ತೆ!” ಎಂದಾಗ ತಲೆಯೆತ್ತಿದವಳ ಕಣ್ಣಲ್ಲಿ ಸಂತಸದೆಳೆ ಒಂದರೆಗಳಿಗೆ ಕಂಡಂತಾಯ್ತು. “ಬಾಬಣ್ಣ, ಬಂದ್ಯಾ, ತಡವಾಯ್ತಲ್ಲಾ ಮಗ?” ಎಂದಳು. ಮಹೇಶ ಹೇಳಿರಬೇಕು ಅಂದುಕೊಂಡು ತಲೆಯಾಡಿಸಿದೆ. “ಹೋಗು, ಸ್ನಾನ ಮುಗಿಸಿ ಬಾ, ಊಟ ಮಾಡುವೆಯಂತೆ, ಕಾಫಿ ಬೇಡ ಅಯ್ತಾ ಇಷ್ಟು ಹೊತ್ತಲ್ಲಿ” ಎನ್ನುತ್ತಾ ಕನ್ನಡಕ ತೆಗೆದು ಮೇಲೆಳಹೊರಟಳು. “ಬೇಡ, ಸಧ್ಯಕ್ಕೆ ಹಸಿವಿಲ್ಲತ್ತೆ, ನೀನು ಕೂತ್ಕೊ, ಕಾಲೇಜಿಂದ ಬಂದು ಸ್ನಾನ ಮುಗಿಸಿಯೇ ಹೊರಟೆ, ಬಸ್ಸಲ್ಲಿ ಏನೂ ಆಯಾಸವಾಗಿಲ್ಲ, ಸ್ನಾನ ನಾಳೆ ಮಾಡ್ತೆ, ಆಗ್ದಾ?” ಎಂದು ಒಂದು ನಿಮಿಷ ತಡೆದು, “ಸುಧೀ?” ಎಂದು ತಡವರಿಸುತ್ತಾ ಕೇಳಿದಾಗ ಅವಳು ಏನೂ ಭಾವನೆಗಳನ್ನು ತೋರದೆ “ಬಾಣಂತಿ ಕೋಣೆಯಲ್ಲಿ” ಎಂದಳು. “ಬಾಣಂತಿ ಕೋಣೆ?” ಎಂದು ಆಶ್ಚರ್ಯದ ಉದ್ಗಾರ ಬಾಯಿಂದ ಗೊತ್ತಿಲ್ಲದೆಯೇ ಹೊರಬಿತ್ತು, ಮಾಧ್ವಿಯತ್ತೆ ತಲೆಯೆತ್ತಲೂ ಇಲ್ಲ, ಮಾತೂ ಆಡದೇ ಮತ್ತೆ ಕನ್ನಡಕ ಧರಿಸಿ ತನ್ನ ಕೆಲಸ ಮುಂದುವರಿಸಿದಳು.</p><p>ಎದ್ದು ಚಾವಡಿ ದಾಟಿ ನಡುಮನೆಗೆ ಬಂದರೆ ಮಾವ ಕತ್ತಲಲ್ಲಿ ಕೂತು ಮಣ ಮಣ ಮಾಡುತ್ತಿದ್ದದ್ದು ಕೇಳಿತು. “ಮಾವ, ನಾನು ಬಾಬು” ಎಂದೆ, ಉತ್ತರವಿಲ್ಲ. ಮತ್ತೆ ಚಾವಡಿ ಹಾದು, ಕೊಟ್ಟಿಗೆ ಮತ್ತು ಬಚ್ಚಲ ನಡುವೆಯಿದ್ದ ಬಾಣಂತಿ ಕೋಣೆಗೆ ನಡೆದೆ. ಬಾಗಿಲು ಸ್ವಲ್ಪವೇ ಸ್ವಲ್ಪ ತೆರೆದಿತ್ತು, ಜೀರೋ ಬಲ್ಬಿನ ಮಂದ ಬೆಳಕು ಹೊರಗೆ ಬರಲು ಸೆಣೆಸುತ್ತಿತ್ತು. ಮೆಲ್ಲಗೆ ಬಾಗಿಲು ದೂಡಿ ಕಾಲಿಟ್ಟು ಸುತ್ತ ನೋಡಿದರೆ, ಗೊರಬುಗಳು, ನೇಗಿಲು ಇತ್ಯಾದಿ, ಗದ್ದೆಗೆ ನೇಜಿ ನೆಡಲು, ಉಳಲು ಬೇಕಾದ ಎಲ್ಲಾ ವಸ್ತುಗಳಿದ್ದವು. “ಸುಧೀ” ಎಂದು ಮೆತ್ತಗೆ ಕರೆದರೆ, ಯಾವುದೋ ಮೂಲೆಯಿಂದ ಅವನ ಸ್ವರ ಕೇಳಿದಂತಾಯ್ತು. ಗೋಡೆ ತಡಕಾಡಿ ಲೈಟ್ ಸ್ವಿಚ್ ಆನ್ ಮಾಡಿದರೆ, ಮೂಲೆಯೊಂದರಲ್ಲಿ ಹಾಸಿಗೆಯ ಮೇಲೆ ಕೃಶಕಾಯ ಆಕೃತಿ ಮಲಗಿದೆ, ಸುಧೀ ಎಂದು ನಂಬಲಾರದಷ್ಟು ಬದಲಾಗಿದ್ದಾನೆ. ಮುಖಕ್ಕೆ ಯಾರೋ ರಪ್ ಎಂದು ಬಾರಿಸಿದಂತಾಯ್ತು. ಅಲ್ಲಿ ಕಾಣುತ್ತಿದ್ದದ್ದು, ಸುಮಾರು ಹದಿನೈದು ವರ್ಷಗಳಿಂದ ಭೀಮಸೇನ ಎಂದು ಕರೆಸಿಕೊಳ್ಳುತ್ತಿದ್ದ ಜೀವ ಎಂದು ನಂಬಲು ಆಗಲೇ ಇಲ್ಲ, ಕಣ್ಣಿಗೆ ಕಂಡದ್ದನ್ನು ಜೀರ್ಣಿಸಿಕೊಳ್ಳಲು ಒದ್ದಾಡಿದೆ. ಕಣ್ಣು ಮಂಜಾಗಿ, ಗಂಟಲು ಕಟ್ಟಿ ಬಂತು. ಹೇಗಿದ್ದ ಜೀವ, ಛೇ! ಮೊದಲೇ ಬಂದಿದ್ರೆ ಏನಾಗ್ತಿತ್ತು ನಂಗೆ? ಏಳು ವರ್ಷ ಕತ್ತೆ ಕಾಯ್ತಿದ್ದೆನಾ ಅನಿಸಿ ನನ್ನ ಮೇಲೆ ನನಗೇ ಸಿಟ್ಟು ಬಂತು. ಸ್ವಲ್ಪ ಸಾವರಿಸಿಕೊಳ್ಳುವಷ್ಟರಲ್ಲಿ ಸುಧೀ ತನ್ನ ನಿತ್ರಾಣ ದನಿಯಲ್ಲಿ “ಬಾಬಣ್ಣ, ನಿನ್ನ ನೋಡಬೇಕು ಅಂತ ತುಂಬಾ ಆಸೆಯಾಗಿತ್ತೋ”ಅಂದ. ಇಷ್ಟೂ ಹೊತ್ತು ಗಮನಕ್ಕೆ ಬಾರದ ಕಮಟು ವಾಸನೆ ಒಂದೇ ಸಲ ಮೂಗಿಗೆರಗಿತು. ಕೂರಲು ಜಾಗವೇ ಇರಲಿಲ್ಲ, ತಲೆ ಹತ್ತಿರ ಒಂದು ಚೊಂಬು, ಮತ್ತೊಂದು ಲೋಟವಿತ್ತು ಅಷ್ಟೆ. ಅಲ್ಲಿದ್ದ ಒಂದಿಷ್ಟು ಸಾಮಾನುಗಳನ್ನು ಬದಿಗೆ ಸರಿಸಿ, ಅವನ ಪಕ್ಕದಲ್ಲಿ ಹೋಗಿ ಕೂತೆ. ಕುರುಚಲು ಗಡ್ಡ, ಕೆದರಿದ್ದ ರಾಶಿ ತಲೆ ಕೂದಲು. ಅವನ ಕಟ್ಟಿಗೆಯ ಹಾಗಿದ್ದ ಕೈ ಹಿಡಿದು “ಹೇಗಿದ್ದೀ ಸುಧೀ?” ಎಂದರೆ, ಅವನು ನಿರ್ಭಾವುಕನಾಗಿ ಸುಮ್ಮಗೆ ದಿಟ್ಟಿಸಿದ. ಒಂದಿಷ್ಟು ಹೊತ್ತಾದ ಮೇಲೆ “ಗೊತ್ತಿಲ್ಲ ಬಾಬಣ್ಣ, ಓಬಯ್ಯ ಏನೋ ಮೂರೂ ಹೊತ್ತು ಅನ್ನ ಕಲೆಸಿ ತಿನ್ನಿಸುತ್ತಾನೆ, ಆ ಅಡಕೆಯ ಸೋಗೆ ಮೇಲೆ ಪಾಯಿಖಾನೆ ಆಗುತ್ತೆ. ನೀರು ತಲೆಯ ಹತ್ತಿರ ಉಂಟು, ಹಗಲು ರಾತ್ರಿ ಇಲ್ಲೇ ಬಿದ್ದಿರುವುದು. ಉರುವಾಗ್ತದೆ, ಹೊರಗೆ ಹೋಗಬೇಕು, ಗುಡ್ಡ ಸುತ್ತಬೇಕು ಅನಿಸ್ತದೆ” ಅಂದ. ಯಾವ ಮಾತೂ ಹೊಳೆಯಲಿಲ್ಲ, ತಲೆ ಬ್ಲಾಂಕ್ ಆಯ್ತು. ಸುಧೀ ಏಳಲು ಪ್ರಯತ್ನಿಸಿದ, ಗೋಡೆಗೆ ದಿಂಬು ಒರಗಿಸಿ, ಅವನನ್ನೆತ್ತಿ ಕೂರಿಸಿದೆ. “ನನ್ನ ಅಮ್ಮ ಎಂಬ ಮಹಾರಾಣಿಗೆ ಉಚ್ಚೆ, ಚಿಚ್ಚಿಗಳ ವಾಸನೆ ಮನೆಯಿಡೀ ಹರಡಿ ಊಟಕ್ಕೆ ಕೂತ್ರೆ ವಾಕರಿಕೆ ಬರ್ತದಂತೆ, ಅಪ್ಪನ ಕೆಲ್ಸ ಮಾಡಿಯೇ ಸಾಕಾಗಿರ್ತದೆ ಅವ್ಳಿಗೆ, ನನ್ನಿಂದ ಇನ್ನಷ್ಟು ಕಷ್ಟ ಯಾಕೆ, ನಾನೇ ಇಲ್ಲಿಗೆ ಹಾಸಿಗೆ ಹಿಡ್ಕೊಂಡು ಬಂದೆ, ಆರಾಮಾಗಿರ್ಲಿ ಅವ್ಳು ಅಲ್ಲಿ” ಎಂದ. ದನಿಯಲ್ಲಿನ ತಾತ್ಸಾರ, ಕಹಿ, ತಿರಸ್ಕಾರ ಅರ್ಥವಾಯಿತು. ನಾಲಿಗೆ ಹೊರಳಿಸುವ ಪ್ರಯತ್ನ ಮಾಡಿದರೂ ಶಬ್ದ ಹೊರಡಲಿಲ್ಲ. “ಜಯಾ ಕರೀತಾನೆ ಇರ್ತಾಳೆ, ಇಬ್ರೂ ಒಟ್ಟಿಗೆ ಆರಾಮಾಗಿರಬಹುದು, ಹೋದ್ರಾಯ್ತು ಅಲ್ಲಿಗೆ ಬೇಗ” ಎಂದವನು “ಇರ್ಲಿ ಬಾಬಣ್ಣ, ನೀ ಹೇಳು, ಕೇಶವ ಮಾಮ, ಗಿರ್ಜಾ ಮಾಮಿ ಹೇಗಿದ್ದಾರೆ? ನಂಗೇನಾದ್ರೂ ತಂದ್ಯಾ?” ಎಂದು ಸ್ವಲ್ಪ ಗೆಲುವಿನ ಸ್ವರದಲ್ಲಿ ಕೇಳಿದ.“ಹೌದು, ಅಮ್ಮ ಈವಾಗ ಆರಾಮಾಗಿದ್ದಾಳೆ, ನಿನ್ನ ತುಂಬಾ ನೆನಪಿಸಿಕೊಳ್ಳುತ್ತಾಳೆ, ಆಸ್ಪತ್ರೆಯಿಂದ ಬಂದು ಹದಿನೈದು ದಿನ ಆಯ್ತು, ಅವಳು ಎಲ್ಲೂ ಟ್ರಾವೆಲ್ ಮಾಡಬಾರದು ಒಂದು ತಿಂಗಳು, ಅದಕ್ಕೆ ಬಂದಿಲ್ಲ, ಈ ತಿಂಗಳ ಕೊನೆಗೆ ಬರ್ತಾಳೆ ನಿನ್ನ ನೋಡೋಕೆ, ಓಹ್! ಮರೆತೇ ಹೋಗಿತ್ತು, ತಡಿ” ಎಂದವನಿಗೆ ಹೇಳಿ, ಚಾವಡಿಗೆ ಓಡಿ ಬ್ಯಾಗಿನಲ್ಲಿದ್ದ, ತಿಂಡಿಯ ಚೀಲ, ಮತ್ತೆ ಒಂದಿಷ್ಟು ಪುಸ್ತಕಗಳನ್ನು ತೆಗೆದುಕೊಂಡೆ. ಅತ್ತೆ ಕಡೆ ನೋಡಬೇಕೆನಿಸಲಿಲ್ಲ. ತಿಂಡಿಯ ಚೀಲದಿಂದ ಡೈರಿ ಮಿಲ್ಕು, ಚಿಪ್ಸ್, ಹಣ್ಣುಗಳು ಮತ್ತು ಅವನಿಷ್ಟದ ಖಾರ ಶೇಂಗಾದ ಪ್ಯಾಕೆಟುಗಳನ್ನು ತೆಗೆಯುತ್ತಿದಂತೆ ಅವನ ಮುಖವರಳಿತು. ಮೊದಲಿನ ಪುಟ್ಟ ಭೀಮಸೇನ ಕಣ್ಮುಂದೆ ಬಂದು ನಕ್ಕಂತಾಯ್ತು. ಎಲ್ಲವನ್ನೂ ಬಾಚಿ ಅಪ್ಪಿಕೊಂಡ. ಡೈರಿಮಿಲ್ಕಿನ ರ್ಯಾಪರ್ ಬಿಚ್ಚಿ ತಿನ್ನುತ್ತಾ “ಇದೊಂದು ಮಾತ್ರ ಗಿರ್ಜಾ ಮಾಮಿ ಮರೆಯಲ್ಲ ನೋಡು, ನಂಗಿಪ್ಪತ್ತೆರಡು ವರ್ಷವಾದ್ರೂ ಅವರಿಗೆ ನಾನಿನ್ನೂ ಮಗೂನೇ” ಎಂದು ಪುಸ್ತಕಗಳಲ್ಲೊಂದನ್ನು ಎತ್ತಿಕೊಂಡು ನನ್ನ ಕಡೆಗೆ ಒಮ್ಮೆ ಧನ್ಯತೆಯಿಂದ ನೋಡಿ, “ನಾ ತಿಂತಾ ಓದ್ಲಾ ಬಾಬಣ್ಣ ?”ಎಂದಾಗ ಸರಿಯೆಂದು ನಕ್ಕು ಅಲ್ಲಿಂದೆದ್ದೆ. ಅದಷ್ಟನ್ನೂ ಗಿರ್ಜಾ ಮಾಮಿ ಕಳಿಸದ್ದಲ್ಲ, ನಾನೇ ತಂದೆ ಎನ್ನಲು ಮನಸ್ಸಾಗಲಿಲ್ಲ. </p><p>ಹೊರಬರುವಷ್ಟರಲ್ಲಿ ರಾಜನ್ ಗುರ್ರ್ ಎಂದಿದ್ದೂ, ಅದರ ಹತ್ರ ತುಳುವಿನಲ್ಲಿ ಮಾತಾಡಿದ ಓಬಯ್ಯನ ಸ್ವರವೂ, ಅವನ ಸ್ಲಿಪರ್ರಿನ ಶಬ್ದವೂ ಕೇಳಿ ನಂತರ ಅವನ ದೃಢಕಾಯವೂ ಕಾಣಿಸಿಕೊಂಡಿತು. “ಓಬಯ್ಯ…ಸೌಖ್ಯಾ ?”ಎಂದೆ.ಅವನೂ “ಹಾಂ” ಎಂದ. ಅವನು ಹತ್ತಿರ ಬರುವುದನ್ನೇ ಕಾದು, ಮೆಲು ದನಿಯಲ್ಲಿ, “ನಾಳೆ ಆ ಕೋಣೆ ಪೂರ್ತಿ ಸ್ವಚ್ಛ ಮಾಡಿ, ಎಲ್ಲಾ ಗದ್ದೆ, ನಾಟಿ ಸಾಮಾನುಗಳನ್ನು ಬಚ್ಚಲ ಮೇಲೆ ಅಟ್ಟಕ್ಕೆ ಹಾಕಿ, ಅಲ್ಲಿ ಸುಧೀಗೊಂದು ಮಂಚ ಹಾಕಲು ಜಾಗ ಆಗಬೇಕು” ಎಂದೆ. ನನ್ನ ದನಿಯಲ್ಲಿದ್ದ ಅಪ್ಪಣೆ ಕೇಳಿ ಅವನಿಗೆ ಆಶ್ಚರ್ಯವಾಗಿರಬೇಕು. “ಅಲ್ಲ, ಅಮ್ಮ…”ಎಂದು ಏನೋ ಮಾತನಾಡಲು ಹೊರಟ.ತಡೆದು, “ ಆ ಮಹೇಶನ ತಮ್ಮ ಉಜಿರೆಯಲ್ಲಿ ಓದೋದಲ್ವಾ, ನಾಳೆ ಅವ್ನು ಕಾಲೇಜಿಗೆ ಹೋಗಿ ಬರುವಾಗ ಒಂದು ಬೆಡ್ ಪಾನ್ ತರೋಕೆ ಹೇಳು” ಎಂದು ಸ್ವಲ್ಪ ದನಿ ಎತ್ತರಿಸಿಯೇ ಹೇಳಿದೆ. “ಸರಿ ಬಾಬಣ್ಣ” ಎಂದ ಅವನು. </p><p>ಕೊಟ್ಟಿಗೆಯಲ್ಲಿ ದನಗಳು ಮೆಲುಕು ಹಾಕುವ, ಅವುಗಳ ಕೊರಳಿನ ಘಂಟೆಯ ಸದ್ದು ಕೇಳುತ್ತಾ ಚಾವಡಿಯ ಮೆಟ್ಟಲ ಮೇಲೆ ಕೂತೆ. ದೊಡ್ಡ ತುಳಸಿಕಟ್ಟೆಯಲ್ಲಿ ದೀಪ ಗಾಳಿಗೆ ಓಲಾಡುತ್ತಾ ಉರಿಯುತ್ತಿತ್ತು. ಅದರ ಬೆಳಕಲ್ಲಿ ಕಟ್ಟೆಯ ಮೇಲೆ ಕೆತ್ತಿದ್ದ ಲಕ್ಷ್ಮಿ ಸುಂದರವಾಗಿ ಕಾಣುತ್ತಿದ್ದಳು. ದೂರದಲ್ಲಿ ಕಾಣುತ್ತಿದ್ದ ಬಾವಿಕಟ್ಟೆ, ಮಾವಿನ, ತೆಂಗಿನ, ಅಡಿಕೆ ಮರದ ಛಾಯೆಗಳು. ವರ್ಷಕ್ಕೆರಡು ಸರ್ತಿ ರಜೆಯಲ್ಲಿ ಇಲ್ಲಿಗೆ ಬಂದಾಗ ಆ ಬಾವಿಕಟ್ಟೆಯಲ್ಲಿ ಅಮ್ಮ ಬಟ್ಟೆ ಒಗೆಯುತ್ತಿದ್ದದ್ದು, ನಾನು, ಜಯ, ಸುಧೀ ಮೂರೂ ಜನ ಸುತ್ತ ಆಟವಾಡುತ್ತಾ ಅಮ್ಮನಿಗೆ ಉಪದ್ರ ಕೊಟ್ಟು ಬೈಸಿಕೊಳ್ಳುತ್ತಿದ್ದದ್ದು, ಪಕ್ಕದ ಹಳ್ಳದಲ್ಲಿ ಬೈರಾಸಿನಲ್ಲಿ ಮೀನು ಹಿಡಿಯುತ್ತಾ, ಗದ್ದೆ, ಗುಡ್ಡ, ತೋಟ, ನಾಗಬನ, ಕೆರೆದಂಡೆ, ಬೆಟ್ಟುಗದ್ದೆ ಸುತ್ತುತ್ತಿದ್ದದ್ದು ಎಲ್ಲವೂ ಕಣ್ಮುಂದೆ ಸಿನಿಮಾ ರೀಲಿನ ಥರಾ ಸಾಗಿ ಹೋಯ್ತು. ಜಯಾ ಅದೆಷ್ಟು ಚೆಂದವಿದ್ದಳು, ಎರಡು ಜಡೆ ಕಟ್ಟಿ ಕೆಂಪು ರಿಬ್ಬನ್ ಹಾಕಿ, ಹಣೆಗೆ ಲಾಲ್ ಗಂಧ ಇಟ್ಟರೆ ಮುದ್ದು ಮುದ್ದು ಬೊಂಬೆಯಂತೆ ಕಾಣುತ್ತಿದ್ದಳು. ಸುಧೀ ದೊಡ್ಡ ಜೀವ, ನಮ್ಮಿಬ್ರಿಗೂ ಅವನೇ ರಕ್ಷಕ, ಎಲ್ಲಾ ಕಿತಾಪತಿಗಳೂ ಅವನ ಸುಪರ್ದಿಯಲ್ಲೇ ನಡೆಯಬೇಕು. ತೆಂಗಿನ ಸೋಗೆಯಲ್ಲಿ ನಮ್ಮನ್ನು ಕೂರಿಸಿ ಎಳೆಯೋದೂ ಅವನೇ. ಗೇರು , ಕುಂಟಾಳ, ಮಾವಿನ ಹಣ್ಣು ಕೊಯ್ಯೋದೂ ಅವನೇ. ವಯಸ್ಸಿನಲ್ಲಿ ಜಯಾ ದೊಡ್ಡವಳು, ಆದರೆ ಸ್ವಲ್ಪ ಕಡ್ಡಿಯೇ, ಅವಳಿಗಿಂತ ಎರಡು ವರ್ಷಕ್ಕೆ ಚಿಕ್ಕವನಾದ ನಾನೂ ಹಾಗೇ. ನನಗಿಂತ ಒಂದು ವರ್ಷ ಚಿಕ್ಕವನಾದ ಸುಧೀಗೆ ಮಾತ್ರ ಭೀಮಬಲ. ಒಂದ್ಸಲ ಅದು ಹೇಗೋ ಅವನಿಗೆ ಕೆಸುವಿನ ಎಲೆ ತಿನ್ನಿಸಿ ಅಳುವಂತೆ ಮಾಡಿದ್ದೆ ಅಲ್ಲಾ, ಆಮೇಲೆ ಅಮ್ಮ ಬೈದ್ರೆ ಜಯಾ ಬಂದು ತಾ ಮಾಡಿದ್ದೆಂದು ಸುಳ್ಳು ಹೇಳಿದರೂ ಮಾಧ್ವಿಯತ್ತೆ ದಡ್ಡನೇನೋ ನೀನು ಅಂತ ಸುಧೀಗೆ ಹೊಡೆದಿದ್ದು…ಎಲ್ಲಾ ನೆನಪುಗಳೂ ತಾ ಮುಂದು ತಾ ಮುಂದು ಅಂತ ಬರತೊಡಗಿದವು, ಆದರೀಗ? ಜಯಾ ಇಲ್ಲ, ಸುಧೀ ಅವಳೆಡೆಗೇ ಜಾರಿ ಹೋಗುತ್ತಿದ್ದಾನೆ, ಅತ್ತೆ ಅವರದ್ದೇ ಲೋಕದ್ದಲ್ಲಿದ್ದರೆ, ಮಾಮ ಇದ್ದೂ ಇಲ್ಲದ ಹಾಗೆ… ಅಯ್ಯೋ ಈ ಮನೆಯ ಅವಸ್ಥೆಯೇ ಅನಿಸಿ ಅರಿವಿಲ್ಲದೆಯೇ ನಿಟ್ಟುಸಿರು ಹೊರಬಿತ್ತು. </p><p>ಅತ್ತೆ ಊಟಕ್ಕೆ ಕರೆದರು, ಅಷ್ಟು ದೊಡ್ಡ ಅಡುಗೆಮನೆಯಲ್ಲಿ ನಾವಿಬ್ಬರೇ, ಒಂದು ಕಾಲದಲ್ಲಿ ಯಾವಾಗಲೂ ತಿರುಗುತ್ತಿದ್ದ ದೊಡ್ಡ ಗ್ರೈಂಡರ್, ಎಲೆಯ ಸುತ್ತಮುತ್ತ ತಿರುಗುತ್ತಿದ್ದ ಚಾಮಿಯ ವಂಶದ ಕುಡಿಗಳು, ನಿಂಗೆ ದೊಡ್ಡ ಎಲೆ, ನಂಗೆ ಸಣ್ಣ ಎಲೆ ಎಂದು ಕೋಳಿ ಜಗಳವಾಡಿ ತಿನ್ನುತ್ತಿದ್ದ ಸುಧೀ, ಜಯಾ, ಹೆಚ್ಚು ಮಾತನಾಡದೇ ಸುಮ್ಮನೆ ದೊಡ್ಡ ದೊಡ್ಡ ತುತ್ತುಗಳನ್ನು ಇಳಿಸುತ್ತಿದ್ದ ಮಾಮ, ಅಡುಗೆಮನೆಯ ಹಿಂದಣ ಬಾಗಿಲಿನ ಹತ್ತಿರ ಬೆಳೆದಿದ್ದ ಬಿಂಬುಳಿ ಮರ ಮತ್ತದರ ಸುತ್ತ ತಿರುಗುತ್ತಿದ್ದ ಗಿರಿರಾಜ ಕೋಳಿ ಎಲ್ಲಾ ಕಣ್ಮುಂದೆ ಸರಿದವು. ಅಯಾಚಿತವಾಗಿ ತಲೆ ಎತ್ತಿ ನೋಡಿದರೆ, ತೂಗುತ್ತಿದ್ದ ಬೆಣ್ಣೆ ಮಡಕೆಗಳು ಕಾಣಲಿಲ್ಲ. ನನ್ನನ್ನೇ ನೋಡುತ್ತಿದ್ದ ಅತ್ತೆ ಅರ್ಥವಾದಂತೆ ತಲೆಯಲುಗಿಸಿದರು. ಕಪ್ಪು ಹಿಡಿದಿದ್ದ ಗೋಡೆಗಳನ್ನು ಬೆಳಗುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದ ಬಲ್ಬ್ ಮಂಕಾಗಿತ್ತು. ಅರ್ಧಕ್ಕರ್ಧ ಅಡುಗೆ ಮನೆ ಖಾಲಿ, ಒಂದು ಮೂಲೆಯಲ್ಲಿ ಪಾತ್ರೆ ಪಗಡಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರು ಅತ್ತೆ. ನಾನು ತಿನ್ನುವ ಶಬ್ದ ನನಗೇ ಕೇಳಲು ಅಸಹನೆಯೆನಿಸಿ “ಮಾಮ ಮತ್ತೆ ಸುಧೀಗೆ ಊಟ?” ಎಂದು ಕೇಳಿದೆ. “ಇಬ್ಬರದ್ದು ಆಯ್ತು” ಎಂದರು ಅತ್ತೆ. ಹೊಂಚು ಹಾಕಿದ್ದ ಮೌನ ಮತ್ತೆ ಎರಗಿತು. ಊಟ ಮುಗಿಸಿ ಅವಳು ಮುಗಿಸುವವರೆಗೆ ಕಾದು, “ನಾಳೆ ಓಬಯ್ಯನಿಗೆ ಹೇಳಿ ಸುಧೀ ಮಲಗಲು ಅಲ್ಲೊಂದು ಮಂಚ ಹಾಕಿಸಿ ಆ ಕೋಣೆ ಸ್ವಲ್ಪ ಖಾಲಿ ಮಾಡಿಸ್ತೀನಿ” ಎಂದು, ಅವಳ ಉತ್ತರದ ನೀರೀಕ್ಷೆಯಿಲ್ಲದೆ ಹೊರನಡೆದೆ. ಚಾವಡಿಯ ಎಡಭಾಗಕ್ಕಿದ್ದ ಕೋಣೆಯ ಒಳಗೆ ಆಗಲೇ ಹಾಸಿಗೆ ಹಾಸಿತ್ತು. ಕೈಲಿ ಮೊಬೈಲ್ ಹಿಡಿದು ಕೂತೆ. ಮನೆಯ ವಿಷಾದ ತನ್ನಲ್ಲೂ ಇಳಿಯುತ್ತದೆಯೆನಿಸಿ ಜೋರಾಗಿ ತಲೆ ಕೊಡಹಿದೆ. ತಲೆದಿಂಬಿನ ಮೇಲೂ ಕಸೂತಿಯ ಹೂವಿನ ಚಿತ್ತಾರಗಳು, ಅದನ್ನು ಕೈಲೊಮ್ಮೆ ಸವರಿದೆ. ಸರಿಯಾಗಿ ನೋಡಿದರೆ, ದಿಂಬು ಮಾತ್ರವಲ್ಲ, ಹೊದಿಕೆಗಳು, ಮಂದ್ರಿ, ಕರ್ಟನ್ ಎಲ್ಲದರ ಮೇಲೆಯೂ ಹೂವು, ಬಳ್ಳಿಗಳ ಚಿತ್ತಾರಗಳು. ಸುಧೀ ರೂಮಲ್ಲಿದ್ದವುಗಳ ಮೇಲೂ ಇದೇ ಚಿತ್ತಾರವಿತ್ತು, ಅರೇ! ಅತ್ತೆ ಸೀರೆ, ರವಕೆಯಲ್ಲೂ ಇದ್ದದ್ದು ಇವೇ ಚಿತ್ತಾರಗಳು ಎಂದು ನೆನಪಾಯ್ತು. ಬಟ್ಟೆ ಅಂತ ಕಾಣಿಸಿದ್ದರ ಮೇಲೆಲ್ಲಾ ಕಸೂತಿಯ ಚಿತ್ತಾರಗಳೇ ತುಂಬಿಕೊಂಡಿದ್ದವು. </p><p>ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಟ್ಟಿದ್ದ ವಿಡಿಯೋಗಳನ್ನು ನೋಡುತ್ತಾ ಅದ್ಯಾವಾಗ ನಿದ್ದೆ ಹೋದೆನೋ ತಿಳಿಯಲಿಲ್ಲ, ಎಚ್ಚರಿಸಿದ್ದು ಒಂದು ವಿಚಿತ್ರ ಕನಸು. ತಲೆಯ ಬಳಿಯಿದ್ದ ಚೆಂಬಿನ ನೀರು ಕುಡಿದು ಸಾವರಿಸಿಕೊಂಡು ಕತ್ತಲೆಯನ್ನೇ ನೋಡುತ್ತಾ ಕೂತೆ. ಕನಸಲ್ಲಿ ಜಯಾ, ನಾನು, ಸುಧೀ ಇದೇ ಮನೆಯ ಅಂಗಳದಲ್ಲಿ ಕುಣಿಯುತ್ತಿದ್ದೇವೆ, ಇದ್ದಕ್ಕಿದ್ದ ಹಾಗೆ ಮಾಮ ಎಲ್ಲಿಂದಲೋ ಓಡಿ ಬಂದು ನನ್ನ ಬಿಟ್ಟು ಅವರಿಬ್ಬರನ್ನು ಹಿಡಿದು ತಬ್ಬುವ ಪ್ರಯತ್ನ ಮಾಡುತ್ತಿದ್ದರೆ, ಅತ್ತೆ ಇಬ್ಬರನ್ನೂ ತನ್ನ ಎಂಬ್ರಾಯ್ಡರಿ ರಿಂಗುಗಳ ಮಧ್ಯೆ ಬಂಧಿಸಿ ರೇಶಿಮೆಯ ದಾರಗಳಿಂದ ಹೊಲೆಯುತ್ತಿದ್ದಾರೆ. ಬಿಡಿಸಲು ಹೋದ ನನ್ನನ್ನು ದೊಡ್ಡ ಕೆಂಪು ಕಣ್ಣುಗಳಿಂದ ದುರುಗಟ್ಟಿ ತೆಂಗಿನ ಮರದಷ್ಟು ದೊಡ್ಡ ಸೂಜಿಯಲ್ಲಿ ಚುಚ್ಚಲು ಬರುತ್ತಿದ್ದಾರೆ. ಮಾಮ ಕಿರುಚುತ್ತಾ ಅತ್ತೆಯನ್ನು ದೂಡಲು ಪ್ರಯತ್ನಿಸುತ್ತಿದ್ದಾರೆ, ಕೊನೆಗೆ ಅತ್ತೆ ಬೆಳೆದು ಹೆಮ್ಮರವಾಗಿದ್ದಾಳೆ. ಮಕ್ಕಳಿಬ್ಬರೂ ಕಸೂತಿಯ ಹೂವುಗಳಾಗಿ ಬದಲಾಗುತ್ತಾ ನೋವಿನಲ್ಲಿ ಕಿರುಚುತ್ತಿದ್ದಾರೆ. ಅಬ್ಬಾ! ಎಂಥಾ ಕನಸು! ಭಯಕ್ಕೆ ಇಡೀ ಮೈ ಬೆವೆತು ಹೋಗಿತ್ತು. ಮೊಬೈಲ್ ಸ್ಕ್ರೀನ್ ಆನ್ ಮಾಡಿ ನೋಡಿದರೆ ನಾಲ್ಕೂವರೆ, ಇನ್ನು ನಿದ್ದೆ ಹತ್ತಿದ ಹಾಗೆ ಎಂದುಕೊಂಡು ಹೊರಬಂದು ಚಾವಡಿಯ ಕಡೆ ನಡೆದೆ. ಮಾಮನ ಮಣ ಮಣ ಕೇಳುತ್ತಲೇ ಇತ್ತು. ಮಾಧ್ವಿಯತ್ತೆ ಎಮರ್ಜನ್ಸಿ ಲ್ಯಾಂಪಿನ ಹತ್ತಿರಕ್ಕೆ ಕೂತು ದಾರವನ್ನು ಎಳೆಯುತ್ತಲೇ ಇದ್ದಳು.ಆಶ್ಚರ್ಯವಾಗಿ ಹತ್ತಿರ ಹೋಗಿ “ಅತ್ತೆ ನಿದ್ದೆನೇ ಮಾಡುದಿಲ್ವಾ ನೀನು?” ಕೇಳಿದೆ. ಒಮ್ಮೆಗೆ ಬೆಚ್ಚಿಬಿದ್ದು ನೋಡಿದಳು, ಅವಳ ಕಣ್ಣುಗಳಲ್ಲಿ ಚೂರೂ ನಿದ್ದೆಯಿರಲಿಲ್ಲ. “ನೀನ್ಯಾಕೆ ಇಷ್ಟು ಬೇಗ ಎದ್ದೆ?, ನೀರು ಇಟ್ಟಿದ್ನಲ್ಲಾ, ಎಂಥ ಬೇಕಿತ್ತು?” ಎಂದು ಕೇಳಿದಳು. ಇವಾಗಷ್ಟೇ ಕನಸಲ್ಲಿ ರಾಕ್ಷಸಿಯಾಗಿದ್ದಳಲ್ಲ, ಹೇಗೆ ಹೀಗಾದಳು ಅನಿಸಿ ಕೂಡಲೇ ಇವಳ ಈ ಪ್ರೀತಿ, ಅಂತಃಕರಣ ಸುಧೀ ಮೇಲೆ, ಅದೂ ಅವನು ಈ ಸ್ಥಿತಿಯಲ್ಲಿದ್ದಾಗಲೂ ಹರಿದಿಲ್ಲವಲ್ಲಾ ಅನಿಸಿತು. ಇಲ್ಲ ಅಂತ ತಲೆಯಾಡಿಸಿ, ಅಲ್ಲೇ ಇದ್ದ ಈಸೀಚೇರಲ್ಲಿ ಮೈ ಚೆಲ್ಲಿದೆ. </p><p><br /></p><p>ಬಂದಾಗಿಂದ ಅಪ್ಪ ಅಮ್ಮನ ಬಗ್ಗೆ ಏನೂ ಕೇಳದವಳು, ಇದ್ದಕ್ಕಿದ ಹಾಗೆ, “ಅಣ್ಣ ನನ್ನ ನೆನಪಿಸ್ಕೊತಾನಾ? ಅತ್ತಿಗೆ ಯಾವತ್ತಾದ್ರೂ ಮಹೇಶನಿಗೆ ಫೋನ್ ಮಾಡಿ ಕೇಳ್ತಾಳಂತೆ” ಎಂದಳು. �“ಮೊಬೈಲಾದ್ರೂ ತೊಗೋ ಅತ್ತೆ, ಅಮ್ಮ, ಅಪ್ಪನ ಹತ್ತಿರ ಮಾತಾಡಬಹುದು, ಸುಧೀಗೂ ಟೈಮ್ ಪಾಸಾಗುತ್ತೆ” ಎಂದರೆ ಕೇಳದವಳಂತೆ ಸುತ್ತಣ ತಟ್ಟೆಗಳಲ್ಲಿ ಏನೋ ಹುಡುಕಲಾರಂಭಿಸಿದಳು. �ಸ್ವಲ್ಪ ಹೊತ್ತು ಬಿಟ್ಟು ಸ್ವಗತವೆಂಬಂತೆ “ಜಯಾ ಹೋದಾಗ ಅಣ್ಣ ಅತ್ತಿಗೆ ಬಂದಿದ್ದು, ನೀನೂ ಕಾಲೇಜು ಸೇರಿದ ಮೇಲೆ ಬಂದೇ ಇಲ್ಲ.” ಎಂದಳು. �ಅಷ್ಟರಲ್ಲಿ ಮಾಮ ಜೋರಾಗಿ “ಮಾಧ್ವೀ, ಎಲ್ಲೋದ್ಯೆ, ನನ್ನ ಬಿಟ್ಟು ತಿರುಗಲು ಹೋಗ್ತಾಳೆ, ಯಾರೊಟ್ಟಿಗೆ ಸುತ್ತಿ ಹಾಳಾಗಿದ್ಯೇ? ಅಯ್ಯೋ ಬಾರೆ ಇಲ್ಲಿ, ನಂಗೇನೋ ಆಗ್ತಿದೆ” ಎಂದು ಬೊಬ್ಬೆ ಹಾಕಿದರು. �ನಂಗೆ ಗಾಭರಿಯಾಗಿ ಏಳಲು ಹೊರಟರೆ, “ಸುಮ್ನಿರು ಬಾಬು, ಆ ಮನುಷ್ಯನದ್ದು ಇದ್ದಿದ್ದೇ, ನಾ ಹದಿನೆಂಟು ವರ್ಷದವಳಿದ್ದಾಗ್ಲೇ ಓಡಿ ಹೋಗಲಿಲ್ಲ, ಇವಾಗೆಲ್ಲಿ ಹೋಗ್ಲಿ?” ಎಂದವಳು ಮಾಮನ್ನುದ್ದೇಶಿಸಿ, “ಒಂದ್ಸಲ ಸುಮ್ನಿರಕ್ಕಾಗ್ದಾ? ಇಲ್ಲೇ ಇದ್ದೇನೆ, ಹೊರಕಡೆ ಹೋಗೋ ಟೈಮಾಗಿಲ್ಲ, ಬಿದ್ಕೊಳ್ಳಿ ” ಎಂದು ದಪ್ಪ ಸ್ವರದಲ್ಲಿ ಆದೇಶಿಸಿದಳು. �“ರಕ್ತನೇ ಸರಿಯಿಲ್ಲ, ಮನುಷ್ಯ ಹೇಗೆ ಸರಿಯಿರೋದು?, ಇವನಮ್ಮ, ಆ ತಾಟಗಿತ್ತಿ ಬದುಕಿರೋವರೆಗೂ ನನ್ನ ಹುರಿದು ಮುಕ್ಕಿದಳು, ಈ ಮನುಷ್ಯ ಜೀವಂತ ಹೆಣ ಮಾಡಿದ, ಇನ್ನೇನು ಉಳೀತು, ಹಾಗೇ ಆಗಬೇಕು, ಅಲ್ಲಾದ್ರೂ ಆರಾಮಾಗಿರ್ಲಿ. ಅದೊಂದು ಪಾಪದ ಕೂಸು, ಲಗಾಡಿ ತೆಗೆದ್ರು ಎಲ್ರೂ ಸೇರಿಕೊಂಡು.” ಎಂದು ಪಿತ್ತ ನೆತ್ತಿಗೇರಿದವಳಂತೆ ಬಡಬಡಿಸಿದಳು. �“ಅತ್ತೆ, ಸುಮ್ನಿರು” ಎಂದು ಪದೇ ಪದೇ ಹೇಳಿದ ಮೇಲೆ ತೆಪ್ಪಗಾದಳು. �</p><p>ಆ ದಿನವನ್ನಾದರೂ ಹೇಗೆ ಮರೆಯೋದು? ಆಫೀಸಿನಿಂದ ನೇರ ಸ್ಕೂಲಿಗೆ ಬಂದು ಅಪ್ಪ ನನ್ನನ್ನು ಕರ್ಕೊಂಡು ಸೀದಾ ಮನೆಗೆ ಹೋಗಿ ಅಮ್ಮನನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದರು. ಮೊದಲು ಏನೂ ಅರ್ಥವಾಗದ ಅಮ್ಮ ‘ಏನು ಅಂತ ಹೇಳಿದ್ರೆ ಮಾತ್ರ ಹೊರಡ್ತೀನಿ’ ರಚ್ಚೆ ಹಿಡಿದು ಕೂತಿದ್ದಳು. �ಅಪ್ಪ “ಬಾಬು, ಇಲ್ಲೇ ಇದ್ದಾನೆ ಅಮೇಲೆ ಹೇಳ್ತೀನಿ ಗಿರ್ಜಾ” ಎಂದರೂ ಅವಳು ಕೇಳದೇ ಕೂತಿದ್ದು… ಕೊನೆಗೆ ತಡೆಯಲಾಗದೇ “ಆ ಪ್ರಾಣಿ ಮಗು ಜೀವ ತೆಗೆದೇ ಬಿಡ್ತೇ” ಎಂದು ಕಿರುಚಿದ್ದೂ, ಅಮ್ಮನಿಗೆ ಅರ್ಥವಾಗದಾಗ, “ಭಾವ ಮತ್ತೆ ಅವರಮ್ಮ ಸೇರಿ ಆ ಜಯಾನ ಕೊಂದುಬಿಟ್ರೇ…” ಎಂದಿದ್ದರು. ಅಮ್ಮ ಕುಸಿದು ಕೂತವಳು ಅದೆಷ್ಟೋ ಹೊತ್ತು ಮಾತೇ ಆಡಲಿಲ್ಲ. �ಏನೂ ತೋಚದೇ, ಅರ್ಥವಾಗದೇ ಕೂತ ನನ್ನನ್ನು ಅಪ್ಪ “ಹೊರಡು ಬಾಬು, ನಿನ್ನ ಬಟ್ಟೆ ಬ್ಯಾಗಲ್ಲಿ ಹಾಕ್ಕೋ” ಎಂದಿದ್ದರು. ಜಯಾ ಸತ್ತು ಹೋದ್ಲು ಅಂದ್ರೆ ಏನು? ಎಲ್ಲಿಗೆ ಹೋಗ್ತಾಳೆ ಅವಳು? ಸುಧೀ ಏನು ಮಾಡ್ತಾನೆ ಇನ್ನು?ಮಾಧ್ವಿಯತ್ತೆ ಏನು ಮಾಡ್ತಾಳೆ…ತಲೆ ತುಂಬಾ ಪ್ರಶ್ನೆಗಳಿದ್ದವು ಆ ದಿನ. ಅತ್ತೆಯೂರು ಮುಟ್ಟಿದಾಗ ಅತ್ತೆ ಅಕ್ಷರಶಃ ಹುಚ್ಚಿಯಾಗಿದ್ದಳು. ಅಮ್ಮ ಹೋಗಿ ಅಪ್ಪಿಕೊಂಡರೂ ಒಂದೂ ಹನಿ ಕಣ್ಣೀರು ಹಾಕದವಳು, ಜಯಾಳನ್ನು ಅಂತಿಮ ಸಂಸ್ಕಾರಕ್ಕೆ ಕೊಂಡೊಯ್ಯುವಾಗ ಮಾತ್ರ ಮಾಮನಿಗೆ ಮುಟ್ಟಲು ಬಿಡದೇ, ಹುಲಿಯಂತೆ ಅಬ್ಬರಿಸಿ ಹಾರಾಡಿದ್ದಳು. ಕೊನೆಗೆ ಅಪ್ಪನೇ ಬೆಂಕಿಕೊಟ್ಟಿದ್ದರು. ಜಯಾ ಮುಖ ಅಚ್ಚಳಿಯದೇ ನನ್ನ ಎದೆಯಲ್ಲಿ ಉಳಿದುಬಿಟ್ಟಿತ್ತು. ಮೈ ಹೊಡೆದೇಟುಗಳಿಂದ ನೀಲಿಗಟ್ಟಿ ಹೋಗಿತ್ತು, ಅಷ್ಟು ಸಣ್ಣವನಾದ ನನಗೂ ಜಯಾ ಮಾಯದ ನೋವಾಗಿ ಉಳಿದಿರಬೇಕಾದರೆ ಅತ್ತೆ ಅದು ಹೇಗೆ ತಡೆದುಕೊಂಡಿರಬೇಕು. �ಅಮ್ಮ ಅಪ್ಪನೊಂದಿಗೆ ಜಗಳವಾದಾಗೆಲ್ಲಾ ಅತ್ತೆ ಬಗ್ಗೆ ಬೈಯುತ್ತಾಳೆ. “ಹೇಡಿ ನೀವು, ಯಾರೋ ಅಯೋಗ್ಯರು ಬರೆದ ಹೆಸರಿಲ್ಲದ ಪತ್ರಗಳು ಬಂದ ಕೂಡಲೇ, ಓದು ನಿಲ್ಲಿಸಿ ಆ ರಾಕ್ಷಸನಿಗೆ ನಿಮ್ಮ ತಂಗಿಯನ್ನು ಕಟ್ಟಿ ಅವಳ ಜೀವನ ಬಲಿ ತೊಗೊಂಡ್ರಿ, ಅದ್ರ ಹೊಟ್ಟೆಯಲ್ಲಿ ಹುಟ್ಟಿದವಕ್ಕೂ ಗ್ರಹಚಾರ ತಪ್ಪಿಲ್ಲ” ಎನ್ನುತ್ತಾ ಸಂಕಟಪಟ್ಟು ಅಳುತ್ತಾಳೆ. �ಅಪ್ಪ ಸುಮ್ಮನೇ ಹೊರಹೋಗುತ್ತಾರೆ. </p><p>ಅಮ್ಮ ಹೇಳಿದ ಮೇಲೆ ತಿಳಿದಿದ್ದು ಇಷ್ಟು, ತುಂಬಾ ಚೆಂದದ ಮಾಧ್ವಿಯತ್ತೆ ಕಾಲೇಜು ಮೆಟ್ಟಿಲು ಹತ್ತಿದ್ದೇ ತಡ ಮನೆಗೆ ಪತ್ರಗಳು ಬರಲಾರಂಭಿಸಿದ್ದವು. ಹಾಸಿಗೆ ಹಿಡಿದಿದ್ದ ಅಜ್ಜ ಅಜ್ಜಿಯದ್ದು ಒಂದೇ ವರಾತ, ಅವಳಿಗೆ ಮದ್ವೆ ಮಾಡಿಬಿಡು ಅಂತ. ಕೊನೆಗೆ ಸುಮಾರು ೨೦ ವರ್ಷ ದೊಡ್ಡವರಾಗಿದ್ದ ಮಾವನಿಗೆ ಅತ್ತೆಯನ್ನು ಮದುವೆ ಮಾಡಿಕೊಟ್ಟಿದ್ದರು ಅಪ್ಪ. ಒಂಚೂರು ಓದು, ನಯನಾಜೂಕಿನ ಗಂಧ ಗಾಳಿಯಿಲ್ಲದ ಗಂಡ, ಮಾತು ಮಾತಿಗೂ ಹುರಿದು ಮುಕ್ಕುತ್ತಿದ್ದ ಅತ್ತೆಯೊಡನೆ ಮೂಕಪಶುವಿನಂತೆ ಜೀವನ ಸಾಗಿಸುತ್ತಿದ್ದ ಮಾಧವಿ ಜಯಾ ಹುಟ್ಟಿದ ಮೇಲೆ ಬದುಕೋ ಪ್ರಯತ್ನ ಒಂದಿಷ್ಟು ಮಾಡಲಾರಂಭಿಸಿದ್ದಳು. ಆದರೆ ಅವಳತ್ತೆ ಮತ್ತು ಗಂಡನಿಗೆ ಅದೂ ಸಮ್ಮತವಿರಲಿಲ್ಲ, ಹೆಣ್ಣು ಮಗುವೆಂದು ಅದನ್ನೂ, ಹೆತ್ತ ಅವಳನ್ನೂ ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೂ ಬೈಗುಳಗಳಲ್ಲೇ ಮುಳುಗೇಳಿಸುತ್ತಿದ್ದರು. ನಂತರ ಹುಟ್ಟಿದ ಸುಧೀ ಜಯಾಳಿಗಿಂತ ಸ್ವಲ್ಪ ಅದೃಷ್ಟವಂತನಾದರೂ ಏಟುಗಳು ಇಬ್ಬರಿಗೂ ಸಮನಾಗಿ ಬೀಳುತ್ತಿದ್ದವು. ಅಮ್ಮ ಇಲ್ಲಿಗೆ ಬಂದಾಗೆಲ್ಲಾ ಆ ಅಜ್ಜಿಗೆ, ಮಾವನಿಗೆ ಸೂಕ್ಷ್ಮವಾಗಿ ಏನಾದರೂ ಹೇಳುವ ಪ್ರಯತ್ನ ಮಾಡುತ್ತಿದ್ದದ್ದು ಇನ್ನೂ ನೆನಪಿದೆ. ಆದರೆ ಅದರಿಂದ ಪರಿಸ್ಥಿತಿ ಇನ್ನೂ ಕೆಡುತ್ತಿತ್ತು ಎಂದು ಅಮ್ಮ ಸುಮ್ಮಗಾಗುತ್ತಿದ್ದಳು. </p><p>ಆ ಅಜ್ಜಿಯ ಹತ್ತಿರವಿದ್ದ ಬೆಳ್ಳಿಯ ಎಲೆಯಡಿಕೆಯ ಸಂಚಿಯನ್ನು ತರುವಾಗ ಎತ್ತಿ ಹಾಕಿ ನಜ್ಜುಗುಜ್ಜು ಮಾಡಿದ್ದಾಳೆಂಬುದು ಒಂದು ನೆಪ, ಅದೆಷ್ಟು ಹೊಡೆದರೋ, ಎಲ್ಲಿಗೆ ಏಟು ಬಿತ್ತೋ ಪುಟ್ಟ ಜಯಾ ಉಸಿರಿಲ್ಲದೇ ಮಲಗಿದ್ದಳು. ಕೆರೆಗೆ ಜಾರಿಬಿದ್ದಳು ಅಂದೇನೋ ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು ಮಾಮ. ಸುಧೀ ಮಂಕಾಗಿ ಕೂತಿದ್ದ, ಅವನ ಹತ್ತಿರ ಏನು ಮಾತಾಡಬೇಕು ಗೊತ್ತಿಲ್ಲದೇ ನಾನೂ ಸುಮ್ಮನೇ ಕೂತಿದ್ದೆ. ಇಲ್ಲಿದ್ದ ಒಂದು ವಾರದಲ್ಲಿ ಅತ್ತೆ ಸುಧೀಯ ಬಳಿ ಒಂದೂ ಮಾತನಾಡಿರಲಿಲ್ಲ ಎಂದು ಮೊದಲು ಗಮನಿಸಿದ್ದು ಅಮ್ಮ, ಸುಧೀಯನ್ನು ಕರೆದುಕೊಂಡು ಬಂದು ಊಟ ಮಾಡಿಸು, ಮಲಗಿಸು ಎಂದು ಹೇಳಿದಾಗೆಲ್ಲಾ ಅತ್ತೆ ಕಿವುಡಾಗಿದ್ದಳು. ಪುಟ್ಟ ಸುಧೀ ಆ ಕಡೆ ತಾಯಿಯೂ ಇಲ್ಲದೇ, ಸದಾ ಬೆನ್ನಿಗಿದ್ದ ಅಕ್ಕನೂ ಇಲ್ಲದೇ ಕಂಗಾಲಾಗಿದ್ದ. �ಹೊರಡುವ ದಿನ “ಮಾಧ್ವಿ, ಇನ್ನೊಂದು ಮಗುವಿದೆ ನಿಂಗೆ, ಸ್ವಲ್ಪ ಗಟ್ಟಿಯಾಗು, ಅದಕ್ಕಾಗಿಯಾದರೂ ಬದುಕಬೇಕಲ್ವೇ” ಎಂದಾಗಲೂ ಅತ್ತೆ ತುಟಿ ಬಿಚ್ಚಿರಲೇ ಇಲ್ಲ. �ಕೊನೆಗೆ ಅಮ್ಮ ಅವನನ್ನು ಕರ್ಕೊಂಡು ಬಂದು ಒಂದಿಷ್ಟು ತಿಂಗಳು ನಮ್ಮೊಟ್ಟಿಗೇ ಇಟ್ಟುಕೊಂಡಿದ್ದೂ ಆಗಿತ್ತು. ವಾಪಾಸು ಬಿಡಲು ಬಂದದ್ದು ಆ ಅಜ್ಜಿ ತೀರಿಕೊಂಡಾಗ. ಅಷ್ಟು ನರಕಯಾತನೆ ಕೊಟ್ಟ ಮುದುಕಿ ಅದೆಷ್ಟು ಆರಾಮಾಗಿ ಸತ್ತು ಹೋದಳು ಎಂದು ಗದ್ದೆ ಕೆಲಸಕ್ಕೆ ಬರುತ್ತಿದ್ದ ಆಳುಗಳು ಹೇಳುತ್ತಿದ್ದದ್ದೂ ನೆನಪಿದೆ. ಆಮೇಲೆ ಅಪ್ಪ ಬಂದೇ ಇಲ್ಲ ಇಲ್ಲಿಗೆ, ಅಮ್ಮ ಮಾತ್ರ ನನ್ನ ಕಟ್ಟಿಕೊಂಡು ಆಗಾಗ ಬರುತ್ತಿದ್ದಳು. ಜಯಾ ಹೋದ ಮೇಲೆ, ಮಾಧ್ವಿಯತ್ತೆ ಮೊದಲಿನ ಹಾಗೆ ಆಗಲೇ ಇಲ್ಲ, ಸುಧೀ ಈ ಕಡೆ ತಂದೆ-ತಾಯಿ ಇದ್ದೂ ಅನಾಥನೇ ಆಗಿ ಹೋದ. ಗೊತ್ತಿದ್ದೋ ಗೊತ್ತಿಲ್ಲದೆಯೇ ಅತ್ತೆ ಎರಡೂ ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡಳೇನೋ ಎಂದು ಅಮ್ಮ ಹೇಳುತ್ತಿದ್ದಳು. ಅವನಿಗೆ ನಾವು ಮೂವರೇ ಪ್ರಪಂಚದಲ್ಲಿದ್ದ ಬಂಧುಗಳು. ಅದೆಷ್ಟೋ ಸಲ ಈ ಮನುಷ್ಯನನ್ನು ಬಿಟ್ಟು ಬಾ ಅಂತಲೋ, ಈ ಮಗುವನ್ನು ನನಗಾದರೋ ಕೊಟ್ಟುಬಿಡು ಅಂತಲೋ ಅಮ್ಮ ಜಗಳವಾಡಿದ್ದೂ ಇದೆ. ಅದ್ಯಾವುದೂ ಅತ್ತೆ ಮಾಡಲಿಲ್ಲ. ಜಯಾ ಹೋದ ಮೇಲೆ ಅತ್ತೆ ಮನೆ ಬಿಟ್ಟು ಎಲ್ಲಿಗೂ ಹೋಗದೆ ಸ್ವಯಂ ಗೃಹಬಂಧನ ಶಿಕ್ಷೆ ಕೊಟ್ಟುಕೊಂಡಿದ್ದಳು. ಎಷ್ಟೇ ಬೈದುಕೊಂಡಾದರೂ ಅಮ್ಮ ನನ್ನನ್ನು ಕರ್ಕೊಂಡು ಬರುವುದನ್ನು ಬಿಡಲಿಲ್ಲ, ಪ್ರತೀಸಲ ಸುಧೀಗೆ ಇಷ್ಟವಾಗುವ ಎಲ್ಲವನ್ನೂ ಹೊತ್ತು ತರುತ್ತಿದ್ದಳು. </p><p> ಕಾಲೇಜಿನ ಮೆಟ್ಟಲು ಹತ್ತಿ ಎರಡು ವರ್ಷವಾಗುವಷ್ಟರಲ್ಲಿ ಸುಧೀಗೆ ಕ್ಯಾನ್ಸರ್ ಅಂತೆ ಅಂತ ಅಮ್ಮ ಹೇಳಿದಾಗ ಹುಚ್ಚು ಹಿಡಿದಂತಾಗಿತ್ತು. ಮಹೇಶನೊಟ್ಟಿಗೆ ಅವನೇ ಜಿಲ್ಲಾಸ್ಪತ್ರೆಗೆ ಹೋಗಿ ಬಂದಿದ್ದನಂತೆ, ಏನೂ ಮಾಡಲಾಗಲ್ಲ ಅಂತ ವೈದ್ಯರೂ ಕೈ ಚೆಲ್ಲಿದ್ದರಂತೆ. ಜಯಾ ಮಾಯದ ಗಾಯವಾಗಿ ಉಳಿದು ಹೋಗಿದ್ದಳು, ಈವಾಗ ಮತ್ತೊಂದು ಗಾಯ ಮಾಡಿಕೊಳ್ಳಲು ಹೆದರಿ ಸ್ನೇಹಿತರು, ಕಾಲೇಜು, ಗೇಮು, ಮೊಬೈಲ್ ಅಂತೆಲ್ಲಾ ಮುಳುಗಿ ನನ್ನ ಪ್ರಪಂಚವನ್ನು ಕಿರಿದುಗೊಳಿಸಿಕೊಂಡಿದ್ದೆ. ಇಲ್ಲಿಗೆ ಬರಬೇಕು ಅನಿಸಿರಲಿಲ್ಲ. ಅಮ್ಮ ಅದೆಷ್ಟು ಸಲ ಗೋಗೆರೆದಿದ್ದಳು, ಹೋಗಿ ನೋಡಿ ಬರೋಣ ಬಾರೋ ಅಂತ, ಉಹೂಂ, ಧೈರ್ಯವಾಗುತ್ತಿರಲಿಲ್ಲ. ಈವಾಗ ಹಂಗಾಮಿ ಶಿಕ್ಷಕನಾಗಿ ಓದಿದ ಕಾಲೇಜಿನಲ್ಲೇ ಕೆಲಸಕ್ಕೆ ಸೇರಿಕೊಂಡು, ಕಂಡ ಕಂಡ ವಿದ್ಯಾರ್ಥಿಗಳ ಮುಖದಲ್ಲೆಲ್ಲಾ ಸುಧೀ, ಜಯಾರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದೆ. ಮಾಧ್ವಿಯತ್ತೆಯ ನೆನಪೂ ಸದಾ ಬರುತ್ತಿತ್ತು. ಕನಿಷ್ಠ ಆರು ಕುಟುಂಬಗಳಿಗೆ ಹಂಚುವಷ್ಟು ನೋವನ್ನು ಮಾಧ್ವಿಯತ್ತೆ ಒಬ್ಬಳಿಗೇ ದೇವರು ಸುರಿದಿದ್ದಾನೆ ಎಂದು ಅಮ್ಮ ಅಲವತ್ತುಕೊಳ್ಳುತ್ತಿದ್ದದ್ದು ನಿಜ ಅನಿಸುತ್ತಿತ್ತು. ಅವಳ ಮೇಲೆ ಯಾಕಿಷ್ಟು ದ್ವೇಷ ವಿಧಿಗೆ? ಅವಳೋ ಆ ವಿಧಿಯ ಮೇಲೆಯೇ ಯುದ್ಧ ಸಾರುತ್ತಾ ಬದುಕುವ ಸೋಗು ಹಾಕುತ್ತಿದ್ದಾಳೆ. ತನ್ನದು ಅಂತ ಉಳಿದ ಒಂದು ಜೀವವನ್ನೂ ಅಪ್ಪಿಕೊಂಡು ಹೇಗೋ ಬದುಕಬಹುದಿತ್ತು. ಅದೂ ಮಾಡ್ತಿಲ್ಲ. ಅಮ್ಮನಿಗೆ ಹೃದಯ ಶಸ್ತ್ರಚಿಕಿತ್ಸೆಯಾದಾಗ ಅವಳು ಕೇಳಿದ್ದು ಒಂದೇ. �“ ನಿಮ್ಮಪ್ಪ ಹೇಡಿ ಬಾಬು, ಅವಳನ್ನು, ಆ ಹುಡುಗನನ್ನ ಎದುರಿಸೋ ಧೈರ್ಯ ಅವರಿಗಿಲ್ಲ, ನೀನಾದ್ರೂ ಸುಧೀನ ಇಲ್ಲಿಗೆ ಕರ್ಕೊಂಡು ಬಾರೋ, ಅವಳು ಮರಗಟ್ಟಿ ಜೀವನ ಲಗಾಡಿ ತೆಗೆದುಕೊಂಡಳು, ಅವನನ್ನ ಇಲ್ಲಿ ಹಾಸ್ಪಿಟಲ್ಲಾಗಾದ್ರೂ ತೋರಿಸೋಣ” ಅಂತ. �ಅಪ್ಪನ, ಅತ್ತೆಯ ಮರಗಟ್ಟುವಿಕೆ ಕಾಯಿಲೆ ನಂಗೂ ಹರಡಿತ್ತು. </p><p>ಅಮ್ಮನಿಗೆ ಸ್ವಲ್ಪ ಆರಾಮಾದ ಮೇಲೆ ಕೊಟ್ಟ ಮಾತಿನಂತೆ ಹೊರಟಾಗ ಆಕೆಗೆ ಅದೆಷ್ಟು ಖುಷಿಯಾಗಿತ್ತು. ಅಪ್ಪನೂ ಥ್ಯಾಂಕ್ಸ್ ಅಂತ ಕಣ್ಣಲ್ಲೇ ಹೇಳಿದಂತೆ ಅನಿಸಿತ್ತಲ್ಲಾ? ಕೂತಲ್ಲೇ ಜೋಂಪು ಹತ್ತಿದಂತಾಯ್ತು. ಎಚ್ಚರವಾದಾಗ ಬೆಳಕು ಹರಿದಿತ್ತು. ಎಮರ್ಜೆನ್ಸಿ ಲ್ಯಾಂಪ್ ಈಗ ಉರಿಯುತ್ತಿರಲಿಲ್ಲ, ಅತ್ತೆ ಕಾಣಲಿಲ್ಲ, ಅಡುಗೆ ಮನೆಯಲ್ಲಿರಬೇಕು. ಬಚ್ಚಲ ಹತ್ತಿರ ಓಬಯ್ಯನ ಸ್ವರ ಕೇಳಿತು. ಸುಧೀಗೆ ಬೆಳಗ್ಗಿನ ಕೆಲ್ಸಕ್ಕೆ ಸಹಾಯ ಮಾಡಲು ಬಂದಿರಬೇಕು ಅನಿಸಿತು. ಬಾಣಂತಿ ಕೋಣೆಯಲ್ಲಿದ್ದ ಎಲ್ಲವನ್ನೂ ಕ್ಲೀನ್ ಮಾಡಿಸಿ ಮಂಚ ಹಾಕಿಸಿ, ಪಕ್ಕದಲ್ಲೊಂದು ಮೇಜು, ಸಣ್ಣ ಕಪಾಟು ಎಲ್ಲವನ್ನೂ ಇಡಿಸಿದೆ. ನಾನೇ ಕೂತು ಅವನ, ಗಡ್ಡ, ಕೂದಲು ಕತ್ತರಿಸಿ ಅವನನ್ನು ಸ್ವಲ್ಪ ನೋಡುವ ಹಾಗೆ ಮಾಡಿದೆ. ಮಹೇಶನ ತಮ್ಮ ತಂದ ಬೆಡ್ ಪಾನ್ ಬಳಸಲು ಹೇಳಿ ಕೊಟ್ಟೆ. ಅವನ ಮುಖದಲ್ಲೊಂದು ಕಿರುನಗು. “ಮುಂದಿನ ತಿಂಗಳು ಬರುವಾಗ ಇನ್ನಷ್ಟು ಪುಸ್ತಕ ತನ್ನಿ ಬಾಬಣ್ಣ” ಅಂದ. “ಹೂಂ, ನಾಳೆ ಬೆಳಗ್ಗೆ ಹೊರಡ್ತೀನಿ, ಮುಂದಿನ ಹದಿನೈದು ದಿನದಲ್ಲಿ ಬರ್ತೀನೋ, ಅಲ್ಲಿಯವರೆಗೆ ಸಾಕಲ್ಲ ಇಷ್ಟು? ಆಮೇಲೆ ನಮ್ಮನೆಗೆ ಹೋಗೋಣ ಆಗ್ದಾ?, ಅಲ್ಲಿ ಇಡೀ ಲೈಬ್ರೆರಿ ನಿಂದೇ ”ಅಂದೆ. ಅವನು ಖುಷಿಯಲ್ಲಿ ಚಿಕ್ಕ ಮಗುವಿನಂತೆ ನಕ್ಕ. </p><p>ಮರುದಿನ ಬೆಳಗ್ಗೆ ಬೇಗ ಎದ್ದು ಹೊರಟು ಅತ್ತೆ ಕಾಲಿಗೆ ಬಿದ್ದಾಗ ತಲೆಸವರಿದಳು, �“ಅತ್ತೆ, ಸುಧೀ ಕಡೆ ಸ್ವಲ್ಪ ಗಮನ ಕೊಡು ಈವಾಗಾದ್ರೂ, ಎಷ್ಟು ದಿನ ಇರುತ್ತಾನೋ ಖುಷಿಯಲ್ಲಿರಲಿ” ಅಂದೆ. �ಏನೂ ಉತ್ತರಿಸದೆ, ಕೈಗೆ ಒಂದು ಬಟ್ಟೆಯ ಚೀಲ ಕೊಟ್ಟಳು, ತೆಗೆದು ನೋಡಿದರೆ ಕಸೂತಿಯ ಹೂವಿನ ಚಿತ್ತಾರಗಳ ಅಂಚಿರುವ ಒಂದು ಡಬಲ್ ಬೆಡ್ ಶೀಟ್ ಮತ್ತು ತಲೆದಿಂಬಿನ ಕವರುಗಳ ಸೆಟ್. ಅವಳ ಮುಖ ನೋಡಿದರೆ ವಿಚಿತ್ರವಾಗಿ ನಕ್ಕಳು. �“ಚೆಂದ ಉಂಟು, ಥ್ಯಾಂಕ್ಸ್ ಅತ್ತೆ” ಎಂದು ನಡುಮನೆಗೆ ಕಡೆ ತಿರುಗಿ �“ಮಾಮ ಹೊರಡ್ತೀನಿ” ಎಂದು ಗಟ್ಟಿಯಾಗಿ ಹೇಳಿದರೆ, ಸಿಕ್ಕಿದ್ದು ರಾಮ ನಾಮ ಪಾಯಸಕ್ಕೆ ಹಾಡು. ಮೆಲ್ಲಗೆ ಸುಧೀ ಕೋಣೆಗೆ ಇಣುಕಿ ಹಾಕಿದರೆ, ಸ್ವಚ್ಛವಾದ ಕೋಣೆಯಲ್ಲಿ ಹೂವಿನ ಚಿತ್ತಾರದ ಮಧ್ಯೆ ನೀಟಾಗಿ ಮಲಗಿದ್ದ. ಹತ್ತಿರ ಹೋಗಿ ಕೈ ಸವರಿ ಹೊರಟೆ, ಮುಂದಿನ ಸರ್ತಿ ನೋಡ್ತೀನೋ ಇಲ್ವೋ ಅನಿಸಿ ಗಂಟಲುಬ್ಬಿ ಬಂತು. ಮೇಲಿನವರೆಗೆ ನಡೆದು ಬರುತ್ತಿದ್ದಂತೆ ಪಕ್ಕದಲ್ಲೇ ಜಯಾ ಉದ್ದ ಲಂಗ ತೊಟ್ಟು ಕೆಂಪು ಕೇಪುಳ ಹೂವಿನ ಗೊಂಚಲು ತಿರುಗಿಸುತ್ತಾ ಬಂದಂತೆ ಅನಿಸಿತು. ನಿಂತು ತಿರುಗಿ ನೋಡಿದರೆ, ಗದ್ದೆಯಲ್ಲಿ ಅವಳೂ, ಸುಧೀಯೂ ಒಬ್ಬರ ಹಿಂದೆ ಒಬ್ಬರು ಓಡುತ್ತಿದ್ದಂತೆ ಅನಿಸಿತು. ಇಬ್ಬರ ಮೈಮೇಲೂ ಹೂವಿನ ಚಿತ್ತಾರವಿರುವ ಅಂಗಿಗಳು, ತಲೆ ಕೊಡಹಿ ನಡೆದೆ. ಬಸ್ಸು ನಿಲ್ಲುವ ತಾಣಕ್ಕೆ ಬಂದರೆ, ಮಹೇಶ ಅಲ್ಲಿಗೆ ಬಂದು ಕಾಯುತ್ತಾ ನಿಂತಿದ್ದ. �“ಬಾಬಣ್ಣ, ಸುಧೀಯಣ್ಣನಿಗಾದ್ರೂ ಬರ್ತಾ ಇರಿ” ಅಂದ. ಹೂಂ ಅಂದೆ. </p><p>ಮಂಗಳೂರಿಗೆ ಡೈರೆಕ್ಟ್ ಬಸ್ ಬರಲೇ ಇಲ್ಲ, ಸರಿ ಬೆಳ್ತಂಗಡಿಗೆ ಹೋಗಿ ಅಲ್ಲಿಂದ ಎಕ್ಸ್ಪ್ರೆಸ್ ಹಿಡಿದರಾಯ್ತು ಅಂತ ಸಿಕ್ಕಿದ ಶಟಲ್ ಬಸ್ಸಿಗೆ ಹತ್ತಿ ಕೂತೆ. ಭಾವಗಳು, ನೆನಪುಗಳು ಪದೇ ಪದೇ ಧಾಳಿಯಿಡುತ್ತಿದ್ದವು. ಮರಗಟ್ಟಿದ ಮನಸ್ಸು ಕರಗುತ್ತಿದ್ದಂತೆ ಭಾಸವಾಗುತ್ತಿತ್ತು. ಕಣ್ಣು ಮುಚ್ಚಿ ಕೂತೆ. ಬೆಳ್ತಂಗಡಿಯಲ್ಲಿಳಿದು ಎಕ್ಸ್ಪ್ರೆಸ್ ಬಸ್ಸು ಹತ್ತಿ ಟಿಕೇಟು ತೊಗೊಂಡು ಮೂರು ನಾಲ್ಕು ನಿಮಿಷಗಳಾಗಿರಬೇಕು. ಪಾಕೇಟಿನಲ್ಲಿದ್ದ ಮೊಬೈಲ್ ರಿಂಗಾಯ್ತು. ತೆಗೆದು ನೋಡಿದರೆ, ಮಹೇಶನ ನಂಬರ್. ಕೈ ನಡುಗಲಾರಂಭಿಸಿತು.</p><p><br /></p><p>(ವಿಸ್ತಾರ ಕಥಾಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದೆ.)</p>Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-52496693179700824552022-06-27T10:12:00.003-07:002022-06-27T10:12:23.138-07:00Secret life of our pets<p> <span style="color: var(--primary-text); font-family: inherit; font-size: 0.9375rem; white-space: pre-wrap;">ಎರಡು ಸಾವಿರ ಅಡಿ ಎತ್ತರದಿಂದ ತನ್ನ ಸಾಕುತಂದೆಯೊಡನೆ ಪಾರಾಗ್ಲೈಡಿಂಗ್ ಮಾಡೋ ನಾಯಿ, ಹದಿನೈದು ಬಗೆ ಬಗೆಯ ಸ್ಟೆಪ್ ಹಾಕಿ ಕುಣಿಯೋ ಗಿಳಿ, ಬಾಸ್ಕೆಟ್ ಬಾಲ್ ಆಡೋ ಮೊಲ, ಟೋಕನ್ ಎಕ್ಸ್ ಚೇಂಜ್ ಮಾಡಿಕೊಂಡು ಊಟ ತೆಗೆದುಕೊಳ್ಳೋ. ಅಣ್ಣ ತಂಗಿ ಬೂದು ಗಿಳಿ ಜೋಡಿ, ಕಾರು ಓಡಿಸೋ ಇಲಿಗಳು, ಫ್ರಾಕ್ಚರ್ ಮಾಡಿಕೊಂಡು ಕುಂಟುವ ಸಾಕುವ ತಂದೆಗೆ ಲೋನ್ಲಿ ಫೀಲ್ ಆಗಬಾರದೆಂದು ತಾನೂ ಸುಮ್ಮನೆ ಸುಮ್ಮನೆ ಕುಂಟೋ ನಾಯಿ, ಅಲೆಕ್ಸಾದ ಶಾಪಿಂಗ್ ಲಿಸ್ಟಿಗೆ ತನಗೆ ಬೇಕಾದ ಸ್ಟ್ರಾಬೆರ್ರಿ ಹಣ್ಣು ಸೇರಿಸೋ ಕಳ್ಳ ಗಿಳಿ, ಫುಟ್ಬಾಲ್ ಮ್ಯಾಚ್ ಆಡೋ ಮೀನುಗಳು... </span></p><div style="font-family: inherit;"><div class="" dir="auto" style="font-family: inherit;"><div class="ecm0bbzt hv4rvrfc ihqw7lf3 dati1w0a" data-ad-comet-preview="message" data-ad-preview="message" id="jsc_c_6" style="font-family: inherit; padding: 4px 16px 16px;"><div class="j83agx80 cbu4d94t ew0dbk1b irj2b8pg" style="display: flex; flex-direction: column; font-family: inherit; margin-bottom: -5px; margin-top: -5px;"><div class="qzhwtbm6 knvmm38d" style="font-family: inherit; margin-bottom: 5px; margin-top: 5px;"><span class="d2edcug0 hpfvmrgz qv66sw1b c1et5uql oi732d6d ik7dh3pa ht8s03o8 a8c37x1j fe6kdd0r mau55g9w c8b282yb keod5gw0 nxhoafnm aigsh9s9 d9wwppkn iv3no6db jq4qci2q a3bd9o3v b1v8xokw oo9gr5id hzawbc8m" dir="auto" style="-webkit-font-smoothing: antialiased; color: var(--primary-text); display: block; font-family: inherit; font-size: 0.9375rem; line-height: 1.3333; max-width: 100%; min-width: 0px; overflow-wrap: break-word; word-break: break-word;"><div class="cxmmr5t8 oygrvhab hcukyx3x c1et5uql o9v6fnle ii04i59q" style="font-family: inherit; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಎಂಥ, ಮಕ್ಕಳ ಸಿನಿಮಾ ಕತೆ ಅಂದುಕೊಂಡಿರಾ? ಅಲ್ಲ, ಸಾಕುಪ್ರಾಣಿಗಳು ಏನೆಲ್ಲಾ ಮಾಡಬಲ್ಲವು, ನಾವಿಲ್ಲದಾಗ ಏನೆಲ್ಲಾ ಮಾಡ್ತಾವೆ, ನಮ್ಮನ್ನು ಅದೆಷ್ಟು ಅರ್ಥ ಮಾಡಿಕೊಂಡಿರ್ತಾವೆ, ಅದಕ್ಕೆಷ್ಟು ಸಹಾನುಭೂತಿ ಇರುತ್ತದೆ, ಅವುಗಳ ಬುದ್ಧಿಮಟ್ಟ, ಕಲಿಕೆಯ ಉತ್ಸಾಹ, ಚಾಕಚಕ್ಯತೆಗಳ ಬಗ್ಗೆ ಇರುವ ' secret life of our pets' ಡಾಕ್ಯುಮೆಂಟರಿಯಲ್ಲಿ ಬರುವ ಪಾತ್ರಗಳಿವು. </div></div><div class="cxmmr5t8 oygrvhab hcukyx3x c1et5uql o9v6fnle ii04i59q" style="font-family: inherit; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಸಾಮಾನ್ಯವಾಗಿ ಸುತ್ತಮುತ್ತಲಿನ ಪ್ರಾಣಿ, ಪಕ್ಷಿ, ಹುಳ ಹುಪ್ಪಡಿಗಳ ಬಗ್ಗೆ ಮಕ್ಕಳಿಗೆ ಆಸ್ಥೆ, ಪ್ರೀತಿ ಇದ್ದೇ ಇರುತ್ತದೆ. ದೊಡ್ಡವರಾಗುತ್ತಿದ್ದಂತೆ ಅದನ್ನು ನೋಡುವ ಕಣ್ಣು , ಖುಷಿಪಡುವ ಮನಸ್ಸು ಕೊನೆಗೆ ಅವುಗಳ ಬಗ್ಗೆ ಸಹನೆಯೂ ಮಾಯವಾಗಿಬಿಡುತ್ತದೆ. ತೇಜಸ್ವಿ ಪುಸ್ತಕಗಳು ಮತ್ತು ಅವರು ಪರಿಚಯಿಸಿದ ಪ್ರಾಣಿ ಪ್ರಪಂಚ ನನ್ನ ಕಣ್ಣು, ಮನಸ್ಸು ಮತ್ತು ಸಹನೆಯನ್ನು ಇನ್ನೂ ಇರಗೊಟ್ಟಿದೆ. ನಮ್ಮ ಸಣ್ಣ ಬದುಕನ್ನು ಕೌತುಕಮಯ, ಅರ್ಥಪೂರ್ಣ ಮತ್ತು ಸುಂದರಗೊಳಿಸುವ ಎಲ್ಲಾ ಜೀವಜಾಲವೂ ಅದ್ಭುತವೇ. ಬೇರೆ ದೃಷ್ಟಿಕೋನ ಕಲಿಸಿದ ತೇಜಸ್ವಿಗೆ ಶರಣು! </div></div><div class="cxmmr5t8 oygrvhab hcukyx3x c1et5uql o9v6fnle ii04i59q" style="font-family: inherit; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ನಮ್ಮೊಂದಿಗೇ ಬದುಕುವ ಈ ಸಹಜೀವಿಗಳ ಲೋಕದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಈ ಡಾಕ್ಯುಮೆಂಟರಿ ಚೆಂದಕ್ಕೆ ತೋರಿಸಿಕೊಟ್ಟಿದೆ. ನೆಟ್ ಫ್ಲಿಕ್ಸಿನಲ್ಲಿದೆ, ಪ್ರಾಣಿ ಪ್ರಿಯರು ತಪ್ಪದೇ ನೋಡಿ.</div></div></span></div></div></div></div><div class="l9j0dhe7" id="jsc_c_7" style="font-family: inherit; position: relative;"><div class="l9j0dhe7" style="font-family: inherit; position: relative;"><div style="font-family: inherit;"><a class="oajrlxb2 gs1a9yip g5ia77u1 mtkw9kbi tlpljxtp qensuy8j ppp5ayq2 goun2846 ccm00jje s44p3ltw mk2mc5f4 rt8b4zig n8ej3o3l agehan2d sk4xxmp2 rq0escxv nhd2j8a9 mg4g778l pfnyh3mw p7hjln8o kvgmc6g5 cxmmr5t8 oygrvhab hcukyx3x tgvbjcpo hpfvmrgz jb3vyjys rz4wbd8a qt6c0cv9 a8nywdso l9j0dhe7 i1ao9s8h esuyzwwr f1sip0of du4w35lb n00je7tq arfg74bv qs9ysxi8 k77z8yql btwxx1t3 abiwlrkh p8dawk7l lzcic4wl a8c37x1j tm8avpzi" href="https://www.facebook.com/photo/?fbid=10161905306118128&set=a.10151930828198128&__cft__[0]=AZVOd5PPA1lKob_UE9TF2AH4-hRESFuS7OqH02DxQPcOUl9KcsSpdS7GsriS1F6XSjGaCKHZklTWwyLJyp9j898zRFIF6u5nxU5fjoOysyX8i7QmSvvxRVI7xlyM5HIoWZ6NAheigE1uLys7VCI8cdvCouzAxE3cF3FYF1oBAUyjLA&__tn__=EH-R" role="link" style="-webkit-tap-highlight-color: transparent; align-items: stretch; border-bottom-color: var(--always-dark-overlay); border-left-color: var(--always-dark-overlay); border-radius: inherit; border-right-color: var(--always-dark-overlay); border-style: solid; border-top-color: var(--always-dark-overlay); border-width: 0px; box-sizing: border-box; color: #385898; cursor: pointer; display: block; flex-basis: auto; flex-direction: row; flex-shrink: 0; font-family: inherit; list-style: none; margin: 0px; min-height: 0px; min-width: 0px; outline: none; padding: 0px; position: relative; text-align: inherit; text-decoration-line: none; touch-action: manipulation; user-select: none; z-index: 0;" tabindex="0"><div class="bp9cbjyn cwj9ozl2 j83agx80 cbu4d94t ni8dbmo4 stjgntxs l9j0dhe7 k4urcfbm" style="align-items: center; background-color: white; display: flex; flex-direction: column; font-family: inherit; overflow: hidden; position: relative; width: 590.117px;"><div style="font-family: inherit; max-width: 100%; min-width: 500px; width: calc((100vh + -325px) * 1.36538);"><div class="do00u71z ni8dbmo4 stjgntxs l9j0dhe7" style="font-family: inherit; height: 0px; overflow: hidden; padding-top: 381.992px; position: relative;"><div class="pmk7jnqg kr520xx4" style="font-family: inherit; height: 381.992px; left: 0px; position: absolute; top: 0px; width: 521.57px;"><img alt="May be an image of text that says 'Secret Life of Our Pets'" class="i09qtzwb n7fi1qx3 datstx6m pmk7jnqg j9ispegn kr520xx4 k4urcfbm bixrwtb6" height="416" referrerpolicy="origin-when-cross-origin" src="https://scontent.fblr1-5.fna.fbcdn.net/v/t39.30808-6/289999024_10161905306103128_5056351546897860890_n.jpg?_nc_cat=103&ccb=1-7&_nc_sid=8bfeb9&_nc_ohc=4O1vzduIGeQAX_Ocgt2&_nc_ht=scontent.fblr1-5.fna&oh=00_AT_0l1ZEIQL0lyGMyTbbfdzRt6zffq28YeYxBayfOg7fdA&oe=62BEBB32" style="border: 0px; height: 381.992px; inset: 0px; object-fit: cover; position: absolute; width: 521.57px;" width="568" /></div></div></div></div><div class="linmgsc8 opwvks06 i09qtzwb n7fi1qx3 hzruof5a pmk7jnqg j9ispegn kr520xx4" style="border-bottom: 1px solid var(--media-inner-border); border-top: 1px solid var(--media-inner-border); font-family: inherit; inset: 0px; pointer-events: none; position: absolute;"></div><div class="n00je7tq arfg74bv qs9ysxi8 k77z8yql i09qtzwb n7fi1qx3 b5wmifdl hzruof5a pmk7jnqg j9ispegn kr520xx4 c5ndavph art1omkt ot9fgl3s" data-visualcompletion="ignore" style="border-radius: inherit; font-family: inherit; inset: 0px; opacity: 0; pointer-events: none; position: absolute; transition-duration: var(--fds-duration-extra-extra-short-out); transition-property: opacity; transition-timing-function: var(--fds-animation-fade-out);"></div></a></div></div><div class="stjgntxs ni8dbmo4" style="font-family: inherit; overflow: hidden;"></div></div></div><div style="font-family: inherit;"><div class="stjgntxs ni8dbmo4 l82x9zwi uo3d90p7 h905i5nu monazrh9" data-visualcompletion="ignore-dynamic" style="border-radius: 0px 0px 8px 8px; font-family: inherit; overflow: hidden;"><div style="font-family: inherit;"><div style="font-family: inherit;"><div style="font-family: inherit;"><div class="l9j0dhe7" style="font-family: inherit; position: relative;"><div class="bp9cbjyn m9osqain j83agx80 jq4qci2q bkfpd7mw a3bd9o3v kvgmc6g5 wkznzc2l oygrvhab dhix69tm jktsbyx5 rz4wbd8a osnr6wyh a8nywdso s1tcr66n" style="align-items: center; border-bottom: 1px solid var(--divider); color: var(--secondary-text); display: flex; font-family: inherit; font-size: 0.9375rem; justify-content: flex-end; line-height: 1.3333; margin: 0px 16px; padding: 10px 0px;"><div class="bp9cbjyn j83agx80 buofh1pr ni8dbmo4 stjgntxs" style="align-items: center; background-color: white; color: #65676b; display: flex; flex-grow: 1; font-family: system-ui, -apple-system, "system-ui", ".SFNSText-Regular", sans-serif; overflow: hidden;"><span aria-label="See who reacted to this" class="du4w35lb" role="toolbar" style="font-family: inherit; z-index: 0;"><span class="bp9cbjyn j83agx80 b3onmgus" id="jsc_c_9" style="align-items: center; display: flex; font-family: inherit; padding-left: 4px;"><span class="np69z8it et4y5ytx j7g94pet b74d5cxt qw6c0r16 kb8x4rkr ed597pkb omcyoz59 goun2846 ccm00jje s44p3ltw mk2mc5f4 qxh1up0x qtyiw8t4 tpcyxxvw k0bpgpbk hm271qws rl04r1d5 l9j0dhe7 ov9facns kavbgo14" style="border-bottom-color: var(--card-background); border-left-color: var(--card-background); border-radius: 11px; border-right-color: var(--card-background); border-style: solid; border-top-color: var(--card-background); border-width: 2px; font-family: inherit; height: 18px; margin-left: -4px; position: relative; width: 18px; z-index: 2;"><span class="t0qjyqq4 jos75b7i j6sty90h kv0toi1t q9uorilb hm271qws ov9facns" style="border-radius: 9px; display: inline-block; font-family: inherit; height: 18px; width: 18px;"><span class="tojvnm2t a6sixzi8 abs2jz4q a8s20v7p t1p8iaqh k5wvi7nf q3lfd5jv pk4s997a bipmatt0 cebpdrjk qowsmv63 owwhemhu dp1hu0rb dhp61c6y iyyx5f41" style="align-items: inherit; align-self: inherit; display: inherit; flex-direction: inherit; flex: inherit; font-family: inherit; height: inherit; max-height: inherit; max-width: inherit; min-height: inherit; min-width: inherit; place-content: inherit; width: inherit;"><div aria-label="Like: 7 people" class="oajrlxb2 gs1a9yip g5ia77u1 mtkw9kbi tlpljxtp qensuy8j ppp5ayq2 goun2846 ccm00jje s44p3ltw mk2mc5f4 rt8b4zig n8ej3o3l agehan2d sk4xxmp2 rq0escxv nhd2j8a9 mg4g778l pfnyh3mw p7hjln8o kvgmc6g5 cxmmr5t8 oygrvhab hcukyx3x tgvbjcpo hpfvmrgz jb3vyjys rz4wbd8a qt6c0cv9 a8nywdso l9j0dhe7 i1ao9s8h esuyzwwr f1sip0of du4w35lb n00je7tq arfg74bv qs9ysxi8 k77z8yql pq6dq46d btwxx1t3 abiwlrkh p8dawk7l lzcic4wl" role="button" style="-webkit-tap-highlight-color: transparent; align-items: stretch; background-color: transparent; border-bottom-color: var(--always-dark-overlay); border-left-color: var(--always-dark-overlay); border-radius: inherit; border-right-color: var(--always-dark-overlay); border-style: solid; border-top-color: var(--always-dark-overlay); border-width: 0px; box-sizing: border-box; cursor: pointer; display: inline-flex; flex-basis: auto; flex-direction: row; flex-shrink: 0; font-family: inherit; list-style: none; margin: 0px; min-height: 0px; min-width: 0px; outline: none; padding: 0px; position: relative; text-align: inherit; touch-action: manipulation; user-select: none; z-index: 0;" tabindex="0"><img class="j1lvzwm4" height="18" role="presentation" src="data:image/svg+xml,%3csvg xmlns='http://www.w3.org/2000/svg' xmlns:xlink='http://www.w3.org/1999/xlink' viewBox='0 0 16 16'%3e%3cdefs%3e%3clinearGradient id='a' x1='50%25' x2='50%25' y1='0%25' y2='100%25'%3e%3cstop offset='0%25' stop-color='%2318AFFF'/%3e%3cstop offset='100%25' stop-color='%230062DF'/%3e%3c/linearGradient%3e%3cfilter id='c' width='118.8%25' height='118.8%25' x='-9.4%25' y='-9.4%25' filterUnits='objectBoundingBox'%3e%3cfeGaussianBlur in='SourceAlpha' result='shadowBlurInner1' stdDeviation='1'/%3e%3cfeOffset dy='-1' in='shadowBlurInner1' result='shadowOffsetInner1'/%3e%3cfeComposite in='shadowOffsetInner1' in2='SourceAlpha' k2='-1' k3='1' operator='arithmetic' result='shadowInnerInner1'/%3e%3cfeColorMatrix in='shadowInnerInner1' values='0 0 0 0 0 0 0 0 0 0.299356041 0 0 0 0 0.681187726 0 0 0 0.3495684 0'/%3e%3c/filter%3e%3cpath id='b' d='M8 0a8 8 0 00-8 8 8 8 0 1016 0 8 8 0 00-8-8z'/%3e%3c/defs%3e%3cg fill='none'%3e%3cuse fill='url(%23a)' xlink:href='%23b'/%3e%3cuse fill='black' filter='url(%23c)' xlink:href='%23b'/%3e%3cpath fill='white' d='M12.162 7.338c.176.123.338.245.338.674 0 .43-.229.604-.474.725a.73.73 0 01.089.546c-.077.344-.392.611-.672.69.121.194.159.385.015.62-.185.295-.346.407-1.058.407H7.5c-.988 0-1.5-.546-1.5-1V7.665c0-1.23 1.467-2.275 1.467-3.13L7.361 3.47c-.005-.065.008-.224.058-.27.08-.079.301-.2.635-.2.218 0 .363.041.534.123.581.277.732.978.732 1.542 0 .271-.414 1.083-.47 1.364 0 0 .867-.192 1.879-.199 1.061-.006 1.749.19 1.749.842 0 .261-.219.523-.316.666zM3.6 7h.8a.6.6 0 01.6.6v3.8a.6.6 0 01-.6.6h-.8a.6.6 0 01-.6-.6V7.6a.6.6 0 01.6-.6z'/%3e%3c/g%3e%3c/svg%3e" style="border: 0px; vertical-align: top;" width="18" /></div></span></span></span></span></span><div class="" style="font-family: inherit;"><span class="tojvnm2t a6sixzi8 abs2jz4q a8s20v7p t1p8iaqh k5wvi7nf q3lfd5jv pk4s997a bipmatt0 cebpdrjk qowsmv63 owwhemhu dp1hu0rb dhp61c6y iyyx5f41" style="align-items: inherit; align-self: inherit; display: inherit; flex-direction: inherit; flex: inherit; font-family: inherit; height: inherit; max-height: inherit; max-width: inherit; min-height: inherit; min-width: inherit; place-content: inherit; width: inherit;"><div class="oajrlxb2 g5ia77u1 qu0x051f esr5mh6w e9989ue4 r7d6kgcz rq0escxv nhd2j8a9 p7hjln8o kvgmc6g5 cxmmr5t8 oygrvhab hcukyx3x jb3vyjys rz4wbd8a qt6c0cv9 a8nywdso i1ao9s8h esuyzwwr f1sip0of n00je7tq arfg74bv qs9ysxi8 k77z8yql l9j0dhe7 abiwlrkh p8dawk7l lzcic4wl gmql0nx0 ce9h75a5 ni8dbmo4 stjgntxs tkr6xdv7 a8c37x1j" role="button" style="-webkit-tap-highlight-color: transparent; background-color: transparent; border-color: initial; border-radius: inherit; border-style: initial; border-width: 0px; box-sizing: border-box; color: inherit; cursor: pointer; font-family: inherit; list-style: none; margin: 0px; max-height: 1.3333em; outline: none; overflow: hidden; padding: 0px; position: relative; text-align: inherit; touch-action: manipulation; user-select: none; z-index: 1;" tabindex="0"><span aria-hidden="true" class="bzsjyuwj ni8dbmo4 stjgntxs ltmttdrg gjzvkazv" style="float: left; font-family: inherit; overflow: hidden; text-overflow: ellipsis; width: 100px;"><span style="font-family: inherit;"><span class="gpro0wi8 pcp91wgn" style="font-family: inherit; padding-left: 6px;">7</span></span></span><span class="gpro0wi8 cwj9ozl2 bzsjyuwj ja2t1vim" style="background-color: var(--card-background); float: left; font-family: inherit; margin-left: -100px;"><span style="font-family: inherit;"><span class="pcp91wgn" style="font-family: inherit; padding-left: 6px;">Prathima Keshav Prabhu, Raghu Apara and 5 others</span></span></span><div><span style="font-family: inherit;"><span class="pcp91wgn" style="font-family: inherit; padding-left: 6px;"><br /></span></span></div></div></span></div></div><div class="kb5gq1qc pfnyh3mw c0wkt4kp" style="background-color: white; color: #65676b; flex-grow: 0; flex-shrink: 0; font-family: system-ui, -apple-system, "system-ui", ".SFNSText-Regular", sans-serif; width: 7px;"></div></div></div></div></div></div></div></div>Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-51113388573046148192021-07-08T01:10:00.003-07:002021-07-08T01:10:59.555-07:00ಹೀಗೆ ಕಳೆಯುತ್ತದೆ ಕಾಲ<div class="kvgmc6g5 cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0px; overflow-wrap: break-word; white-space: pre-wrap;"><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEjDjef9DQpEdwi2lBLqEpBhyphenhyphenJXhdMgvkWIWxn81u1Qdy4ZkAPoNxZNxEwW7-8fINy_9jylYekg0TFtxnFWEfFpFtTmsXjD_UnEro0ojAWtGVH8nCIbM8SzshbDuiw1anJQaLlvCZ7jWb_I/s960/image.jpeg" imageanchor="1" style="margin-left: 1em; margin-right: 1em;"><img border="0" data-original-height="960" data-original-width="678" height="320" src="https://blogger.googleusercontent.com/img/b/R29vZ2xl/AVvXsEjDjef9DQpEdwi2lBLqEpBhyphenhyphenJXhdMgvkWIWxn81u1Qdy4ZkAPoNxZNxEwW7-8fINy_9jylYekg0TFtxnFWEfFpFtTmsXjD_UnEro0ojAWtGVH8nCIbM8SzshbDuiw1anJQaLlvCZ7jWb_I/s320/image.jpeg" /></a></div><br /><div dir="auto" style="font-family: inherit;"><br class="Apple-interchange-newline" /><br /></div><div dir="auto" style="font-family: inherit;"><br /></div><div dir="auto" style="font-family: inherit;">ಒಬ್ಬೊಬ್ಬರೆ ಮರೆಯಾಗುವಾಗ ಮತ್ತೆ ನೆನಪಾದ ನನ್ನದೇ ಸಾಲುಗಳು. ಹಾಗೆ ನೋಡ ಹೋದರೆ ಸದಾ ಡಿನೇಯಲ್ ಮೋಡ್ ಅಲ್ಲೇ ಬದುಕುವವಳು ನಾನು. ಮತ್ತೆಂದಾದರೂ ಆ ವ್ಯಕ್ತಿ ಸಿಗಬಹುದು ಎಂಬ ಭ್ರಮೆಯಲ್ಲಿ ಕಾಲ ಸವೆಸುವವಳು.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಹೀಗೆ ಕಳೆಯುತ್ತದೆ ಕಾಲ</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಸಾಗಂತ್ಯ ಚಿಂದಿ ಚೂರಿನ ನೆನಹುಗಳಾಗಿ </div><div dir="auto" style="font-family: inherit;">ಪ್ರೀತಿಯ ಜೀವಗಳು ಭಾವಕೋಶಗಳಾಗಿ </div><div dir="auto" style="font-family: inherit;">ಕಲಿತ ವಿದ್ಯೆಯೂ, ಓದಿದ ಸಾಲುಗಳೂ</div><div dir="auto" style="font-family: inherit;">ನೋಡಿದ ಚಿತ್ರಗಳೂ, ಕೇಳಿದ ಹಾಡುಗಳು </div><div dir="auto" style="font-family: inherit;">ಕಂಡ ಮುನ್ನೂರ ಅರವತ್ತು ಕೋಟಿ ಅಪರಿಚಿತ, ಚಿರ ಪರಿಚಿತ ಮುಖಗಳೂ </div><div dir="auto" style="font-family: inherit;">ಸುತ್ತಿದ ಹಾದಿ ಬೀದಿಗಳು ಕೇವಲ ಮೆದುಳಿನ ಗೆರೆಗಳಾಗಿ.</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ನಿನ್ನಿನ ಅರಮನೆಗಳು ದಾರಂದದ ಅಸ್ಥಿಪಂಜರಗಳಾಗಿವೆಯಲ್ಲ</div><div dir="auto" style="font-family: inherit;">ಓಣಿಗಳು, ಬಾವಿಗಳು, ಕೆರೆಗಳೂ ನೀರು ಬಿದ್ದ </div><div dir="auto" style="font-family: inherit;">ಜಲವರ್ಣ ಚಿತ್ರಗಳಂತೆ ಮಾಸಿ ಹೋದವಲ್ಲ.</div><div dir="auto" style="font-family: inherit;">ನಿನ್ನೆ ಅವೆಲ್ಲವೂ ಇದ್ದಿದ್ದು ನಿಜವೇ, ಅಲ್ಲ ಅದು </div><div dir="auto" style="font-family: inherit;">ಕೈಗಂಟಿದ ಚಿಟ್ಟೆಯ ರೆಕ್ಕೆಯ ಪುಡಿ ಬಣ್ಣಗಳಷ್ಟೇ. </div><div dir="auto" style="font-family: inherit;">ಚಿತ್ರದ ಬಿಂಬವಷ್ಟೇ ದಕ್ಕಿದ್ದು ಕಣ್ಣಿಗೆ. </div><div dir="auto" style="font-family: inherit;">ಹೀಗೆ ಕಳೆಯುತ್ತದೆ ಕಾಲ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಆಗಾಗ ಮಿಂಚುವ ನೆನಹುಗಳೊಂದಿಗೆ </div><div dir="auto" style="font-family: inherit;">ಬಿಸಿ ಉಸಿರಿನ ಜೊತೆಗೊಂದಿಷ್ಟು ಕಣ್ಣೀರ ತರ್ಪಣ, </div><div dir="auto" style="font-family: inherit;">ನಿನ್ನೆಗಳ ಆತಂಕವಿಲ್ಲವಿಂದು. ಕಳೆದದ್ದು ಕಳೆದಾಯ್ತು</div><div dir="auto" style="font-family: inherit;">ಕಳೆಯಲು ಇನ್ನೇನ್ನೂ ಉಳಿದಿಲ್ಲವಲ್ಲವಿಲ್ಲಿ</div><div dir="auto" style="font-family: inherit;">ಕಳೆ ಕಳೆದು ಮನಸ್ಸು ಕೂಡಿಸಿ ಹಾಕಿತಲ್ಲವೇ </div><div dir="auto" style="font-family: inherit;">ಲಕ್ಷ, ಸಾವಿರ, ಕೋಟಿ ವರ್ಣಗಳ ಬಿಂಬಗಳ</div><div dir="auto" style="font-family: inherit;">ಹೀಗೆ ಕಳೆಯುತ್ತದೆ ಕಾಲ...</div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಬಣ್ಣಗಳಲ್ಲಿ ಮುಳುಗಿ ಹೋಲಿಯಾಡುತ್ತಾ</div><div dir="auto" style="font-family: inherit;">ಕೂತು ಬಿಂಬಗಳ ಜೋಡಿಸಿ ಹೊಲೆದು</div><div dir="auto" style="font-family: inherit;">ಅದಕ್ಕೊಂದಿಷ್ಟು ಚೆಂದ ಚೆಂದದ ಕಸೂತಿ ಸೇರಿಸಿ</div><div dir="auto" style="font-family: inherit;">ಸಂಭ್ರಮಿಸಿದರೆ ಆಯ್ತಲ್ಲವೇ ಜೀವಕ್ಕೊಂದು ಅಂಗಿ</div></div><p><span style="background-color: white; color: #050505; font-family: inherit; font-size: 15px; white-space: pre-wrap;">ಹೀಗೆ ಕಳೆಯಲಾರದೆ ಕಾಲ?</span> </p>Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-13989233337029315292021-07-08T01:03:00.003-07:002021-07-08T01:03:37.566-07:00ಕಾವನ್ ಎಂಬ ಏಕಾಂಗಿಯ ಕಥನ<p></p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgKAoZ46GrTRHfrTrb-cvwC34dEajWh5SvwCKiy1GM9Gv6Y70d_jarqL1Wa19XqCaS_7zoOcQ5OMv-3TsnTAW7CuKmZ2nd2ZtpwRWJGyFJXEfYCKxyQqZe5TfYu89pyJbQ806S5b5g3RWs/s715/209474890_10161215141023128_4433692020360402218_n.jpeg" imageanchor="1" style="margin-left: 1em; margin-right: 1em;"><img border="0" data-original-height="371" data-original-width="715" src="https://blogger.googleusercontent.com/img/b/R29vZ2xl/AVvXsEgKAoZ46GrTRHfrTrb-cvwC34dEajWh5SvwCKiy1GM9Gv6Y70d_jarqL1Wa19XqCaS_7zoOcQ5OMv-3TsnTAW7CuKmZ2nd2ZtpwRWJGyFJXEfYCKxyQqZe5TfYu89pyJbQ806S5b5g3RWs/s320/209474890_10161215141023128_4433692020360402218_n.jpeg" width="320" /></a></div><br /><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEi1cNzMBEvtgG4KiQ4murfya_CAf3AfacUQ1Fbv3WijZzRcRQZrU5Y_SdiarOiYGdgSPCNEOxRI8Vq3RR0LK0er2XacFcasNVxlob1d09vTXhNPImTCFBapAGASHthnj2kamVP-r9PWWBg/s666/212845651_10161215151543128_733513255462019997_n.jpeg" imageanchor="1" style="margin-left: 1em; margin-right: 1em;"><img border="0" data-original-height="460" data-original-width="666" src="https://blogger.googleusercontent.com/img/b/R29vZ2xl/AVvXsEi1cNzMBEvtgG4KiQ4murfya_CAf3AfacUQ1Fbv3WijZzRcRQZrU5Y_SdiarOiYGdgSPCNEOxRI8Vq3RR0LK0er2XacFcasNVxlob1d09vTXhNPImTCFBapAGASHthnj2kamVP-r9PWWBg/s320/212845651_10161215151543128_733513255462019997_n.jpeg" width="320" /></a></div><div class="separator" style="clear: both; text-align: center;">pc:internet</div><br /> <p></p><p><span style="background-color: white; color: #050505; font-family: inherit; font-size: 15px; white-space: pre-wrap;"><br /></span></p><p><span style="background-color: white; color: #050505; font-family: inherit; font-size: 15px; white-space: pre-wrap;">ಕಾವನ್ ಎಂಬ ಈ ಚೆಂದದ ಕಣ್ಣುಗಳ, ಸುರ ಸುಂದರಾಂಗನ</span><span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="background-color: white; color: #050505; display: inline-flex; font-family: inherit; font-size: 15px; margin: 0px 1px; vertical-align: middle; white-space: pre-wrap;"></span><span style="background-color: white; color: #050505; font-family: inherit; font-size: 15px; white-space: pre-wrap;">ನ್ನು ೧೯೮೫ರಲ್ಲಿ ಶ್ರೀಲಂಕಾ ಸರಕಾರ ಪಾಕಿಸ್ತಾನದ ಆಗಿನ ಪ್ರಧಾನಿ ಜಿಯಾ ಉಲ್ ಹಕ್ ಅವರಿಗೆ ಉಡುಗೊರೆಯ ರೂಪದಲ್ಲಿ ಕೊಟ್ಟಿತ್ತು. ಇಸ್ಲಾಮಾಬಾದಿನ ಮೃಗಾಲಯ ಒಂದರಲ್ಲಿ ಮೂವತ್ತೆರಡು ವರ್ಷಗಳ ಕಾಲ ಬಂಧಿಯಾಗಿ ಕಾಲ ಕಳೆದ ಈತ ಬರಬರುತ್ತಾ ಮಾನಸಿಕವಾಗಿ ಕುಗ್ಗಲಾರಂಭಿಸಿದ. ಅವನ ಸಂಗಾತಿ ಸಹೇಲಿ ಕಾಲಿನ ಸೋಂಕು ರೋಗದಿಂದ ಸತ್ತು ಹೋದ ಮೇಲೆ, ಸಿಟ್ಟು, ಮಾನಸಿಕ ಉದ್ವೇಗಕ್ಕೊಳಗಾಗಿ ನಿಂತಲ್ಲೇ ಜೋಲಿಯಾಡಲಾರಂಭಿಸಿದ. ಹತ್ತಿರ ಹೋದ ಮೃಗಾಲಯದ ಕೆಲಸಗಾರರ ಮೇಲೆ ಮಣ್ಣು, ನೀರು ಅಥವಾ ಸೊಂಡಿಲಿಗೆ ಸಿಕ್ಕಿದ್ದನ್ನು ತೆಗೆದು ಎಸೆಯುತ್ತಲೂ ಇದ್ದ. ಆ ಸಿಬ್ಬಂದಿಯೋ, ಬರೇ ಕಬ್ಬನ್ನೇ ಕೊಟ್ಟು ಕೊಟ್ಟು, ಅಷ್ಟೂ ವರ್ಷಗಳಲ್ಲಿ ಐದೂವರೆ ಟನ್ ತೂಕ ಬೆಳೆಸಿಟ್ಟಿದ್ದರು. ಕಾಲುಗುರುಗಳೂ ಕೂಡಾ ಸೋಂಕಿನ ಲಕ್ಷಣಗಳನ್ನೂ ತೋರಿಸುತ್ತಿದ್ದವು. ಹಸಿರಿನ ಲವಲೇಶವೂ ಇಲ್ಲದ ಪರಿಸರದಲ್ಲಿ ಸರಪಣಿ ಕಟ್ಟಿ, ಕೆಲವೊಮ್ಮೆ ಅವನನ್ನು ಶಾಂತಗೊಳಿಸಲು ಮದ್ಯವನ್ನೂ ಕೊಡಲಾಗುತ್ತಿತ್ತು. ೨೦೧೫ರಿಂದ ಸುಮಾರು ಐದು ವರ್ಷಗಳ ಕಾಲ ಸಾಕಷ್ಟು ಜನರ ಸಾಹಸ, ಪ್ರಯತ್ನಗಳ ನಂತರ </span><span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="background-color: white; color: #050505; display: inline-flex; font-family: inherit; font-size: 15px; margin: 0px 1px; vertical-align: middle; white-space: pre-wrap;"></span><span style="background-color: white; color: #050505; font-family: inherit; font-size: 15px; white-space: pre-wrap;">ಕಾವನ್ ಅನ್ನು ಅಲ್ಲಿಂದ ಮುಕ್ತಗೊಳಿಸುವ ಪ್ರಕ್ರಿಯೆ ನಡೆಯಿತು. ಪಾಕಿಸ್ತಾನದಿಂದ ಅವನನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಸರಿಯಾಗಿ ಅವನನ್ನು ನೋಡಿಕೊಳ್ಳದ್ದಕ್ಕೆ ಮೃಗಾಲಯಕ್ಕೆ ಛೀಮಾರಿ ಹಾಕಿದ್ದೂ ಅಲ್ಲದೇ, ಅದನ್ನು ಮುಚ್ಚಿಸಿಯೂ ಬಿಟ್ಟಿತು.</span></p><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅಮೇರಿಕಾದ ಸುಪ್ರಸಿದ್ಧ, ಪಾಪ್ ನ ದೇವತೆ ಎಂದೇ ಕರೆಯಿಸಿಕೊಳ್ಳುವ ಶೆರ್ ನಿಂದಾಗಿ ಇಸ್ಲಾಮಾಬಾದಿನ ಜೂನಿಂದ ಕಾಂಬೋಡಿಯಾದ ಅಭಯಾರಣ್ಯಕ್ಕೆ ಕಾವನನ್ನು ಸ್ಥಳಾಂತರಿಸಬೇಕೆಂಬ ನಿರ್ಣಯ ಕೈಗೊಳ್ಳಲಾಗುತ್ತದೆ. ಕೋವಿಡ್ ಮಧ್ಯೆಯೂ ಆಸ್ಟ್ರಿಯಾದ </div><div dir="auto" style="font-family: inherit;">four paws ಎಂಬ ಸಂಸ್ಥೆಗೆ ಸೇರಿದ ಸದಸ್ಯರು ಆ ಜವಾಬ್ದಾರಿಯನ್ನು ಹೊತ್ತುಕೊಂಡರು. </div><div dir="auto" style="font-family: inherit;">ಆ ಸಂಸ್ಥೆಯ ನಿರ್ದೇಶಕ ಅಮೀರ್ ಖಲೀಲ್ ಎಂಬ ವೆಟ್ ಕಾವನ್ನೊಂದಿಗೆ ಬೆಳೆಸಿಕೊಂಡ ಸಂಬಂಧ ನನ್ನೀ ಬರಹಕ್ಕೆ ಕಾರಣ. ತನ್ನ ಜೀವನವಿಡೀ <span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span>ಯುದ್ಧ ನಿರತ ದೇಶಗಳಿಂದ, ಮೃಗಾಲಯಗಳಿಂದ ಬೇರೆ ಬೇರೆ ಪ್ರಾಣಿಗಳನ್ನು ರಕ್ಷಿಸುತ್ತಲೇ ಬರುತ್ತಿರುವ ಹಾಗೂ ಮರದ ದಿಮ್ಮಿಗಳನ್ನು ಎತ್ತಿ ಹಾಕುವ ಆನೆಗಳಿಗಾಗಿ ಹದಿನೇಳು ಸಾವಿರ ಹೆಕ್ಟೇರ್ ಜಾಗದಲ್ಲಿ ‘ಎಲೆಫಂಟ್ಸ್ ಲೇಕ್’ ಎಂಬ <span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span>ಸಂರಕ್ಷಿತ ಹಾಗೂ ರಿಹ್ಯಾಬಿಲಿಟೇಶನ್ ಅನ್ನು ನಿರ್ಮಿಸಿದ ಹೆಗ್ಗಳಿಕೆ ಅಮೀರ್ ಅವರದ್ದು.</div><div dir="auto" style="font-family: inherit;"> <span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span></div><div dir="auto" style="font-family: inherit;">ಅಮೀರ್, ಕಾವನ್ ಅನ್ನು ಶಾಂತಗೊಳಿಸಲು, <span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span>ಅವನಿಗೆ ಫ್ರಾಂಕ್ <span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span>ಸಿನಾಟ್ರಾನ (ಅಮೇರಿಕನ್ ಹಾಡುಗಾರ) ‘ದಿ ಎಂಡ್ ಇಸ್ ನಿಯ<span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span>ರ್’ ಹಾಡತೊಡಗುತ್ತಾರೆ. ತನ್ನ ದೊಡ್ಡ ಸ್ನೇಹಿತನಿಗೆ ಅತೀ ಕೆಟ್ಟ ಅಭಿರುಚಿಯಿದೆ, ಅದಕ್ಕೆ ನನ್ನ ಸ್ವರವನ್ನಿಷ್ಟಪಟ್ಟಿದ್ದಾನೆ ಎಂದು ಅಮೀರ್ ನಗುತ್ತಾ ಹೇಳುತ್ತಾರೆ. ಶೆರ್ ಅವನನ್ನು ನೋಡಲು ಬಂದಾಗಲೂ ಅವಳಿಂದ ಅದೇ ಹಾಡು ಹೇಳಿಸುತ್ತಾರೆ. ಅವನ ಡಯಟ್ ಅನ್ನು ಬದಲಾಯಿಸಿ ಅವನನ್ನು ಓಡಾಡಿಸಿ, ಓಡಾಡಿಸಿ ತೂಕವನ್ನಿಳಿಸುತ್ತಾರೆ. ಅದೇನೋ ಆನೆ! ಇವರೂ ಅದರೊಂದಿಗೆ ಓಡಾಡಬೇಕಲ್ಲ?! ಕಾಲಿನ ಉಗುರುಗಳನ್ನೂ ಪದೇ ಪದೇ ಸ್ವಚ್ಛಗೊಳಿಸುತ್ತಲೇ ಇರಬೇಕಾಗುತ್ತದೆ. ದಿನಕ್ಕೆರಡು ಸಲ, ನಾಲ್ಕು ಘಂಟೆ ಅವನೊಂದಿಗೆ ಕಳೆದು ಅವರಿಬ್ಬರ ಮಧ್ಯೆ ಬಾಂಧವ್ಯ ಹುಟ್ಟುತ್ತದೆ. ಹಾಡು ಕೇಳುತ್ತಾ ಕಾವನ್ ಕಣ್ಣೀರೂ ಹಾಕುತ್ತಾನೆ. ಅಮೀರ್ ಅನ್ನು ತನ್ನ ಸೊಂಡಿಲಿನಿಂದ ಅಪ್ಪಿಕೊಳ್ಳುತ್ತಾನೆ. ತಲೆ ಸವರುವಂತೆ ಅವರಿಗೆ ಅಂಟಿಕೊಳ್ಳುತ್ತಾನೆ. ಇಬ್ಬರೂ ಅಂಟಿಕೊಂಡು ಓಡಾಡುವ ವಿಡಿಯೋ ದೃಶ್ಯಗಳು ನೋಡಿದಾಗೆಲ್ಲಾ ಮನಸ್ಸು ತುಂಬಿ ಬರುತ್ತದೆ. <span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span></div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಆತನ ನಂಬಿಕೆಯನ್ನು ಗಳಿಸಿದ ನಂತರ ಅವನನ್ನು ಮಾತನಾಡಿಸುತ್ತಾ, ತಿನ್ನಿಸುತ್ತಾ <span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span>ಅವನಿಗೋಸ್ಕರ ತಯಾರಾದ ಒಂದು ದೊಡ್ಡ ಕಂಟೇನರ್ ಒಳಗೆ ಅವನನ್ನು ಸೇರಿಸಿ, ಅರಿವಳಿಕೆ ನೀಡಿ ಅದನ್ನು ಟ್ರಕ್ ಒಂದರ ಮೂಲಕ ಕಾರ್ಗೋ ವಿಮಾನಕ್ಕೆ ತಂದು ಸೇರಿಸುತ್ತಾರೆ. ಅದೊಂದು ‘ದೊಡ್ಡ, ಅತೀ ದೊಡ್ಡ’ ಸಾಧನೆ! ರಾಶಿಗಟ್ಟಲೆ ಕ್ಯಾಮೆರಾಗಳು, ಕಾನ್ ವೇ ಥರದಲ್ಲಿ ಕಾರುಗಳು ಆ ಟ್ರಕ್ಕನ್ನೇ ಹಿಂಬಾಲಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬರುತ್ತವೆ. ಆ ಕಂಟೆನರ್ ಅನ್ನು ವಿಮಾನಕ್ಕೆ ನುಗ್ಗಿಸುವಾಗ ಅವನು ಒಂದು ಚೂರು ಅಲ್ಲಾಡಿದರೂ ವಿಮಾನದ ಒಳಭಾಗಕ್ಕೆ ಪೆಟ್ಟಾಗುತ್ತದೆ. ವಿಮಾನದ ಸಿಬ್ಬಂದಿ, ಅಮೀರ್ ಅವರಿಗೆ ಕಾವನ್ ಗೆ ಆದೇಶ ಕೊಡುವಂತೆ ಹೇಳುತ್ತಾರೆ. ಅಮೀರ್ ಗೆ ತಬ್ಬಿಬ್ಬು, ಅವನೇನು ಮನುಷ್ಯನೇ, ಅಲ್ಲಾಡಬೇಡ, ಮಧ್ಯ ಕೂತುಕೋ ಅಂದರೆ ಕೇಳುವುದಕ್ಕೆ! ಅಂತೂ ಇಂತೂ ಕಾವನ್ನಿನ್ನದ್ದೋ, ಅಮೀರ್ ಅವರದ್ದೋ ಅಥವಾ ಆ ವಿಮಾನದ ಅದೃಷ್ಟಕ್ಕೋ ಅವನು ಅಲ್ಲಾಡದೇ ಸರಿಯಾಗಿ ಮಧ್ಯದಲ್ಲೇ ನಿಂತು ವಿಮಾನದ ಒಳಕ್ಕೆ ಕಂಟೇನರ್ ಅನ್ನು ನುಗ್ಗಿಸಲಾಗುತ್ತದೆ. ಅಷ್ಟೂ ಹೊತ್ತು ಕಾವನ್ ಆರೋಗ್ಯವಾಗಿದ್ದಾನೆ ಎಂದು ಕಂಟೇನರ್ ಒಳಗೆ ತಲೆ ಹಾಕಿ ಅವನ ಸೊಂಡಿಲನ್ನು ಮುಟ್ಟಿ ಮುಟ್ಟಿ ನೋಡುತ್ತಲೇ ಇರುತ್ತಾರೆ ಅಮೀರ್. ಅವನ ಮಿಸುಕಾಟ ನೋಡಿ ‘ಸಧ್ಯ ಅವನು ಬದುಕಿದ್ದಾನೆ’ ಅನ್ನುವ ಸಮಾಧಾನ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಅವನು ಕಾಂಬೋಡಿಯಾ ಮುಟ್ಟಿ ಅವನನ್ನು ಬೀಳ್ಕೊಡುವ ಸಮಯದಲ್ಲಿ ಒದ್ದಾಡಿ ಹೋಗುತ್ತಾರೆ. ಅವರಿಗೆ ವಿಚಿತ್ರ ತಳಮಳ, ಸಂಕಟ. ಅಮೀರ್ ಕಾವನ್ನೊಂದಿಗೆ ತನ್ನ <span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span>ಭಾವನಾತ್ಮಕ ಬಾಂಧವ್ಯವನ್ನು ನೆನೆದು ಕಣ್ಣೀರು ಹಾಕುತ್ತಾ “ಅವನೊಟ್ಟಿಗೆ ನಾನು ಅಟ್ಯಾಚ್ ಮೆಂಟ್ ಬೆಳೆಸಿಕೊಂಡದ್ದು ನನ್ನ ತಪ್ಪು, ಆದರೆ ಅವನನ್ನು ಶಾಂತಗೊಳಿಸಲು ಬೇರೆ ಯಾವುದೇ ದಾರಿಯೂ ನಮಗಿರಲಿಲ್ಲ” ಎನ್ನುತ್ತಾರೆ. ಕಾವನ್ ಈಗ ಕಾಂಬೋಡಿಯಾದ ತನ್ನ ಮೂವತ್ತು ಎಕರೆಗಳ ಕಾಡು-ಮನೆಯಲ್ಲಿ ಆರಾಮಾಗಿ ಓಡಾಡಿಕೊಂಡು, ಹೊಸ ಸಂಗಾತಿಗಳನ್ನು ಅವಾಗವಾಗ ಮಾತನಾಡಿಸಿಕೊಂಡು, ಸೊಪ್ಪು, ಕಲ್ಲಂಗಡಿ, ಬಾಳೆಹಣ್ಣು, ಬಾಳೆದಿಂಡು, ಹಣ್ಣುಗಳ ಭೂರಿ ಆದರೆ ಸರಿಯಾದ ಆಹಾರ ಸೇವಿಸಿಕೊಂಡು ಖುಷಿಯಿಂದಿದ್ದಾನೆ. ಅವನ ಜೋಲಿಯಾಡುವಿಕೆ ಈವಾಗ ನಿಂತಿದೆ. ಅವನ ಈ ಬೆಳವಣಿಗೆ ಬಗ್ಗೆ ಅಮೀರ್ ಅವನು ಇನ್ನಷ್ಟು ಆರಾಮಾಗುತ್ತಾನೆ ಎಂದು ತುಂಬು ಖುಷಿಯಿಂದ ಹೇಳಿಕೊಳ್ಳು<span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span>ತ್ತಾರೆ. </div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"><div dir="auto" style="font-family: inherit;">ಮಕ್ಕಳಿಗೆ ಇಂಥಹುದೇನನ್ನೋ ತೋರಿಸಿದಾಗ, ಓದಿ ಹೇಳಿದಾಗ,<span class="sf5mxxl7 nvdbi5me oygrvhab ditlmg2l kvgmc6g5 knj5qynh tbxw36s4 pq6dq46d" style="display: inline-flex; font-family: inherit; margin: 0px 1px; vertical-align: middle;"></span> ಅವರು ದೊಡ್ಡವರಾದಾಗ ವೆಟ್ ಆಗಿಯೋ, ಕಾಡಿನ ಸಂರಕ್ಷಕರಾಗಿಯೋ ಅಥವಾ ಸಾಕಷ್ಟು ಹಣ ದುಡಿದಲ್ಲಿ ಒಂದಿಷ್ಟು ಇಂತಹ ಸಂಸ್ಥೆಗಳಿಗೆ ದಾನ ಮಾಡಿಯೋ, ಯಾವುದೂ ಅಲ್ಲದಿದ್ದಲ್ಲಿ ದಾರಿಯಲ್ಲಿ ಸಿಗುವ ನಾಯಿ, ಬೆಕ್ಕುಗಳಿಗೆ ಹಿಂಸೆ ಮಾಡದೇ ಇರಬಹುದು ಎಂಬುದು ನನ್ನಾಸೆ. </div><div><br /></div></div><div class="o9v6fnle cxmmr5t8 oygrvhab hcukyx3x c1et5uql ii04i59q" style="background-color: white; color: #050505; font-family: system-ui, -apple-system, system-ui, ".SFNSText-Regular", sans-serif; font-size: 15px; margin: 0.5em 0px 0px; overflow-wrap: break-word; white-space: pre-wrap;"></div>Sowmyahttp://www.blogger.com/profile/04986610432583636943noreply@blogger.com1tag:blogger.com,1999:blog-77035279950324348.post-35649012525447250912020-11-05T23:46:00.002-08:002020-11-05T23:46:18.085-08:00ಪರುಷ ಮಣಿ<p></p><p><br /></p><p>(ಹಿಂದೆ ಯಾವತ್ತೋ ಬರೆದಿದ್ದ ಕತೆ, ಸಂಕಥನದಲ್ಲಿ ಪ್ರಕಟವಾಗಿತ್ತು)</p><p> </p><p>ಬಚ್ಚಲಿನ ಪಕ್ಕದ ಬಾಣಂತಿ ಕೋಣೆಯ ಜಗಲಿಯಲ್ಲಿ ಅಡಿಕೆ ಸುಲಿಯುತ್ತಾ ಮಗಳು ಸೀತೆಯೊಡನೆ ಹರಟುತ್ತಾ ಕುಳಿತ ಭಾಗೀರಥಿ ಏತಕ್ಕೋ ತಲೆಯೆತ್ತಿ ಕಾಲುಹಾದಿಯೆಡೆ ಕಣ್ಣು ಹಾಯಿಸಿದರೆ ಆಡಿಕೆ ಮರಗಳ ಹಿನ್ನೆಲೆಯಲ್ಲಿ ಅಸ್ಪಷ್ಟವಾಗಿ ಗಂಡನ ಆಕೃತಿ ಕಾಣಿಸಿತು. ಗಡಿಬಿಡಿಯಿಂದ "ಬಾಯಾರಿಕೆಗೆ ತಂದಿಡು ಮಗಳೇ, ಅಕೋ ಅಲ್ಲಿ ಅಪ್ಪಯ್ಯ ಬಂದ್ರು" ಎಂದರು. ಅಷ್ಟರವರೆಗೂ ತಾಯಿಯ ಸಾನಿಧ್ಯದಿಂದ ಬೆಳಗಿದ್ದ ಸೀತೆಯ ಮುಖ ಕಪ್ಪಿಟ್ಟು, ಅವಳು ಬರಿದೇ ತಲೆಯಾಡಿಸಿ ಉಟ್ಟ ಸೀರೆಗೆ ಕೈಯೊರೆಸುತ್ತಾ ಒಳಧಾವಿಸಿದಳು. ಗಣಪಯ್ಯ ಹತ್ತಿರವಾದಂತೆಲ್ಲಾ ಅವರ ನಡೆಯುವ ಶೈಲಿಯಿಂದಲೇ ಏನು ನಡೆದಿರಬಹುದೆಂಬ ಸೂಚನೆ ಭಾಗೀರಥಿಗಾಗಲೇ ಸಿಕ್ಕಿತ್ತು. ದಪ ದಪ ಹೆಜ್ಜೆ ಹಾಕುತ್ತಾ ಬಂದವರೇ ಜಗಲಿಯಂಚಿಗೆ ಕುಸಿದು ಕೂತು, ಕೈಲಿದ್ದ ಬೈರಾಸಿನಿಂದ ಮುಖವೊರೆಸಿ " ಏ ಹೆಣ್ಣೇ, ಈ ಸಾಡೇಸಾತ್ ಶನಿ ಈ ಜನ್ಮದಲ್ಲಿ ನಮ್ಮ ಬೆನ್ನು ಬಿಡುವುದಿಲ್ಲ ಕಾಣ್ತದೆ. ಎಂತ ಸಾಯುವುದು! ಎಂತ, ಸತ್ತಾಳಾ ಹೇಗೆ!? ಒಂದು ಬಾಯಾರಿಕೆಗೆ ತರಲು ಹೇಳೇ" ಎಂದು, ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳಿಗೂ ಕೇಳುವಂತೆ ತಮ್ಮ ದಪ್ಪ ಸ್ವರದಲ್ಲಿ ಬೊಬ್ಬಿರಿದರು. ಅದರಲ್ಲಿನ ತಿರಸ್ಕಾರ, ವ್ಯಂಗ್ಯ, ಅಸಹನೆ, ದ್ವೇಷಗಳು ಬಾಣಗಳಂತೆ ಒಂದರ ಹಿಂದೆ ಒಂದರಂತೆ ಹಾರಿ ಬಂದು ಭಾಗೀರಥಿಯ ಮನದಲ್ಲಿ ನೆಟ್ಟು ನೋಯಿಸತೊಡಗಿದವು. ಅಷ್ಟರಲ್ಲೇ ಮನೆಯಿಂದ ಬಂದ ಸೀತೆ, ಕೈಯಲ್ಲಿದ್ದ ಮಜ್ಜಿಗೆಯನ್ನು ಅಪ್ಪನ ಬಳಿಯಿಟ್ಟು ಒಂದು ಸಲವೂ ಅವರ ಕಡೆ ದೃಷ್ಟಿ ಹಾಯಿಸದೇ ತನ್ನ ಪಾಡಿಗೆ ತಾನು, ಸುಲಿಯುತ್ತಿದ್ದ ಅಡಕೆಯ ಬುಟ್ಟಿಯ ಹತ್ತಿರ ಕುಳಿತಳು.</p><p>ಅವಳನ್ನೇ ದುರುಗಟ್ಟಿ ನೋಡುತ್ತಿದ್ದ ಗಣಪಯ್ಯನ ಕೋಪ ನೆತ್ತಿಗೇರಿ ಅಲ್ಲೇ ಬಿದ್ದಿದ್ದ ಅಡಕೆ ಸೋಗೆಯನ್ನೆತ್ತಿಕೊಂಡು ಕೂತಿದ್ದವಳನ್ನು ಕೆಳಕ್ಕೆಳೆದು ಮನಸೋ ಇಚ್ಛೆ ಬಡಿದರು, ಬಿಡಿಸಲು ಬಂದ ಭಾಗೀರಥಿಗೂ ಒಂದಷ್ಟು ಬಡಿದು, ಅವಳನ್ನು ದೂಡಿ, ಅದೂ ಸಾಕಾಗದೆ ಸೋಗೆ ಬಿಸಾಡಿ, ಕೆಳಕ್ಕೆ ಬಿದ್ದ ಸೀತೆಯನ್ನು ಕಾಲಿನಿಂದ ಒದೆಯಲಾರಂಭಿಸಿದರು. ಅದರೊಂದಿಗೆ ಊರಿಡೀ ಕೇಳುವಂತೆ ಅಶ್ಲೀಲ ಬೈಗುಳಗಳ ಸುರಿಮಳೆ ಬೇರೆ.</p><p>ಅಲ್ಲಲ್ಲಿ ನಿಂತು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು ತೋಟದಾಳುಗಳು, ಮುಂದೆ ಬಂದು ತಡೆಯುವ ಧೈರ್ಯ ಯಾರಿಗೂ ಇರಲಿಲ್ಲ. ಅಷ್ಟು ಹೊಡೆಸಿಕೊಂಡರೂ ಒಂಚೂರೂ ನರಳದೇ, ಅಳದೆ, ಪ್ರತಿಭಟಿಸದೇ ಸುಮ್ಮನಿದ್ದಳು ಸೀತೆ. ಹೋದ ಜನ್ಮದಲ್ಲಿ ಮಾಡಿದ್ದ ಪಾಪಕ್ಕೆ ಉಳಿದುಹೋದ ಕಂದಾಯ ಸಲ್ಲಿಸುವವಳಂತೆ ಮುದ್ದೆಯಾಗಿ ಬಿದ್ದಿದ್ದಳು. ಭಾಗೀರಥಿಗೆ ಒಡಲೆಲ್ಲಾ ಹತ್ತಿ ಉರಿದಂತಾಯ್ತು. ಇನ್ನೂ ಒದೆಯುತ್ತಾ, ಬೈಯುತ್ತಿದ್ದ ಗಂಡನನ್ನು, ಅವುಡುಗಚ್ಚಿ ಎಲ್ಲಿಲ್ಲದ ಶಕ್ತಿಯನ್ನು ತಂದುಕೊಂಡು ದೂಡಿಬಿಟ್ಟಳು. ಆಕೆ ದೂಡಿದ ರಭಸಕ್ಕೆ ಸಮತೋಲನ ಕಳೆದುಕೊಂಡರೂ ಬೀಳದಂತೆ ಸಾವರಿಸಿಕೊಂಡ ಗಣಪಯ್ಯ ನಿಬ್ಬೆರಗಾಗಿ ಅವಳನ್ನೇ ದಿಟ್ಟಿಸಿದರು. ಅವಳ ಮುಖದಲ್ಲಿ ಕಾಣುತ್ತಿದ್ದ ತಿರಸ್ಕಾರ, ಕೋಪ ಅವರನ್ನು ಒಂದರೆಗಳಿಗೆ ಹಿಮ್ಮೆಟಿಸಿತು. ಬೆರಗು ಕಳೆದಂತೆ, ಚೆಲ್ಲಾಡಿ ಹೋಗಿದ್ದ ಕೋಪ, ಅಹಂಕಾರ, ಶಕ್ತಿಯನ್ನು ಬಾಚಿ ಧರಿಸಿ ಮತ್ತೆ ಕ್ರೂರ ಕಣ್ಣುಗಳಿಂದ ನೋಡುತ್ತಾ ಬೈಯಲು ಬಾಯಿ ತೆಗೆದರು. ಆದರೆ ಸಾಕ್ಷಾತ್ ಕಾಳಿಯೇ ಅವತರಿಸಿದಂತಿದ್ದ ಭಾಗೀರಥಿ ಅದಕ್ಕೆ ಸೊಪ್ಪು ಹಾಕದೆ ಹೊಡೆಯಲೆಂದು ಎತ್ತಿದ್ದ ಅವರ ಕೈಯನ್ನು ಬಲವಾಗಿ ತಿರುಚಿಬಿಟ್ಟಳು, ಅಷ್ಟೇ ಅಲ್ಲದೆ ಮೊಣಕಾಲೆತ್ತಿ ಎಲ್ಲಿಗೆ ಒದೆಯಬೇಕೋ ಅಲ್ಲಿಗೆ ಒದ್ದೂ ಬಿಟ್ಟಳು. ಬಿದ್ದವನ ಬೆನ್ನಿಗೆ ಅಂಗಳದಲ್ಲಿ ಹಾಕಿದ್ದ ಕಲ್ಲು ಚಪ್ಪಡಿ ಬಲವಾಗಿಯೇ ಬಡಿಯಿತು. ಅಲ್ಲಿಗೆರಡು ದಶಕ ವಿರಾಜಮಾನವಾಗಿ ಮೆರೆದ ಗಣಪಯ್ಯನ ಕಿರೀಟ ನೆಲಕಚ್ಚಿತು. ನೋವು, ಹತಾಶೆ, ಅವಮಾನಗಳಿಂದ ಗಣಪಯ್ಯ ಕಿರುಚುತ್ತಿದ್ದರೆ, ಅಷ್ಟು ಹೊತ್ತು ಸುಮ್ಮನಿದ್ದ ಸೀತೆ, ಎದ್ದು ನಿಂತು ಕುಣಿಯುತ್ತಾ, ಚಪ್ಪಾಳೆ ತಟ್ಟುತ್ತಾ ವಿಕಾರವಾಗಿ ನಗಲಾರಂಭಿಸಿದಳು. ನೆಲದಲ್ಲಿ ಕುಸಿದು ಕೂತು ನೋವಿನಿಂದ ಒದ್ದಾಡುತ್ತಿದ್ದ ಗಂಡನನ್ನು ಉದ್ದೇಶಿಸಿ, " ಇನ್ನೊಂದು ಸಲ, ಇನ್ನೊಂದು ಸಲ ನನ್ನ ಮಗಳ ಮೇಲೆ ಕೈಯಿಟ್ಟರೆ ನೋಡು, ಆ ವೀರಭದ್ರನ ಆಣೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ನನ್ನ, ಈ ಭಾಗೀರಥಿ ಮಗಳಿವಳು. ನಾನಿದ್ದೇನೆ ಅವಳ ರಕ್ಷಣೆಗೆ, ಆ ವೀರಭದ್ರನಿದ್ದಾನೆ. ತಿಳಿದುಕೋ, ನಿನ್ನ ಸಿಗಿದು ತೋರಣ ಕಟ್ಟಲಿಕ್ಕೂ ನಾನು ಸಿದ್ಧ!" ಎಂದವರೇ ಮಗಳ ಕೈ ಹಿಡಿದು ಒಳಗೆಳೆದುಕೊಂಡು ಹೋದರು. ಢವಗುಡುತ್ತಿದ್ದ ಎದೆ ಬಡಿತವನ್ನು ತಹಬಂದಿಗೆ ತರಲೆತ್ನಿಸುತ್ತಾ ಮಗಳ ಕೈಹಿಡಿದು ಮನೆಯೊಳಗೆ ನುಗ್ಗಿ ದಾರಂದ ಅಲ್ಲಾಡಿ ಹೋಗುವಷ್ಟು ಜೋರಾಗಿ ಬಾಗಿಲು ಹಾಕಿಕೊಂಡಳು. ಮತ್ತದೇ ಬಾಗಿಲಿಗೆ ಬೆನ್ನಾನಿಸಿ ಕುಸಿದು ಕೂತು ಅಳಲಾರಂಭಿಸಿದಳು, ಅವಳ ಕೈ ಹಿಡಿತದಲ್ಲೇ ಸಿಕ್ಕಿಕೊಂಡ ತನ್ನ ಕೈ ಬಿಡಿಸಿಕೊಳ್ಳಲಾಗದೆ ಇದ್ದ ಸೀತೆ ಕೂಡ ಅವಳೊಂದಿಗೆ ತಾರಾಡಿ ನೆಲಕ್ಕೆ ಬಿದ್ದಳು. ತಾಯ ಮಡಿಲಿಗೆ ತೆವಳಿ ಅಲ್ಲೇ ತಲೆಯಿಟ್ಟು ತಾಯ ಅಳುವಿನೊಂದಿಗೆ ತಾನೂ ದನಿ ಸೇರಿಸಿ ಅಳಲಾರಂಭಿಸಿದಳು. ತಾಯಿ, ಮಗಳ ಅಳು ಹಾಗೂ ಹೊರಗಿದ್ದ ಗಣಪಯ್ಯನ ಗೊಣಗಾಟ ಸೇರಿ ಆ ಮನೆಯ ಛಾವಣಿಯ ಮೇಲೆ ಹದ್ದಿನಂತೆ ಗಿರಕಿ ಹೊಡೆಯಲಾರಂಭಿಸಿತು. ನೋವಿನಿಂದ ನರಳುತ್ತಿದ್ದ ಗಣಪಯ್ಯನ ಉಸಾಬರಿ ಕೇಳಲು ಯಾವೊಬ್ಬ ಆಳೂ ಬರಲಿಲ್ಲ.</p><p>ತೋಟಕ್ಕೆ ಹರಡಿದ ಈ 'ಭಾಗೀರಥಿ ಮಹಾತ್ಮೆ' ಪ್ರಸಂಗ ವಿವಿಧ ರೆಕ್ಕೆ ಪುಕ್ಕಗಳೊಂದಿಗೆ ಬೇಗನೆ ಇಡೀ ಊರಿನಲ್ಲಿ ಹಾರತೊಡಗಿತು. ಕಂಡವರಿಗೆಲ್ಲಾ ವಿವಿಧ ವರ್ಣಗಳೊಂದಿಗೆ ಮನೋರಂಜನೆ ಒದಗಿಸಿದ ಈ ಪ್ರಸಂಗ ಗಣಪಯ್ಯನ ಆಪ್ತ ಮಿತ್ರ ಚಾಟು ಕಿವಿ ತಲುಪಿದೊಡನೆ ಆತ ಎದ್ದೆನೋ ಬಿದ್ದೇನೋ ಎಂಬAತೆ ಮಿತ್ರನ ರಕ್ಷಣೆಗೆ ಧಾವಿಸಿ ಅಲ್ಲಿ ಭಾಗೀರಥಿಯ ದರ್ಶನವಾದೊಡನೆ ಕಾಲಿಗೆ ಬುದ್ಧಿ ಹೇಳಿದ್ದೂ ಆಯಿತು. ಇದರಿಂದ ಮನೆಯಲ್ಲಿ ಭಾಗೀರಥಿ ಯಜಮಾನ್ತಿಯ ಪಟ್ಟಕ್ಕೇರಿದರೆ ಊರಿನ ಪತೀ ಪೀಡಿತ ಹೆಣ್ಣು ಮಕ್ಕಳಿಗೆ ನೂರಾನೆ ಬಲ ಬಂದಂತಾಯ್ತು.</p><p>ಭಾಗೀರಥಿ ಗಣಪಯ್ಯನ ಎರಡನೇ ಧರ್ಮಪತ್ನಿಯಾಗಿ ಕಾಲಿಟ್ಟಾಗಿನಿಂದ ಎಂದೂ ಹೊರಗೆ ಕಾಲಿಟ್ಟದ್ದೇ ಇಲ್ಲ, ಮನೆಯ ಹಿತ್ತಲು,ಅದಕ್ಕೆ ಅಂಟಿಕೊAಡAತೇ ಇದ್ದ ಪುಟ್ಟ ಕೆರೆ, ಕೊಟ್ಟಿಗೆ, ಬಚ್ಚಲುಮನೆ, ಅದರ ಪಕ್ಕದ ಹೊರಗಾದಾಗ ಕೂರುತ್ತಿದ್ದ ಬಾಣಂತಿ ಕೋಣೆ, ಅಂಗಳ, ಅನತಿ ದೂರದಲ್ಲಿದ್ದ ಬಾವಿ ಇವಿಷ್ಟೇ ಇವಳ ಜೀವನದ ಪರಿಧಿ. ತಂದೆ ತಾಯಿ, ಅಣ್ಣ, ತಮ್ಮ, ಅಕ್ಕ ಎಲ್ಲರೂ ಮೊದಮೊದಲ ಕೆಲದಿನಗಳಲ್ಲಿ ನೋಡಲು ಬಂದರಾದರೂ ಅಳಿಯ ದೇವರ ಅಸಹ್ಯ ನುಡಿಗಳು ಹಾಗೂ ಜಿಗುಪ್ಸೆ ಹುಟ್ಟಿಸುವ ವರ್ತನೆಗಳಿಗೆ ನೊಂದುಕೊಂಡು ಅದನ್ನೂ ನಿಲ್ಲಿಸಿದ್ದರು. ತವರಿನಿಂದಲೂ ದೂರವಾದ ಭಾಗೀರಥಿ, ವಿಕ್ಷಿಪ್ತ ಮನಸ್ಸಿನ ಗಣಪಯ್ಯನ ವಿಕೃತ ಕೃತ್ಯಗಳಿಗೆ ಬಲಿಪಶುವಾಗುತ್ತಲೇ ಹೋದಳು. ಮನೆ ಬಿಟ್ಟು ಎಲ್ಲೂ ಹೋಗುವಂತಿಲ್ಲ, ಯಾರನ್ನೂ ಮಾತನಾಡಿಸಲೂಬಾರದು.ಮನೆಯಲ್ಲಿ ಟಿವಿ, ರೇಡಿಯೋ, ಪೇಪರ್ಗಳ ಸುದ್ದಿ ಸುರಾಣವಿರಲಿಲ್ಲ, ಎಲ್ಲರೂ ಸಾಮಾನ್ಯವಾಗಿ ತೊಡುತ್ತಿದ್ದ ನೈಟಿಯನ್ನೂ ಹಾಕಲು ಬಿಡುತ್ತಿರಲಿಲ್ಲ. ಮದುವೆ, ಶಾಸ್ತ್ರಗಳು ಎಲ್ಲವನ್ನೂ ಮುಗಿಸಿ ತವರ ಬಿಟ್ಟು ಯಾವುದೇ ಸಂಭ್ರಮವಿಲ್ಲದೆ ಗಂಡನ ಮನೆ ಹೊಕ್ಕುತ್ತಿದ್ದಂತೆ ಓಡಿ ಬಂದು ಕಾಲ ತಬ್ಬಿದ್ದು ಗಣಪಯ್ಯನ ಮೊದಲನೇ ಹೆಂಡತಿ ಜಾನಕಿಯ ಒಂದೂವರೆ ವರ್ಷದ ಕೂಸು ಸೀತೆ. ದೈನ್ಯತೆಯ ಪುಟ್ಟ ರೂಪವಾಗಿದ್ದ ಅದನ್ನು ನೋಡಿದೊಡನೆ ಎತ್ತಿ ಬಾಚಿ ತಬ್ಬಿದ್ದಳು ಭಾಗೀರಥಿ. ಅಲ್ಲೇ ಕೂತು ಕುಟ್ಟಾಣಿಯಲ್ಲಿ ಎಲೆ ಅಡಿಕೆ ಕುಟ್ಟುತ್ತಿದ್ದ ಅತ್ತೆ ಎಂಬ ಮುದಿಜೀವ ನೆಮ್ಮದಿಯ ನಿಟ್ಟುಸಿರು ಬಿಟ್ಟಿತ್ತು, ತನ್ನ ಕೆಲಸವಾಯಿತೆಂಬಂತೆ ಸೊಸೆ ಬಂದ ಎರಡೇ ತಿಂಗಳಲ್ಲಿ ಗೋಡೆ ಮೇಲಿನ ಪಟವಾಗಿತ್ತು. ತವರಲ್ಲಿ ಅಣ್ಣ, ಅಕ್ಕಂದಿರ ಮಕ್ಕಳನೊಡನಾಡಿ ಅವುಗಳ ಪ್ರೀತಿ ಸವಿದವಳಿಗೆ ಈ ಕಿಷ್ಕಿಂದೆಯಲ್ಲಿ ಅದೊಂದೇ ಸಂಜೀವಿನಿ. ಕೆಲಸ, ಮಗು, ದನ, ಕರುಗಳೊಂದಿಗೆ ಆರಾಮಾಗಿರುತ್ತಿದ್ದವಳಿಗೆ ಹೆದರಿಕೆ ಗಂಡನದ್ದೊಂದೇ, ಮನುಷ್ಯ ಹೀಗೂ ಇರಲು ಸಾಧ್ಯವೇ ಅನ್ನುವಷ್ಟು ಅಸಹ್ಯವಾಗಿ ವರ್ತಿಸುತ್ತಿದ್ದ. ಅವನ ಒರಟುತನ, ವಿಕೃತ ಬಯಕೆಗಳು, ಆ ಚಿಕ್ಕ ಮಗುವಿನ ಮೇಲೆ ಅವನಿಗಿದ್ದ ಅಸಾಧ್ಯ ದ್ವೇಷ, ಊಹೆಗೂ ಮೀರಿದ ಸಣ್ಣತನ, ದುರಾಸೆ ಮತ್ತು ಹಪಾಹಪಿ ಆತನನ್ನು ಇಡೀ ಮನುಷ್ಯಕುಲದಿಂದ ದೂರವಿರಿಸಿತ್ತು. ಆಳು, ಕಾಳುಗಳು ಹೋಗಲಿ ತಾಯಿ ಕೂಡ ಸೊಲ್ಲೆತ್ತಿಲ್ಲ ಎನ್ನುವುದು ಭಾಗೀರಥಿಗೆ ಅಂದಾಜಾಗಿತ್ತು. ನಿಧಾನಕ್ಕೆ ಹೆಣ್ಣಾಳುಗಳು ಒಂದಿಬ್ಬರು ಕದ್ದುಮುಚ್ಚಿ ಮಾತನಾಡಲಾರಂಭಿಸಿದ್ದರು. ಮತ್ತೆ ಮನುಷ್ಯ ಪ್ರಪಂಚಕ್ಕೆ ವಾಪಸು ಬಂದ ಹಾಗಾಗಿತ್ತು ಅವಳಿಗೆ. ಅದೆಷ್ಟು ಯತ್ನಿಸಿದರೂ ಸೀತೆ ಬೇರೆ ಮಕ್ಕಳಂತೆ ಸಹಜವಾಗಿ ಬೆಳೆಯಲೇ ಇಲ್ಲ, ಗಣಪಯ್ಯ ಅವಳನ್ನೆಷ್ಟು ದ್ವೇಷಿಸುತ್ತಿದ್ದನೋ ಅದಕ್ಕಿಂತ ಸಾವಿರಪಟ್ಟು ಅವಳು ಅವಳವನನ್ನ ದ್ವೇಷಿಸುತ್ತಿದ್ದಳು. ಪುಟ್ಟ ಮಗುವಿಗಿದ್ದ ಹೆದರಿಕೆ ಆಕೆ ಬೆಳೆದಂತೆ ತಿರಸ್ಕಾರ ಮತ್ತು ದ್ವೇಷಕ್ಕೆ ತಿರುಗಿತ್ತು. ಮೌನದಿಂದಲೇ ಹಗೆ ತೀರಿಸುತ್ತಿದ್ದ ಆಕೆಯ ವರ್ತನೆ ಗಣಪ್ಪಯ್ಯನಿಗೆ ನುಂಗಲಾರದ ತುತ್ತಾಗಿತ್ತು. ಕಾರಣವಿರಲಿ, ಬಿಡಲಿ ತಾಯಿ ಮಗಳಿಬ್ಬರಿಗೂ ನಿತ್ಯ ಕೊಳಕು ಮಾತುಗಳ, ಬೈಗುಳಗಳ ಪೂಜೆ ತಪ್ಪಿದ್ದಲ್ಲ. ಆಳುಗಳಿಗೆ ಕೊಟ್ಟಂತೆ ವರ್ಷಕ್ಕೆರಡು ಸಲ ಇವರಿಗೂ ಬಟ್ಟೆ-ಬರೆ ತರುತ್ತಿದ್ದ. ತೋಟದಾಳುಗಳು ಕೆಲವರು ಬೇರೆ ಕಡೆ ಕೆಲಸ ಸಿಗುತ್ತಿದ್ದಂತೆ ಬಿಟ್ಟು ಹೋಗಿ ಬಿಡುತ್ತಿದ್ದರು. ಒಂದೆರಡು ಹಿರಿ ತಲೆಗಳು ಬೇರೆ ಗತಿಯಿಲ್ಲದೆ ಬರುತ್ತಿದ್ದದ್ದು. ಒಟ್ಟಿನಲ್ಲಿ ಈ ಸರ್ವಾಧಿಕಾರಿಯ ಆಳ್ವಿಕೆಯಲ್ಲಿ ನರಳಿದವರೆಷ್ಟೋ ಜನ. ಭಾಗೀರಥಿ ಅದೆಷ್ಟು ಸಲ ಗರ್ಭ ಧರಿಸಿದಳೋ ಅವಳಿಗೆ ಗೊತ್ತಿಲ್ಲ, ಅದು ಗೊತ್ತಾಗುತ್ತಿದ್ದಂತೆ ದೈಹಿಕವಾಗಿ ಹಿಂಸಿಸಿ, ಒದ್ದು ಪ್ರತೀಸಲ ಮೈಯಿಳಿಯುವಂತೆ ಮಾಡುತ್ತಿದ್ದ ಆ ಮೃಗ. ಸೀತೆಯನ್ನು ಅವಳು ಹಚ್ಚಿಕೊಳ್ಳುವುದಂತೂ ಅವನಿಗೆ ಸಹಿಸಲಾಗುತ್ತಿರಲಿಲ್ಲ. ಅವನಿಲ್ಲದ ಸಮಯದಲ್ಲಿ ತಾಯಿ ಮಗಳು ಒಂದಿಷ್ಟು ನಿಮಿಷಗಳನ್ನು ಸಂತೈಸಿಕೊಂಡೋ, ಏನಾದರೂ ವಿಷಯಗಳಿದ್ದರೆ ಹಂಚಿಕೊಂಡೋ, ಬಾಸುಂಡೆ ಬಿದ್ದ ಜಾಗಗಳಿಗೆ ಕೊಬ್ಬರಿಯೆಣ್ಣೆ ಹಚ್ಚಿಕೊಂಡೋ ಇರುತ್ತಿದ್ದರು. ಬಾಯಿ ಬಾರದ ಮೂಕಪಶುಗಳೂ ನೆಕ್ಕಿಕೊಂಡು ಸಮಾಧಾನ ಮಾಡಿಕೊಳ್ಳುತ್ತಲ್ಲವೇ.</p><p>ಅವಾಗಾವಾಗ ಚಾಟುವಿನ ಸವಾರಿ ಅಲ್ಲಿಗೆ ಚಿತ್ತೈಸುತ್ತಿತ್ತು. ಅವಾಗೆಲ್ಲ ಭಾಗೀರಥಿ ಕುರುಕುಲು ತಿಂಡಿಗಳನ್ನು ಮಾಡಿ ಕೊಟ್ಟಿಗೆಯ ಪಕ್ಕದ ಬಚ್ಚಲುಮನೆಯ ಮೂಲೆಯಲ್ಲಿ ನಡೆಯುತ್ತಿದ್ದ ಅವರಿಬ್ಬರ ಪಾನಕೂಟಕ್ಕೆ ಸರಬರಾಜು ಮಾಡಬೇಕಾಗುತ್ತಿತ್ತು, ಚಾಟುವಿನ ತಲೆ ಕಂಡರಾಗುತ್ತಿರಲಿಲ್ಲ ಅವಳಿಗೆ, ಹೆಂಡತಿ ಚಂದ್ರಿಯನ್ನು ಊರವರಿಗೆ ತಲೆಹಿಡಿದು ಬದುಕುತ್ತಿದ್ದ ಆ ಮನುಷ್ಯ, ಸಹಿಸಿ ಸಹಿಸಿ ಸಾಕಾಗಿ ಚಂದ್ರಿ ಊರುಬಿಟ್ಟು ಹೋದಳು ಎಂದು ಮನೆಗೆಲಸದ ಅಪ್ಪಿ ಹೇಳಿದ್ದಳು. ಭಾಗೀರಥಿಯನ್ನು ಹಸಿದ ಕಣ್ಣುಗಳಿಂದ ನೋಡುತ್ತಾ ಅನಾವಶ್ಯಕವಾಗಿ ಹಲ್ಲು ಕಿರಿಯುತ್ತಾ "ಏನತ್ತಿಗೇ, ಆರಾಮ? " ಎನ್ನುತ್ತಿದ್ದ. ಸೀತೆಯನ್ನು ಅಪ್ಪಿ ತಪ್ಪಿಯೂ ಅವನೆದುರಿಗೆ ಬರಲು ಬಿಡುತ್ತಿರಲಿಲ್ಲ ಭಾಗೀರಥಿ. ಅದೊಂದು ದಿನ ಮಿಡಿ ಸೌತೆಯನ್ನು ತರಲು ಬೆಟ್ಟು ಗದ್ದೆಗೆ ಹೋಗಿದ್ದ ಸೀತೆಯನ್ನು ಅಕಸ್ಮಾತ್ತಾಗಿ ಕಿಟಕಿಯಿಂದ ನೋಡಿಬಿಟ್ಟ ಚಾಟು, ಪಾನಗೋಷ್ಠಿಗೆ ಉಪ್ಪಿನಕಾಯಿ ಬೇಕೆಂದು ಕೊಡಲು ಬಂದಿದ್ದ ಭಾಗೀರಥಿ ಆತ ಜೊಲ್ಲು ಸುರಿಸುವುದನ್ನು ನೋಡಿ ಕಂಗಾಲಾಗಿಬಿಟ್ಟಳು. ಅವಳು ಹೆದರಿದಂತೆಯೇ ಮರುದಿನವೇ ಮತ್ತೊಮ್ಮೆ "ಗಣಪಣ್ಣ ಒಳ್ಳೆ ಸೇಂದಿ ಸಿಕ್ತು, ಅದಕ್ಕೆ ಮತ್ತೆ ಬಂದೆ", ಅಂದವನೇ ಬಚ್ಚಲಿನ ಮೂಲೆ ಹಿಡಿದು ಕೂತುಬಿಟ್ಟ. ಅದೇನು ತಲೆತುಂಬಿದನೋ ಗಣಪಯ್ಯ, "ಆ ಶನಿ ಹತ್ತಿರ ತಿಂಡಿ ಕೊಟ್ಟು ಕಳಿಸೇ" ಎಂದು ಬೊಬ್ಬೆ ಹೊಡೆದ. ಎಲ್ಲಿಂದ ಧೈರ್ಯ ಬಂತೋ ಗೊತ್ತಿಲ್ಲ, ಭಾಗೀರಥಿ ತಾನೇ ತಿಂಡಿ, ಉಪ್ಪಿನಕಾಯಿ ಎಲ್ಲವನ್ನೂ ತೆಗೆದುಕೊಂಡು ತಾನೇ ಹೋಗಿದ್ದಳು, "ಅವಳು ಒಳಗಿಲ್ಲ" ಅಂದವಳೇ ಚಾಟುವಿನ ಗ್ರಹಚಾರ ಬಿಡಿಸುವವಳಂತೆ ಕ್ರೂರವಾಗಿ ದಿಟ್ಟಿಸಿದ್ದಳು. ಅದಾದ ನಂತರ ಚಾಟು ಪದೇ ಪದೇ ಎಡತಾಕುವುದು ಹೆಚ್ಚಾಗಿತ್ತು, ಆದರೆ ಅವಳು ಸೊಪ್ಪು ಹಾಕುತ್ತಿರಲಿಲ್ಲ.</p><p>ಇದಾದ ಮೇಲೆ ಸೀತೆಯ ಮದುವೆ ಮಾಡಬೇಕೆಂಬ ಹುಳ ಭಾಗೀರಥಿಯನ್ನು ಹೊಕ್ಕಿತ್ತು, ನಿಧಾನಕ್ಕೆ, ಗಣಪಯ್ಯನ ಮೂಡು ನೋಡಿಕೊಂಡು ಪ್ರಸ್ತಾಪ ಮಾಡಿದ್ದಳು. "ಅದಕ್ಕಿಷ್ಟು ದುಡ್ಡು ದಂಡ, ಇಲ್ಲೇ ಬಿದ್ದರಲಿ ದರಿದ್ರ " ಅಂದೆಲ್ಲಾ ಬೈದರೂ, ಹುಡುಗ ಹುಡುಕುವ ಪ್ರಹಸನ ಶುರುವಾಯ್ತು. ಗಣಪಯ್ಯನ ಮಗಳೆಂದೇ ಸಂಬಂಧಗಳು ಬರುತ್ತಿರಲಿಲ್ಲವಾದರೆ ಬಂದರೂ ಮಾತುಕತೆಯ ಹಂತದಲ್ಲೇ ಮುರಿದು ಬೀಳುತಿತ್ತು. ಭಾಗೀರಥಿ ಏನೆಲ್ಲಾ ಪಾಡುಪಟ್ಟರೂ ಗಣಪಯ್ಯನ 'ಕೆಲಸಕ್ಕೆ ಬಿಟ್ಟಿ ಜನ ಸಿಗುತ್ತೆ ನಿಮಗೆ, ಎರಡು ಹೊತ್ತು ಊಟ ಹಾಕಿದ್ರಾಯ್ತು, ವಧುದಕ್ಷಿಣೆ ಕೊಡಿ, ಖರ್ಚೆಲ್ಲಾ ನೀವೇ ನೋಡಿಕೊಳ್ಳಿ' ಎಂಬೆಲ್ಲಾ ವಾದಗಳಿಗೆ ಮಾತುಕತೆಗೆಂದು ಮನೆ ಬಾಗಿಲಿಗೆ ಬಂದವರೂ ಎದ್ದು ಹೋಗುತ್ತಿದ್ದರು. ಒಟ್ಟಾರೆ ಶನಿಯನ್ನು ಹೊರದೂಡುವಾಗಲಾದರೂ ಒಂದಿಷ್ಟು ದುಡ್ಡು ಮಾಡಿಕೊಳ್ಳಬಹುದು ಎಂಬ ಅವನಾಸೆ ಬರ ಬರುತ್ತಾ ನಿರಾಸೆಯಾದಂತೆ ಸೀತೆಯ ಪಾಲಿಗೆ ಜೀವನ ಇನ್ನಷ್ಟು ದುಸ್ತರವಾಗಲಾರಂಭಿಸಿತು. ಅದೆಷ್ಟು ಸಲ ಸೀರೆಯನ್ನು ಜಂತಿಗೆ ಬಿಗಿದಳೋ ಅವಳಿಗೇ ಗೊತ್ತಿಲ್ಲ, ಭಾಗೀರಥಿಯ ಕಣ್ಗಾವಲಿನಲ್ಲಿ ಅದಾಗಲೇ ಇಲ್ಲ. ಎಲ್ಲದರ ಮಧ್ಯೆಯೂ ಭಾಗೀರಥಿ ಮಗಳ ಒಳ್ಳೆ ಭವಿಷ್ಯದ ಕನಸ ನೇಯುವುದನ್ನು, ಅದನ್ನು ಮಗಳಿಗೆ ಹೇಳಿ ಅವಳಲ್ಲಿ ಕನಸು ಹುಟ್ಟು ಹಾಕುವುದನ್ನು ಬಿಡಲಿಲ್ಲ.</p><p>ಗಣಪಾಸುರ ಗರ್ವಭಂಗದ ಮರುದಿನದಿಂದ ಮನೆಯಲ್ಲಿ ಭಾಗೀರಥಿಯ ಆಳ್ವಿಕೆ ಶುರುವಾಯಿತು. ಗಣಪಯ್ಯ ಚಾವಡಿಯ ಒಂದು ಮೂಲೆಯಲ್ಲಿ ಬಿದ್ದಿರುತ್ತಿದ್ದ. ಊಟ, ತಿಂಡಿ ಅಲ್ಲಿಗೇ ಸರಬರಾಜಾಗುತ್ತಿತ್ತು. ಅಪ್ಪಿ ಹೇಳುವಂತೆ ಸಾಕ್ಷಾತ್ ಕಾಳಿಯೇ ಭಾಗೀರಥಿಯಲ್ಲಿ ನೆಲೆಸಿದಂತಾಯ್ತು. ಹೊಸ ಅಮ್ಮನನ್ನು ಮಾತನಾಡಿಸಲು ಆಳು-ಕಾಳುಗಳು ಬರುತ್ತಿದ್ದರು. ಅಸರಿಗೆ, ಅವರ ಊಟಕ್ಕೆ ಮತ್ತೊಂದು ಮಗದೊಂದಕ್ಕೆ ಎಂಬಂತೆ ಎಲ್ಲದರಲ್ಲೂ ಯಜಮಾನಿಕೆ ವಹಿಸಿ ಮಾತನಾಡುತ್ತಿದ್ದ ಭಾಗೀರಥಿ ಮತ್ತಷ್ಟು ಗಟ್ಟಿಯಾಗುತ್ತಾ, ಮಾಗುತ್ತಾ ತನ್ನ ಒಳ್ಳೆಯ ಆದರೆ ಸ್ಪಷ್ಟವಾದ ಮಾತುಗಳಿಂದ ಎಲ್ಲರ ವಿಶ್ವಾಸ ಗೆಲ್ಲುತ್ತಲೇ ಹೋದರೆ ಗಣಪಯ್ಯ ಮೂಲೆ ಹಿಡಿದ ಜೇಡದಂತಾದ. ಬಿದ್ದ ಪೆಟ್ಟು, ದೇಹಕ್ಕಷ್ಟೇ ಅಲ್ಲದೇ ಮನಸ್ಸಿಗೂ ಪರಿಣಾಮ ಬೀರಿತ್ತು. ಅಷ್ಟೆಲ್ಲಾ ಆದರೂ ದೇಹಕ್ಕಾದ ಪೆಟ್ಟು ಮಾಯುವವರೆಗೂ ತಿಂಗಳಾನುಗಟ್ಟಲೆ ಭಾಗೀರಥಿ ಮಾಡಿದ ಸೇವೆ ಅವನನ್ನು ಪೆಟ್ಟಿಗಿಂತ ಜಾಸ್ತಿ ನೋಯಿಸಿತ್ತು. ಪಂಡಿತರು ಕೊಟ್ಟ ಎಣ್ಣೆಯನ್ನು ಒಂದಿನಿತೂ ಬೇಸರಿಸದೆ ದಿನಕ್ಕೆರಡು ಸಲ ತಪ್ಪದೇ ಹಚ್ಚುತ್ತಿದ್ದಳು, ಅವನನ್ನು ನಿಧಾನಕ್ಕೆ ಏಳಿಸಿ ಹೊರಜಗಲಿಗೆ ತಂದು ಅಡಕೆ ಹಾಳೆಯನ್ನಿಟ್ಟು ಮಲ ಮೂತ್ರಗಳನ್ನೂ ಶುದ್ಧಿಗೊಳಿಸುತ್ತಿದ್ದಳು. ಸದಾ ಶೂನ್ಯದಲ್ಲಿ ದೃಷ್ಟಿ ಹಾಯಿಸಿ, ತನ್ನಷ್ಟಕ್ಕೆ ಸರಿ ತಪ್ಪುಗಳ ಬಗ್ಗೆ ಮಾತನಾಡುತ್ತಾ ಇಲ್ಲವೇ ಮಾಡಿದ ಅಷ್ಟೂ ವರ್ಷಗಳ ಪಾಪದ ಹೊರೆಯನ್ನು ಇಳಿಸುವಂತೆ ರಾಮನಾಮ ಹೇಳುತ್ತಾ ಕೂರುತ್ತಿದ್ದ. ಕೆಲವೊಮ್ಮೆ ತನ್ನ ತಂದೆ ತಾಯಿಯ ನೆನಪು ತೆಗೆದು, ಅವರ ಭಾವಚಿತ್ರಗಳನ್ನು ಕೈಲಿ ಹಿಡಿದು ಅಳುತ್ತಲೂ ಕೂರುತ್ತಿದ್ದ.</p><p>ಚಾಟುವಂತೂ ಈ ಕಡೆಗೆ ತಲೆ ಕೂಡಾ ಹಾಕುತ್ತಿರಲಿಲ್ಲ. ಸೀತೆಗೆ ಎಲ್ಲವೂ ಹೊಚ್ಚಹೊಸದು, ಎಲ್ಲಿ ಬೇಕೆಂದಲ್ಲಿ ಹೋಗಬಹುದಾದ ಸ್ವಾತಂತ್ರ್ಯ, ಜನರ ಮಾತುಗಳು, ನಗು, ಪ್ರೀತಿ ಎಲ್ಲವೂ ಜೀವನ ಪ್ರೀತಿಯನ್ನು ಹುಟ್ಟು ಹಾಕಿದ್ದವು. ಪಕ್ಕದ ಗದ್ದೆಯಂಚಿನವರೆಗೂ ನಡೆದುಹೋಗುತ್ತಿದ್ದಳು, ಗಂಟೆಗಟ್ಟಲೆ ನಿಂತು ಆಕಾಶ, ಹಕ್ಕಿಗಳನ್ನು ನೋಡುತ್ತಾ ನಿಲ್ಲುತ್ತಿದ್ದಳು. ಅಮ್ಮನ ಧೈರ್ಯ ಮಗಳಲ್ಲಿ ಹೊಸ ಲೋಕದ ಬಾಗಿಲನ್ನು ತೆರೆದಿತ್ತು. ದಿನಗಳೆದಂತೆ ಹಿಂದಣ ದಿನಗಳು ಅಸ್ಪಷ್ಟವಾಗುತ್ತಿದ್ದವು. ಅಮ್ಮನ ಯಜಮಾನಿಕೆಯಲ್ಲಿ ಗೇಣಿ ಲೆಕ್ಕ, ಅಡಕೆ ಮಾರಾಟ, ಆಳು-ಕಾಳುಗಳ ಸಂಬಳದ ಲೆಕ್ಕ, ವ್ಯವಹಾರ ಎಲ್ಲವನ್ನೂ ನಿಧಾನಕ್ಕೆ ಕಲಿಯುತ್ತಿದ್ದಳು. ಕಲಿತ ಅರ್ಧಂಬರ್ಧ ಶಾಲೆಯಿಂದ ಕಷ್ಟವಾದರೂ ಪಟ್ಟುಹಿಡಿದು ಎಲ್ಲವನ್ನೂ ಅರ್ಥ ಮಾಡಿಕೊಂಡಳು. ತಾಯಿ-ಮಗಳ ಜೀವನ ಒಂದು ಹಳಿಗೆ ಬಂದು ನಿಂತಿತ್ತು. ಗಣಪಯ್ಯನ ಕಡೆಗಿದ್ದ ಸೀತೆಯ ದ್ವೇಷ ಮಾತ್ರ ಕರಗಲೇ ಇಲ್ಲ.</p><p>ದಿನಗಳುರುಳಿ ಅದಾಗಲೇ ಎರಡು ವರ್ಷಗಳಾಗುತ್ತಾ ಬಂದಿತ್ತು, ಗಣಪಯ್ಯ ನಿಧಾನಕ್ಕೆ ಎದ್ದು ಬಾಗಿದ ಬೆನ್ನಿನೊಂದಿಗೆ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ, ಆಳುಗಳೊಂದಿಗೆ ಕೂತು ಅಡಿಕೆ ಸುಲಿಯುತ್ತಲೋ, ತೋಟದಲ್ಲಿ ಬಿದ್ದ ಅಡಿಕೆ, ಸೋಗೆ ಎತ್ತಿಕೊಂಡು ಬರುತ್ತಲೋ, ಕೊಟ್ಟಿಗೆ ಕೆಲಸ ಮಾಡುತ್ತಲೋ ಇರುತ್ತಿದ್ದ. ಭಾಗೀರಥಿಯೊಂದಿಗೆ ಅಲ್ಪಸಲ್ಪವಾದರೂ ಮಾತುಗಳಿತ್ತು, ಆದರೆ ಸೀತೆ ಮಾತು ಹೋಗಲಿ, ಅವನ ಮುಖವನ್ನೂ ನೋಡಲಿಷ್ಟಪಡುತ್ತಿರಲಿಲ್ಲ. ಅಪ್ಪಿ ಬರದಿದ್ದ ದಿನ, ಅಮ್ಮ ಹೊರಗಾದ ದಿನ ಅವನಿದ್ದಲ್ಲಿ ಹೋಗಿ ಅವನೆದುರು ತಟ್ಟೆಯನ್ನು ಕುಕ್ಕುತ್ತಿದ್ದಳೇ ಹೊರತು ಊಟಕ್ಕೆ ಬಾ ಎಂದೂ ಕರೆಯುತ್ತಿರಲಿಲ್ಲ. ಕಣ್ಣೆದಿರು ಕಾಣುತ್ತಿದ್ದ ಶಾಂತಿ, ಸಮಾಧಾನ, ನೆಮ್ಮದಿ, ಗೌರವದ ಬದುಕು ಗಣಪಯ್ಯನಂತ ಗಣಪಯ್ಯನಿಗೂ ಮೋಡಿ ಮಾಡಿತ್ತು. ಆಳುಗಳೂ ನಮ್ಮ ಧಣಿ ಬದಲಾದರಲ್ಲವೇ ಎಂದು ಮಾತನಾಡಿಕೊಳ್ಳುತ್ತಿದ್ದದ್ದು ಭಾಗೀರಥಿಯ ಕಿವಿಗೆ ಬಿದ್ದಾಗ ಅವಳ ತುಟಿಯಲ್ಲಿ ವಿಷಾದದ ನಗುವೊಂದು ಹಾದುಹೋಗಿತ್ತು. ಅದೊಂದು ಸಂಜೆ, ಬತ್ತಿ ಹೊಸೆಯುತ್ತಾ ಕೂತ ಭಾಗೀರಥಿಗೆ, ಆಳು ನಾಗ "ಅಮ್ಮ, ಯಾವುದೋ ಪತ್ರ ಬಂದಿತ್ತು, ನೋಡಿ" ಎಂದು ಕೊಟ್ಟ. ನನಗ್ಯಾರಪ್ಪ ಪತ್ರ ಬರೆಯುವವರು ಎಂದು ಬಿಚ್ಚಿಸಿ ನೋಡಿದರೆ ಮರತೇಹೋದಂತಿದ್ದ ತವರಿಂದ ಅಣ್ಣ ಬರೆದಿದ್ದ ಪತ್ರ. 'ಅಮ್ಮನಿಗೆ ತುಂಬಾ ಹುಷಾರಿಲ್ಲ, ನಿನ್ನ ನೋಡಲು ಆಸೆ ಮಾಡುತ್ತಿದ್ದಾರೆ, ಒಂದು ಸಲ ಬಂದು ಹೋಗು' ಎಂಬುದು ಅದರ ಸಾರಾಂಶ. ಎದೆಯಾಳದಲ್ಲೊಂದು ಅಲೆ ಕಲಕಿದಂತಾಗಿ ನೆನಪುಗಳು ನುಗ್ಗಿ ಬರಲಾರಂಭಿಸಿದವು. ಎಂದೂ ಬೈಯದೇ ಬರೀ ಪ್ರೀತಿಯನ್ನಷ್ಟೇ ಉಣಿಸಿದ ಜೀವವದು, ಅಷ್ಟು ಅಮೃತ ಕುಡಿದಿದ್ದರಿಂದಲೋ ಏನೋ ಇಷ್ಟೂ ವರ್ಷಗಳು ವಿಷವನ್ನು ಕುಡಿದು ಅರಗಿಸಿ ಬದುಕಲು ಸಾಧ್ಯವಾಯಿತು ಅನಿಸಿತು ಅವಳಿಗಾಕ್ಷಣ. ಅಪ್ಪ ಹೇಗಿರಬಹುದು. ಅವರಿಬ್ಬರಲ್ಲಿ ಜಗಳವನ್ನೇ ನೋಡಿರಲಿಲ್ಲವಲ್ಲ, ಎಷ್ಟೊಂದು ಪ್ರೀತಿಯಿತ್ತು. ಅಣ್ಣ ಮದುವೆಯಾದ ಮೇಲೆ ಅತ್ತಿಗೆಯ ಆಗಮನವಾಗುತ್ತಿದ್ದಂತೆ ಪರಿಸ್ಥಿತಿ ಹದೆಗಡಲಾರಂಭಿಸಿತು. ಮೂಲಾ ನಕ್ಷತ್ರದ ಪಟ್ಟ ಬೇರೆ ತಲೆ ಮೇಲೆ, ಇವಳೇ ಹಟ ಹಿಡಿದು ಎರಡನೇ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದಾಗ ಇಬ್ಬರೂ ಅದೆಷ್ಟು ನೊಂದುಕೊಂಡಿದ್ದರು, ಅಳಿಯನೂ ವಿಚಿತ್ರ ಸ್ವಭಾವದವನು ಎಂದು ತಿಳಿದಾಗಲೂ ಅವರ ದುಃಖ ಮೇರೆ ಮೀರಿತ್ತು. ಅವರ ಸಂಕಟ ನೋಡಲಾಗದೇ ಭಾಗೀರಥಿ ಸಂಬಂಧವನ್ನೇ ಕಡಿದು ಹಾಕುವಷ್ಟು ಕಲ್ಲಾಗಿ ಬದುಕುತ್ತಿದ್ದಳು. ಎಂದೋ ಒಂದು ಸಲ ಹಬ್ಬಕ್ಕೆ ಕರೆಯಲು ಬಂದವರು, ಕರುಳು ಕಿತ್ತು ಬರುವಂತೆ ಅತ್ತಿದ್ದರು. ಅದ್ಯಾವ ಘಳಿಗೆಯಲ್ಲಿ ಈ ಸಂಬಂಧಕ್ಕೆ ಒಪ್ಪಿದೆನೋ ಎಂದುಕೊಂಡು ನಿಟ್ಟುಸಿರುಬಿಟ್ಟಳು. ನೆನಪುಗಳ ಓಣಿಯಲ್ಲಿ ಸುತ್ತಾಡುತ್ತಿದ್ದವಳನ್ನು ಸೀತೆಯ ದನಿ ಎಚ್ಚರಿಸಿತು, "ಅಮ್ಮ, ನೋಡು ಎಷ್ಟು ಹೂವಿದೆ ಇವತ್ತು, ಕಟ್ಟಮ್ಮ" ಎಂದು ಉಡಿತುಂಬಾ ಜಾಜಿ ಹೂಗಳನ್ನು ತಂದಿದ್ದವಳು ಅಮ್ಮನೆದುರಿಗೆ ಸುರಿದಳು. ಕೋಣೆಯಿಡೀ ಹರಡಿದ ಸುಗಂಧ, ಕಣ್ಣಲ್ಲಿ ಕನಸುಗಳು ಮತ್ತು ನಳನಳಿಸುವ ಹರುಷದ ಮುಖ ನೋಡುತ್ತಿದ್ದಂತೆ ಅಷ್ಟು ಬೇಸರದ ಮಧ್ಯೆಯೂ ತಂಗಾಳಿಯೊಂದು ಸುಳಿದಂತಾಯ್ತು ಭಾಗೀರಥಿಗೆ. ಮಗಳಿಗೆ ಪತ್ರ ಕೊಟ್ಟು ಬಾಳೆನಾರಿನ ಹಗ್ಗದಿಂದ ಹೂವನ್ನು ಸುರಿಯತೊಡಗಿದಳು. "ಯಾರದಮ್ಮ ಪತ್ರ, ನಮಗ್ಯಾರು ಬರೆಯುವವರು" ಎಂದು ಅಚ್ಚರಿಯಿಂದ ಪ್ರಶ್ನಿಸುತ್ತಾ ಓದತೊಡಗಿದವಳ ಮುಖ ಪತ್ರ ಮುಗಿಯುತ್ತಿದ್ದಂತೆ ಮ್ಲಾನವಾಯಿತು. "ನಾವಿಬ್ಬರೂ ಹೋಗೋಣ್ವಾ, ನಾನಾ ಅಜ್ಜ-ಅಜ್ಜಿಯನ್ನು ನೋಡಲೇ ಇಲ್ಲ" ಎಂದಳು. ಬರಿದೇ ತಲೆಯಾಡಿಸಿದ ಭಾಗೀರಥಿ "ತುಳಸಿಗೆ ದೀಪ ಹತ್ತಿಸು, ಕತ್ತಲಾಗ್ತಾ ಬಂತು, ಅಪ್ಪಯ್ಯನಿಗೆ ಕಷಾಯ ಕೊಟ್ಟಾಯ್ತಾ" ಎಂದು ಕೇಳಿದಳು. ಉತ್ತರ ನೀಡದೇ ಮುಖ ಹಿಂಡಿ ಬಚ್ಚಲಿಗೆ ಧಾವಿಸಿದ ಮಗಳನ್ನೇ ನೋಡಿದವಳು 'ಓಹ್! ಆಗಲೇ ತಿಂಗಳಾಯ್ತೇ, ಇನ್ನಿವಳನ್ನು ಕರೆದುಕೊಂಡು ಹೋಗಲಾಗುವುದಿಲ್ಲ, ಅಪ್ಪಿಯ ಮಗಳನ್ನು ಜೊತೆ ಮಾಡಿ ಬಿಟ್ಟು ಹೋಗಬೇಕಷ್ಟೆ' ಎಂದು ಲೆಕ್ಕ ಹಾಕಿದಳು. ಅಂತೆಯೇ ಅಪ್ಪಿಯ ಮಗಳು ಕಣ್ಣಿಯನ್ನು ಸೀತೆಯ ಜೊತೆ ಮಾಡಿದರೆ, ಅಪ್ಪಿ ಒಂದಿಷ್ಟು ಎಲ್ಲರಿಗೂ ಬೇಯಿಸಿ ಹಾಕುವುದಾಗಿಯೂ, ಭಾಗೀರಥಿ ನಾಗನೊಂದಿಗೆ ಬೆಳಗ್ಗೆ ಬಸ್ಸುಹಿಡಿಯುವುದಾಗಿಯೂ ನಿರ್ಧಾರವಾಯಿತು. ಬೆಳಗ್ಗೆ ಸೀತೆಗೊಂದು ಮಾತು ಹೇಳಲು ಬಾಣಂತಿಕೋಣೆಗೆ ಭಾಗೀರಥಿ ಬಂದಾಗ ಅವಳಿನ್ನೂ ಎದ್ದಿರಲಿಲ್ಲ, "ರಾತ್ರಿಯಿಡೀ ಹೊಟ್ಟೆನೋವಿಂದ ನರಳಿದರು ಸಣ್ಣಮ್ಮ" ಎಂದು ಕಣ್ಣಿ ಹೇಳಿದಳು. ಒಂದೂ ದಿನವೂ ಮಗಳನ್ನು ಬಿಟ್ಟು ಹೋಗದವಳಿಗೆ ಹೊರಡುವ ಗಳಿಗೆಗೆ ಒಂಥರಾ ಕಸಿವಿಸಿ, ಮಾತನಾಡಲೂ ಆಗಲಿಲ್ಲವಲ್ಲ ಎಂದುಕೊಂಡೇ ಹೊರಟಳು.</p><p>ಅಮ್ಮನಿಲ್ಲದೇ ಖಾಲಿಖಾಲಿ ಅನಿಸುತ್ತಿದ್ದ ಮನವನ್ನು ಸಂತೈಸಿಕೊಂಡೇ ಕಳೆದ ಸೀತೆಗೆ ಮನೆಯೊಳಗೆಯೂ, ಗದ್ದೆ ಸುತ್ತಲೂ ಹೋಗುವ ಹಾಗಿರಲಿಲ್ಲ, ಕಣ್ಣಿಯೊಡನೆ ಚೌಕಾಭಾರ ಆಡುತ್ತಾ, ಊರಿನ ಸುದ್ದಿ ಮಾತನಾಡುತ್ತಾ ದಿನ ಕಳೆದಳು. ಇಬ್ಬರು ಹರೆಯದ ಹುಡುಗಿಯರಿಗೆ ಮಾತಿನ ಬರವೇ? ದೀಪವಾರಿಸಿಯೂ, ಹಾಸಿಗೆಯ ಸುರುಳಿಗಳ ಮೇಲೆ ಬಿದ್ದುಕೊಂಡು ಅದೆಷ್ಟೋ ಹೊತ್ತು ಮಾತನಾಡುತ್ತಲೇ ಇದ್ದರು. ಅದು ಯಾವಾಗ ಕಣ್ಣೆಳಿಯಿತೊ, ಅಷ್ಟರಲ್ಲಿ ಪಕ್ಕದಲ್ಲೇ ಇದ್ದ ಬಚ್ಚಲಿನಿಂದ ಜೋರು, ಜೋರಾದ ಅಸ್ಪಷ್ಟ ಮಾತುಗಳು ಕೇಳಿಬಂದಂತಾಯ್ತು. ಸೀತೆ ಎದ್ದು ನಿಂತು ಮರದ ಅಡ್ಡಪಟ್ಟಿಗಳ ಕಿಟಕಿಗೆ ಮುಖವೊತ್ತಿ ಬಚ್ಚಲಿನ ಕಡೆ ಕಣ್ಣು ಹಾಯಿಸಿದರೆ ಮಂದಬೆಳಕಿನಲ್ಲಿ ಅಪ್ಪಯ್ಯ ಯಾರೊಡನೆಯೋ ಮಾತನಾಡುವುದು ಕಾಣಿಸಿತು. ಕಣ್ಣು ಕಿರಿದುಗೊಳಿಸಿ ನೋಡಿದರೆ ಚಾಟು, ಅಷ್ಟರಲ್ಲಿ ಕಣ್ಣಿಯೂ ಎದ್ದು ಇವಳ ಪಕ್ಕಕ್ಕೆ ಬಂದು ನಿಂತಿದ್ದವಳು "ಅರೇ!ಇದ್ಯಾಕೆ ಇಲ್ಲಿಗೆ ಬಂತು ಶನಿ?! ದೊಡ್ಡ ಅಮ್ಮ ಹೋಗಿದ್ದು ಇದಿಕ್ಕ್ಯಾರು ಹೇಳಿದ್ರೋ ಕಾಣೆ" ಎಂದು ಉದ್ಗರಿಸಿದಳು. ಯಾವುದರ ಬಗ್ಗೆಯೋ ಇಬ್ಬರಲ್ಲಿ ಚರ್ಚೆ ನಡೆದಿತ್ತು. ಬಾಗಿದ ಬೆನ್ನಿನ ಅಪ್ಪಯ್ಯನನ್ನು ನೋಡುತ್ತಿದ್ದಂತೆ ಸೀತೆಗೆ ಏನೋ ಅಸ್ಪಷ್ಟ ಭಾವನೆಯೊಂದು ಸುಳಿಯಿತು, ಅದೇನೆಂದು ಗೊತ್ತಾಗಲಿಲ್ಲ, ಆದರೆ ಚಾಟುವನ್ನು ನೋಡುತ್ತಿದ್ದಂತೆ ಹುಟ್ಟಿದ ಭಾವ ಮಾತ್ರ ಅಸಹ್ಯ, ಜಿಗುಪ್ಸೆ ಎಂಬುದು ಅರಿವಾಯಿತು. ಅವರೀರ್ವರ ಏರುದನಿಯ ಸಂಭಾಷಣೆ ಜಗಳಕ್ಕೆ ತಿರುಗಿ ಮೈಕೈ ಮಿಲಾಯಿಸುವ ಹಂತಕ್ಕಿಳಿಯಿತು, ಒಂದು ಹಂತದಲ್ಲಿ ಚಾಟು ಜೋರಾಗಿ ಅಪ್ಪಯ್ಯನನ್ನು ತಳ್ಳಿ ಅವರು ಇದ್ದ ಎರಡು ಮೆಟ್ಟಲಿನಿಂದ ಕೆಳಕ್ಕುರುಳಿದ್ದು ಕಂಡು ಸೀತೆ ಜೋರಾಗಿ ಕಿರುಚಿಕೊಂಡಳು. ತಿರುಗಿ ನೋಡಿದ ಚಾಟು, ಬಚ್ಚಲಿನಿಂದ ಇವರಿದ್ದ ಕೋಣೆಯ ಮಧ್ಯೆ ಇದ್ದ ಸಣ್ಣ ಕಟ್ಟೆಯನ್ನು ಹಾರಿಬಂದು ಕೋಣೆಯ ಬಾಗಿಲನ್ನು ಜೋರಾಗಿ ಒದ್ದ. ಒಳಗಿಂದ ಮರದ ಪಟ್ಟಿಯದೇ ಚಿಲಕ ಅಡ್ಡವಾಗಿದ್ದರಿಂದ ಬಾಗಿಲು ತೆರೆದುಕೊಳ್ಳಲಿಲ್ಲ. ಇಬ್ಬರು ಹುಡುಗಿಯರಿಗೂ ಅವನು ಒಳನುಗ್ಗುವ ಪ್ರಯತ್ನ ಮಾಡುತ್ತಿದ್ದಾನೆಂಬ ಅರಿವಾದಂತೆ "ಓಬಲಣ್ಣಾ, ಗೋಪಾಲಣ್ಣಾ, ರುಕ್ಮಿಣಿಯಕ್ಕ" ಎಂದು ಇದ್ದಬಿದ್ದವರ ಹೆಸರುಗಳನ್ನೆಲ್ಲಾ ಕಿರುಚಿ ಕರೆಯತೊಡಗಿದರು. ಅದೂ ಅಲ್ಲದೇ, ಸಮಯಪ್ರಜ್ಞೆಯಿಂದ ಕೋಣೆಯ ಮೂಲೆಯಲ್ಲಿ ಪೇರಿಸಿಟ್ಟ ಭಾರದ ನೇಗಿಲು, ಮತ್ತಿತ್ತರ ಮರದ ಸಾಮಾನುಗಳನ್ನು ತಂದು ಬಾಗಿಲಿಗೆ ಅಡ್ಡವಾಗಿಡಲಾರಂಭಿಸಿದರು. ಚಾಟುವಿನ ಮೈಯಲ್ಲಿ ರಾಕ್ಷಸ ಹೊಕ್ಕಿದ್ದ. ಎಲ್ಲಾ ಶಬ್ದಗಳು, ಕಿರುಚಾಟಕ್ಕೆ ರಾಜು ನಾಯಿಯೂ ಎದ್ದು ಬೊಗಳತೊಡಗಿದ, ಕೊಟ್ಟಿಗೆಯಲ್ಲಿದ್ದ ಹಸುಗಳೂ ಎದ್ದು ಅಂಬಾ ಎಂದು ಕರೆಯಲಾರಂಭಿಸಿದವು. ಇವರೆಲ್ಲರ ಸ್ವರಗಳನ್ನೂ ಮೀರಿಸುವ ಆರ್ಭಟವೊಂದು ಕೇಳಿಬಂತು, ಬಾಗಿಲಿನಿಂದ ಕಿಟಕಿಗೆ ಧಾವಿಸಿ ಸೀತೆ ನೋಡುತ್ತಾಳೆ, ಅಪ್ಪಯ್ಯ ಎದ್ದು ಬಂದು ನಿಂತಿದ್ದಾರೆ! ಮತ್ತೊಮ್ಮೆ ಸೂರು ಕಿತ್ತು ಹೋಗುವಂತೆ ಆರ್ಭಟಿಸಿದ ಅಪ್ಪಯ್ಯ, ಕೈಲಿದ್ದ ಅಡಿಕೆ ಮರಕ್ಕೆ ಔಷಧ ಹೊಡೆಯುವ ಸ್ಪ್ರೇಯರ್ ಟ್ಯಾಂಕಿನಿಂದ ಚಾಟು ತಲೆಗೆ ಜೋರಾಗಿ ಬಾರಿಸಿ, ಅವನ ತಲೆಯಿಂದ ರಕ್ತ ಕಾರಂಜಿಯಂತೆ ಚಿಮ್ಮಿತು. ಅದು ಗಣಪಯ್ಯನ ಮುಖವನ್ನು ನೆನಸಿದಂತೆ ನಿಧಾನಗತಿಯಲ್ಲಿ ಚಾಟು ಕೆಳಕ್ಕೆ ಕುಸಿದ. ಕೂಗಲೂ ಶಕ್ತಿಯಿಲ್ಲದೆ, ಅಪ್ಪಯ್ಯನನ್ನೇ ನೋಡುತ್ತಾ ಕಿಟಕಿಗೆ ಭಾರಹಾಕಿ ನಿಂತ ಸೀತೆಯ ಮೈ ನಡುಗುತ್ತಿತ್ತು, ನಿಧಾನಕ್ಕೆ ಕಣ್ಣಲ್ಲಿ ನೀರು ತುಂಬಲಾರಂಭಿಸಿತು.</p>Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-63639144984233167462020-10-11T21:34:00.001-07:002020-10-11T21:34:21.866-07:00A life on our planet<p> ಮೊದಲೆಲ್ಲಾ ಸುಮಾರು ಒಂದು ಲಕ್ಷ ವರ್ಷಗಳಿಗೊಮ್ಮೆ ತನ್ನ ಒಡಲಲ್ಲಿ ಹುದುಗಿದ್ದ ಲಾವಾವನ್ನು ಹೊರ ಕಕ್ಕುತ್ತಿದ್ದ ಭೂಮಿ ಇತ್ತೀಚೆಗೆ ಅದನ್ನು ಇನ್ನೂರು ವರ್ಷಗಳಿಗೊಮ್ಮೆ ಮಾಡಲಾರಂಭಿಸಿದ್ದಾಳೆ. ತೀರಾ ಇತ್ತೀಚಿನವರೆಗೂ ಮನುಷ್ಯ ಮಾಡಿದ ಅನಾಚಾರಗಳನ್ನು ನುಂಗಿ ಉಷ್ಣತೆಯನ್ನು ನಿಯಂತ್ರಿಸುತ್ತಿದ್ದ ಸಾಗರಗಳು ಕೈಚೆಲ್ಲಿದ್ದರಿಂದ ಜಗತ್ತಿನ ಐಸ್ ಕ್ಯಾಪುಗಳು ನಿಧಾನಕ್ಕೆ ಕರಗಲಾರಂಭಿಸಿವೆ. ಜೀವ ಜಗತ್ತಿನ ವೈವಿಧ್ಯತೆ, ದಟ್ಟ ಕಾಡುಗಳು ಆತಂಕಕಾರಿಯಾಗಿ ಕ್ಷೀಣಿಸತೊಡಗಿವೆ. ಕೇವಲ ಮನುಷ್ಯನಿಂದ ಮನುಷ್ಯನಿಗೋಸ್ಕರ ಮಾತ್ರ ಈ ಜಗತ್ತು ಸುತ್ತುತ್ತಿದೆ. </p><p><br /></p><p>ತನ್ನ ತೊಂಭತ್ತಮೂರು ವರ್ಷಗಳ ತುಂಬು ಬದುಕನ್ನು ಪ್ರಾಣಿ, ಪಕ್ಷಿ, ಗಿಡ, ಮರ ಹೀಗೆ ಪ್ರಕೃತಿಯ ವಿಸ್ಮಯಗಳ ಬಗ್ಗೆಯೇ ಸವೆಸಿದ ದೇವ ದೂತನೊಬ್ಬನ ಹತಾಶೆಯ ಕೂಗೇ a life on our planet. ಸರ್ ಡೇವಿಡ್ ಅಟೆನ್ ಬರ್ಗ್ ತನ್ನ ಚೆಂದದ ಆದರೆ ವಿಷಾದಭರಿತ ದನಿಯಲ್ಲಿ, </p><p>ಆತಂಕ ಭರಿತ ನೀಲಿ ಕಣ್ಣುಗಳಲ್ಲಿ ನಮ್ಮನ್ನೇ ದಿಟ್ಟಿಸುತ್ತಾ ಈ ಅಂಶಗಳನ್ನು ಹೇಳುತ್ತಾ ಹೋದಂತೆ ಕರಾಳ ಭವಿಷ್ಯದ ಚಿತ್ರಗಳು ಕಣ್ಣೆದುರಿಗೆ ಬರಲಾರಂಭಿಸುತ್ತವೆ. </p><p><br /></p><p>ಮನುಷ್ಯನನ್ನು ಹೊರತುಪಡಿಸಿ ಪ್ರಕೃತಿಯಲ್ಲಿರುವ ಉಳಿದೆಲ್ಲಾ ಜೀವಜಂತುಗಳಿಗೂ ಅವುಗಳದ್ದೇ ಆದ ಉದ್ದೇಶವಿದೆ, ಅದರೊಂದಿಗೆ ಚೆಲ್ಲಾಟವಾಡಲು ಮನುಷ್ಯನಿಗೆ ಯಾವುದೇ ಹಕ್ಕಿಲ್ಲ ಎಂದು ಸ್ಪಷ್ಟವಾಗಿ ನುಡಿಯುವ ಸರ್ ಅಟೆನ್ ಬರ್ಗ್ ಈ ಭೂಮಿಗೆ ಖಂಡಿತಕ್ಕೂ ಮನುಷ್ಯನ ಅವಶ್ಯಕತೆಯಿಲ್ಲ ಎಂದೂ ಸೇರಿಸುತ್ತಾರೆ. ಕಡಿಮೆಯಾಗುತ್ತಿರುವ ಮರಗಳು, ಏರುತ್ತಿರುವ ಕಾರ್ಬನ್, ಉಷ್ಣತೆಯಷ್ಟೇ ಅಲ್ಲದೇ ತೀವ್ರವಾಗಿ ಇಳಿಮುಖವಾಗುತ್ತಿರುವ ವನ್ಯಜೀವಿಗಳಿಂದ ಪರಿಸರ ಮತ್ತು ಹವಾಮಾನದ ಮೇಲಾಗುತ್ತಿರುವ ಅತೀ ಭಯಂಕರ ಪರಿಣಾಮಗಳನ್ನು ಎಳೆಎಳೆಯಾಗಿ ಅಂಕಿ ಅಂಶಗಳೊಂದಿಗೆ ವಿವರಿಸುತ್ತಾರೆ. ಬಹುಶಃ ಅವರು ನೋಡದ ಕಾಡುಗಳಿಲ್ಲ, ಅವರಿಗೆ ತಿಳಿಯದ ಜೀವ ವೈವಿಧ್ಯವಿಲ್ಲ. ತನ್ನ ಹರೆಯದ ದಿನಗಳಿಂದ ಇಲ್ಲಿಯವರೆಗೂ ಬದಲಾದ ಭೂಮಿಯ ಪರಿಸ್ಥಿತಿ ಹೇಳುತ್ತಿದ್ದಂತೆ ಅವರು ಹತಾಶರಾಗುತ್ತಾರೆ. </p><p><br /></p><p>ಹಾಗಿದ್ದಲ್ಲಿ ಇದು ಏಕಮುಖ ದಾರಿಯೇ, ಇದಕ್ಕೆ ಯೂ ಟರ್ನುಗಳಿಲ್ಲವೇ, ನಾವೇನೂ ಮಾಡಲಾಗುವುದಿಲ್ಲವೇ, ಮುಂದಿನ ಮಕ್ಕಳ ಭವಿಷ್ಯದ ಗತಿಯೇನು ಎಂದೆಲ್ಲಾ ಪ್ರಶ್ನೆಗಳು ನಮ್ಮಲ್ಲಿ ಹುಟ್ಟುತ್ತಿದ್ದಂತೆಯೇ ಸರ್ ಅಟೆನ್ ಬರ್ಗ್ ಸುಲಭ ಉಪಾಯಗಳನ್ನು ತಿಳಿಸಿಕೊಡುತ್ತಾರೆ. ರಣ ವಿಷದ ವಿಕಿರಣ ಹೊರಸೂಸಿ ಬದುಕಲು ಯೋಗ್ಯವಲ್ಲದಂತಾದ ಚರ್ನೋಬಿಲ್ ನಲ್ಲಿ ಮತ್ತೀಗ ನಿಧಾನಕ್ಕೆ ಪ್ರಕೃತಿ ಹಸಿರಾಗುತ್ತಿದ್ದಾಳೆ, ಹಕ್ಕಿಗಳು ಉಲಿಯತೊಡಗಿವೆ, ಮೆತ್ತಗೆ ಒಂದೊಂದೇ ಪ್ರಾಣಿಗಳು ಓಡಾಡುತ್ತಿವೆ. </p><p>ಅದೇ ರೀತಿ ನಾವೂ ಒಂದಿಷ್ಟು ವಿರಾಮ ನೀಡಿದಲ್ಲಿ ಭೂಮಿಯ ಗಾಯಗಳೂ ಮಾಯಬಹುದು, ನಾವು ಮಾಡಬಹುದಾಗಿಷ್ಟು.</p><p>1. ಜನಸಂಖ್ಯೆಯ ನಿಯಂತ್ರಣ </p><p>2. ಕಾಡು ಕಡಿದು ಕೃಷಿಭೂಮಿ ಮಾಡುವುದು ಹಾಗೂ ಆ ಪರಿಸರಕ್ಕೆ ಹೊಂದದ, ಕೇವಲ ಲಾಭಕ್ಕಾಗಿ ಮರಗಳನ್ನು ಬೆಳೆಸುವುದನ್ನು ಪೂರ್ಣವಾಗಿ ನಿಲ್ಲಿಸುವುದು</p><p>3. ಅವಶ್ಯಕತೆಗಿಂತ ಜಾಸ್ತಿ ಮತ್ತು ಪದೇ ಪದೇ ಸಮುದ್ರದಿಂದ ಜಲಚರಗಳನ್ನು ತೆಗೆಯುವುದನ್ನು ಕಡಿಮೆ ಮಾಡುವುದು</p><p>4. ಧಂಡಿಯಾಗಿ ಭೂಮಿಗೆ ಸುರಿಯುತ್ತಿರುವ ಸೂರ್ಯನ ಬೆಳಕನ್ನು ಬಳಸುವುದು, ಸಾಧ್ಯವಾದಷ್ಟು ವಿಂಡ್ ಮಿಲ್ಲುಗಳನ್ನು ಸ್ಥಾಪಿಸುವುದು ಇತ್ಯಾದಿ.</p><p><br /></p><p>ನಾಲ್ಕು ದಶಕಗಳ ನನ್ನದೇ ಬದುಕಲ್ಲಿ ಅದೆಷ್ಟು ಬದಲಾವಣೆಗಳನ್ನು ನಾನೂ ನೋಡಿದ್ದೇನೆ. ಅಣ್ಣ ಅಮ್ಮನ ವರ್ಗಾವಣೆಗಳಿಂದ ಸುತ್ತಿದ ಊರುಗಳನ್ನು ಮತ್ತೆ ಸಂದರ್ಶಿಸಿದಾಗ ಗುರುತೇ ಸಿಗದಷ್ಟು ಬೆಳೆದು ಹಸಿರು ಮಾಯವಾಗಿರುವುದನ್ನು ಗಮನಿಸಿದ್ದೇನೆ. ರಥೋತ್ಸವಕ್ಕೆ ಮಳೆ ಬಂದೇ ಬರುತ್ತದೆ, ಈ ಬೆಳೆಗೆ ಇಷ್ಟು ಮಳೆ ಸಾಕು ಎಂದುಕೊಂಡ ಹಿರಿಯರ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದು ಕಂಡಿದ್ದೇನೆ. ಮಳೆಗಾಲ, ಬೇಸಿಗೆಗಾಲಗಳು ವಿಚಿತ್ರವಾಗಿ ವರ್ತಿಸುವುದನ್ನು ನೋಡಿದಾಗ ರೈತರ, ಬೆಳೆಗಾರರ ಬಗ್ಗೆ ಯೋಚಿಸಿದ್ದೇನೆ. ಕರಾವಳಿಯ ಗದ್ದೆ, ಕಾಡುಗಳು ಮಾಯವಾಗಿ ಕಾಂಕ್ರೀಟ್ ಕಾಡುಗಳಾಗುತ್ತಿದ್ದಂತೆ ಬೇಸಿಗೆಯಲ್ಲಿ ಕಾಲು ಹೊರಗಿಡಲಾರದಷ್ಟು ತಾಪಮಾನ ಏರಿದ್ದು ಅರಿವಾಗಿದೆ. </p><p><br /></p><p>ಟಿಕ್ ಟಾಕ್, ರೀಲ್ಸ್, ಗೇಮ್ಸ್, ಯೂ ಟ್ಯೂಬುಗಳಲ್ಲಿ ಮುಳುಗೇಳುವ, ಬುದ್ಧಿ ಶಕ್ತಿಗಿಂತ ಬಾಹ್ಯ ರೂಪ, ಅದಕ್ಕಾಗಿ ಕಾಲ ವ್ಯಯಿಸುವ ಈಗಿನ ಯುವಕ / ಯುವತಿಯರಿಗೆ ಸುತ್ತಲಿನ ಪ್ರಪಂಚದ / ಆಗು ಹೋಗುಗಳ ಅರಿವಿದೆಯೇ? </p><p><br /></p><p>ಸುಮಾರು ಎರಡು ಘಂಟೆಗಳಿಷ್ಟಿರುವ ಡಾಕ್ಯುಮೆಂಟರಿ ನೋಡುತ್ತಿದ್ದಾಗ ಮುಂದಿನ ತಿಂಗಳು ಹದಿನಾಲ್ಕಕ್ಕೆ ಕಾಲಿಡುತ್ತಿರುವ ನನ್ನ ಮಗ ಮೂರು ನಾಲ್ಕು ಸಲ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟ. ಬೆಂಕಿಪೊಟ್ಟಣದ ಥರ ಇರುವ ಅಪಾರ್ಟುಮೆಂಟುಗಳಲ್ಲಿ ಬದುಕುತ್ತಾ, ಬೆಳಗೆದ್ದರೆ ಹಾಲಿನ ಪ್ಲಾಸ್ಟಿಕ್ ಕತ್ತರಿಸುತ್ತಾ, ಪಕ್ಕಕ್ಕೆ ಕಾರಿನ ಶೋರೂಮಿನ ಕಾರುವಾಶು, ಮನೆ ಮುಂದೆ ಹಾದುಹೋಗುವ ಮೆಟ್ರೋ ಮತ್ತು ಟನ್ನುಗಟ್ಟಲೆ ವಾಹನಗಳ ಶಬ್ದದ ಮಧ್ಯೆ</p><p>ಬದುಕುತ್ತಿರುವ ನನ್ನಂತಹ ತಾಯಂದಿರು ಮಕ್ಕಳಿಗೆ ಪರಿಸರದ ಸಂರಕ್ಷಣೆ ಬಗ್ಗೆ ಏನು ಹೇಳಿಕೊಡಬಹುದು ನಿಜಕ್ಕೂ ಗೊತ್ತಿಲ್ಲ. </p><p><br /></p><p>ನಮ್ಮ ತೇಜಸ್ವಿ, ಕೃಪಾಕರ-ಸೇನಾನಿ, ಜಿಮ್ ಕಾರ್ಬೆಟ್, ಕೆನೆತ್ ಆಂಡರ್ ಸನ್, ಸರ್ ಅಟೆನ್ ಬರ್ಗ್ ಹೀಗೆ ವನ್ಯಜೀವಿ ಸಂರಕ್ಷಣೆ, ಪರಿಸರ ಪ್ರೀತಿ ಹುಟ್ಟಿಸುವ ಸಂತರೆಲ್ಲರ ಪರಿಚಯ ಮಾಡಿಕೊಟ್ಟಿದ್ದೇನೆ. ಸಂಬಂಧಿಸಿದ ಸಾಕ್ಷ್ಯ ಚಿತ್ರಗಳನ್ನು ಹಾಕಿ ತೋರಿಸುತ್ತೇನೆ. ನೀರು, ಲೈಟು ಬಳಸದಿದ್ದಾಗ ಅವನಾಗೇ ಆಫ್ ಮಾಡುವಂತೆ, ಅನಾವಶ್ಯಕವಾಗಿ ಹಾಳೆಗಳನ್ನು ಹಾಳು ಮಾಡದಂತೆ, ಹಸಿ ಮತ್ತು ಒಣ ಕಸದ ಬಗ್ಗೆ ಪದೇ ಪದೇ ಹೇಳುತ್ತಲೇ ಇರುತ್ತೇನೆ. ಮನೆ ತುಂಬ ತುಂಬಿಟ್ಟ ಗಿಡಗಳನ್ನು, ಪ್ರತಿಯೊಂದರ ತಳಿಗಳ ಬಗ್ಗೆ, ಅವಕ್ಕೆ ಬರುವ ಚಿಟ್ಟೆ, ಹುಳಗಳ ಬಗ್ಗೆ ಗಮನ ಸೆಳೆಯುತ್ತೇನೆ. ಸುತ್ತಾಡಲು ಹೊರಹೋದಾಗ ಕಾಣುವ ಮರ, ಗಿಡ, ಪ್ರಾಣಿಗಳ ಬಗ್ಗೆ ಹೇಳುವುದು ಇವಿಷ್ಟೂ ನಾನು ಮಾಡಬಹುದಾಗಿದ್ದು ಅಷ್ಟೇ. </p><p><br /></p><p>ತಂದೆ-ತಾಯಂದಿರೇ, ದಯವಿಟ್ಟು ನಿಮ್ಮ ಮಕ್ಕಳಿಗೆ ಇಂತಹ ವಿಡಿಯೋಗಳನ್ನು ತೋರಿಸಿ. ಶಾಲೆಯ ಆಡಳಿತ ಮಂಡಳಿಗಳೇ, ಇಂತಹ ಚಿತ್ರಗಳನ್ನು ಪಾಠದೊಂದಿಗೆ ಸೇರಿಸಿ. ನಮ್ಮ ಮಕ್ಕಳೂ ತೇಜಸ್ವಿ, ಅಟೆನ್ ಬರ್ಗ್ ಅವರಂತೆ ಪರಿಸರ ಪ್ರೇಮಿಗಳಾಗಲಿ. ಇತ್ತೀಚೆಗೆ ಹತ್ತನೆಯ ತರಗತಿಯಲ್ಲಿ ಒಳ್ಳೆಯ ಅಂಕ ಪಡೆದು ಅರಣ್ಯ ಇಲಾಖೆ ಸೇರುತ್ತೇನೆಂದು ಹೇಳಿದ ಅನುಷ್ ಥರಹ ನಮ್ಮ ಮಕ್ಕಳೂ ಆಗಲಿ ಎಂಬುದು ನನ್ನಾಸೆ. </p><p><br /></p><p>ಈ ಸಾಕ್ಷ್ಯಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಲಭ್ಯವಿದೆ. </p><p><br /></p><p>Dancing with birds ಮತ್ತು our planet ಕೂಡಾ ನೋಡಲೇ ಬೇಕಾದ ಇತರ ವಿಡಿಯೋಗಳು.</p><div class="separator" style="clear: both; text-align: center;"><a href="https://blogger.googleusercontent.com/img/b/R29vZ2xl/AVvXsEgsEIkhzPxFY1DuPIT_zWbVmY7Qw1-A5F-veJF7FWqg-SId9IpLJVoXx0-YbCwYjRsG6Op7rpQd4OJrjAyMpahEKXLXDO1_7I-Vcs1J7jHMJhF9GeAkp_6ZOQmUvNbDF5yWITeWHZsu0NM/s1200/92A464F6-850D-451B-8311-53A757F46296.jpeg" imageanchor="1" style="margin-left: 1em; margin-right: 1em;"><img border="0" data-original-height="1200" data-original-width="630" height="320" src="https://blogger.googleusercontent.com/img/b/R29vZ2xl/AVvXsEgsEIkhzPxFY1DuPIT_zWbVmY7Qw1-A5F-veJF7FWqg-SId9IpLJVoXx0-YbCwYjRsG6Op7rpQd4OJrjAyMpahEKXLXDO1_7I-Vcs1J7jHMJhF9GeAkp_6ZOQmUvNbDF5yWITeWHZsu0NM/s320/92A464F6-850D-451B-8311-53A757F46296.jpeg" /></a></div><br /><p></p>Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-31136863760363748392020-04-22T01:51:00.000-07:002020-04-22T01:51:04.840-07:00ಊರಿನಲ್ಲಿ ನಾವೋ ನಮ್ಮಲ್ಲಿ ಊರೋ<div dir="ltr" style="text-align: left;" trbidi="on">
<br />
<br />
ಒಂದು ಊರು ಇಷ್ಟವಾದರೆ ಅದರಲ್ಲಿರುವ ಎಲ್ಲವೂ ಚೆಂದ ಕಂಡೀತು. ಊರು ಅಂದರೆ ಏನು? ಅದರಲ್ಲಿ ನಾಲ್ಕೇ ನಾಲ್ಕು ಮರಗಳಿರುವ ಪುಟ್ಟ ಪಾರ್ಕು, ಮೀನಿನ ವಾಸನೆ ಹೊತ್ತು ತರುವ ಹೊಳೆ ಅಥವಾ ಸಮುದ್ರದ ಮೇಲಿನ ಗಾಳಿ, ತರಕಾರಿ ಅಥವಾ ಮೀನು ಬುಟ್ಟಿ ಹೊತ್ತು ತರುವ ಹೆಂಗಸು, ಹೆಸರಿಗೆ ನಾಲ್ಕು ಅಂಗಡಿಗಳಿರುವ ಕೆಳ ಪೇಟೆ ಅಲ್ಲಿರಬಹುದು. ಅಷ್ಟೇ ಅಲ್ಲ, ಓಬಿರಾಯನ ಕಾಲದ ಅಂಗಿಗಳಿರುವ ಮಾಸಿದ ಬೋರ್ಡ್ ಹೊತ್ತು ನಗುವ ಬಟ್ಟೆ ಅಂಗಡಿ, ಒಂದಿಷ್ಟು ಟಯರ್ರುಗಳು ಮತ್ತು ಬಗೆ ಬಗೆಯ ಗಾಡಿಗಳಿಗೆ ಹಾಕುವ ಎಣ್ಣೆಯ ಡಬ್ಬಗಳು, ಸ್ಪಾನರ್ರು, ನಟ್ ಬೋಲ್ಟ್ ತುಂಬಿಕೊಂಡು ತಾನೇನು ಎಂದು ತಾನೇ ಬೆರಗಾಗಿ ಕೂತ ಹೆಸರು ಏನೆಂದೇ ಓದಲಾಗದಷ್ಟು ಮಸಿಯಾಗಿರುವ ಬೋರ್ಡಿನ ಅಂಗಡಿ, ಬಳೆ, ಕ್ಲಿಪ್ಪು, ಹೇರ್ ಬ್ಯಾಂಡ್, ಹಣೆಬೊಟ್ಟು, ಮದರಂಗಿ ಪುಡಿಯ ಪೊಟ್ಟಣ ಅದರೊಂದಿಗೆ ಬಸ್ಸು, ಕಾರು, ವಿಮಾನ ಎಂದೆಲ್ಲಾ ಮಕ್ಕಳಾಟಿಕೆ ಸಾಮಾನುಗಳಿಂದ ತುಂಬಿ ತುಳುಕುತ್ತಿರುವ, ಇವಾಗಷ್ಟೇ ಗಡದ್ದಾಗಿ ಊಟ ಮುಗಿಸಿದವನಂತೆ ಕಾಣುವ ಫ್ಯಾನ್ಸಿ ಸ್ಟೋರು, ಊರು ಅಂದ ಮೇಲೆ ನಾನಿಲ್ಲದರಾದೀತೇ ಅನ್ನುವ ಜ್ಯೂಸ್ ಮತ್ತು ಐಸುಕ್ರೀಮೂ ಸಿಗುವ ಒಂದು ಪುಟ್ಟ ಹೋಟೆಲ್ಲು ಎಲ್ಲಾ ಸೇರಿ ಆಗಿರುವ ಮೇಲು ಪೇಟೆಯೂ ಇರಬಹುದು. ಇಡೀ ಊರಿಗೆ ಘಂಟೆ ಹೊಡೆದೋ, ಅಜಾನ್ ಹೇಳಿಯೋ ಎಚ್ಚರಿಸುವ ಒಂದು ದೇವಸ್ಥಾನ, ಚರ್ಚು ಮತ್ತೊಂದು ಮಸೀದಿ. ಒಂದು ಸರಕಾರಿ ಶಾಲೆ, ಅದರ ಪಕ್ಕದಲ್ಲೇ ಶಾಲೆಯ ಮಕ್ಕಳ ಕಣ್ಣಲ್ಲಿ ಆಸೆ ಹುಟ್ಟಿಸುವ ಥರವಾರಿ ಪೆನ್ನು, ಪೆನ್ಸಿಲ್ಲು, ಸುಗಂಧಭರಿತ ರಬ್ಬರ್ರುಗಳಿರುವ ರೀಗಲ್ ಸ್ಟೋರ್ಸ್! ಹೆದ್ದಾರಿಗೆ ಅಂಟಿರುವ ಕಡೆ ನಿಂತ ಒಂದಾನೊಂದು ಕಾಲದಲ್ಲಿ ಹಳದಿಯಾಗಿದ್ದ, ಕನ್ನಡ ಇಂಗ್ಲೀಷು ಎರಡರಲ್ಲೂ ಊರಿನ ಹೆಸರಿರುವ ನಾಮಫಲಕ.<br />
ಇಂತಹ ಊರುಗಳಲ್ಲೇ ಜೀವನವಿಡೀ ಕಳೆದು ಬಿಡಬಹುದೇ? ಶಾಲೆಯಲ್ಲಿ ಮಾಸ್ತರರಾಗಿಯೋ, ಪುಟ್ಟ ಕಿರಾಣಿ ಅಥವಾ ತರಕಾರಿ ಅಂಗಡಿಯನ್ನಿಟ್ಟುಕೊಂಡೋ ಬದುಕಿಬಿಡಬಹುದೇನೋ. ದೇವಸ್ಥಾನದ ತೇರು, ಸ್ನೇಹಿತರೊಂದಿಗೆ ಪುಟ್ಟ ತಿರುಗಾಟಗಳು, ರಾಜಕೀಯದ, ಯಕ್ಷಗಾನದ ಕುರಿತಾದ ಚರ್ಚೆಗಳೆಲ್ಲವೂ ಸುಂದರವಾಗಿರುತ್ತವೆ. ರಜೆಯಲ್ಲಿ ಬರುವ ನೆಂಟರಿಗೆ ಕಮಟು ಎಣ್ಣೆ ವಾಸನೆಯ ಗೋಳಿಬಜೆ ತಿನ್ನಿಸುತ್ತಾ ಇದೇ ಇಡೀ ಪ್ರಪಂಚದಲ್ಲಿ ಸಿಗುವ ಅಂಥೆಂಟಿಕ್ ಗೋಳಿಬಜೆಯೆಂದು ಒಂದು ಚೂರು ಸಂದೇಹವಿಲ್ಲದಂತೆ ಘಂಟಾಘೋಷವಾಗಿ ಸಾರಿ ನಾವು ಅದನ್ನೇ ನಂಬುತ್ತಾ ಬದುಕಿಬಿಡುತ್ತೇವೆ. ನಾವು ಬೇರೆ ಊರಿಗೆ ಹೋದರೂ ನಮ್ಮೂರಲ್ಲಿ ಹೀಗಾಗುತ್ತೆ ಗೊತ್ತಾ ಎಂದು ನಾವಿದ್ದ ಊರಿನ ರೆಪ್ರೆಸೆಂಟಿವ್ ಗಳಾಗುತ್ತೇವೆ. ಅಲ್ಲಿನ ದೇವರು ಎಷ್ಟು ಕಾರಣೀಕವೆಂದರೆ ನಮಸ್ಕಾರ ಹಾಕದ ಹೊರತು ಗಾಡಿ ಮುಂದೆ ಹೋಗಲೂ ಬಿಡುವುದಿಲ್ಲ, ಪ್ರತೀ ತೇರಿಗೂ ಮಳೆ ಬಂದೇ ಬರುತ್ತದೆ ಇತ್ಯಾದಿ ನಂಬಿಕೆಗಳ ಅಟ್ಟದಲ್ಲಿ ಭದ್ರವಾಗಿ ಕುಳಿತಿರುತ್ತೇವೆ. ಪ್ರತೀ ಊರಿಗೆ ಅಂಟಿರುವ ಕಾಡಿನಲ್ಲೂ ಪುರಾಣದ ನಂಟಿರುತ್ತದೆ, ಹನುಮನ ಹೆಜ್ಜೆ, ಭೀಮನ ಕಲ್ಲಿರುತ್ತವೆ. ಬೇರೆ ಯಾವ ಊರ ಕೇಪುಳವೂ ಈ ಊರಿನ ಬೇಲಿ ಬದಿಯ ಕೇಪುಳದಷ್ಟು ಕೆಂಪಿರುವುದಿಲ್ಲ ಎಂಬುದು ಬರೀ ನಂಬಿಕೆಯಲ್ಲ, ಸತ್ಯವೂ ಆಗಿಬಿಟ್ಟಿರುತ್ತದೆ. ಅಷ್ಟರವರೆಗೆ ಊರು ನಮ್ಮನ್ನು ವ್ಯಾಪಿಸಿಕೊಂಡು ರಕ್ತದಲ್ಲಿ ಬೆರೆತಿರುತ್ತದೆ.<br />
ಯಾವಾಗ ಜೀವನ ಯಾವುದೇ ಅಪಮಾನ, ತಿರಸ್ಕಾರ, ತಾತ್ಸಾರಗಳನ್ನು , ವಿಷದಷ್ಟು ಕಹಿಯನ್ನು ಉಗುಳುವುದಿಲ್ಲವೋ ಅಲ್ಲಿಯವರೆಗೂ ಊರು ನಮ್ಮದಾಗುತ್ತದೆ, ಅಲ್ಲಿಯ ಎಲ್ಲರೂ, ಹೊಳೆ, ಕೆರೆ, ಅಂಗಡಿ, ಸಮುದ್ರ ಎಲ್ಲವೂ ನಮ್ಮದಾಗುತ್ತದೆ. ಉಣ್ಣಲು ಕೊರತೆಯಿಲ್ಲದೇ ಸ್ಥಾನಮಾನಗಳು, ಜಾತಿ ಧರ್ಮಗಳು ಎಲ್ಲಿಯವರೆಗೂ ಗೌರವಿಸಲ್ಪಡುತ್ತವೆಯೋ ಅಲ್ಲಿಯವರೆಗೂ ಆ ಊರು ಚೆನ್ನ. ಎಲ್ಲೋ ಒಂದು ಸೋಲು, ಒಂದು ಅವಮಾನ ಬಂದು ಚಿವುಟಲಿ ಇಡೀ ಊರು ಇದ್ದಕ್ಕಿದ್ದ ಹಾಗೆ ನಮಗೆ ಬೆಂಕಿಯ ಕುಲುಮೆಯಾಗಿಬಿಡುತ್ತದೆ. ಇರುವ ಎರಡು ಪೇಟೆಗಳಲ್ಲಿ ತಲೆಯೆತ್ತಿ ತಿರುಗುವುದು ಬೇಡವೆನಿಸುತ್ತದೆ. ಮನುಷ್ಯರು ಇರುವ ಯಾವ ಸ್ಥಳವೂ ಇಷ್ಟವಾಗುವುದಿಲ್ಲ, ಸಮುದ್ರ ತೀರವೂ, ಹೊಳೆ ಬದಿಯೂ, ಕೊನೆಗೆ ದೇವಸ್ಥಾನದ ಪ್ರಾಕಾರವೂ ನೆಮ್ಮದಿ ಕೊಡುವುದಿಲ್ಲ. ಪ್ರತಿಯೊಬ್ಬನೂ ಪ್ರತಿಯೊಂದೂ ಇನ್ನಷ್ಟು ನೋಯಿಸಲೆಂದೇ ಹೊಂಚು ಹಾಕುತ್ತಿದ್ದರೆಂದು ಅನಿಸಿಬಿಡುತ್ತದೆ. ಛೇ! ನನ್ನ ಅರ್ಹತೆಗೆ ನಾನೆಲ್ಲೋ ಇರಬೇಕಿತ್ತು, ಈ ಊರಿನ ಮಂಗಗಳಿಗೆ ಏನು ಗೊತ್ತು ಅನ್ನಲೂಬಹುದು, ಬದುಕನ್ನೇ ಸರ್ವನಾಶ ಮಾಡಿತು ಈ ಊರು ಅನಿಸಲೂಬಹುದು. ಹತ್ತಿರದವರ ಅಕಾಲಿಕ ಸಾವಂತೂ ಕೆಲವೊಮ್ಮೆ ಮನುಷ್ಯರನ್ನು ಮನೆ, ಊರು ಜಿಲ್ಲೆ ಯಾಕೆ ದೇಶವನ್ನೇ ಬಿಟ್ಟೋಡಿಸಬಹುದು. ಇಲ್ಲಿಂದ ದೂರ ಓಡಬೇಕು ಎಂಬ ಅನಿಸಿಕೆ ಒಂದು ಸಾರಿ ಹುಟ್ಟುವುದೇ ತಡ, ತಡವಿಲ್ಲದೆಯೇ ಮನಸ್ಸು ಅದನ್ನೊಪ್ಪಿಸಲು ಎಲ್ಲಾ ಕಾರ್ಯತಂತ್ರಗಳನ್ನು ಹೂಡುತ್ತದೆ. ಬೀಜ ಮಣ್ಣಿಗೆ ಬಿದ್ದು ಮೊಳಕೆಯೊಡೆದು ಗಿಡವಾಗುವುದು ಅದೆಷ್ಟರ ಹೊತ್ತು?<br />
<br />
ಇದಕ್ಕೇ ಕಾಯುತ್ತಿದ್ದ ಅಜ್ಞಾತ ವಾಸದ ಆಸೆ ಹುಟ್ಟಿಸುವ ನಗರ, ಮಹಾನಗರಗಳು ಕೈ ಬೀಸಿ ಕರೆಯತೊಡಗುತ್ತವೆ. ಸೌಲಭ್ಯಗಳಿಗಿಂತ ಮನುಷ್ಯನನ್ನು ಹೆಚ್ಚು ಸೆಳೆಯುವುದೇ ಈ ವಿಚಿತ್ರ ಅಪರಿಚಿತತೆಯಿರಬೇಕು. ಕುವೆಂಪು ಅವರ ಮಾತಿನ ಮೊದಲಾರ್ಧವಷ್ಟೇ ಇಲ್ಲಿ ನಿಜ, ಇಲ್ಲಿ ಯಾರೂ ಮುಖ್ಯರಲ್ಲ.... ಕಟ್ಟಡಗಳು, ಸಿಮೆಂಟಿನ ಕಂಬಗಳು, ಫ್ಲೈ ಓವರುಗಳು, ಮಾಲುಗಳು, ಕತ್ತಲೆಯೆಂದರೆ ಗೊತ್ತಿರದ ಕಪ್ಪು ಡಾಂಬರು ಹೊದ್ದ ರಸ್ತೆಗಳು ಎಲ್ಲದರಲ್ಲೂ ಒಂದು ನಿಗೂಢತೆ. ಯಾವುದು ನಮ್ಮದಲ್ಲ, ನಮ್ಮದಾಗಲಾರದೂ ಕೂಡಾ. <br />
<br />
ಕಾಡಲ್ಲಿ, ಊರಲ್ಲಿ ಬೆಳೆದ ಗಿಡವನ್ನು ಎತ್ತಿಕೊಂಡು ಬಂದು ಮಣ್ಣಿನ ಕುಂಡದಲ್ಲಿ ಬೆಳೆಸಿದರೆ ಅದು ಚೆನ್ನಾಗಿ ಬೆಳೆದೀತೆ? ಬೆಳೆದರೂ ಮೊದಲಿನ ಹಾಗೆ ಹಣ್ಣು ಹೂವು ಕೊನೆಗೆ ಮೊದಲಿದ್ದ ಬಣ್ಣ, ಗಾತ್ರದ ಎಲೆಯನ್ನಾದರೂ ಹುಟ್ಟಿಸಿತೇ? ಕುಂಡದ ಮಣ್ಣಿನಲ್ಲಿ ಊರುವ ಮೊದಲು ಅದನ್ನು ತಂದ ಪ್ಲಾಸ್ಟಿಕ್ ಕವರಿನಲ್ಲಿ ಕಟ್ಟಿ ತಂದ ಮಣ್ಣನ್ನು ಬೇರಿನ ಸುತ್ತ ಹಾಗೆಯೇ ಬಿಡುತ್ತೇವಲ್ಲ ? ಆ ಮಣ್ಣಿನ ಸ್ಪರ್ಶ, ವಾಸನೆಯಷ್ಟೇ ಅದಕ್ಕೆ ಸಿಗುವ ಮೃಷ್ಟಾನ್ನ. ಹೊಸ ಬಾಲ್ಕನಿಯ ಬಾಕಿ ಶೋಕಿ ಗಿಡಗಳ ಎದುರು ಅದೂ ನಾಟಕ ಮಾಡಲು ಕಲಿತೀತು ಒಂದು ದಿನ.<br />
<br />
ಮನಸ್ಸು ವಯಸ್ಸು ಮಾಗಿದಂತೆಲ್ಲಾ ದಕ್ಕುವ ಅಲ್ಪ ಸಲ್ಪ ನಿದ್ದೆಯಲ್ಲಿ ಬೀಳುವ ಕನಸಲ್ಲಿ ಊರಿನ ಮಸೀದಿಯ ಅಜಾನ್, ದೇವಸ್ಥಾನದ ಘಂಟೆ ಸದ್ದೂ ಕೇಳತೊಡಗುತ್ತದೆ. ಗೋಳಿಬಜೆಯ ಎಣ್ಣೆಯ ವಾಸನೆಯಲ್ಲದೇ ರುಚಿಯೂ ನೆತ್ತಿಗೆ ಹತ್ತತೊಡಗುತ್ತದೆ. ಮನೆಯ ಇಂಟೀರೀಯರ್ ಡಿಸೈನಿಗೆಂದು ಸಿರಾಮಿಕ್ ಕುಂಡಗಳಲ್ಲಿ ತಂದಿಟ್ಟ ರಬ್ಬರ್ ಪ್ಲಾಂಟ್, ಫಿಗ್ ಪ್ಲಾಂಟುಗಳ ಅಗಲ ಎಲೆಗಳ ಮಧ್ಯದಲ್ಲಿ ಕೇಪುಳ, ನಂದಬಟ್ಟಲು, ಗೌರಿ ಹೂ, ಶಂಖಪುಷ್ಪ, ಮಿಠಾಯಿ ಹೂ, ಕರವೀರ, ರತ್ನಗಂಧಿ, ನಾಗಸಂಪಿಗೆಗಳು ನಕ್ಕು ನಮ್ಮ ನೆನಪಿದೆಯೇ ಎಂದು ಕೇಳುತ್ತವೆ. ಬಾಲ್ಯದ ಖಾರಕಡ್ಡಿ, ಬಾಂಬೆ ಮಿಠಾಯಿ, ಅಲ್ಕೋಹಾಲು ಎಂದು ಕರೆಯುತ್ತಿದ್ದ ಹಾಲು ಖೋವಾ, ಹಳದಿ ಬಣ್ಣದ ಬೋಟಿ ಕೊನೆಗೆ ಒಲೆಯಲ್ಲಿ ಸುಟ್ಟ ಹುಣಿಸೇ ಬೀಜಗಳ ನೆನಪೂ ಬಾಯಿಯಲ್ಲಿ ನೀರು ತರಿಸುತ್ತದೆ, ಸಾವಿರಾರು ರೂಪಾಯಿ ಕೊಟ್ಟ ಪಿಜಾವೂ ಸಪ್ಪೆ! ಘಂಟೆಗಿಷ್ಟರಂತೆ ಹಣ ಕೊಟ್ಟು ಆಡುವ ಬೌಲಿಂಗ್, ಸ್ನೂಕರ್ ಗಳು ತೆಂಗಿನ ಸೋಗೆಯ ಮೇಲೆ ಕೂತು ಅಂಗಳವಿಡೀ ಸರ್ಕಿಟು ಹೊಡೆದಾಗ ಕೊಡುತ್ತಿದ್ದ ಒಂದಂಶ ಖುಷಿಯೂ ಕೊಡುವುದಿಲ್ಲ.<br />
<br />
ಮತ್ತೆ ಊರು ನೋಡುವ ಆಸೆಯಾಗಿ ಅಲ್ಲಿಗೊಂದು ಭೇಟಿ ಕೊಡುವ ಮನಸ್ಸಾಗುತ್ತದೆ, ಅಲ್ಲಿ ಹೋದರೆ ಸಿಗುವುದು ಅಸಾಧ್ಯ ನಿರಾಶೆಯಲ್ಲದೇ ಮತ್ತೇನಿಲ್ಲ! ಆಗಿದ್ದ ದೈತ್ಯಾಕಾರದ ಮರಗಳಿರದೆ ಊರು ಬಂದದ್ದೇ ಗೊತ್ತಾಗುವುದಿಲ್ಲ. ಅಂತೂ ಇಂತೂ ಒಳಹೊಕ್ಕರೆ ಹಳೆ ಊರಿನ ಅಸ್ಥಿಪಂಜರದ ಮೇಲೆ ಹೊಸ ಊರು ಬಂದು ಕೂತಿದೆ. ಆ ಹೊಸ ಊರಿನಲ್ಲಿ ನಮ್ಮ ಗುರುತುಗಳಿಲ್ಲ, ಮನುಷ್ಯರಿಗೂ ನಮ್ಮ ಗುರುತಿಲ್ಲ! ತಿಂಡಿಗಳೂ ಅಷ್ಟು ರುಚಿಯಿಲ್ಲ, ಮಲ್ಲಿಗೆಗೂ ಮೊದಲಿನ ಘಮವಿಲ್ಲ....<br />
<br />
ನಮ್ಮ ನೆನಪಿನಲ್ಲಿರುವ ಊರು ಬೇರೆ, ಇದೇ ಬೇರೆ ಅನಿಸುತ್ತದೆ.<br />
<br />
ಹಾಗೆಂದು ನಾವಲ್ಲೇ ಬದುಕಿದಿದ್ದರೆ ಸಂತೋಷವಾಗಿರುತ್ತಿದ್ದೆವೋ, ಇಲ್ಲಿಗೆ ಬಂದು ನಿಂತು ಹಿಂದೆ ನೋಡಿದ ಹಾದಿ ಸುಂದರವೆನಿಸುತ್ತದೆಯೋ ಗೊತ್ತಿಲ್ಲ! ಅಲ್ಲೇ ಇದ್ದಿದ್ದರೆ ಎಲ್ಲದಕ್ಕೂ ಈ ಬೆಲೆ ದಕ್ಕುತ್ತಿತ್ತೋ? ನಗರವಾಗಲಿ, ಬದಲಿಸಿದ ಊರಾಗಲೀ ಆ ಹೊತ್ತಿನ ನೋವ ನುಂಗಿ ಬದುಕ ನಡೆಸಲು, ಕಳೆದುಕೊಂಡ ಆತ್ಮವಿಶ್ವಾಸವ ಮರಳಿ ಕೊಟ್ಟಿತೋ? ಹೊಸ ಊರಿನೊಂದಿಗೆ ಹೊಸ ಬದುಕು ಶುರುವಾಯಿತೋ? ಮತ್ತೆ ಯಾವತ್ತೂ ಸಿಗದ ಹಾಗೆ ಕಳೆದೇ ಹೋದ ಸ್ನೇಹ, ಸಂಬಂಧ, ಪ್ರೀತಿ ನಮ್ಮನ್ನು ಸಂವೇದನೆಗಳಿಗೆ ಜಡಗೊಳಿಸಿತೇ ಅಥವಾ ಸಿಕ್ಕಿದ್ದನ್ನು ಕಾಪಿಟ್ಟುಕೊಳ್ಳುವ ಗುಣ ಹುಟ್ಟಿಸಿತೇ? ಈ ಅಸಂಖ್ಯ ಪ್ರಶ್ನೆಗಳ ವ್ಯೂಹದಲ್ಲಿ ಸಿಲುಕಿ ಅರ್ಧ ಕನಸು ಅರ್ಧ ಎಚ್ಚರದಲ್ಲಿ ಆಯುಷ್ಯ ಕಳೆಯುತ್ತೇವೆ.<br />
<br />
ಇವತ್ತು ಬೆಳಿಗ್ಗೆ ಬೆಳಿಗ್ಗೆ ಹೀಗೆಲ್ಲಾ ಅನಿಸಿತು. ಬರೆದೆ. ಅಮ್ಮ, ಅಣ್ಣನ ಟ್ರಾನ್ಸಫರ್ ಆಗುತ್ತಲೇ ಇದ್ದದ್ದರಿಂದ ರಾಶಿ ಊರು ತಿರುಗಿ ಕೊನೆಗೆ ನನ್ನೂರು ಯಾವುದು ಎಂದು ತಿಳಿಯದವಳು ನಾನು. ನಾನಿದ್ದ ಎಲ್ಲಾ ಊರುಗಳ ಹೂಗಳು, ತಿಂಡಿಗಳು, ದಾರಿಗಳು, ಸ್ನೇಹಿತರು, ಸಹಪಾಠಿಗಳು, ಟೀಚರ್ಸ್ ಕೊನೆಗೆ ಆ ಪ್ರದೇಶದ ಮರ ಗಿಡಗಳ ವೈವಿಧ್ಯತೆ ಮತ್ತು ಊರುಗಳ ವಾಸನೆ ಎಲ್ಲವೂ ನನ್ನಲ್ಲೇ ಉಳಿದುಕೊಂಡಿವೆ. ಅಲ್ಲಿರುವುದು ಊರಾ, ನನ್ನೊಳಗಿರುವುದು ಊರಾ ನನಗೇ ಗೊತ್ತಿಲ್ಲ!</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-50175412699633362312020-01-18T16:55:00.001-08:002020-01-18T16:55:42.293-08:00 ವೈಲ್ಡ್ ಕರ್ನಾಟಕ<div dir="ltr" style="text-align: left;" trbidi="on">
ಸರ್ ಡೇವಿಡ್ ಅಟೆನ್ ಬರ್ಗ್ ನಿರೂಪಣೆಯನ್ನು ಅಸ್ವಾದಿಸುತ್ತಾ, ಪ್ರತೀ ಸೀನ್ ಅನ್ನು ಕಣ್ಣು ತುಂಬಿಕೊಳ್ಳುತ್ತಾ, ಕಿವಿಗಿಂಪಾದ ರಿಕಿ ಕೇಜ್ ಸಂಗೀತವನ್ನು ಸವಿಯುತ್ತಾ ಚಿತ್ರವನ್ನು ನೋಡುವುದೇ ಒಂದು ಸುಂದರ ಅನುಭೂತಿ. ಶುಕ್ರವಾರ ಪಿವಿ ಆರ್ ಗಳಲ್ಲಿ ಬಿಡುಗಡೆಯಾದ<br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEhahvcWK6ElEa6bydz1IIr0meMkMDvviYPF7QOO7BYr5Z4pqB71WCn3K_KDV0dNr_PA49Wl702E1rYXFO909lastPdgklvGMOUmuAXyK1DIWwL9utFt46ipK18nJRMeLaQ32EtdiOMYgLg/s1600/C313B545-402F-4F33-8432-2206A56E4CD5.jpeg" imageanchor="1" style="margin-left: 1em; margin-right: 1em;"><img border="0" data-original-height="695" data-original-width="441" height="320" src="https://blogger.googleusercontent.com/img/b/R29vZ2xl/AVvXsEhahvcWK6ElEa6bydz1IIr0meMkMDvviYPF7QOO7BYr5Z4pqB71WCn3K_KDV0dNr_PA49Wl702E1rYXFO909lastPdgklvGMOUmuAXyK1DIWwL9utFt46ipK18nJRMeLaQ32EtdiOMYgLg/s320/C313B545-402F-4F33-8432-2206A56E4CD5.jpeg" width="203" /></a></div>
ವೈಲ್ಡ್ ಕರ್ನಾಟಕ ಒಂದು ಅದ್ಭುತ ಚಿತ್ರ. ವನ್ಯಜೀವಿ ಪ್ರೇಮಿಗಳಿಗೆ ಒಂದು ಖುಷಿಯ ವಿಚಾರ!<br />
<br />
ಟ್ರೈಲರ್ ನೋಡಿದಾಗಿಂದ ತುದಿಗಾಲಲ್ಲಿ ನಿಂತಿದ್ದ ನಾನು, ಇಲ್ಲಿಯವರೆಗೂ ಯಾವ ಹೀರೋ ಚಿತ್ರಕ್ಕೂ ಫಸ್ಟ್ ಡೇ ಫಸ್ಟ್ ಶೋ ಹೋಗದವಳು ಈ ಚಿತ್ರವನ್ನು ಮೊದಲನೇ ದಿನ ಮೊದಲ ಶೋ ನೋಡಿದ್ದಾಯ್ತು. ಚಿತ್ರದ ಪ್ರತೀ ದೃಶ್ಯವನ್ನೂ ಪ್ರಿಂಟ್ ತೆಗೆದು ಫ್ರೇಮ್ ಹಾಕಿ ಗೋಡೆಯಲ್ಲಿ ತೂಗುಹಾಕಬಹುದು. ಹಂಪಿ, ಶಿವನಸಮುದ್ರ, ಪಶ್ಚಿಮ ಘಟ್ಟಗಳ ಕಾಡು ಹಾಗೂ ಇದುವರೆಗೂ ಹೆಚ್ಚು ಗೊತ್ತಿರದ ನೇತ್ರಾಣಿಯ ನೀರಿನೊಳಗಿನ ದೃಶ್ಯಗಳನ್ನು ಅದ್ಭುತವಾಗಿ, ಸುಂದರವಾಗಿ ಸೆರೆ ಹಿಡಿದಿದ್ದಾರೆ. ಪೂರ್ತಿ ತುಂಬಿದ್ದ ಥಿಯೇಟರ್ ನಲ್ಲಿ , ತೆರೆಯ ಮೇಲೆ ಪ್ರತಿ ಜೀವಿ ಪ್ರತ್ಯಕ್ಷವಾದಾಗೆಲ್ಲಾ ಸಂತಸದ ಉದ್ಗಾರದ ಅಲೆಗಳು ಏಳುತ್ತಿದ್ದವು. ಅಮೋಘವರ್ಷ, ಕಲ್ಯಾಣ್ ವರ್ಮ ಹಾಗೂ ಅದೆಷ್ಟು ವನ್ಯಜೀವಿ ಛಾಯಾಗ್ರಾಹಕರು ಇದಕ್ಕಾಗಿ ಶ್ರಮಿಸಿದ್ದಾರೋ ಅವರೆಲ್ಲರಿಗೂ ಒಂದು ಸಲಾಮ್! ಭಾರತದ ಅದರಲ್ಲೂ ಕನ್ನಡದ ಹೆಮ್ಮೆಯಿದು. ವಾಕಿಂಗ್ ವಿಥ್ ದ ವೂಲ್ಫ್ಸ್ ಮತ್ತು ವೈಲ್ಡ್ ಡಾಗ್ ಡೈರಿಸ್ ನೋಡಿದಾಗ ಆದ ಖುಷಿ ಇನ್ನೊಮ್ಮೆ ಮರುಕಳಿಸಿತು. ನಾಲ್ಕು ವರ್ಷಗಳ ಅವರೆಲ್ಲರ ಪರಿಶ್ರಮದ ಈ ಚಿತ್ರದಲ್ಲಿ ತೋರಿಸಲಾದ ಪುಟ್ಟ ಪುಟ್ಟ ಘಟನೆಗಳು, ಕಥೆಗಳು ಪ್ರಾಣಿ ಪ್ರಪಂಚದ ಎಂದೂ ಮುಗಿಯದ ದಿನ ನಿತ್ಯದ ಹೋರಾಟದ ಬದುಕನ್ನೂ, ನಾವುಗಳು ಕಾಡನ್ನು ಉಳಿಸಲೇಬೇಕಾದ ಅನಿವಾರ್ಯತೆಯನ್ನೂ ಮತ್ತೊಮ್ಮೆ ತಿಳಿಸುತ್ತದೆ.<br />
<br />
ಕೇವಲ ೫೪ ನಿಮಿಷಗಳ ಈ ಚಿತ್ರ ಪ್ರಾಣಿಪ್ರಿಯರಿಗೆ ಸ್ವರ್ಗದ ಬಾಗಿಲು ಒಂದು ಘಳಿಗೆ ತೆಗೆದು ತೋರಿಸಿ ಮತ್ತೆ ಮುಚ್ಚಿದ ಅನುಭವ ಕೊಡುತ್ತದೆ. ನಾಲ್ಕು ನೂರು ಘಂಟೆಗಳಿಂದ ಕನಿಷ್ಠ ನಾಲ್ಕು ಹೋಗಲಿ ಮೂರು ಕೊನೆಪಕ್ಷ ಎರಡು ಘಂಟೆಗಳಿಗಾದರೂ ಚಿತ್ರವನ್ನಿಳಿಸಬಹುದಿತ್ತು ಎಂದು ಬಲವಾಗಿ ಅನಿಸಿತು. ತಾಯಿ ಹುಲಿ ಮತ್ತದರ ಮರಿಗಳ ಪಯಣ, ಢೋಲ್ ಪ್ಯಾಕಿನ ಆಹಾರದ ಹುಡುಕಾಟ, ರಿವರ್ ಟರ್ನ್ ಮರಿಗಳ ಮೊದಲ ಹಾರಾಟ ಎಲ್ಲವೂ ಕವರ್ ಆಗಿದ್ದರೆ ಚೆನ್ನಾಗಿತ್ತೇನೋ! ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಪ್ರಾಣಿಗಳಲ್ಲದೇ ಕಾಡಿನ ಇನ್ನೂ ಒಂದಿಷ್ಟು ಜೀವ ವೈವಿಧ್ಯತೆ ಬಗ್ಗೆ ಹೇಳಬೇಕಿತ್ತು ಅನಿಸಿತು. ತಂದೆ ತಾಯಂದಿರು ಮಕ್ಕಳಿಗೆ ಇಂಥಹ ಚಿತ್ರಗಳನ್ನು ತೋರಿಸಿದರೆ ಅವರೆಲ್ಲರೂ ಹುಲಿ ಸಂರಕ್ಷಣೆ ಬಗ್ಗೆ ಆಸಕ್ತಿ ವಹಿಸದಿದ್ದರೂ ದಾರಿಯಲ್ಲಿ ಹೋಗುವ ನಾಯಿಗಳಿಗೆ ಕಲ್ಲು ಬಿಸಾಡುವುದೋ, ನೆಲದಲ್ಲಿ ತೆವಳುವ ಇರುವೆಗಳನ್ನು ಹೊಸಕಿ ಸಾಯಿಸುವುದೋ ಅಥವಾ ಪ್ರಪಂಚದ ಎಲ್ಲಾ ಸಹಜೀವಿಗಳನ್ನು ಸಮಾನಭಾವದಿಂದ ನೋಡುವ ಮನಸ್ಥಿತಿ ಬೆಳೆಸಿಕೊಳ್ಳಬಹುದೇನೋ! ನಮ್ಮ ಬಾಲ್ಯದಲ್ಲಿ ಈ ಥರಹದ ಚಿತ್ರಗಳು ಬಂದಾಗ ಶಾಲೆಯಿಂದ ಕರೆದುಕೊಂಡು ಹೋಗುವುದೋ ಅಥವಾ ಶಾಲೆಯಲ್ಲೇ ಪ್ರದರ್ಶನವನ್ನು ಏರ್ಪಡಿಸುವುದೋ ಮಾಡುತ್ತಿದ್ದರು. ಪಾಪ! ಈಗಿನ ಮಕ್ಕಳಿಗೆ ಆ ಭಾಗ್ಯವಿಲ್ಲ.<br />
<br />
ಕೊನೆಯದಾಗಿ ಅಷ್ಟೂ ಕಾಡು, ಜೀವಗಳನ್ನು ಕಾಪಾಡಲು ಹೆಣಗುವ ಕರ್ನಾಟಕ ಅರಣ್ಯ ಇಲಾಖೆಗೆ ಧನ್ಯವಾದಗಳು.<br />
<br />
ನಾನು ಪ್ರಾಣಿ ದ್ವೇಷಿ ಎಂದು ಎದೆ ತಟ್ಟಿ ಹೇಳುವವರ ಸಂಖ್ಯೆ ಕಡಿಮೆಯಾಗಲಿ ಎನ್ನುತ್ತಾ ಇಂಥಹ ಕಾಡುಗಳು, ಪ್ರಾಣಿಗಳು, ಜೀವ ವೈವಿಧ್ಯತೆ ಸಾವಿರ ಕೋಟಿಯಾಗಲಿ, ಅದರ ರಕ್ಷಣೆಗೆ ನಿಲ್ಲುವವರು ಹೆಚ್ಚಾಗಲಿ ಮತ್ತು ಇನ್ನೆಂದೂ ಅಸ್ಟ್ರೇಲಿಯಾದಂಥ ದುರಂತ ಮರುಕಳಿಸದೇ ಇರಲಿ ಎಂದು ಆಶಿಸುತ್ತೇನೆ. <br />
ಇನ್ನೂ ನೋಡಿರದಿದ್ದರೆ ಹೋಗಿ ನೋಡಿ!</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-13001244131388293042019-06-19T00:49:00.000-07:002019-06-19T00:49:10.111-07:00ಚೆರ್ನೋಬಿಲ್<div dir="ltr" style="text-align: left;" trbidi="on">
ಇಲ್ಲಿ ಯಾರೂ ಎದೆ ಬಡಿದುಕೊಂಡು ಕರುಳು ಕಿತ್ತು ಬರುವಂತೆ ಅಳುವುದಿಲ್ಲ. ಕಿವಿ ತಮಟೆ ಹರಿಯುವ ಶಬ್ದಗಳಿಲ್ಲ. ಪ್ರತಿಯೊಬ್ಬರೂ ಒಂದು ಚೂರೂ ಪ್ರತಿಭಟನೆ ತೋರದೇ ತಮ್ಮನ್ನು ತಾವೇ ಪರಿಸ್ಥಿತಿಗೆ ಒಡ್ಡಿಕೊಳ್ಳುತ್ತಾರೆ. ಸಾವು ಬೆನ್ನಟ್ಟುವಾಗ ಬದುಕಲು ಆಶಿಸುವವರನ್ನು ನೋಡುವುದಕ್ಕಿಂತ ಕಷ್ಟವಾಗುವುದು ಸಾವನ್ನಪ್ಪಲು ತಯಾರಾಗಿ ಕೂತ ಇವರನ್ನು ನೋಡುವುದು. ಪ್ರಾಣಿಗಳಾಗಲಿ, ಮನುಷ್ಯರಾಗಲಿ ಎಲ್ಲರ ಮುಖದಲ್ಲೂ ವಿಚಿತ್ರ ಕಳೆ, ಅದು ಸಾವಿನದ್ದು. ಭೂಮಿಯಡಿ ಒಂದು ಚೂರೂ ಬಟ್ಟೆಯಿಲ್ಲದೇ ಕೆಲಸ ಮಾಡುವ ಮೈನಿಂಗ್ ಕೆಲಸಗಾರರಾಗಲಿ, ಸೈನಿಕರ ದಿರಿಸು ತೊಟ್ಟು ಪ್ರಾಣಿಗಳನ್ನು ಹುಡುಕಿ ಕೊಲ್ಲುವವರ ಮುಖದಲ್ಲಾಗಲಿ ವಿಲಕ್ಷಣ ನಿರ್ವಿಕಾರತೆ. ಅದೇ ನೋಡುಗನ ಹೊಟ್ಟೆ ತೊಳೆಸುವಂತೆ ಮಾಡುತ್ತದೆ, ತಲ್ಲಣ ಹುಟ್ಟಿಸುತ್ತದೆ. ಅಲ್ಲ್ಯಾರಿಗೂ ತಾವು ಮಾಡಿದ ಅಪರಾಧವೇನೆಂದು ಗೊತ್ತಿಲ್ಲ.<br />
<br />
ಮಣ್ಣಿನಡಿ ಹುಡಿ ಹುಡಿಯಾಗುವ ಎಕರೆಗಟ್ಟಲೆ ಕ್ಯಾಬೇಜುಗಳು, ಕಾಂಕ್ರೀಟಿನಲ್ಲಿ ಮುಚ್ಚಿ ಹೋಗುವ ಲೋಹದ ಶವಪೆಟ್ಟಿಗೆಗಳು, ಸಿಳ್ಳೆ ಹಾಕಿ ಕರೆದೊಡನೆ ಓಡಿ ಬಂದು ಗುಂಡು ತಿಂದು ಸಾಯುವ ಸಾಕು ನಾಯಿಗಳು, ಅವುಗಳನ್ನು ಮತ್ತೆ ಕಾಂಕ್ರೀಟ್ ಹಾಕಿ ಸಾಮೂಹಿಕ ಸಮಾಧಿ ಮಾಡುವ ರೀತಿ! ಅಬ್ಬಾ! ಇಷ್ಟೇ ಅಲ್ಲ, ಖಾಲಿ ಹೊಡೆಯುವ ಸುಂದರ ಅಪಾರ್ಟುಮೆಂಟುಗಳು, ನಿಶಬ್ದ ಮನೆಗಳು, ಅಂಗಳದಲ್ಲಿ ಕಟ್ಟಿರುವ ತಂತಿ ಮೇಲೆ ಯಾರಾದರೂ ತೆಗೆಯಬಹುದೆಂದು ಕಾಯುತ್ತಾ, ಗಾಳಿಗೆ ಹಾರಾಡುವ ಒಣ ಬಟ್ಟೆಗಳು, ಕ್ಲಿಪ್ಪುಗಳು, ಬೆಳಗೆದ್ದು ಮಡಿಸಿರದ ಹಾಸಿಗೆ, ಬೆಡ್ ಶೀಟುಗಳು! ಇಂತಹ ದೃಶ್ಯಗಳ ಮೂಲಕ ಹೀಗೂ ಕಥೆಯನ್ನು ಯಾರಾದರೂ ಕಟ್ಟಬಹುದಲ್ಲ?<br />
<br />
ನಿಮಿಷ ನಿಮಿಷಕ್ಕೂ ಹೊರ ಸೂಸುತ್ತಿರುವ ವಿಕಿರಣದ ವಿಷವನ್ನು ಉಸಿರಾಡುತ್ತಿರುವವರನ್ನು ಕಂಡಾಗೆಲ್ಲಾ ಸತ್ತವರೆಲ್ಲಾ ಪುಣ್ಯವಂತರು, ಇವರೂ ಸಹಜವಾಗಿ ಸಾಯಲಿ ಎಂದು ಗೊತ್ತಿಲ್ಲದೇ ನಮ್ಮ ಮನಸ್ಸು ಬೇಡಲಾರಂಭಿಸುತ್ತದೆ. ಮೈಯಿಡೀ ರಕ್ತ ಸುರಿಸಿ, ಕೊಳೆತು ಸಾಯುವ ಗಂಡನನ್ನು ನೋಡುವ ಹೆಂಡತಿಯ ಕಣ್ಣ ನೀರು ನಮ್ಮ ಕಣ್ಣಂಚಿನಲ್ಲೂ ಇಳಿಯುತ್ತದೆ. ಲೇಬರ್ ವಾರ್ಡಿನ ಹಾಸಿಗೆಯಂಚಿಗೆ ಕುಳಿತು, ಎದುರಿಗಿದ್ದ ಪರದೆ ಆ ಕಡೆ ಇರುವ ಕಾಣದ ತಾಯಿ ಮತ್ತು ಮಕ್ಕಳನ್ನು ಸುಮ್ಮನೆ ಕೂತು ದಿಟ್ಟಿಸಿ ನೋಡುವ ಖಾಲಿ ಕೈಯ ತಾಯಿ ನಿಟ್ಟುಸಿರು ಹುಟ್ಟಿಸುತ್ತಾಳೆ. ಅಲ್ಲಿ ನಡೆಯುವುದೆಲ್ಲವೂ ನಿಜಕ್ಕೂ ನಡೆದಿತ್ತು ಅನ್ನುವುದೇ ಅಕ್ಷರಶಃ ಹುಚ್ಚು ಹಿಡಿಸುತ್ತದೆ. ಇಂತಹ ಘನ ಘೋರ ವಿಷದೊಂದಿಗೆ ಚೆಲ್ಲಾಟವಾಡುವ ಮನುಷ್ಯನ ಹುಚ್ಚು ಬೆರಗು ಮೂಡಿಸುತ್ತದೆ. ಇನ್ನೂ ಚೆಲ್ಲಾಟವಾಡುತ್ತಲೇ ಇದ್ದೇವೆ. ಅದ್ಯಾವ ನಂಬಿಕೆಯಲ್ಲಿ ನಾವು ಬದುಕು ಸವೆಸುತ್ತಿದ್ದೇವೆ? ಗೊತ್ತಿಲ್ಲ!<br />
<br />
ಒಂದು ದುರಂತ ಕಥೆಯನ್ನು ಅದ್ಯಾವ ರೀತಿಯಲ್ಲಿ ಹೇಳಬಹುದು? ಪೂರ್ತಿ ನಾಟಕೀಯವಾಗಿ ಇಲ್ಲವೇ ಡಾಕ್ಯುಮೆಂಟರಿಯ ರೂಪದಲ್ಲಿ ಅಲ್ಲವೇ? ಎರಡೂ ಅಲ್ಲದೇ ತಣ್ಣಗಿನ ಸ್ವರದಲ್ಲಿ, ಅಷ್ಟೇ ತಣ್ಣಗಿನ ದೃಶ್ಯ ಹಾಗೂ ಪಾತ್ರಧಾರಿಗಳ ಮೂಲಕ ದುರಂತವನ್ನು ಎಲ್ಲೂ ವಿಜೃಂಭಿಸದೇ ಹೇಳುತ್ತಾ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ ಹೆಚ್ ಬಿ ಓನ ಮಿನಿ ಸೀರೀಸ್ <br />
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEjjXIrjcirwa6UzInUs5Gf0ut0AoKgtjbQxer9KoD9sh9YXLkDh7W1nLhzkPK4KfgwrrOOZyuUFhYJikMSvZSFjsvnYaPx07Wi1zf1zzYhbl1WZe_Hi-pcv8qX9VgVshmjte5rfZnyhZPY/s1600/F510D563-41C1-4AAA-B043-9A8B07854A01.jpeg" imageanchor="1" style="margin-left: 1em; margin-right: 1em;"><img border="0" data-original-height="370" data-original-width="250" height="320" src="https://blogger.googleusercontent.com/img/b/R29vZ2xl/AVvXsEjjXIrjcirwa6UzInUs5Gf0ut0AoKgtjbQxer9KoD9sh9YXLkDh7W1nLhzkPK4KfgwrrOOZyuUFhYJikMSvZSFjsvnYaPx07Wi1zf1zzYhbl1WZe_Hi-pcv8qX9VgVshmjte5rfZnyhZPY/s320/F510D563-41C1-4AAA-B043-9A8B07854A01.jpeg" width="216" /></a></div>
ಚೆರ್ನೋಬಿಲ್. ಮನುಷ್ಯನ ಅಹಂಕಾರ, ಅತೀ ಬುದ್ಧಿವಂತಿಕೆಯಿಂದ ಆಗಬಹುದಾದ ಅಡ್ಡ ಪರಿಣಾಮಗಳನ್ನು ಇಷ್ಟು ಸಮರ್ಥವಾಗಿ ಕಟ್ಟಿಕೊಟ್ಟ ಇನ್ನೊಂದು ಸೀರೀಸ್ ಅನ್ನು ನಾನು ನೋಡಿಲ್ಲ.<br />
<br />
ಹಿಟ್ಲರ್ ಮನುಕುಲದ ಮಾಡಿದ ಅನಾಚಾರಗಳನ್ನು ಡಾಕ್ಯುಮೆಂಟರಿಗಳಲ್ಲಿ, ಬೇರೆ ಬೇರೆ ಸಿನೆಮಾಗಳಲ್ಲಿ ನೋಡಿದಾಗ ಆಗುವ ವಿಷಾದ, ಡಿಪ್ರೆಶನ್ ಅನ್ನು ಸುಮಾರು ಐದಾರು ಘಂಟೆಗಳ ಈ ಶೋ ನಿಮ್ಮಲ್ಲಿ ಹುಟ್ಟಿಸುತ್ತದೆ. ಆಗಿ ಹೋದ ಅನಾಹುತವೊಂದನ್ನು ವಿಜ್ಞಾನಿಗಳು, ಮಿಲಿಟರಿ ಅಧಿಕಾರಿಗಳು, ಸಾಮಾನ್ಯ ಜನಗಳು ಎಲ್ಲರೂ ಸೇರಿ ಅದನ್ನಳಿಸಲು ಮಾಡುವ ಪ್ರಯತ್ನ ಮಾತ್ರ ವಿಚಿತ್ರ. ಭೂಮಿಯ ತುಣುಕೊಂದನ್ನು ಕಿತ್ತು ಮತ್ತೆ ಅದೇ ಭೂಮಿಯಡಿ ಹಾಕುವ ಮನುಷ್ಯ ಅಚ್ಚರಿ ಹುಟ್ಟಿಸುತ್ತಾನೆ. ಅಣು ವಿಕಿರಣದ ದುಷ್ಪರಿಣಾಮಗಳು ಗೊತ್ತಿದ್ದುದೇ ಅಲ್ಲವೇ? ಮತ್ತೇಕೆ ಮನಸ್ಸನ್ನು ಹೀಗೆ ವಿಲ ವಿಲ ಒದ್ದಾಡಿಸಬೇಕು? ದಿನಗಟ್ಟಲೆ ಕಾಡಬೇಕು?<br />
<br />
ಇಡೀ ಶೋ ಪೂರ್ತಿ ರೇಡಿಯೋ ಅಕ್ಟಿವ್ ಎಲಿಮೆಂಟ್ಸ್ ಮಾಡುವ ವಿಚಿತ್ರ ಗುಂಯ್ಯೆನುವ ಶಬ್ದ ಮಾತ್ರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಆಗಿ ಕೇಳುತ್ತಲೇ ಇರುತ್ತದೆ. ಪಾತ್ರಧಾರಿಗಳು, ಸ್ಕ್ರಿಪ್ಟ್ ರೈಟರ್ಸ್, ಕ್ಯಾಮೆರಾ ಮೆನ್, ಆ ಕಾಲಕ್ಕೇ ಕರದುಕೊಂಡು ಹೋಗಲು ಶ್ರಮಿಸಿದ ಪ್ರತಿಯೊಬ್ಬರಿಗೂ ಹ್ಯಾಟ್ಸ್ ಆಫ್!</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-5858636913092782342019-04-23T09:55:00.002-07:002019-04-23T09:55:13.190-07:00ಬೆಳಗು<div dir="ltr" style="text-align: left;" trbidi="on">
<div dir="auto" style="background-color: white; color: #222222; font-family: Arial, Helvetica, sans-serif; font-size: small;">
<br /></div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಅರಿಯದು ಅಳವು ತಿಳಿಯದು ಮನವು</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
-ಬೇಂದ್ರೆ</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
<br /></div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಡ್ರೈವರ್ ಬಿಟ್ಟರೆ ಈ ನೈಟು ಬಸ್ಸಿನಲ್ಲಿ ತಾನೊಬ್ಬಳೇ ಎಚ್ಚರವಿರುವುದು ಅನಿಸಿ ಪಕ್ಕಕ್ಕೆ ತಿರುಗಿ ನೋಡಿದರೆ ಪಕ್ಕದ ಸೀಟಿನಲ್ಲಿದ್ದ ಮಧ್ಯವಯಸ್ಕ ಮಹಿಳೆ ನಿದ್ದೆಯಲ್ಲಿ ಕಳೆದುಹೋಗಿದ್ದರು. ಬ್ಯಾಗಿನ ಹಿಂದಿನ ಜಿಪ್ಪಿನಿಂದ ಸೆಲ್ ತೆಗೆದು ನೋಡಿದರೆ ೧೨.೪೦. ಅದಾಗ್ಲೇ ೩ ಘಂಟೆ ಮೇಲಾಗಿದೆ ಬೆಂಗಳೂರು ಬಿಟ್ಟು, ಎಲ್ಲಿರಬಹುದು ಇವಾಗ ಎಂದುಕೊಂಡು ಹೊರಗಿಣುಕಿದರೆ ಏನೂ ಕಾಣಲಿಲ್ಲ. ಕಣ್ಣು ಮುಚ್ಚಿ ಸೀಟಿಗೆ ತಲೆಯಾನಿಸಿದರೆ ಪ್ರೀತಿಭರಿತ ಕಣ್ಣುಗಳಿಂದ ನೋಡುತ್ತಾ, ದೊಡ್ಡ ಕೆಂಪು ಕುಂಕುಮವಿಟ್ಟ ಮಾರ್ದವ ಮುಖದ ಚಂದಿರನಂತಹ ಚಿಕ್ಕಿ ಕಣ್ಣೆದೆರು ಬಂದು ನಕ್ಕಂತಾಯಿತು. ಕಥೆ ಹೇಳುತ್ತಾ, ಮೊಸರನ್ನ ತಿನ್ನಿಸುತ್ತ, ಜಡೆಗಳಿಗೆ ರಿಬ್ಬನ್ ಸುತ್ತುತ್ತಾ, ಜ್ವರ ಬಂದಾಗ ಅಮ್ಮನೊಟ್ಟಿಗೆ ತಾನೂ ಕೂತು, ಹಣೆ ಸವರುತ್ತಾ ..ಓಹ್ ಚಿಕ್ಕಿ ಎಂದು ನನಗೇ ತಿಳಿಯದೇ ಪಿಸುಗುಟ್ಟಿದೆ. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಆಫೀಸಿನಲ್ಲಿ ಸಂಜೆ ಆರರ ಸಮಯದಲ್ಲಿ ಯಾವುದೋ ಶೋಗಾಗಿ ಬರೆಯುತ್ತಾ ಕೂತವಳು ಆರನೇ ಸಲ ಅಮ್ಮನ ಕರೆ ಬಂದಾಗ ಬೇಸರದಿಂದಲೇ ಎತ್ತಿ, ಏನಮ್ಮಾ, ಕೆಲಸ ಅಂದಷ್ಟೇ ಹೇಳಿದ್ದು! ಆ ಕಡೆಯಿಂದ ಅಮ್ಮ ಕಿರುಚುತ್ತಿದ್ದಳು, ನಡುಗುತ್ತಿದ್ದ ಅವಳ ದನಿಯಲ್ಲಿ ಸಿಟ್ಟೂ, ಅಳೂ ಎರಡೂ ಇದ್ದವು. “ಒಂದು ವಾರದಿಂದ ಹಾಸಿಗೆ ಹಿಡಿದ್ದಿದ್ದಾಳೆ ನಿನ್ನ ಚಿಕ್ಕಿ, ತನ್ನ ಮಕ್ಕಳಿಗಿಂತ ಜಾಸ್ತಿಯೇ ಮಾಡಿದಳಲ್ಲ ನಿನಗೆ?, ಅದೂ ಹೆತ್ತಮ್ಮ ನನಗಿಂತ ಜಾಸ್ತಿ!! ಅಷ್ಟಕ್ಕೂ ಒಂದು ವೇಳೆ ಅವಳಿಂದಲೇ ಏನಾದರೂ ತಪ್ಪಾಗಿದ್ದರೆ ನೀ ಯಾರು ಕೇಳೋಕೆ, ನೀನು ಸಾಕಿದ್ಯಾ? ಮಾಧೂನ ಅವಳಲ್ಲದೇ ಯಾರು ನೋಡಿಕೊಳ್ಳುತ್ತಿದ್ದರು ಹೇಳೆ? ನಿನ್ನೆ ಮೊನ್ನೆ ಹುಟ್ಟಿದವರೆಲ್ಲಾ ನಮಗೆ ಬುದ್ಧಿ ಕಳಿಸೋಕೆ ಬರ್ತೀರಲ್ಲಾ, ಎಷ್ಟು ಹೇಳಿದರೂ ಒಂಚೂರೂ ಅರ್ಥ ಮಾಡಿಕೊಳ್ಳಲ್ಲ” ಎಂದು ಒಂದೇ ಉಸಿರಲ್ಲಿ ಅಬ್ಬರಿಸಿ ಕಾಲ್ ಕಟ್ ಮಾಡಿದ್ದಳು. ಪರಿಸ್ಥಿತಿ ಇಷ್ಟು ಗಂಭೀರವಾಗಿರಬಹುದೆಂಬ ಅರಿವಾಗಿರಲಿಲ್ಲ. ಕಳೆದೆರಡು ದಿನಗಳಿಂದ ಶೂಟಿಂಗ್ ಸ್ಪಾಟಿಗೆ ಹೋಗೋದು, ರಾತ್ರಿ ತಡವಾಗಿ ಮನೆಗೆ ಬಂದು ಮಲಗೋದೇ ಆಗಿತ್ತು. ಯಾವ ಕರೆ, ಮೇಸೇಜ್ ನೋಡಿರಲಿಲ್ಲ. ಇವತ್ತು ನೋಡಿದರೆ ಅಪ್ಪ, ಮಹೇಶ, ಪುರು ಮೂವರ ಮೊಬೈಲುಗಳಿಂದ ರಾಶಿಗಟ್ಟಲೆ ಕರೆಗಳು ಬಂದಿವೆ. ... ಗಾಭರಿಯಿಂದ ಕೈಕಾಲು ನಡುಗಲು ಆರಂಭವಾಗಿತ್ತು. ಅಪ್ಪನಿಗೆ ಕರೆ ಮಾಡಿದರೆ, “ಒಂದ್ಸಲ ಬಂದು ಹೋಗು ಮಂದಾ, ಚಿಕ್ಕಿ ನಿನ್ನನ್ನೇ ನೆನೆಸಿಕೊಳ್ಳುತ್ತಿದ್ದಾಳೆ” ಎಂದರು. ಇದ್ದಕ್ಕಿದ್ದಂತೆ ತಲೆಯಲ್ಲಿ ವಿಚಿತ್ರ ಸೆಳೆತ, ಅಲೆಗಳ ಅಬ್ಬರ ಮತ್ತು ಕಿವಿಯಲ್ಲಿ ಸಮುದ್ರದ ಘೋಷ...ಒಂಥರಾ ನಿರ್ವೇದದ ಸ್ಥಿತಿ. ಕಳೆದುಕೊಳ್ಳೋದು ಅನ್ನೋದು ಹೀಗಿರುತ್ತಾ ಎಂದು ಮೊದಲ ಬಾರಿಗೆ ಅನಿಸಿತು. ಅದು ಹೇಗೆ ಮನೆಗೆ ಬಂದು, ಕೈ ಸಿಕ್ಕಿದ್ದನ್ನು ತುರುಕಿ, ಬಸ್ಸಿನ ಆಫೀಸಿಗೆ ಕರೆ ಮಾಡಿ, ಸೀಟು ಬುಕ್ ಮಾಡಿ, ಮನೆಯಲ್ಲಿ ಇದ್ದಿದ್ದನ್ನು ತಿಂದ ಶಾಸ್ತ್ರ ಮಾಡಿ ಬಸ್ಸು ಹತ್ತಿ ಕೂತೆನೋ ನೆನಪಿಲ್ಲ. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಕಿಟಕಿಯಿಂದ ಹೊರಗೆ ಓಡುತ್ತಿರುವ ದೃಶ್ಯಗಳಂತೆ ಮನಸ್ಸಲ್ಲೂ ನೆನಪುಗಳು ಓಡುತ್ತಿದ್ದವು.</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
<br /></div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಬಾಲ್ಯದಲ್ಲಿ, ಅಮ್ಮನಾದರೂ ಒಂದೆರಡು ಸಲ ಬೈದಿದ್ದು, ಕೈಯೆತ್ತಿದ್ದು ನೆನಪಿದೆ, ಚಿಕ್ಕಿ ಗದರಿದ್ದೂ ನೆನಪಿಲ್ಲ. ಇಡೀ ಕುಟುಂಬಕ್ಕೆ ಒಬ್ಬಳೇ ಹುಡುಗಿಯೆಂದು, ಮಹೇಶ, ಪುರು, ಬಾಲು ಯಾರಿಗೂ ಸಿಗದಷ್ಟು ಪ್ರೀತಿ ತನಗೇ ಸಿಕ್ಕಿತ್ತು. ಮನೆಯಿಂದ ಮಾರು ದೂರ ನಡೆದು, ಗದ್ದೆ, ಅಡಕೆ ತೋಟ ದಾಟಿ ಹೋಗಬೇಕಿತ್ತು ಶಾಲೆಗೆ ಬಸ್ಸು ಹತ್ತಲು. ಅಷ್ಟೂ ದೂರ ದಿನಕ್ಕೆರಡು ಸಲ ನನ್ನ ಕಿರುಬೆರಳನ್ನು ತನ್ನ ಕಿರುಬೆರಳಲ್ಲಿ ಹಿಡಿದು ದಾರಿಯುದ್ದಕ್ಕೂ ಹರಟಿಕೊಂಡು, ನಗು ನಗುತ್ತಲೇ ಬರುತ್ತಿದ್ದಳಲ್ಲ ಚಿಕ್ಕಿ? ಗದ್ದೆ ಕೆಲಸದ ಆಳುಗಳ ಬೆಳಗ್ಗಿನ ಚಾ, ತಿಂಡಿಯಲ್ಲದೇ ನಾಲ್ಕೂ ಮಕ್ಕಳನ್ನು ಶಾಲೆಗೆ ರೆಡಿ ಮಾಡುವ ಕೆಲಸಗಳನ್ನು ಅಮ್ಮ, ಚಿಕ್ಕಿ ಇಬ್ಬರೂ ಮಾಡಬೇಕಿತ್ತು. ಆದರೆ ಚಿಕ್ಕಿಯೇ ಜಾಸ್ತಿ ಮಾಡುತ್ತಿದ್ದಿದ್ದು. ಅದರ ಮಧ್ಯದಲ್ಲೂ ತನ್ನ ಜಡೆ ಹಾಕಲು ಅದು ಹೇಗೆ ಸಮಯ ತೆಗೆಯುತ್ತಿದ್ದಳೋ? ಅವಳು ಹೇಗೆ ಬಾಚಿದರೂ “ಚಿಕ್ಕಿ, ಬಿಗಿ ಆಗ್ತಿಲ್ಲ, ಒಳ್ಳೆ ಕಪ್ಪೆ ಥರ ಬಾಚ್ತಿ, ಇವತ್ತು ಎಣ್ಣೆನೇ ಹೋಗಿಲ್ಲ, ನಾನು ಹೋಗಲ್ಲ ಶಾಲೆಗೆ” ಎಂದೆಲ್ಲಾ ಜೀವ ತಿಂದರೂ ಅವಳು ಸಿಟ್ಟು ಮಾಡಿಕೊಳ್ಳದೇ, ಸಮಾಧಾನಿಸಿ, ಮುದ್ದುಗರೆದು, ಸಂಜೆಗೆ ಸುಟ್ಟ ಗೇರುಬೀಜವೊ, ಬೆಣ್ಣೆಯೋ, ಸಿಹಿಗುಂಬಳ ಹೂವಿನ ಪೋಡಿಯೋ, ಎಳನೀರಿನತಿಳಿ ಗಂಜಿಯೋ ಕೊಡುತ್ತೇನೆ ಎಂದು ಆಮಿಷವೊಡ್ಡಿ ಕಳಿಸುತ್ತಿದ್ದಳು. ಶಾಲೆಗೆ ರಜೆಯಿದ್ದಾಗಲಂತೂ ಅವಳ ಶಯ್ಯಾಗೃಹದಲ್ಲೇ ತನ್ನ ವಾಸ.</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
<br /></div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಒಂಚೂರು ಪುರುಸೊತ್ತು ಸಿಕ್ಕಾಗಲೋ ಅಥವಾ ಬತ್ತಿ ಹೊಸೆಯುತ್ತಾ, ಹೂವು ಕಟ್ಟುತ್ತಾ, ಅವಳು ಹೇಳುತ್ತಿದ್ದ ಕಥೆಗಳಿಂದಲೇ ಅಲ್ಲವೇ, ನನಗೆ ಓದೋ ಅಭ್ಯಾಸ ಶುರುವಾಗಿದ್ದು? ಡಿಂಗ, ಚಂದಮಾಮ, ಬಾಲಮಿತ್ರ, ತುಷಾರ, ತರಂಗ, ಕಸ್ತೂರಿ ಇದೆಲ್ಲವನ್ನೂ ಪಕ್ಕದ ತೋಟದ ಬಾಬಣ್ಣ ಮೇಷ್ಟ್ರಿಗೆ ಹೇಳಿ ತರಿಸಿಡುತ್ತಿದ್ದಳು. ಅವಳ ಹತ್ತಿರ ಇದ್ದಿದ್ದ</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ರಷ್ಯಾ ದೇಶದ ಕಥೆಗಳು, ಮಾಷಾಳ ಹಾಸಿಗೆ, ಟಾಲ್ಸ್ಟಾಯ್ ಕಥೆಗಳು ಎಲ್ಲವನ್ನೂ ಅದೆಷ್ಟು ಸಲ ಕೂತು ನನಗಾಗಿ ಓದುತ್ತಿದ್ದಳು. ಅದೆಲ್ಲಿಂದ ತಂದು ಪೇರಿಸಿಟ್ಟಿದ್ದಳೋ ಗೊತ್ತಿಲ್ಲ, ಬೆಳೆಯುತ್ತಾ ಹೋದಂತೆಲ್ಲಾ ಮುಚ್ಚಿಟ್ಟಿದ್ದ ಅದೆಷ್ಟು ಕಾದಂಬರಿಗಳು, ಕಥಾ ಸಂಕಲನಗಳು, ಕಾವ್ಯ ಸಂಪುಟಗಳು ಎಲ್ಲವೂ ಹೊರಬರುತ್ತಾ ಹೋದವು. ಈ ವಯಸ್ಸಿಗೆ ಇದೇ ಓದಬೇಕು ಎಂದು ಮೊದಲೇ ನಿರ್ಧಾರ ಮಾಡಿಟ್ಟವಳಂತೆ ನಾಲ್ಕೂ ಮಕ್ಕಳಿಗೂ ಓದಿನ ಹುಚ್ಚು ಹತ್ತಿಸಹೊರಟಳು. ಆದರೂ ತನ್ನಂತೆ ಯಾರೂ ಆಗಲಿಲ್ಲ. ಅವಳ ಮೆಲುದನಿಯಲ್ಲಿ ಕೇಳಿದ ಮೈಸೂರು ಮಲ್ಲಿಗೆ ಮತ್ತೆಂದೂ ಅಷ್ಟು ಸಿಹಿಯೆನಿಸಲಿಲ್ಲ. ಡಿಗ್ರಿ ಮಾಡಿ ತಾನಿವತ್ತು ಚಾನೆಲ್ ಒಂದರಲ್ಲಿ ಧಾರಾವಾಹಿಗಳಿಗೆ ಕಥೆ ಬರೆದು ನನ್ನ ಕಾಲ ಮೇಲೆ ನಿಂತಿದ್ದೀನಿ ಎಂದರೆ ಅವಳು ಕಲಿಸಿದ ಓದಿನಿಂದಲೇ ಅಲ್ಲವೇ?</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
<br /></div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಬೆಳೆಯುತ್ತ ಬುದ್ಧಿ ಪಕ್ವವಾದಂತೆಲ್ಲಾ, ಡಿಗ್ರಿ ಮಾಡಿದ್ದವಳು ನಾಲ್ಕನೇ ಪಾಸ್ ಆದ ಮಾಧೂ ಚಿಕ್ಕಪ್ಪನನ್ನ ಹೇಗೆ ಮದುವೆಯಾದಳು ಎಂದು ಅದೆಷ್ಟು ಸಲ ಅಂದುಕೊಂಡಿದ್ದೇನೋ... ಕೇಳಿದಾಗೆಲ್ಲಾ “ಅವರಷ್ಟು ಒಳ್ಳೆಯವರು ಯಾರೂ ಸಿಗಲಿಲ್ಲ ಮಂದಾ” ಎಂದು ಕಣ್ಣಲ್ಲಿ ಹೊಳಪು ತುಳುಕಿಸುತ್ತಾ ಹೇಳುತ್ತಿದ್ದಳು. ಗದ್ದೆ, ತೋಟದ ಉಸ್ತುವಾರಿ, ಬೆಳೆ ಮಾರಾಟ, ಔಷಧಿ ಹೊಡೆಸೋದು, ಮುಡಿ ಅಕ್ಕಿ ಕಟ್ಟೋದು, ಆಳುಗಳಿಗೆ ಸಂಬಳ, ಅವರಿಂದ ಕೆಲಸ ತೆಗೆಸೋದು, ಹಬ್ಬ ಬಂದಾಗ ಇಡೀ ಮನೆಗೆ ಬಟ್ಟೆ ತರೋದು ಹೀಗೆ ಎಲ್ಲಾ ಕೆಲಸ ಮಾಡುತ್ತಿದ್ದ ತೀರಾ ತೀಕ್ಷ್ಣಮತಿ ಸೂಪರ್ ಮ್ಯಾನ್ ಅಪ್ಪನನ್ನು ನೋಡಿ ಸದಾ ಮಕ್ಕಳಂತೆ ನಿಷ್ಕಲ್ಮಶ ನಗು ಬೀರುವ, ಸುಮ್ಮಗೆ ಕೂತು ಹಾಡುವ, ಪುಟ್ಟ ಮಕ್ಕಳೊಡನೆ ಆಡುವ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಕೂರುವ ಚಿಕ್ಕಪ್ಪನನ್ನು ನೋಡಿದರೆ ಆಶ್ಚರ್ಯವಾಗುತ್ತಿತ್ತು. ಕಿತ್ತಳೆ ತೊಳೆ ಬಿಡಿಸುವುದಲ್ಲದೆ ಒಳಗಿನ ತಿಳಿ ಸಿಪ್ಪೆಯನ್ನೂ ಬಿಡಿಸಿ ತಿನ್ನುವ ಅಭ್ಯಾಸವನ್ನು ಹಾಕಿಕೊಟ್ಟಿದ್ದು ಚಿಕ್ಕಪ್ಪನೇ, ಇಂದಿಗೂ ತೊಳೆ ಬಿಡಿಸುವಾಗೆಲ್ಲಾ ಅವರದ್ದೇ ನೆನಪು. ಬಾಬಣ್ಣ ಮಾಷ್ಟ್ರು, ಹತ್ತಿರದಲ್ಲೆಲ್ಲಾದರೂ ಆಟವೋ, ಜಾತ್ರೆಯೋ ಇದ್ದರೆ ಮಾಧೂ ಚಿಕ್ಕಪ್ಪನನ್ನು ಕರ್ಕೊಂಡು ಹೋಗುತ್ತಿದ್ದರು. ಹಾಗೆ ಹೋದಾಗೆಲ್ಲಾ ನಾಲ್ಕೂ ಮಕ್ಕಳಿಗೂ, ಚಿಕ್ಕಿಗೂ ಕಡ್ಡಾಯವಾಗಿ ನಿಂಬೆ - ಕಿತ್ತಳೆ ಪೆಪ್ಪರ್ ಮಿಂಟು, ಕಡ್ಲೆ ಮಿಠಾಯಿ ಮತ್ತೆ ಶೇಂಗಾ ತಪ್ಪದೆ ತರುತ್ತಿದ್ದರು. ಅವರ ಸುತ್ತಾ ಕೂತ ತಿಂದ ನೆನಪು ನೂರೂ ಜನ್ಮಕ್ಕೂ ಮಾಸುವುದಿಲ್ಲ. ಅಪ್ಪ-ಅಮ್ಮ ಜೊತೆ ಕೂತು ಹರಟಿದ್ದೇ ನೋಡಿದ ನೆನಪಿಲ್ಲ, ಆದರೆ ಚಿಕ್ಕಿ ಮತ್ತು ಚಿಕ್ಕಪ್ಪ ಹಾಗಲ್ಲ, ಸದಾ ಜೊತೆಗಿರುತ್ತಿದ್ದರು, ಬೆಣ್ಣೆ ಕಡೆಯುವಾಗ, ಹೂ ಕಟ್ಟುವಾಗ, ಹಾಲು ಕರೆಯುವಾಗ, ಕೆರೆ ದಂಡೆಗೆ ಬಟ್ಟೆ ಒಗೆಯಲು ಹೋದಾಗ, ಹಪ್ಪಳ, ಉಪ್ಪಿನಕಾಯಿ ಹಾಕುವಾಗ...ಅವರೂ ಇದ್ದೇ ಇರುತ್ತಿದ್ದರು ಅವಳ ಸುತ್ತ. ಅವಳಿಗಾಗಿ ಎಲ್ಲಿಲ್ಲೆಯೋ ಹುಡುಕಿ ಸುಗಂಧಿ ಹೂ ತರುತ್ತಿದ್ದರು. ಆ ಹೂವು ಮುಡಿಯುವಾಗ ಅವಳ ಮುಖ ನೋಡಲು ಕಾದು ಕುಳಿತಿರುತ್ತಿದ್ದೆ. ಅವಳ ಮುಖದ ಸಂತೃಪ್ತ ನಗು ತನ್ನಲ್ಲೂ ಸಮಾಧಾನದ ಅಲೆಯೊಂದನ್ನು ಹೊತ್ತು ತರುತ್ತಿತ್ತಲ್ಲ? ಆದರೆ ೨೪ ಘಂಟೆ ವಟಗುಟ್ಟುತ್ತಲೇ ಇರುವ ಅಜ್ಜಿಗಂತೂ ತನ್ನ ಎರಡನೇ ಮಗ, ಅವನ ಹೆಂಡತಿ, ಮಕ್ಕಳು ಯಾರನ್ನೂ ಕಂಡರಾಗುತ್ತಿರಲಿಲ್ಲ. ಕಾಲೇಜು ಮೆಟ್ಟಿಲು ಹತ್ತಿದಾಗಲೂ ಅಮ್ಮನಿಗಿಂತ ಮೊದಲು ಅವಳೇ ಆಪ್ತ ಗೆಳತಿ, ನಾವಿಬ್ಬರು ಚರ್ಚಿಸದ ವಿಷಯಗಳಿಲ್ಲ. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
<br /></div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಸರಿದಿದ್ದ ಕರ್ಟನಿನಿಂದ ಮುಖದ ಮೇಲೆ ಬೆಳಕು ಬಿದ್ದಂತಾಗಿ ಕಣ್ಣು ತೆರೆಯುವಷ್ಟರಲ್ಲಿ ಸಕಲೇಶಪುರ ಬಸ್ ಸ್ಟಾಂಡಿನಲ್ಲಿ ನಿಂತಿತು ಬಸ್ಸು. ಇಳಿದು ಒಂದರೆಗಳಿಗೆ ಹೊರಗಿನ ತಣ್ಣನೆ ಗಾಳಿ ಹೀರಿ, ಅಂಗಡಿಗೆ ಹೋಗಿ ಎರಡು ಬಾಳೆ ಹಣ್ಣುಗಳನ್ನು ತಂದು ಮತ್ತೆ ಬಂದು ಸೀಟಲ್ಲಿ ಕೂರುವಾಗ ಪಕ್ಕದ ಸೀಟಿನ ಮಹಿಳೆ ಮುಜುಗರದಿಂದ ’ಒಂಚೂರು ಟಾಯ್ಲೆಟ್ ಹೋಗಬೇಕಮ್ಮ, ಬರ್ತೀಯಾ? ನಂಗೆ ವಾಪಾಸು ಬಂದು ಹತ್ತೋಕೆ ಗೊತ್ತಾಗಲ್ಲ’ ಎಂದರು. ಕರಕೊಂಡು ಹೋಗಿ ಬಂದು ಕೂತುಕೊಳ್ಳಿಸುವಾಗ ಕೈ ಹಿಡಿದು ನೇವರಿಸಿ ’ದೇವರು ಒಳ್ಳೇದು ಮಾಡ್ಲಮ್ಮಾ’ಎಂದರು.</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಆ ನೇವರಿಕೆಗೆ ಮತ್ತೆ ಚಿಕ್ಕಿಯ ನೆನಪು, ಅದೆಲ್ಲಿ ಶುರುವಾಯಿತು ಎಲ್ಲವೂ ಎಂಬ ಯೋಚನೆ... </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಮೂರು ವರ್ಷದ ಹಿಂದೆ ದೀಪಾವಳಿಗೆ ನಾಲ್ಕು ದಿನ ಇರುವಾಗಲ್ಲಲ್ಲವೇ? </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಪ್ರತೀ ವರ್ಷ ಎಲ್ಲಾ ಆಳುಮಕ್ಕಳಿಗೂ ಹೊಸಬಟ್ಟೆಯೊಡನೆ ಚಕ್ಕುಲಿ, ಉಂಡೆ, ಬೆಲ್ಲ ಹಾಕಿದ ಅವಲಕ್ಕಿ ಕೈ ತುಂಬಾ ಕೊಡುವುದಲ್ಲದೆ ಸಾಂಬಾರು, ಹುಳಿ, ಕೊದ್ದೆಲ್, ಸಾರು, ಪಾಯಸದ ಊಟ ಹಾಕುವುದು ಮನೆಯ ಸಂಪ್ರದಾಯ. ಯಾವಾಗಲೂ ಅಡುಗೆಗೆ ಸಹಾಯ ಮಾಡಲು ಬರುವ ರಾಧಕ್ಕ ಆ ಸಲ ಬೆಂಗಳೂರಿನಲ್ಲಿ ಬಾಣಂತಿ ಸೊಸೆಯೊಂದಿಗೆ ಇರಲು ಹೋಗಿದ್ದರು. ಮೆನೋಪಾಸ್ ಹಂತದಲ್ಲಿರುವ ಅಮ್ಮ, ಚಿಕ್ಕಿ ಇಬ್ಬರಿಗೂ ಅವರದ್ದೇ ರಾಶಿ ತೊಂದರೆಗಳಿದ್ದವು. ’ಈ ಸಲ ಹೊಸಬಟ್ಟೆ ಮತ್ತೆ ಒಂದಿಷ್ಟು ದುಡ್ಡು ಕೊಡೋಣ ಎಲ್ಲರಿಗೂ’ ಅಂದಿದ್ದೇ ಚಿಕ್ಕಿಯ ಮಹಾಪರಾಧ. ಸದಾ ಅದು ಮಾಡು ಇದು ಮಾಡು ಎಂದು ಮಾಡಿಸಿಕೊಂಡು ಕೂತು ತಿನ್ನುವ ಅಜ್ಜಿಗೆ ಪಿತ್ತ ನೆತ್ತಿಗೇರಿತ್ತು. ಅಲ್ಲಿಂದ ಮಾತು ಮಾತು ಬೆಳೆದು ಅಜ್ಜಿ, ಚಿಕ್ಕಿಯ ಎಂದೂ ಬಾರದ ಮನೆಯವರನ್ನೆಲ್ಲಾ, ಅವರ ಬಡತನವನ್ನೆಲ್ಲ ಎತ್ತಿ ಆಡಿದ್ದಲ್ಲದೆ, ದೇವರಿಗೆ ಕೈ ಮುಗಿದು ಗೊತ್ತಿಲ್ಲ, ಅದಕ್ಕೇ ಮದುವೆಯಾಗಿ ಕಾಲಿಟ್ಟ ನಾಲ್ಕು ವರ್ಷಕ್ಕೇ ತನ್ನ ಮಗ ಹಾಳಾದ ಎಂದೆಲ್ಲಾ ದೂರಿದರು. ಬೊಬ್ಬೆ ಕೇಳಿದ ಮಾಧೂ ಚಿಕ್ಕಪ್ಪ ಹೆದರಿ ಮೂಲೆ ಹಿಡಿದು ಪಿಳಿಪಿಳಿ ಕಣ್ಣು ಬಿಡುತ್ತಿದ್ದರು. ಅಮ್ಮ ಏನು ಮಾತನಾಡಿದರೂ ಪ್ರಯೋಜನವಾಗಲಿಲ್ಲ. ತೋಟದಿಂದ ಬಾಳೆ ಎಲೆ, ಗೊನೆ ಹಿಡಿದು ಅಪ್ಪ ಬರುವಷ್ಟರಲ್ಲಿ ಮನೆ ರಣರಂಗವಾಗಿತ್ತು. ಎಂದೂ ಸಿಟ್ಟಿಗೇಳದ ಚಿಕ್ಕಿ ಅಂದು ರೌದ್ರವಾತಾರ ತಾಳಿದ್ದಳು. ಅವಳಿಗೂ ಬಹುಶಃ ಹಾರ್ಮೋನ್ಸ್ ಹೆಚ್ಚು ಕಡಿಮೆಯಾಗಿರಬೇಕು. ಅಪ್ಪ ಬಂದಾಗ, “ ಭಾವ, ನಾನು ಏನಾದರೂ ಈ ಮನೆಗೆ ಕಡಿಮೆ ಮಾಡಿದ್ರೆ, ನಿಮ್ಮ ತಮ್ಮನನ್ನು ಚೆನ್ನಾಗಿ ನೋಡಿಕೊಂಡಿಲ್ಲ, ನನ್ನ ತಪ್ಪಿಗೆ ನಾನು ಬೆಲೆ ತೆರುತ್ತಿಲ್ಲ ಅಂತ ನಿಮಗೂ ಅಕ್ಕನಿಗೂ ಅನಿಸಿದ್ರೆ ನಾನೀ ಮನೆ ಬಿಟ್ಟು ಹೋಗುತ್ತೇನೆ” ಎಂದು ಅದೆಷ್ಟು ಸ್ಪಷ್ಟವಾಗಿ ಹೇಳಿದಳಲ್ಲ. ಎಂದೂ ಹೆಚ್ಚು ಭಾವನೆಗಳನ್ನು ತೋರಿಸದ ಅಪ್ಪ ಕೂಡಾ, ಮೊದಲ ಬಾರಿಗೆ, ಚಿಕ್ಕಿ ತಲೆ ಸವರಿ “ ಸುನಂದಾ, ನಿನ್ನದೇನೂ ತಪ್ಪಿಲ್ಲಮ್ಮ...ನಮ್ಮಿಬ್ಬರಿಗೂ ನೀನು ಬೇಕು, ನೋಡು ಲಕ್ಷ್ಮಿಯೂ ನಿನ್ನ ಬಿಟ್ಟಿರಲ್ಲ, ಇನ್ನೊಂದು ಸಲ ಹೋಗೋ ಮಾತಾಡಬೇಡ, ಮಂದಾರಳನ್ನು ಬಿಟ್ಟು ಹೋಗ್ತಿಯಾ?” ಎಂದು ಕೇಳಿದರು. ಅಜ್ಜಿಯ ಕಡೆಗೊಮ್ಮೆ ತೀವ್ರವಾಗಿ ನೋಡಿ “ಅಮ್ಮ, ಕಿಟ್ಟಿ ಮನೆಗೆ ಬಿಟ್ಟು ಬರ್ಲಾ? ಇಲ್ಲೇ ಬಾಯಿ ಮುಚ್ಚಿಕೊಂಡು ಇರ್ತೀಯಾ?” ಅಂದಿದ್ದಷ್ಟೇ, ಅಜ್ಜಿಯ ಬಾಯಿಗೆ ಬೀಗ ಬಿತ್ತು. ಆ ಸಲ ದೀಪಾವಳಿಗೆ ಕೆಲಸದವರಿಗೆಲ್ಲಾ ಹೊಸಬಟ್ಟೆ ಮತ್ತು ದುಡ್ಡು ಕೊಟ್ಟಿದ್ದಾಯ್ತು. ಅಮ್ಮ, ಚಿಕ್ಕಿ ಇಬ್ಬರೂ ನಮ್ಮೊಂದಿಗೆ ಮೊದಲನೇ ಸಲ ಮತಾಪು ಹಚ್ಚಿದ್ದು. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
<br /></div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಇದ್ದಕ್ಕಿದ್ದ ಹಾಗೆ ಅದ್ಯಾವ ಭೂತ ಹೊಕ್ಕಿತೋ ನನ್ನ ಮೈಯಲ್ಲಿ? ನನಗೆ ಸೇರಿದ ನನ್ನ ಚಿಕ್ಕಿ ಮಾಡಿದ ತಪ್ಪು ಯಾವುದು, ಅದನ್ನ್ಯಾಕೆ ನನಗೆ ಹೇಳಬಾರದು ಎಂದು ತಿಳಿಯುವ ಸಾಹಸ ಯಾಕಾದರೂ ಮಾಡಿದೆನೋ... ಅಮ್ಮನನ್ನು ಅದೆಷ್ಟು ಕಾಡಿಸಿದರೂ ಅಚಲ ಬಂಡೆಯಂತೆ ನಿಂತುಬಿಟ್ಟಳು, ಬಾಯೇ ಬಿಡಲಿಲ್ಲ. ಅಪ್ಪನನ್ನು ಕೇಳೋ ಧೈರ್ಯವಿಲ್ಲ್ಲ. ಆಳುಕಾಳುಗಳ ಹತ್ತಿರ ಕೇಳಲಾಗುವುದಿಲ್ಲ. ಕೆಟ್ಟ ಗಳಿಗೆಯಲ್ಲಿ ಯಾಕಾದರೂ ಬೆಟ್ಟು ಗದ್ದೆಯ ಪಾತಜ್ಜಿಯ ಬಳಿ ಹೋದೆನೋ...</div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಪಾತಜ್ಜಿ ಹೇಳಿದ್ದಿಷ್ಟು, ಮದುವೆ ಮಂಟಪಕ್ಕೆ ಚಿಕ್ಕಿ ಬರುವಾಗಲೇ ೫ ತಿಂಗಳ ಗರ್ಭಿಣಿಯಾಗಿದ್ದಳು. ಆವಾಗಲೇ ಅಜ್ಜಿ ಮದುವೆ ಬೇಡವೆಂದು ಗಲಾಟೆ ಮಾಡಿದರೂ ಮಾಧೂ ಚಿಕ್ಕಪ್ಪ ಇವಳಲ್ಲದಿದ್ದರೆ ನಾನು ಬೇರೆ ಮದುವೆಯೇ ಆಗುವುದಿಲ್ಲ ಎಂದು ಹಠ ಹಿಡಿದಿದ್ದರು. ಚಿಕ್ಕಿ ಮನೆಗೆ ಬಂದ ನಾಲ್ಕು ತಿಂಗಳಿಗೆಲ್ಲಾ ಮಹೇಶ ಹುಟ್ಟಿದ್ದ. ಊರಿಡೀ ಸುದ್ದಿಯಾಗಿದ್ದರೂ, ಚಿಕ್ಕಿ ಮನೆಯವರಾರೂ ತಲೆ ಹಾಕದಿದ್ದರೂ ಚಿಕ್ಕಪ್ಪ, ಅಪ್ಪ, ಅಮ್ಮ ಚಿಕ್ಕಿಯ ಕೈ ಬಿಟ್ಟಿರಲಿಲ್ಲ. ನಿಮ್ಮ ಮನೆಯವರೆಲ್ಲಾ ದೇವರಂತೆ ಎಂದಿದ್ದರು ಪಾತಜ್ಜಿ. ಅದಾಗಿ ಮೂರೂವರೆ ವರ್ಷದಲ್ಲೇ ಜ್ವರ ಬಂದಿದ್ದು ಇಳಿಯದೇ ಸನ್ನಿಪಾತವಾಗಿ ಚಿಕ್ಕಪ್ಪ ಹಾಗಾಗಿದ್ದರು. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ನನ್ನ ಚಿಕ್ಕಿ ಮೋಸ ಮಾಡಿದಳು ನನಗೆ ಅನ್ನುವ ಪಿಶಾಚಿ ನನ್ನ ಹೆಗಲೇರಿತ್ತು. ಹುಚ್ಚು ಹಿಡಿದಂತೆ ಮಾಡಿದ್ದೆ. ಅವಳನ್ನು ನೋಡುವುದೂ, ಮುಟ್ಟುವುದೂ ಅಸಹ್ಯ ಅನಿಸಿತ್ತು. ಪಾಪದ ಚಿಕ್ಕಪ್ಪ ಅವಳನ್ನೆಷ್ಟು ಪ್ರೀತಿಸುತ್ತಾರೆ.. ಅದಕ್ಕೆ ಅಜ್ಜಿ ಹಾಗಾಡುವುದು ಅವಳನ್ನು ಕಂಡರೆ...ಈ ಅಪ್ಪ ಅಮ್ಮನಿಗೆ ಬುದ್ಧಿ ಇಲ್ಲ. ಕೆಲಸ ಮಾಡಿ ಅವರ ಅನುಕಂಪ ಗಳಿಸಿದ್ದಾಳೆ ಎಂದೆಲ್ಲಾ ಅನಿಸಿತ್ತು. ಆ ಮನೆಯಲ್ಲಿ ಅವಳನ್ನು ನೋಡುವುದು, ಮಾತನಾಡುವುದು ಕೊನೆಗೆ ಮಹೇಶನನ್ನು ನೋಡುವುದೆ ಹಿಂಸೆ ಎನಿಸತೊಡಗಿತ್ತು. ದಿನೇ ದಿನೇ ಕಂದರ ದೊಡ್ಡದಾಗತೊಡಗಿತ್ತು. ಅಮ್ಮ, ಚಿಕ್ಕಿಗೆ ನನಗೇನಾಗಿತ್ತು ಎಂಬುದರ ಅರಿವೇ ಇರಲಿಲ್ಲ. ಅವಳು ಹತ್ತಿರ ಬಂದಾಗೆಲ್ಲಾ ನೋಯಿಸಿ ವಿಚಿತ್ರ ಖುಷಿಪಡುತ್ತಿದ್ದೆ. ಅವಳ ನಗು ಮೆಲ್ಲನೆ ಮಾಯವಾಗತೊಡಗಿತ್ತು. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಅದೇ ಸಮಯದಲ್ಲಿ ಊರಿಗೆ ಬಂದ ಬಾಬಣ್ಣ ಮಾಷ್ಟ್ರ ಮಗ ಪ್ರವೀಣನ ಮೂಲಕ ಚಾನೆಲ್ ಒಂದರಲ್ಲಿ ಕೆಲಸ ಹಿಡಿದು ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ಆನಂತರದ ಯಾವ ದೀಪಾವಳಿ, ಯುಗಾದಿ, ಚೌತಿ ಯಾವುದಕ್ಕೂ ಊರಿಗೆ ಹೋಗಲೇ ಇಲ್ಲ. ಅಮ್ಮ, ಅಪ್ಪ, ಚಿಕ್ಕಿ ಮೂವರ ಮೇಲೆ ದ್ವೇಷ ತೀರಿಸುವಂತೆ ಹುಚ್ಚು ಹಿಡಿದಂತೆ ಕೆಲಸದಲ್ಲಿ ಮುಳುಗೇಳುತ್ತಿದ್ದೆ. ಅಪ್ಪ, ಅಮ್ಮನೊಂದಿಗೆ ಮಾತುಕಥೆ ಎಷ್ಟೋ ಬೇಕೋ ಅಷ್ಟು. ಚಿಕ್ಕಿಯೊಂದಿಗೆ ಮಾತಾಡು ಎಂದಾಗೆಲ್ಲಾ ಕೆಲಸವಿದೆ, ನೆಟ್ವರ್ಕ್ ಇಲ್ಲ, ಚಾರ್ಜ್ ಇಲ್ಲಾ ಎಂಬ ನೆಪಗಳು. ಯಾವಾಗ್ಯಾವಾಗ ಅಪ್ಪ, ಮಹೇಶ ಬರಲಿಚ್ಚಿಸಿದರೊ ನಾನು ಮುಂಬೈಗೆ, ಪೂನಾಕ್ಕೆ ಹೋಗೋಕ್ಕಿದೆ ಕೆಲಸದ ಮೇಲೆ ಎಂದು ಸುಳ್ಳು ಕಥೆ ಕಟ್ಟಿದೆ. ಅಮ್ಮನಿಗೆ ಸಂಶಯ ಹುಟ್ಟಿ ಒಂದಲ್ಲ ಸಾವಿರ ಸಲ ಕೇಳಿದ್ದಳು, ಯಾಕೆ ಚಿಕ್ಕಿಯ ಹತ್ತಿರ ಮಾತಾಡ್ತಿಲ್ಲ ಅಂತ. ಅವಳು ಮಾತು ಮುಂದುವರಿಸೋ ಮೊದಲು ಅಯ್ಯೋ, ಹೋಗಮ್ಮ ನಿಂದಿದ್ದೇ, ನಂಗೆ ಟೈಮ್ ಇಲ್ಲ ಎಂದು ಕಾಲ್ ಕಟ್ ಮಾಡುತ್ತಿದ್ದೆಲ್ಲಾಅದರವಳು ಕರೆ ಮಾಡಿದಾಗೆಲ್ಲಾ ಚಿಕ್ಕಿಗೆ ಹುಷಾರಿಲ್ಲ, ದಿನೇ ದಿನೇ ಸವೆಯುತ್ತಾ ಹೋಗುತ್ತಿದ್ದಾಳೆ ಅಂತಾನೇ ಹೇಳುತ್ತಿದ್ದಳು. ಅದನ್ನ ಕೇಳದವಳ ಹಾಗೆ ಸುಮ್ಮನಿದ್ದು ಬಿಡುತ್ತಿದ್ದೆ. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಒಂದಾ!ಎರಡಾ? ಛೆ! ಎಷ್ಟು ಕಹಿಯಾಗಿ ಹೋದೆನಲ್ಲಾ ನಾನು. ಮಹೇಶನ ಬಗ್ಗೆಯಂತೂ ಏನೆಲ್ಲಾ ಯೋಚಿಸಿದೆ? ಅದು ಹೇಗೆ ಇಷ್ಟೆಲ್ಲಾ ಓದಿ ತಿಳಿದುಕೊಂಡೂ ಇಷ್ಟು ಕೇವಲವಾಗಿ ವರ್ತಿಸಿದೆ? ಅವಳ ಋಣದ ಜೀವನವಿದು, ಅವಳನ್ನೇ ಕಿತ್ತು ಬಿಸಾಡಿದೆನಲ್ಲ? ನನ್ನಷ್ಟು ವಿದ್ಯೆ, ಓದಿರದಿದ್ದರೂ ಅಪ್ಪ, ಅಮ್ಮ, ಚಿಕ್ಕಪ್ಪರಿಗೆ ಇದ್ದಷ್ಟು ಬುದ್ಧಿ ನಂಗಿಲ್ಲದೆ ಹೋಯಿತಲ್ಲ? ಇಲ್ಲ, ನನ್ನ ಚಿಕ್ಕಿ ಸರಿಯಾಗ್ತಾಳೆ, ಅವಳನ್ನು ಇನ್ನೆಂದೂ ನೋಯಿಸುವುದಿಲ್ಲ ಎಂದುಕೊಂಡೆ. ನನಗಾಗಿ ಅವಳನ್ನು ಉಳಿಸು ಎಂದು ದೇವರಲ್ಲಿ ಬೇಡಿಕೊಂಡೆ. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಈ ಯೋಚನೆಗಳಲ್ಲೇ ಊರು ಮುಟ್ಟಿದಾಗ, ಅರೆಬರೆ ಕತ್ತಲಲ್ಲಿ ಹೈವೇ ಹತ್ತಿರ ಕಾಯುತ್ತಾ ನಿಂತಿದ್ದರು ಪುರು, ಬಾಲು ಇಬ್ಬರೂ. ಇಬ್ಬರೂ ನನಗಿಂತ ಉದ್ದವಾಗಿದ್ದರು. ನೋಡಿದ ಕೂಡಲೇ ಖುಷಿಯಲ್ಲಿ ನಕ್ಕವರು “ಚಿಕ್ಕಿ ಹೇಗಿದ್ದಾಳೆ?”ಎಂದ ತಕ್ಷಣ ಸಪ್ಪಗಾದರು. ಸ್ವಲ್ಪ ಹೊತ್ತಿನ ಬಳಿಕ ಪುರು, “ಅಮ್ಮ ತುಂಬಾ ವೀಕ್ ಆಗಿದ್ದಾರೆ” ಎಂದು ಮೆತ್ತಗುಸುರಿದ. ಮನೆಯಂಗಳ ತುಳಿಯುತ್ತಿದ್ದಂತೆ ವಿಚಿತ್ರ ಭಾವುಕತೆ ಸುತ್ತುವರಿಯಿತು. </div>
<div dir="auto" style="background-color: white; color: #222222; font-family: Arial, Helvetica, sans-serif; font-size: small;">
ಅಪ್ಪ, ಅಮ್ಮನೂ ಸಾಕಷ್ಟು ಇಳಿದು ಹೋಗಿದ್ದರು. ಕೈಕಾಲು ತೊಳೆದು ಚಿಕ್ಕಿಯ ಕೋಣೆಯೊಳಗೆ ಕಾಲಿಟ್ಟರೆ ಮಂಚದ ಮೇಲೆ ಕೃಶಕಾಯದ ಜೀವವೊಂದು ಮಲಗಿತ್ತು. ಅಲ್ಲೇ ಕೆಳಗಡೆ ಚಾಪೆಯಲ್ಲಿ ಚಿಕ್ಕಪ್ಪ ಮಲಗಿದ್ದರು. ಒಂದೆರೆಗಳಿಗೆ ಅದು ಚಿಕ್ಕಿಯೆಂದು ನಂಬಲಾಗಲೇ ಇಲ್ಲ, ಅಷ್ಟು ಬದಲಾಗಿದ್ದಳು. ರಪ್ಪೆಂದು ಬಾರಿಸಿದಂತಾಯ್ತು ಕಹಿ ವಾಸ್ತವ. ಈ ಗುಬ್ಬಿಯಂತಹ ಜೀವದ ಮೇಲೆ ಇಷ್ಟು ದೊಡ್ಡ, ಧೀರ್ಘ ಸಮರ ಸಾರಿದ್ದೆನೇ? ಕಣ್ಣೀರು ಕಟ್ಟೆಯೊಡೆಯಿತು, ಅವಳ ಹತ್ತಿರ ಕೂತು ನಾನವಳ ತಲೆ ಸವರಿದೆ. ಮೆಲ್ಲಗೆ ಕಣ್ಣು ಬಿಟ್ಟವಳು, ಗುರುತು ಹಿಡಿದು ನಕ್ಕಳು. ಹಗುರಕ್ಕೆ ಕೈಯೆತ್ತಿ ಅವಳ ಕಿರುಬೆರಳಿಂದ ನನ್ನ ಕಿರು ಬೆರಳು ಹಿಡಿದಳು. ಹೊರಗೀಗ ಬೆಳ್ಳನೆ ಬೆಳಕಾಗಿತ್ತು. </div>
</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-55976490995919178522019-04-22T08:44:00.002-07:002019-04-22T08:44:36.630-07:00ಅಮ್ಮಾ, ನಾನು ದೇವರಾಣೆ ಕದ್ದಿಲ್ಲಮ್ಮ<div dir="ltr" style="text-align: left;" trbidi="on">
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px;">
ಸುಧಾ ಯುಗಾದಿ ವಿಶೇಷಾಂಕದಲ್ಲಿ ಮೆಚ್ಚುಗೆ ಪಡೆದು, ಸುಧಾದಲ್ಲಿ ಪ್ರಕಟವಾದ ನನ್ನ ಪ್ರಬಂಧ. ನನ್ನ ಮೂಡಿಗೆರೆಯ ನೆನಪುಗಳು</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
<br /></div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಮೂಡಿಗೆರೆಯೆಂಬ ಪುಟ್ಟ ಊರಿಗೆ ಸರಕಾರಿ ಹೆಣ್ಣು ಮಕ್ಕಳ ಪ್ರೌಢ ಶಾಲೆಯಲ್ಲಿ ಅಮ್ಮ, ಶಿಕ್ಷಕಿಯಾಗಿ ನೇಮಕವಾದಾಗ ನಾನು ಎರಡು ವರ್ಷದವಳು. ಒಂದಿಷ್ಟು ದಿನಗಳು ಜಾನಪ್ಪ ಗೌಡರ ಮನೆಯಲ್ಲಿ ಉಳಿದು ನಂತರ ಶಾಲೆಯೆದುರೇ ಇದ್ದ ಪುಟ್ಟ ಮನೆಗೆ ಶಿಫ್ಟ್ ಆದರು ಅಮ್ಮ. ಮುಂಡುಗೋಡಿನಿಂದ ಬಂದ ನಾಗಿ ಎನ್ನುವ ಹೆಣ್ಣುಮಗಳು ಅದೆಷ್ಟೋ ಸಮಂii ನನ್ನ ನೋಡಿಕೊಳ್ಳುತ್ತಿದ್ದಳು. ಅಣ್ಣ ಶಿರಸಿಯಲ್ಲಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ಒಂದು ಪುಟ್ಟ ಮನೆ ಮಾಡಿಕೊಂಡಿದ್ದರು. ನನಗೂ, ನನಗಿಂತ ನಾಲ್ಕು ವರ್ಷ ದೊಡ್ಡವಳಿದ್ದ ಅಕ್ಕನಿಗೂ, ಅಮ್ಮನಿಗೂ ಅಣ್ಣ ಸಿಗುತ್ತಿದ್ದದ್ದು ವಾರದ ಕೊನೆಗಷ್ಟೇ. ಶನಿವಾರ ರಾತ್ರೆಯಾಗುವುದನ್ನೇ ಕಾಯುತ್ತಿದ್ದೆವು, ಅವಾಗಿನ ಸರಕಾರಿ ಕೆಂಪು ಡಬ್ಬಿಯಲ್ಲಿ ಅಣ್ಣ ಬರುವಾಗ ರಾತ್ರಿಯಾಗುತ್ತಿತ್ತು. ಭಾನುವಾರ ರಾತ್ರಿ ಮತ್ತೆ ಹೊರಟು ಹೋಗುತ್ತಿದ್ದರು. ರಜೆಯಲ್ಲಿ ನಾವೆಲ್ಲಾ ಶಿರಸಿಗೆ ಹೋಗಿ ಇರುತ್ತಿದ್ದೆವು.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಆವಾಗಂತೂ ಫ್ರಿಡ್ಜ್, ಮಿಕ್ಸಿ, ವಾಷಿಂಗ್ ಮೆಷಿನ್, ಗ್ರೈಂಡರ್ ಏನೂ ಇಲ್ಲದ ಕಾಲ. ಅಮ್ಮ ಮನೆಗೆಲಸವನ್ನೆಲ್ಲಾ ಒಬ್ಬರೇ ಮಾಡಿಕೊಂಡು, ದಿನವೂ ಟೀಚಿಂಗ್ ನೋಟ್ಸ್ ಬರೆದು, ಮರುದಿನದ ಪಾಠದ ತಯಾರಿ ಮಾಡಿಕೊಂಡು, ಹೊರಗಡೆ ಹೋಗಿ ಮನೆ ಸಾಮಾನು, ತರಕಾರಿಗಳನ್ನು ಹೊತ್ತು ತಂದು, ನಮ್ಮನ್ನು, ಅದರಲ್ಲೂ ಮಹಾನ್ ತಂಟೆಕೋರಿಯಾದ ನನ್ನನ್ನು ಅದು ಹೇಗೆ ಸಂಭಾಳಿಸುತ್ತಿದ್ದರೋ ಇಂದಿಗೂ ಅರ್ಥವಾಗಿಲ್ಲ. ಅಷ್ಟೇ ಅಲ್ಲದೆ ಶಾಲೆಯಲ್ಲಿಯಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಲ್ಲ ನಮ್ಮನೆಯಲ್ಲೇ ತಯಾರಿ! ಅಮ್ಮನ ಶಿಷ್ಯೆಯಂದಿರೆಲ್ಲಾ ಮನೆ ತುಂಬಿಕೊಳ್ಳುತ್ತಿದರು. ಅಗ ನನ್ನ ಹಿಡಿಯುವವರೇ ಇರುತ್ತಿರಲಿಲ್ಲ. ಆ ಕಾರ್ಯಕ್ರಮಗಳಿಗೆಲ್ಲಾ ತರುತ್ತಿದ್ದ ಮೇಕಪ್ ಕಿಟ್ ಅಂತೂ ನನಗೊಂದು ವಿಸ್ಮಯ. ಅದರಲ್ಲಿದ್ದ ಎಲ್ಲವನ್ನೂ ಮುಟ್ಟಿ ಮುಟ್ಟಿ ನೋಡಿ, ಎಲ್ಲವನ್ನೂ ಮುಖಕ್ಕೆ ಬಳಿಸಿಕೊಂಡು ಸಂತಸಪಡುತ್ತಿದ್ದೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ನನಗೆ ಹಣೆಗೆ ಹಚ್ಚುವ ಬಿಂದಿಯ ಹುಚ್ಚು, ಅದಕ್ಕಾಗ ಹಣೆಬೊಟ್ಟು ಎನ್ನುತ್ತಿದ್ದೆವು. ಬಣ್ಣ, ಬಣ್ಣದ, ವಿವಿಧ ಸೈಜು, ಶೇಪಿನ ಬಿಂದಿಗಳೆಂದರೆ ಜೀವ ಬಿಡುತ್ತಿದ್ದೆ. ಅಮ್ಮನ ಶಿಷ್ಯೆಯರು ನೀರು ಕುಡಿಯಲೆಂದು ಅವಾಗವಾಗ ಮನೆಗೆ ಬರುತ್ತಿದ್ದರು, ಹೆಚ್ಚಿನವರು ಚಿಕ್ಕವಳಾದ ನನ್ನನ್ನು ನೋಡಿ, ಮುಟ್ಟಿ, ಮುದ್ದಿಸಿ ಮಾತನಾಡಲೆಂದೇ ಬರುವವರು. ಅವರಲ್ಲಿ ಯಾರೇ ಆದರೂ ’ಬಾ, ಹಣೆಬೊಟ್ಟು ಕೊಡ್ತೀನಿ’ ಅಂದರೂ ಅವರ ಮನೆಗೆ ಹೊರಟು ಬಿಡುತ್ತಿದ್ದೆ. ಅವರ ಮನೆಯಲ್ಲಿ ಕೊಟ್ಟ ತಿಂಡಿಯನ್ನೆಲ್ಲಾ ತಿಂದು, ಅವರ ಮನೆ ಪೂರ್ತಿ ಸರ್ವೇ ಮಾಡಿ ಅಮ್ಮನಿಗೆ ಹೇಳಬೇಡಿ ಎಂದು ಅವರಿಗೆ ವಾರ್ನಿಂಗ್ ಕೊಟ್ಟು, ಚಿತ್ರ ವಿಚಿತ್ರ ಡಿಸೈನಿನ ಹಣೆಬೊಟ್ಟು ಹಿಡಿದುಕೊಂಡು ಮನೆಗೆ ಬರುತ್ತಿತ್ತು ನನ್ನ ಸವಾರಿ. ಕೆಲವೊಮ್ಮೆ ಅಮ್ಮ ಹುಡುಕಿ ಹುಡುಕಿ ಕಂಗಾಲಾಗುತ್ತಿದ್ದರು.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಪ್ರತಿ ರಾತ್ರಿ ಮಲಗುವ ಮೊದಲು, ಅಡುಗೆ ಮನೆಯ ಎಲ್ಲಾ ಕೆಲಸ ಮುಗಿಸಿ ಅಮ್ಮ ಬಂದ ಮೇಲೆ ಮೂರೂ ಜನ ಚಂದಿರನನ್ನು ನೋಡುತ್ತಾ ಬಾಗಿಲ ಮೆಟ್ಟಿಲ ಮೇಲೆ ಕೂರುತ್ತಿದ್ದೆವು. ಆಗ ಮೊಸರಿಗೆ ಸಕ್ಕರೆ ಹಾಕಿ ಕಲೆಸಿ ಇಬ್ಬರಿಗೂ ಕಥೆ ಹೇಳುತ್ತಾ ತಿನ್ನಿಸುತ್ತಿದ್ದರು. ಒಂದೊಂದು ದಿನ ಒಂದೊಂದು ಕಥೆ. ಬೆಣ್ಣೆ ಕದ್ದ ಕೃಷ್ಣನ ಬಾಯಿಯಲ್ಲಿ ಬ್ರಹ್ಮಾಂಡ ನೋಡಿ ಬೆರಗಾಗಿರುವ ಯಶೋಧೆ, ಗೋಪಾಲಕರ ಸುಂದರ ಚಿತ್ರವಿದ್ದ ಒಂದು ಕ್ಯಾಲೆಂಡರ್ ನಮ್ಮ ಮನೆಯಲ್ಲಿತ್ತು. ಅದರ ಕಥೆ ಹೇಳಮ್ಮ ಎಂದು ಪೀಡಿಸಿದಾಗ ಆ ಚೆಂದದ ಕಥೆಯನ್ನು ಹೇಳಿದ್ದರು ಅಮ್ಮ. ಮತ್ತೆ ’ಅಮ್ಮ, ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಎಂಬ ಅತೀ ಚೆಂದದ ಹಾಡನ್ನು ಮೆಲುದನಿಯಲ್ಲಿ ಹಾಡುತ್ತಿದ್ದರು. ಅದೊಂದು ಸುಂದರ, ಅಚ್ಚಳಿಯದ ನೆನಪು.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಒಂದು ದಿನ ಬಣ್ಣದ ಪೆನ್ಸಿಲುಗಳನ್ನು ತರಲೆಂದು ಅಕ್ಕನೊಂದಿಗೆ ಹೋಗಿದ್ದೆ, ಅಕ್ಕ ತೆಗೆದುಕೊಳ್ಳುತ್ತಿದ್ದಳು. ನಾನು ಪಕ್ಕದ್ದಲ್ಲಿದ್ದ ಚೈತನ್ಯ ಸ್ಟೋರ್ಸಿನಲ್ಲಿ ನನಗಿಂತ ನಾಲ್ಕು ಪಟ್ಟು ಎತ್ತರವಿದ್ದ ಶೋಕೇಸಿನ ಮೇಲಿದ್ದ ಗಾಜಿನ ಜಾಡಿಯಲ್ಲಿ ಪೇರಿಸಿಟ್ಟ ಅಲ್ಕೋಹಾಲು ಎಂದು ನಾವು ಕರೆಯುತ್ತಿದ್ದ ಹಾಲು ಖೋವಾ, ಕೈಲಿ ದಾರ ಹಿಡಿದು ತಿರುಗಿಸೋ ಹತ್ತು ಪೈಸೆ ನಾಣ್ಯದ ಶೇಪಿನ ಗುಲಾಬಿ ಬಣ್ಣದ ಪೆಪ್ಪರಮಿಂಟು, ಚೆಂದದ ಪುಟ್ಟ ಪುಟ್ಟ ಡಬ್ಬಿಗಳಲ್ಲಿರುವ ಜೀರಿಗೆ ಮಿಠಾಯಿ, ಕಡ್ಲೆಮಿಠಾಯಿಗಳನ್ನು ನೋಡುತ್ತಾ, ಅಕ್ಕನ ಪೆನ್ಸಿಲ್ಲು ತೊಗೊಂಡು ಆದ ಮೇಲೆ ಉಳಿದ ಹಣದಲ್ಲಿ ಏನು ತೆಗೆದುಕೊಳ್ಳುವುದು ಎಂದು ಲೆಕ್ಕಾಚಾರ ಹಾಕುತ್ತಿದ್ದೆ. ನನ್ನ ಅಣ್ಣನಿಗಿಂತ ಸಾಕಷ್ಟು ಎತ್ತರ, ದಪ್ಪವಿರುವ ಯಾರೋ ಮಾಮ ಬಂದು ನಿಂತು ಅಂಗಡಿಯಾತನೊಂದಿಗೆ ಏನನ್ನೋ ಕೇಳಿದರು. ಅವರ ಸ್ವರವೂ ತುಂಬಾ ಚೆನ್ನಾಗಿತ್ತು. ಯಾಕೋ ನಾನು ತಲೆಯೆತ್ತಿ ನೋಡಿದೆ, ಮೊದಲೇ ಕುಳ್ಳಿ! ಗಡ್ಡ, ಮೂಗು ಮತ್ತೆ ಕನ್ನಡಕದ ಫ್ರೇಮು ಕಂಡಿತು. ಮತ್ತೆ ಅಕ್ಕನ ಬಳಿ ಹೋದಾಗ ಅವಳು ಮೆಲ್ಲನೆ ಉಸುರಿದಳು, ಅವರು ಪೂರ್ಣಚಂದ್ರ ತೇಜಸ್ವಿ ಕಣೇ, ತುಂಬಾ ದೊಡ್ಡ ಮನುಷ್ಯರು ಅಂತ! ನಾನು ತಲೆ ತಿರುಗಿಸಿ ನೋಡುವಷ್ಟರಲ್ಲಿ ಅವರು ಹೊರಟಾಗಿತ್ತು.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಆಡಿ ಬರಲು, ನಿದ್ದೆ ಮಾಡಲು ಮತ್ತು ತಿಂಡಿ ತಿಂದು ಬರಲು ಬಾಲವಾಡಿಗೆ ಹೋಗುತ್ತಿದ್ದೆ, ಯಾರೊಂದಿಗೂ ಮಾತು-ಕಥೆಯಿಲ್ಲ. ಹೋಗುವುದು, ಗುಮ್ಮನ ಹಾಗೆ ಕೂರುವುದು, ಡಬ್ಬದಿಂದ ತಿಂಡಿ ತಿನ್ನುವುದು ಮತ್ತು ಜಾರು ಬಂಡಿಯಾಡುವುದು. ಕೆಲವೊಮ್ಮೆ ಜೋಕಾಲಿಯಲ್ಲಿ ಕೂತು ತೂಗಿಕೊಳ್ಳುವುದು, ತುಂಬಾ ಮಕ್ಕಳು ಇರುತ್ತಿದ್ದರಿಂದ ಆ ಅವಕಾಶ ತುಂಬಾ ಕಡಿಮೆ ಸಿಗುತ್ತಿತ್ತು. ಹೀಗಾಗಿ ಎಲ್ಲಿ ಜೋಕಾಲಿ ಕಂಡರೂ ತೂಗುವ ಆಸೆಯಾಗುತ್ತದೆ. ಸರಿಕಟ್ಟಾಗಿ ಶಾಲೆಗೆ ಹೋಗಲು ಶುರು ಮಾಡಿದಾಗ ನಾಲ್ಕು ವರ್ಷ, ಮನೆಯಲ್ಲಿ ಕಾಟ ತಾಳಲಾರದೆ ಒಂದು ವರ್ಷ ಜಾಸ್ತಿ ತೋರಿಸಿ ಅಡ್ಮಿಶನ್ ಮಾಡಿಸಿದ್ದರು. ಹೊಸ ಯುನಿಫಾರ್ಮ್, ಶೂಸ್, ಬುಕ್ಸ್ ಆಸೆಗೆ ಸೇರಿದವಳಿಗೆ, ಶಾಲೆಯಲ್ಲಿದ್ದಷ್ಟೂ ಹೊತ್ತು ಪಂಜರದಲ್ಲಿ ಕೂಡಿ ಹಾಕಿದಂತೆ ಅನಿಸುತ್ತಿತ್ತು. ಯಾವಾಗ ಘಂಟೆ ಬಾರಿಸುವುದಿಲ್ಲ ಎಂದು ಕಾದು ಕುಳಿತಿರುತ್ತಿದ್ದೆ. ಇವತ್ತಿಗೂ ಶಾಲೆಗೆ ಹೋಗುವ ಮಕ್ಕಳನ್ನು ಕಂಡರೆ ಪಾಪ ಎಂದೇ ಅನಿಸುತ್ತದೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಶಾಲೆಯಲ್ಲಿ ಯಾರು ಏನು ಕೇಳಿದರೂ ಕೊಟ್ಟು ಬರುತ್ತಿದ್ದೆ. ನನ್ನ ಪೆನ್ಸಿಲ್, ರಬ್ಬರ್, ಬಳಪ, ಪುಸ್ತಕ, ಪುಸ್ತಕದಲ್ಲಿಟ್ಟ ನವಿಲು ಗರಿ, ಬಣ್ಣದ ಪೆನ್ಸಿಲುಗಳು, ಹೊಸ ಸ್ಲೇಟು ಎಲ್ಲವೂ... ಅಣ್ಣ ಅಮ್ಮನಿಗೆ ಏನು ಹೇಳಬೇಕು ಗೊತ್ತಾಗುತ್ತಿರಲಿಲ್ಲ. ಶಾಲೆಗೆ ಸೇರಿದ ಮೇಲೆ ನನ್ನ ಕಾಟ ಬೇರೊಂದು ರೂಪ ಪಡೆದಿತ್ತು! ಅಕ್ಕ ‘ದಾನ ವೀರ ಶೂರ ಕರ್ಣಿ’ ಎಂದೇ ಹೆಸರಿಟ್ಟಿದ್ದಳು. ಇವತ್ತೂ ಹಾಗೇ ಕರೆದು ಚುಡಾಯಿಸುತ್ತಿರುತ್ತಾಳೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಒಂದು ದಿನ ಬೆಳಿಗ್ಗೆ ಅಮ್ಮ ಕಸ ಗುಡಿಸುತ್ತಿದ್ದಾಗ ನನ್ನ ಚೀಲದಿಂದ ಏನೋ ಹರಿದು ಬರುವುದು ಕಂಡಿತು, ಗಾಬರಿಯಾದ ಅಮ್ಮ ಚೀಲ ಕೊಡವಿದರೆ ನುಣುಪು ಕಲ್ಲುಗಳು, ತುಂಬಾ ಆಗಲಿ ಎಂದು ತುಂಡು ತುಂಡು ಮಾಡಿಟ್ಟ ಆನೆ ಬಳಪ, ಮರಳು, ಚಿಪ್ಪು, ನೆಲಕ್ಕೆ ತಿಕ್ಕಿ ಬಿಸಿ ತಾಗಿಸುವ ಹಣ್ಣು ಹುರುಳಿಕಾಯಿಯ ಥರದ ಅದ್ಯಾವುದೋ ಬೀಜಗಳು, ಸ್ಲೇಟು, ಗೋಲಿಗಳು, ಒಂದಿಷ್ಟು ತುಂಡಾದ ಹಳೇ ಪೆನ್ನು ಪೆನ್ಸಿಲ್ಲುಗಳು, ಇವಿಷ್ಟರ ಒಟ್ಟಿಗೆ ಗುಂಡು ಗುಂಡಾಗಿರುವ ಕೆಲವು ಕಾಯಿಗಳು ಉದುರಿದವು. ಏನಿದು ಎಂದು ಅಮ್ಮ ಹತ್ತಿರ ಹೋಗಿ ನೋಡಿದರೆ, ಮುಟ್ಟಿದರೆ ಶೆಲ್ ಒಳಗೆ ಹೋಗಿ, ಪುಟ್ಟ ಚಕ್ಕುಲಿಯಂತಾಗುವ ಯಾವುದೋ ಹುಳಗಳು. ಹಾರಿ ಬಿದ್ದ ಅಮ್ಮ, ಅಕ್ಕ ಅವನ್ನೆಲ್ಲಾ ಎತ್ತಿ ಹೊರಗೆ ಬಿಸಾಕಿದ್ದರು. ನನಗೆ ಸಿಟ್ಟೋ ಸಿಟ್ಟು! ವಾರಾಂತ್ಯದಲ್ಲಿ ಎಲ್ಲಾ ರಿಪೋರ್ಟುಗಳು ಅಣ್ಣನಿಗೆ ಹೋಗುತ್ತಿದ್ದವು. ಅಣ್ಣ ನಕ್ಕೂ ನಕ್ಕೂ ಕಣ್ಣೀರು ಬರುತ್ತಿತ್ತು. ಒಟ್ಟಿನಲ್ಲಿ ಎಲ್ಲರೂ ನಗುವುದನ್ನು ನೋಡಿ ನಾನೂ ನಗುತ್ತಿದ್ದೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಅದೊಂದು ದಿನ ಬೆಳಗ್ಗೆ, ಎದ್ದಿದ್ದೇನೆ. ಹೆಚ್ಚಾಗಿ ಎದ್ದ ಕೂಡಲೇ ‘ಅಮ್ಮಾ’ ಎಂದು ಬೊಬ್ಬೆ ಹಾಕಿ ಅಳಬೇಕು, ಅಮ್ಮ ಇದ್ದ ಬಿದ್ದ ಎಲ್ಲಾ ಕೆಲಸ ಬಿಟ್ಟು ಓಡಿ ಬರಬೇಕು. ಆ ದಿನ ಮೇಜಿನ ಕೆಳಗಿಟ್ಟಿದ್ದ ಅಮ್ಮನ ವ್ಯಾನಿಟಿ ಬ್ಯಾಗು ಕಣ್ಣಿಗೆ ಬಿತ್ತು. ಅಕ್ಕ ಯಥಾಪ್ರಕಾರ ಹೊರಗೆ ಕೂತು ಓದುತ್ತಿದ್ದಳು. ಅಮ್ಮನ ಬ್ಯಾಗು ಮುಟ್ಟುವುದು ನಾವೆಂದೂ ಮಾಡಬಾರದ ಕೆಲಸವಾಗಿತ್ತು. ಏನಾದರೂ ಬೇಕಿದ್ದರೆ ಅಕ್ಕ ಅಮ್ಮನನ್ನು ಕೇಳಿದರೆ, ಅವಳಿಗೆ ಬ್ಯಾಗು ತರಲು ಹೇಳುತ್ತಿದ್ದರು, ಅವರೇ ತೆಗೆದುಕೊಡಬೇಕಿತ್ತು. ನಾನು ಗೆಜ್ಜೆ ಸದ್ದು ಮಾಡದೆ ಹಾಗೆ ಮೆಲ್ಲಮೆಲ್ಲ ಹೆಜ್ಜೆ ಹಾಕಿ ಹೋಗಿ, ಅವರ ಬ್ಯಾಗ್ ತೆಗೆದೆ. ಅವರ ಶಾಲೆಯಲ್ಲಿ ಏನಾದರೂ ಕಾರ್ಯಕ್ರಮವಿದ್ದಲ್ಲಿ, ಅಮ್ಮ ಯಾವ ತರಗತಿಗೆ ಕ್ಲಾಸ್ ಟೀಚರ್ ಆಗಿದ್ದರೋ ಆ ತರಗತಿಯ ಮಕ್ಕಳ ಕೈಯಿಂದ ದುಡ್ಡು ಕಲೆಕ್ಟ್ ಮಾಡಿ ಶಾಲೆಯ ಕಚೇರಿಗೆ ಕೊಡಬೇಕಾಗಿತ್ತು. ಹಾಗೆ ಕಲೆಕ್ಟ್ ಮಾಡಿದ ದುಡ್ಡು ಅಂದು ಅವರ ಬ್ಯಾಗ್ ಅಲ್ಲಿತ್ತು. ಎಲ್ಲವೂ ಒಂದು ಎರಡು ರೂಪಾಯಿಯ ನೋಟುಗಳು! ನನ್ನ ಪುಟ್ಟ ತಲೆಗೆ ಅಷ್ಟೂ ನೋಟುಗಳನ್ನು ಕಂಡು ಅಚ್ಚರಿಯೆನಿಸಿರಬೇಕು. ಮರದ ಉದ್ದ ಸ್ಟಾಂಡ್ ಅಲ್ಲಿ ನನ್ನ ಮತ್ತು ಅಕ್ಕನ ಬ್ಯಾಗು ಇಡುತ್ತಿದ್ದೆವು. ಅಲ್ಲಿಗೆ ಹೋಗಿ, ನನ್ನ ಚೀಲ ಎತ್ತಿಕೊಂಡು ಬಂದು, ನನ್ನ ಕೈಗಳಿಗೆ ಅದೆಷ್ಟು ಹಿಡಿಯುತ್ತೋ ಅಷ್ಟೂ ನೋಟುಗಳನ್ನು ಮುದ್ದೆ ಮುದ್ದೆ ಮಾಡಿ ಚೀಲಕ್ಕೆ ತುರುಕುತ್ತಿದ್ದೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಒಂದಷ್ಟು ತುರುಕಿಯಾಗಿರಬೇಕು, ಬೆನ್ನ ಮೇಲೆ ಧಬ್ ಅಂತ ಪೆಟ್ಟು ಬಿತ್ತು! ನೋವಾಗಿ ಹಿಂತಿರುಗಿ ನೋಡಿದರೆ ಅಮ್ಮ ನಿಂತಿದ್ದಾರೆ. ಹಿತ್ತಲಲ್ಲಿ ಬಟ್ಟೆ ಒಗೆಯುತ್ತಿದ್ದ ಅಮ್ಮನಿಗೆ, ಏನಿವತ್ತು ಇವಳು ಇನ್ನೂ ಎದ್ದಿಲ್ಲ ಅನಿಸಿ ಬಂದು ನೋಡಿದರೆ ನಾನು ಜಗತ್ ವಿಖ್ಯಾತ ಕಳ್ಳಿಯಾಗುವ ಎಲ್ಲಾ ಪ್ರಯತ್ನಗಳನ್ನು ಮಾಡ್ತಾ ಇದ್ದೀನಿ! ಅವತ್ತು ಸರಿಯಾಗಿ ಪೆಟ್ಟು ತಿಂದಿದ್ದೆ. ಮೊದಲೇ ಎಷ್ಟು ಮಾಡಿದರೂ ಮುಗಿಯದ ಮನೆ ಕೆಲಸಗಳು, ಜವಾಬ್ದಾರಿಗಳು, ಅಣ್ಣ ಬೇರೆ ದೂರದ ಊರಲ್ಲಿರುವುದು. ಇದರ ಮೇಲೆ ನನ್ನ ಈ ಕಳ್ಳತನ, ಪಾಪ ಅಮ್ಮ! ಎಷ್ಟು ಬೇಜಾರಾಗಿರಬೇಕು. ಅವತ್ತು ಇಡೀ ವಠಾರದಲ್ಲಿ ಗಿರಿಜಾ ಟೀಚರ್ ಮಗಳು ಬ್ಯಾಗಿಗೆ ದುಡ್ಡು ತುರುಕಿದ್ದೇ ಕಥೆ! ಮೂರನೇ ಮನೆ ಸತ್ಯ ನಾರಾಯಣ ಮಾಮ-ನೇತ್ರಾ ಆಂಟಿ, ಕೊನೆ ಮನೆಯಲ್ಲಿದ್ದ ಶಾರದಾ ಆಂಟಿ ಮತ್ತವರ ಗಂಡ ಪಳನಿ ಮಾಮ (ಅವರಿಗೆ ನಾನು ಕರಿಯುತ್ತಿದ್ದದ್ದು ಪಣ್ಣನಿಳಿ ಮಾಮ ಎಂದೇ), ಮತ್ತೆ ಪಕ್ಕದ ಕಂಪೌಂಡ್ ಅಲ್ಲಿದ್ದ ಸಾವಿತ್ರಿ ಟೀಚರ್, ಭಾನುಮತಿ ಆಂಟಿ, ಶಿವಣ್ಣ ಮಾಮ ಎಲ್ಲರೂ ಅಂದು ಬುದ್ಧಿ ಹೇಳಿದ್ದೇ ಹೇಳಿದ್ದು. ನಾನು, ತಲೆ ತಗ್ಗಿಸಿ ನಾಚಿಕೆಯಿಂದಲೂ, ಬೇಜಾರಿಂದಲೂ ತಲೆಯಾಡಿಸಿದ್ದೂ ಆಯಿತು. ಕೊನೆಗೆ ಭಾನುಮತಿ ಆಂಟಿ ಕೇಳಿದ್ದಕ್ಕೆ ಹಣೆಬೊಟ್ಟು ತೊಗೊಳ್ಳೋಕೆ ದುಡ್ಡು ತೆಗೆದೆ ಅಂದಿದ್ದೆ. ವಾರದ ಕೊನೆಗೆ ಅಣ್ಣ ಬಂದಾಗ ಕಣ್ಣಲ್ಲಿ ನೀರು ಸುರಿಸಿ ಅಳುವಂತೆ ಹೊಡೆದಿದ್ದರು. ಅದೇ ಕೊನೆ, ಅಮ್ಮನ ಬ್ಯಾಗಿರಲಿ, ಇಂದಿಗೂ ಯಾರ ಬ್ಯಾಗೂ ಮುಟ್ಟುವ ಸಾಹಸಕ್ಕೆ ಹೋಗುವುದಿಲ್ಲ! ಧೂಮ್ ಚಿತ್ರದಲ್ಲಿ ಹ್ಯಾಂಡ್ಸಮ್ ಕಳ್ಳ ಹೃತಿಕ್ ಅನ್ನು ನೋಡುವಾಗೆಲ್ಲ, ಒಂದು ಕ್ಷಣ ‘ಛೆ! ನನ್ನ ಕರಿಯರ್ ಹಾಳಾಯ್ತಲ್ಲ, ಇಂಟರ್ ನ್ಯಾಷನಲ್ ಕಳ್ಳಿಯಾಗುವ ಅವಕಾಶ ತಪ್ಪಿ ಹೋಯ್ತಲ್ಲ’ ಅನಿಸುತ್ತದೆ!.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಮೂರನೇ ಕ್ಲಾಸಿಗೆ ಕಾಲಿಟ್ಟಿದ್ದೆ, ನನ್ನ ಪಕ್ಕ ಕೂರಲು ಒಬ್ಬಳು ಹೊಸ ಹುಡುಗಿ ಬಂದ್ದಿದಳು. ಅವಳಿಗೆ ಇಬ್ಬರು ಅಮ್ಮಂದಿರು. ಇವಳ ಚಿಕ್ಕಮ್ಮನ ಮಕ್ಕಳಿಗೆ ಸಿಕ್ಕಿದ್ದಷ್ಟು ಇವಳಿಗೆ ಸಿಗುತ್ತಿರಲಿಲ್ಲ, ತಿಂಡಿಗಳಾಗಲಿ, ಹೊಸ ಬಟ್ಟೆಗಳಾಗಲಿ....ಸರಿ, ನಾನು ಡಬ್ಬಿಯಲ್ಲಿದ್ದ ಊಟ, ಮನೆಯಲ್ಲಿಟ್ಟಿದ್ದ ತಿಂಡಿ, ಹಣ್ಣುಗಳು ಏನೂ ಸಿಗದೇ ಹೋದರೆ ಬೆಲ್ಲವನ್ನಾದರೂ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅವಳು ಖುಷಿಯಿಂದ ನಕ್ಕಾಗೆಲ್ಲ ನಂಗೂ ಖುಷಿ. ಆ ವರ್ಷ ಚೌತಿಗೆ ಅಜ್ಜಮ್ಮ ಊರಿಗೆ ಹೋಗಲೆಂದು, ಅಮ್ಮ ಹಸಿರು ಎಲೆ ಎಲೆಗಳ ಅವಾಗಷ್ಟೇ ಟ್ರೆಂಡ್ ಆಗುತ್ತಿದ್ದ ಚೂಡಿದಾರವನ್ನು ಇಬ್ಬರಿಗೂ ಹೊಲಿಸಿದ್ದರು. ಇಬ್ಬರೂ ಅದು ಟೈಲರ್ ಶಾಪಿನಿಂದ ಮನೆಗೆ ಬಂದ ಕೂಡಲೇ ತೊಟ್ಟು ನೋಡಿ ಕುಣಿದದ್ದೂ ಆಗಿತ್ತು. ಮರುದಿನ ನನ್ನ ಸ್ನೇಹಿತೆ ಶಾಲೆಯಲ್ಲಿ ನೋಡೇ, ಹಬ್ಬ ಬಂತು. ನಮ್ಮ ಅಪ್ಪ, ಚಿಕ್ಕಮ್ಮನ ಮಕ್ಕಳಿಗಷ್ಟೇ ಬಟ್ಟೆ ಕೊಡಿಸಿದ್ದಾರೆ, ನಮಗೆ ಮಾತ್ರ ಕೊಡಿಸಲೇ ಇಲ್ಲ ಎಂದಳು. ನನ್ನ ಹೊಸ ಚೂಡಿದಾರ್ ಬ್ಯಾಗಲ್ಲಿ ತುರುಕಿಕೊಂಡು ಬಂದು ಅವಳಿಗೆ ಕೊಟ್ಟೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಊರಿಗೆ ಹೊರಡೋ ಮೊದಲು ಅಮ್ಮ ಅದೆಷ್ಟು ಹುಡುಕಿದರೂ ಮನೆಯಿಡೀ ಸಿಗಲಿಲ್ಲ. ಎಲ್ಲಿ ಸಿಗುತ್ತದೆ?! ಚೌತಿಗೆ ಬೇರೆ ಬಟ್ಟೆ ಹಾಕಿದ್ದಾಯ್ತು. ಒಂದು ದಿನ ನಾನು ಅಕ್ಕ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಚೂಡಿದಾರ ತೊಟ್ಟು ಹೋಗುತ್ತಿದ್ದ ನನ್ನ ಸ್ನೇಹಿತೆಯನ್ನು ನೋಡಿ ಅಕ್ಕ ಬೆಚ್ಚಿಬಿದ್ದಳು, ನಿಜ ಹೇಳು, ನಿಂದೇ ಅಲ್ವಾ ಆ ಡ್ರೆಸ್? ತಡಿ, ಅಮ್ಮನಿಗೆ ಹೇಳ್ತೇನೆ ಎಂದು ಬೆದರಿಸಿದವಳನ್ನು ತಡೆಯಲು ನಾ ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ. ಪ್ರತೀ ಸಲ ಜಗಳವಾದಾಗ, ಹೇಳಿದ ಕೆಲಸ ನಾ ಮಾಡದಿದ್ದಾಗ ಅದೊಂದು ಬ್ಲಾಕ್ ಮೇಲ್ ಅಸ್ತ್ರವಾಗಿತ್ತು ಅವಳಿಗೆ! ಯಾಕೋ ಗೊತ್ತಿಲ್ಲ, ಅವಳೆಂದೂ ಹೇಳಲೇ ಇಲ್ಲ. ಮುಂದಿನ ವರ್ಷದಿಂದ ನನ್ನ ಸ್ನೇಹಿತೆ ಶಾಲೆಗೆ ಬರಲೂ ಇಲ್ಲ. ಮುಂದೊಂದು ದಿನ ನಾನೇ ಅಣ್ಣ ಅಮ್ಮನಿಗೆ ಹೇಳಿದಾಗ ನನ್ನ ಡಿಗ್ರಿ ಮುಗಿದಿತ್ತು! ಅದಕ್ಕೇ ಅಲ್ಲವೇ ಅಕ್ಕ ನಿಂಗೆ ಕರ್ಣಿ ಅಂತ ಹೆಸರಿಟ್ಟಿದ್ದು ಎಂದು ಇಬ್ಬರೂ ಮನಸ್ಸು ಬಿಚ್ಚಿ ನಕ್ಕಿದ್ದರು.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಡ್ರೆಸ್ ಹಗರಣವಾದಾಗ ಅಕ್ಕ ಒಂದು ಮಾತು ಹೇಳಿದ್ದಳು, ‘ನೀನು ಅಣ್ಣ ಅಮ್ಮನಿಗೆ ಹೇಳದೆ ಈ ಥರ ಮಾಡ್ತೀಯಲ್ಲಾ, ತಪ್ಪು ಅಂತ ಒಂದಿನ ನಿಂಗೆ ಗೊತ್ತಾಗುತ್ತೆ’ ಅಂತ. ಗೊತ್ತಾಗಲಿಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಅಜ್ಜಮ್ಮ ಊರಿಗೆ ಹೋದಾಗೆಲ್ಲ ದೊಡ್ಡಮ್ಮ ನಂಗೂ, ಅಕ್ಕನಿಗೂ ಐದೋ, ಹತ್ತೋ ರೂಪಾಯಿಗಳನ್ನು ಕೊಡುವುದು ರೂಢಿ. ಅದು ಸೀದಾ ಅಮ್ಮನ ಕೈಗೆ ಹೋಗುತ್ತಿತ್ತು. ಒಂದು ಸಲ, ಊರಿಂದ ಬೇಗ ಹೊರಟು ಬಂದೆವು. ಮಧ್ಯಾಹ್ನಕ್ಕೆಲ್ಲಾ ಮೂಡಿಗೆರೆಯಲ್ಲಿದ್ದೆವು. ಇಡೀ ದಿನ ರಜೆಯಾಗುವ ಬದಲು, ಮಧ್ಯಾಹ್ನವಾದರೂ ಶಾಲೆಗೆ ಹೋಗಲಿ ಎಂದು ಅಮ್ಮ ಕರಕೊಂಡು ಬಂದು ಶಾಲೆಗೆ ಬಿಟ್ಟರು. ಆ ಸಲ ದೊಡ್ಡಮ್ಮ ಕೊಟ್ಟ ಹತ್ತು ರೂಪಾಯಿ ನಮ್ಮ ಕೈಯಲ್ಲೇ ಉಳಿಯಿತು. ನನ್ನ ಪಾಲಿನ ಹತ್ತು ರೂಪಾಯಿಯ ಆ ನೋಟನ್ನು ಶಾಲೆಗೆ ಬಂದ ತಕ್ಷಣ ನಾನು ನೀತಿ ಭೋಧೆ ಪುಸ್ತಕದ ಬೈಂಡ್ ನಡುವೆ ಹಾಕಿಟ್ಟೆ, ಮನೆಗೆ ಹೋದ ಮೇಲೆ ಅಮ್ಮನಿಗೆ ಕೊಡೋಣವೆಂದು. ಆ ದಿನ ಮಧ್ಯಾಹ್ನದ ಮೊದಲ ಪೀರಿಯಡಿನಲ್ಲಿ ಸ್ನೇಹಾ ಎಂಬ ಹುಡುಗಿಯೊಬ್ಬಳು ಜೋರಾಗಿ ಅಳಲಾರಂಭಿಸಿದಳು. ಅವಳ ತಂದೆ ಸಾಕ್ಸ್ ಕೊಳ್ಳಲೆಂದು ಅವಳಿಗೆ ಹತ್ತು ರೂಪಾಯಿ ಕೊಟ್ಟಿದ್ದರಂತೆ. ಅದು ಕಳೆದುಕೊಂಡಿದ್ದಾಳೆ. ಕ್ಲಾಸು ತೆಗೆದುಕೊಳ್ಳುತ್ತಿದ್ದ ಸಿಸ್ಟರ್, ಮಕ್ಕಳೇ, ಸ್ನೇಹಾ ದುಡ್ದು ಯಾರು ತೆಗೆದಿದ್ದರೂ ಕೊಟ್ಟುಬಿಡಿ ಅಂದರು. ಯಾರೂ ಮುಂದೆ ಬರಲಿಲ್ಲ. ಅತ್ತೂ ಅತ್ತೂ ಅವಳ ಮುಖ ಕೆಂಪಾಗಿತ್ತು. ಇನ್ನೊಂದು ಪಿರಿಯಡ್ ಸ್ಟಾರ್ಟ್ ಆಗೋ ಮೊದಲು ಒಂದೈದು ನಿಮಿಷದ ಬ್ರೇಕ್ ಸಿಕ್ಕಿದಾಗ, ’ಅಪ್ಪ ಹೊಡಿತಾರೆ’ ಎನ್ನುತ್ತಾ ಬಿಕ್ಕುತ್ತಿದ್ದಳು.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಅವಳನ್ನೇ ನೋಡುತ್ತಿದ್ದ ನಾನು, ಪುಸ್ತಕದ ಬೈಂಡಿನ ನಡುವಿದ್ದ ಹತ್ತು ರೂಪಾಯಿ ನೋಟನ್ನು ತೆಗೆದು ಅವಳಿಗೆ ಕೊಟ್ಟುಬಿಟ್ಟೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ನಮ್ಮ ಕ್ಲಾಸಿನಿಂದ ಹೊರಹೋದ ಸಿಸ್ಟರ್, ಮುಂದಿನ ಪೀರಿಯಡ್ ತೆಗೆದುಕೊಳ್ಳಲು ಬರುತ್ತಿದ್ದ, ಶಾಲೆಗೆ ಹೊಸದಾಗಿ ಬಂದ ಟೀಚರರಿಗೆ ಸ್ನೇಹಾಳ ಹಣ ಕಳೆದ ವಿಷಯ ಹೇಳಿದ್ದಾರೆ. ಅವರು ಬಂದೊಡನೆ ದೊಡ್ಡ, ದಪ್ಪ ಸ್ವರದಲ್ಲಿ, “ಯಾರದು ಸ್ನೇಹಾಳ ದುಡ್ಡು ತೆಗೆದಿದ್ದು, ಕೊಟ್ಟು ಬಿಡಿ, ಇಲ್ಲಾ ಇಡೀ ಕ್ಲಾಸಿಗೆ ಬರೆ ಬೀಳುತ್ತೆ ಎಂದು ಗುಡುಗಿದರು. ಸ್ನೇಹಾ ಎದ್ದು ನಿಂತು “ಟೀಚರ್, ಸೌಮ್ಯ ಕದ್ದಿದ್ದಳು, ನೋಡಿ ವಾಪಸು ಕೊಟ್ಟಿದ್ದಾಳೆ”ಎಂದು ಆ ಹತ್ತರ ನೋಟು ತೋರಿಸಿದಳು. ಅವರೋ ಹತ್ತಿರ ಕರೆದು, ಮಾತನಾಡಲೂ ಅವಕಾಶ ಕೊಡದೆ, ದಪ್ಪ ಬೆತ್ತದಲ್ಲಿ ಹಿಂಗಾಲಿಗೆ ಬರೆ ಬೀಳುವಂತೆ ಹೊಡೆದಿದ್ದಲ್ಲದೇ ಉಳಿದ ಪಿರಿಯಡ್ ಇಡೀ ನನ್ನನ್ನು ಮೊಣಕಾಲೂರಿಸಿ ಬೋರ್ಡಿನ ಹತ್ತಿರ ನಿಲ್ಲಿಸಿದರು. ಆ ಹತ್ತು ರೂಪಾಯಿ ನೋಟು ಅವರ ಟೇಬಲ್ ಮೇಲೆ ಡಸ್ಟರ್ ಕೆಳಗಿತ್ತು. ಇಡೀ ಕ್ಲಾಸಿಗೆ ಅವತ್ತು ನನ್ನ ಬಗ್ಗೆ ನೀತಿ ಪಾಠ. ನಾನು ಎಲ್ಲರೆದುರು ಕಳ್ಳಿಯಾಗಿದ್ದೆ. ಹೊರಗಿನವರ ಬಳಿ ಒಂದೂ ದಿನವೂ ಬೈಸಿಕೊಳ್ಳದೇ, ಹೊಡೆಸಿಕೊಳ್ಳದವಳಿಗೆ ಅಂದಾದ ಗಾಯದ ಕಲೆ ಹಾಗೆ ಉಳಿದು ಹೋಗಿದೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಆ ಪೀರಿಯಡ್ ಮುಗಿಯುವ ಹೊತ್ತಿಗೆ ನಮ್ಮ ಕ್ಲಾಸ್ ಎದುರು ಹೆಡ್ ಮಿಸ್ ಹೋಗುತ್ತಿದ್ದವರು<br />ಮೊಣಕಾಲೂರಿ ನಿಂತ ನನ್ನನ್ನು ನೋಡಿ ಕ್ಲಾಸಿನ ಒಳಗೆ ಬಂದರು. ಟೀಚರ್ ಬಾಯಿಯಿಂದ ಇಡೀ ಪ್ರಹಸನ ಕೇಳಿ ನನ್ನ ಕಡೆ ತಿರುಗಿ "ಏನಮ್ಮ ಸೌಮ್ಯ, ಎಲ್ಲಿಂದ ಬಂತು ದುಡ್ಡು?” ಎಂದು ಕೇಳಿದರು. ಅಷ್ಟೂ ಹೊತ್ತು ತಲೆಯೆತ್ತದೆ ಅಳುವನ್ನು ತಡೆ ಹಿಡಿದು ಕೂತಿದ್ದವಳು, ಇನ್ನಷ್ಟು ಅಳುವನ್ನು ನುಂಗಿ, ಕತ್ತೆತ್ತಿ ನಡುಗುವ ಸ್ವರದಲ್ಲಿ “ ಇವತ್ತು ಅಜ್ಜಿ ಊರಿಂದ ಬಂದೆ ಮಿಸ್, ದೊಡ್ಡಮ್ಮ ನಂಗೂ, ಅಕ್ಕನಿಗೂ ಕೊಟ್ಟಿದ್ದರು” ಎಂದೆ.<br />ಕೂಡಲೇ ಅವರು ಅದೇ ಶಾಲೆಯಲ್ಲಿದ್ದ ಅಕ್ಕನನ್ನು ಕರೆಸಿದರು. ಅಕ್ಕನನ್ನು ನೋಡಿಯೇ ಕಣ್ಣೀರು ನನ್ನ ಮಾತು ಕೇಳದೇ ಉರುಳಲು ಆರಂಭಿಸಿತು, ನನ್ನನ್ನು ನೋಡಿ ಅವಳ ಕಣ್ಣಲ್ಲೂ ನೀರು ತುಂಬಿತು. ಹೆಡ್ ಮಿಸ್ ಕಡೆ ತಿರುಗಿ ಅವಳು ನಿಜವನ್ನು ತಿಳಿಸಿದಾಗ ಅವಳ ಕಂಠವೂ ನಡುಗುತ್ತಿತ್ತು. ಹೆಡ್ ಮಿಸ್ ಆ ಟೀಚರರಿಗೆ, “ ಅವರಮ್ಮ ಹೈಸ್ಕೂಲು ಟೀಚರ್, ಅವಳಕ್ಕ ಇದೇ ಶಾಲೆಯ ಒಳ್ಳೆ ವಿದ್ಯಾರ್ಥಿನಿ, ಇವಳೂ ಕ್ಲಾಸಿನಲ್ಲಿ ಮೊದಲು, ಅದು ಹೇಗೆ ಅವಳನ್ನು ಅನುಮಾನಿಸಿದಿರಿ? ಹೊಡೆದಿರಿ? ಅವರಮ್ಮ ಬಂದು ಕೇಳಿದರೆ ನಾನೇನು ಹೇಳಲಿ ? ” ಎಂದು ಕೇಳಿದರು. ಅದಕ್ಕವರು ವ್ಯಂಗ್ಯವಾಗಿ “ಅಯ್ಯೋ, ಕದಿಯದೇ ಹೋದ್ರೆ ಇವಳ್ಯಾಕೆ ಅವಳಿಗೆ ತೆಗೆದುಕೊಡಬೇಕಿತ್ತು?” ಎಂದರು. ನಾನು ಕಣ್ಣೀರನ್ನು ಒರೆಸಿಕೊಳ್ಳುತ್ತಾ ಅವರನ್ನು ನೋಡಿ, ಗಟ್ಟಿಯಾಗಿ “ ಪಾಪ, ಅವಳು ಅಳ್ತಾ ಇದ್ದಳಲ್ಲ, ಮನೆಗೆ ಹೋದಾಗ ಅವರಪ್ಪ ಅವಳಿಗೆ ಹೊಡೆದ್ರೆ? ಅದಕ್ಕೆ ಕೊಟ್ಟಿದ್ದು” ಅಂದೆ.</div>
<div style="background-color: white; color: #1d2129; display: inline; font-family: Helvetica, Arial, sans-serif; font-size: 14px; margin-top: 6px;">
ಮನೆಗೆ ಬರುತ್ತಿದ್ದಂತೆಯೇ ಅಮ್ಮನಿಗೆ ನನ್ನ ಸಪ್ಪೆ ಮುಖ ನೋಡಿ ಗಾಬರಿಯಾಯಿತು. ಹಣೆ, ಕುತ್ತಿಗೆ ಎಲ್ಲಾ ಮುಟ್ಟಿ ನೋಡಿ ಏನಾಯ್ತಮ್ಮ, ಯಾರಾದರೂ ಏನಾದರೂ ಅಂದರಾ? ಎಂದು ಇಬ್ಬರ ಮುಖ ನೋಡಿ ಕೇಳಿದರು. ಅಕ್ಕ ಎಲ್ಲಾ ವಿವರಿಸಿ ಹೇಳುತ್ತಿದ್ದಂತೆ, ನಾನು ಬೀಳುವ ಹೊಡೆತಕ್ಕೆ ರೆಡಿಯಾಗುತ್ತಿದ್ದೆ. ಅಮ್ಮ ಎಲ್ಲಾ ಕೇಳಿಸಿಕೊಂಡು ನನ್ನೆಡೆ ತಿರುಗಿದಾಗ ನಾನು ಅಮ್ಮಾ, ದೇವರಾಣೆ ನಾನವಳ ದುಡ್ಡು ಕದ್ದಿಲ್ಲ ಎಂದೆ. ನಾ ಹೆದರಿದಂತೆ ಹೊಡೆಯುವ ಬದಲು ಅಮ್ಮ, ಎತ್ತಿ ತೊಡೆಯಲ್ಲಿ ಕುಳಿತುಕೊಳ್ಳಿಸಿ, ಹಿಂಗಾಲಿಗಾದ ಬರೆಯನ್ನು ಹಗುರಕ್ಕೆ ಬೆರಳಲ್ಲಿ ಸವರಿ, "ನೋವಾಗ್ತಿದೆಯಮ್ಮ?" ಎಂದು ನಿಧಾನವಾಗಿ ಕೇಳಿದರು.</div>
</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-64405537558398946442019-02-22T00:02:00.003-08:002019-02-22T00:04:47.671-08:00ಹೀಗೊಂದು ವಿಚಿತ್ರ ಸಿನಿಮಾ!<div dir="ltr" style="text-align: left;" trbidi="on">
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px;">
<br /></div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಒಂದು ವಿಚಿತ್ರ ಅನುಭವ ಕೊಡುವ ಈ ಸಿನಿಮಾ, ಅದನ್ನು ತೆಗೆದ ರೀತಿಗೆ ಮತ್ತು ಕಥೆ ಬರೆದ ರೀತಿಗೆ ಒಂದ್ಸಲ ನೋಡಲೇಬೇಕು. ಚೆಂದದ ಮುಖಗಳು, ಸೆಟ್ ಮತ್ತು ಈ ಲೋಕದಲ್ಲ ಅನಿಸುವ ಕಥೆ ಇದನ್ನು ಬೇರೆ ಅನಿಸುವಂತೆ ಮಾಡುತ್ತದೆ. ಹಾರರ್, ಕಾಮಿಡಿ, ಸೆಂಟಿಮೆಂಟಲ್, ಥ್ರಿಲರ್ ಹೌದು ಎಲ್ಲವೂ . ಒಂದೊಳ್ಳೆ ಪ್ರಯತ್ನ. ನಾನಿ ಎಂಬ ಹೆಸರಿನ ರೆಡ್ ಪಾರೆಟ್ ಮೀನು ಇದರಲ್ಲಿ ನಟಿಸಿದೆ (?!). ಇಡೀ ಸಿನಿಮಾದಲ್ಲಿ ಜಾಸ್ತಿ ಇಷ್ಟವಾಗಿದ್ದು ಅವನೇ! ಅದ್ಯಾರಿಗೆ ಹೀಗೆಲ್ಲಾ ಕಥೆ ಹೊಳೆಯುತ್ತೋ, ಅದನ್ನು ನಂಬಿ ಯಾರೋ ದುಡ್ಡು ಹಾಕಿ ಹೀಗೆ ಚಿತ್ರ ತೆಗೆಯುತ್ತಾರೋ ಎಂದೆನಿಸಿದ್ದು ಸುಳ್ಳಲ್ಲ!</div>
<div style="background-color: white; color: #1d2129; display: inline; font-family: Helvetica, Arial, sans-serif; font-size: 14px; margin-top: 6px;">
೨೦೧೮ರ ಈ ಸಿನಿಮಾ ನೆಟ್ ಫ್ಲಿಕ್ಸಿನಲ್ಲಿದೆ. ಇದರ ಟ್ರೈಲರಿನ ಲಿಂಕ್ ಇಲ್ಲಿದೆ.</div>
<div>
<div style="background-color: white; color: #1d2129; display: inline; font-family: Helvetica, Arial, sans-serif; font-size: 14px; margin-top: 6px;">
<br /></div>
</div>
<div>
<div style="background-color: white; display: inline; font-size: 14px; margin-top: 6px;">
<span style="color: #1d2129; font-family: "helvetica" , "arial" , sans-serif;">https://www.youtube.com/watch?v=xOEscQChX7M</span></div>
</div>
</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-74313254490947362912019-01-11T10:57:00.003-08:002019-01-11T10:57:40.465-08:00ಕಪ್ಪು ಬಿಳುಪಿನ ನಡುವೆ<div dir="ltr" style="text-align: left;" trbidi="on">
<span style="-webkit-text-size-adjust: auto; caret-color: rgb(49, 49, 49); color: #333333; font-family: helvetica; font-size: 0.7083333134651184rem; text-align: right; word-spacing: 1px;">Life isn't black and white. It's a million gray areas, don't you find?</span><span style="-webkit-text-size-adjust: auto; caret-color: rgb(49, 49, 49); color: #333333; font-family: helvetica; font-size: 0.7083333134651184rem; text-align: right; word-spacing: 1px;"> </span><br />
<div dir="ltr" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">
<div class="gmail_quote">
<div dir="ltr">
<div>
<span data-originalcomputedfontsize="11.333333015441895" data-originalfontsize="8.5pt" style="color: #333333; font-family: helvetica; font-size: 0.7083333134651184rem;"> Ridley Scott</span></div>
<div>
<br /></div>
<div>
<br /></div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
ದೀಪ್ತಿ ಬೆಡ್ರೂಮಿನ ಬಾಗಿಲು ತೆರೆದು ಒಳಗಿದ್ದ ಸೂಟುಕೇಸುಗಳನ್ನು ಎಳತರುತ್ತಿದ್ದಂತೆ ಅಣ್ಣ ಬಂದರು. "ಸರಿ ದೀಪು, ಎಲ್ಲಾ ರೆಡಿನಾ?" ಎಂದು ಸೂಟುಕೇಸುಗಳನ್ನು ದೂಡಿಕೊಂಡು ಮಥನ್ ಕಡೆ ತಿರುಗಿ "ಬರ್ತೀನಿ ಮಥನ್ ಸ್ವಲ್ಪ ಹೊತ್ತಲ್ಲೇ" ಎಂದವರೇ ಹೊರಹೋದರು. ಮಥನ್, ತೊಡೆಯಲ್ಲಿದ್ದ ನೀಹಾಳನ್ನೆತ್ತಿ ಚೇರಿನಲ್ಲಿ ಕೂರಿಸಿ, ಬಾಯಿಯಲ್ಲಿ ಸುರಿದ ಜೊಲ್ಲನ್ನು ಮೆತ್ತಗೆ ಕರ್ಚೀಫಿನಿಂದ ಒರೆಸಿ, ಮತ್ತವಳ ಕೂದಲನ್ನು ಸರಿಮಾಡಿ, ದೀಪ್ತಿ ಕಡೆ ತಿರುಗಿ ಅವಳನ್ನೊಮ್ಮೆ ಮೃದುವಾಗಿ ತಬ್ಬಿ, ಹಣೆ ಚುಂಬಿಸಿ, "ಗಾಡ್ ಬ್ಲೆಸ್ಸ್ ಯು ಪುಟ್ಟಿ" ಎಂದವನ ದನಿ ಹಸಿಯಾಗಿತ್ತು. ದೀಪ್ತಿ ಅವನ ತೋಳನ್ನು ಬಲವಾಗಿ ತಬ್ಬಿದವಳು ಕಣ್ಣುಮುಚ್ಚಿ ಅರೆ ಘಳಿಗೆ ಸುಮ್ಮನಿದ್ದು "ಚಿನ್ನು, ಒಟ್ಟಿಗೇ ಹೋಗೋಣ"ಎಂದಳು. ಮಥನ್ ಅವಳನ್ನು ನಿಧಾನಕ್ಕೆ ಸರಿಸಿ "ನಿಹಾಗೆ ಜ್ಯೂಸು ಕುಡಿಸೋ ವೇಳೆಯಾಯ್ತು" ಎಂದ. ಮುಷ್ಠಿ ಬಿಗಿದು, ಹಲ್ಲು ಕಚ್ಚಿ, ಕಣ್ಣುಮುಚ್ಚಿ ಭಾವನೆಗಳನ್ನು ನಿಯಂತ್ರಿಸಿಕೊಂಡ ದೀಪ್ತಿ ನೀಹಾಳ ಕಡೆಗೊಮ್ಮೆ ನೋಡಿ, ಅವಳನ್ನಪ್ಪಿ ಮುತ್ತಿಕ್ಕಿ, ಕಣ್ಣೊರೆಸುತ್ತಾ ಹೊರನಡೆದಳು, ಬಾಗಿಲು ಮುಚ್ಚುತ್ತಿದ್ದಂತೆ ಮಥನ್ ಮಿಕ್ಸಿಜಾರಿಗೆ ದಾಳಿಂಬೆಕಾಳುಗಳನ್ನು ಸುರಿಯುತ್ತಿದ್ದ.</div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
ದೀಪ್ತಿ ಕೆಳಬಂದಾಗ ಕಾರಿನ ಡಿಕ್ಕಿಯಲ್ಲಿ ಲಗೇಜ್ ತುಂಬುತ್ತಿದ್ದ ಅಣ್ಣ,ತಲೆಯೆತ್ತಲಿಲ್ಲ. ಅಮ್ಮ ಹಿಂದಿನ ಸೀಟಿನಲ್ಲಿ ಕೂತಿದ್ದವರು ಅವಳ ತಲೆ ಸವರಿದರಷ್ಟೇ. ಕಾರಿನಲ್ಲಿ ಕೂತು ಹೊರಟರೂ ಮೂವರ ನಡುವೆ ಮೌನವಿತ್ತು. ವಿಮಾನ ನಿಲ್ದಾಣ ಮುಟ್ಟಿ, ಅವರನ್ನು ಒಂದೆಡೆ ಕುಳ್ಳಿರಿಸಿ "ಈಗ ಬಂದೆ ದೀಪು" ಎಂದು ಹೋದವರು ವಾಪಸು ಬಂದಾಗ ಅವರ ಕೈಲಿದಿದ್ದು ಅವಳಿಗಿಷ್ಟದ ರೋಶರ್ಸ್ ಚಾಕಲೇಟಿನ ದೊಡ್ಡ ಡಬ್ಬ. ಅವಳ ಕಣ್ಣಿನಲ್ಲಿ ನೀರು ತುಂಬಲು ಆರಂಭಿಸಿದೊಡನೆ ಅವಳ ವಿಮಾನದ ಬೋರ್ಡಿಂಗಿಗೆ ಅನೌನ್ಸ್ಮೆಂಟ್ ಕೇಳಿಬಂತು. ಡಬ್ಬಿಯನ್ನು ಅವಳ ಕೈಗಿರಿಸಿದ ಅಣ್ಣ ಅವಳನ್ನಪ್ಪಿ, ತಲೆ ಸವರಿ "ನೀನು ತೆಗೆದುಕೊಂಡ ನಿರ್ಣಯ ನಿನಗೆ ಸರಿ ಅನಿಸಿದೆಯಲ್ಲ, ಸಾಕು. ಆರೋಗ್ಯದ ಕಡೆ ಗಮನ ಕೊಡು" ಎಂದರು. ಇಬ್ಬರ ಕಾಲು ಹಿಡಿದು ನಮಸ್ಕರಿಸಿದವಳು, ಕಣ್ಣೀರು ಒರೆಸಿಕೊಂಡು ಲಗೇಜ್ ಟ್ರಾಲಿಯನ್ನು ನೂಕುತ್ತಾ ಕಾಲೆಳೆಯುತ್ತಾ ಮುಂದೆ ಸಾಗಿದಳು. </div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
ಟೇಕಾಫ್ ಆಗುತ್ತಿದಂತೆ ಅವಳ ಮುಚ್ಚಿದ ಕಣ್ಣುಗಳ ಮುಂದೆ ನೆನಪಿನ ತೇರು ಸಾಗತೊಡಗಿತು. ಅನಿಮೇಶನ್ ಕಂಪೆನಿಯೊಂದರಲ್ಲಿ ಕ್ರಿಯೇಟಿವ್ ಹೆಡ್ ಆಗಿದ್ದ ಮಥನ್ ಸಿಕ್ಕಿದ್ದು ಗೆಳತಿಯೋರ್ವಳ ಮಗುವಿನ ಬರ್ತ್ ಡೇ ಪಾರ್ಟಿಯೊಂದರಲ್ಲಿ. ತನ್ನ ಕೋಡಿಂಗ್, ಅವನ ಬಣ್ಣದ ಲೋಕ ಮ್ಯಾಚ್ ಆಗುತ್ತಾ ಎಂದು ಅಳೆದೂ ಸುರಿಯುವ ಮುನ್ನವೇ ಇಬ್ಬರೂ ಪ್ರೀತಿಯಲ್ಲಿ ಮುಳುಗಿದ್ದರು. ವಿದ್ಯೆ, ರೂಪ, ಕೆಲಸ ಎಲ್ಲದರೂ ಮ್ಯಾಚ್ ಆಗುತ್ತಿದ್ದ ಇಬ್ಬರನ್ನು ನೋಡಿ ಈರ್ವರ ಹೆತ್ತವರೂ ಖುಷಿಪಟ್ಟು ಮದುವೆಗೆ ಒಪ್ಪಿಗೆ ನೀಡಿದ್ದರು. ಬದುಕು ಎಷ್ಟು ಸುಂದರವಪ್ಪ ಎಂದುಕೊಳ್ಳುವಷ್ಟರಲ್ಲಿ ಮಥನ್ ತಾಯಿ ಕ್ಯಾನರ್ಗೆ ತುತ್ತಾಗಿ ನಿಧಾನಕ್ಕೆ ಜೀರ್ಣಾವಸ್ಥೆಗೆ ಜಾರತೊಡಗಿದ್ದರು. ಹದಿನೆಂಟು ತಿಂಗಳುಗಳ ಅವಧಿಯಲ್ಲಿಯೇ ಕಣ್ಣುಮುಚ್ಚಿದ್ದರು. ಹುಟ್ಟಿದಾಗಿಂದ ತಂದೆಯನ್ನೇ ನೋಡದ, ಪ್ರಪಂಚವಿಡೀ ತಾಯಿಯೆಂದೇ ನಂಬಿದ್ದ ಮಥನ್ ತೀರಾ ಅಸ್ವಸ್ಥಗೊಂಡಿದ್ದ. ಹದಿನೆಂಟು ತಿಂಗಳೂ ಮನೆಯಿಂದಲೇ ಕೆಲಸ ಮಾಡುತ್ತಾ ಅಮ್ಮನನ್ನು ಮಗುವಿನಂತೆ ನೋಡಿಕೊಂಡಿದ್ದ, ದೀಪ್ತಿ ಅಣ್ಣ,ಅಮ್ಮ ಇಬ್ಬರೂ ಅವನಿಗೆ ಸಾಥ್ ನೀಡಿದ್ದರು. ದೀಪ್ತಿ ಅಮ್ಮನಂತೂ ದಿನಾಬೆಳಿಗ್ಗೆ ಅಡುಗೆ ಮಾಡಿಕೊಂಡು ಅಣ್ಣನೊಂದಿಗೆ ಬರುತ್ತಿದ್ದರು. ಶಕ್ಕುಅಕ್ಕ ಎಂದು ಅವರನ್ನು ಸಂಭೋದಿಸುತ್ತಾ ಅವರ ಕೊನೆಯ ದಿನಗಳನ್ನು ಸಹನೀಯಗೊಳಿಸಲು ಯತ್ನಿಸುತ್ತಿದ್ದರು. ಮೂವರೂ ಕೂತು ಯಾವುದಾದರೂ ಹಳೆಯ ಸಿನೆಮಾಗಳನ್ನು ನೋಡುತ್ತಲೋ, ಪುಸ್ತಕ ಓದುತ್ತಲೋ ಇದ್ದರೆ ಅವರೆಲ್ಲಾ ಕೆಲಸಗಳನ್ನು ಮಥನ್ ಮಾಡುತ್ತಿದ್ದ. ದೀಪ್ತಿ ಬಾಗಿಲ ಬಳಿಯೇ ನಿಂತು ಮಾತನಾಡುತ್ತಿದ್ದಳೇ ಹೊರತು ಅಂಟಿಯೂ ಅಂಟದಂತಿದ್ದಳು, ಒಮ್ಮೆ ಅವಳಮ್ಮ ಕೇಳಿದಾಗ ಅವಳ ಉತ್ತರ ಅಳುವಾಗಿತ್ತು. </div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
ಯಾತನೆಯ ಪರ್ವ ಮುಗಿದು ವರುಷವಾಗಿರಬೇಕು, ಮಥನ್ ಮತ್ತೆ ಆಫೀಸಿಗೆ ಹೋಗಲಾರಂಭಿಸಿದ್ದ. ಅಷ್ಟರಲ್ಲಿ ದೀಪ್ತಿ ಗರ್ಭಿಣಿಯಾಗಿದ್ದಳು. ಮಥನ್, ಅಣ್ಣಅಮ್ಮ ಎಲ್ಲರೂ ಖುಷಿಪಟ್ಟರೆ ಅವಳಿಗ್ಯಾಕೊ ಒಂದಿನಿತೂ ಕುಶಿಯಾಗಿರಲಿಲ್ಲ. ತನ್ನದೇ ಸ್ವಂತ ಟೀಮ್ ಕಟ್ಟಿಕೊಂಡು ಮಲ್ಟಿಮಿಲಿಯನೇರ್ ಪ್ರಾಜೆಕ್ಟ್ಲ್ಲಿ ಬ್ಯುಸಿಯಾಗಿದ್ದವಳಿಗೆ ಒಲ್ಲದ ಹೊರೆ ಅನಿಸತೊಡಗಿತ್ತು. ಸಾಲದಕ್ಕೆ ಮಾರ್ನಿಂಗ್ ಸಿಕ್ನೆಸ್,ಅಸಿಡಿಟಿ ತಾಪತ್ರಯಗಳು. ’ನಂಗೆ ಬೇಡ ಚಿನ್ನೂ’ ಎಂದು ಮಥನ್ ಎದೆಯಲ್ಲಿ ಮುಖ ಹುದುಗಿಸಿ ಅತ್ತರೆ "ಹಂಗೆಲ್ಲಾ ಅನ್ನಬಾರದು ಪುಟ್ಟಿ, ಅಮ್ಮನೇ ಮತ್ತೆ ಬರ್ತಿದ್ದಾರೆ ನೋಡು" ಅನ್ನುತ್ತಿದ್ದ. ಮತ್ತಷ್ಟು ಕಿರಿಕಿರಿಯಾಗಿ ಅಳುತ್ತಿದ್ದಳು. ನೋವನ್ನು ನೋಡುವುದೂ, ಅನುಭವಿಸುವುದೂ ಅವಳಿಗಾಗದ ಮಾತು. ಅವಳ ಅಳು ನೋಡಲಾಗದೆ "ಇವಳು ಕಷ್ಟ ಪಡೋದು ನೋಡೋಕಾಗಲ್ಲ ಅಮ್ಮ" ಎಂದರೆ ಅವಳಮ್ಮ "ಸಲ್ಪದಿನ ಅಷ್ಟೇ, ಸರಿಯಾಗುತ್ತೆ. ಅವಳೇನೂ ಚಿಕ್ಕವಳಲ್ಲ, ಲೇಟಾದ್ರೆ ಕಷ್ಟ, ನಾನು ಗಟ್ಟಿ ಇದ್ದಾಗಲೇ ಮಗುವಾಗಲಿ, ನಾನು, ದೀಪ್ತಿಯಣ್ಣ ನೋಡಿಕೊಳ್ಳುತ್ತೇವೆ, ಶಕ್ಕುಅಕ್ಕ ಹುಟ್ಟಿ ಬರ್ತಾರೆ" ಎನ್ನುತ್ತಿದ್ದರು. "ಅಮ್ಮನೂ ಮಥನ್ ಕಡೆ ಸೇರಿಕೊಳ್ತಾರೆ, ನಂಗ್ಯಾರೂ ಇಲ್ಲ ನೋಡಣ್ಣ" ಎಂದು ದೂರು ಅಣ್ಣನ ಬಳಿ ಹೋಗುತ್ತಿತ್ತು. ಯಾವಾಗಲೂ ನಕ್ಕು ತಲೆ ಸವರುತ್ತಿದ್ದ ಅಣ್ಣ ಒಂದಿನ "ನಿಜ ಹೇಳು ದೀಪು, ನಿಜಕ್ಕೂ ನಿಂಗೆ ಬೇಡ್ವಾ ಮಗು? ಇವಾಗಿನ್ನೂ ೨.೫ತಿಂಗಳು, ಮಥನ್ ಹತ್ರ ಮಾತಾಡ್ತೀನಿ" ಎಂದರು. ಸುಮ್ಮನಾದವಳು ಮುಂದೆ ಮಾತನಾಡಲಿಲ್ಲ. ಆದರೆ ಅಮ್ಮನ ಬಳಿ "ನಿಂಗೆ, ಮಥನ್ಗೆ ಆಲ್ವಾ ಬೇಕಿದಿದ್ದು, ನೀವಿಬ್ಬರೇ ಎಲ್ಲ ಮಾಡಬೇಕು" ಅಂದಿದ್ದಳು. ಅಂತೆಯೇ ನಡೆದುಕೊಂಡಿದ್ದಳು ಕೂಡ. ದಿನಾ ಬೆಳಗ್ಗೆ ಅಮ್ಮನ ಮನೆಯಲ್ಲಿ ನೀಹಾಳನ್ನು ಬಿಟ್ಟು ಹೋಗುತ್ತಿದ್ದಳು. ಸುಮಾರು ಒಂಭತ್ತು ತಿಂಗಳ ನಂತರ ಕೆಲಸಕ್ಕೆ ಮತ್ತೆ ಜಾಯಿನ್ ಆದವಳಿಗೆ ಸಿಕ್ಕಿದ್ದು ಮೊದಲಿಗಿಂತ ಕೆಳಗಿನ ಪೊಸಿಷನ್ ಹಾಗೂ ಹೈಕ್ ಹಾಗೂ ಬೋನಸ್ ಕೂಡಾ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆ ಒಂಭತ್ತು ತಿಂಗಳು ಅವಳ ಕರಿಯರ್ ಗ್ರಾಫಿನಲ್ಲಿ ತುಂಬದ ಬಿಟ್ಟ ಸ್ಥಳದಂತೆ ಅವಳನ್ನು ಅಣಕಿಸುತಿತ್ತು. ಅವಡು ಕಚ್ಚಿ ಹಗಲೂ ರಾತ್ರಿ ಜೀವತೇದು ಮತ್ತೆ ಕಂಪೆನಿಯ ಹಾಟ್ ಫೇವರಿಟ್ ಆಗಲು ಸುಮಾರು ಒಂದೂವರೆ ವರ್ಷಗಳು ಬೇಕಾಗಿದ್ದವು. ಅದೊಂದು ದಿನ, ರಾತ್ರಿ ಹನ್ನೆರೆಡೂವರೆಗೆ ಬಂದವಳಿಗೆ ಆಶ್ಚರ್ಯ ಕಾದಿತ್ತು, ಬಾಗಿಲು ತೆಗೆದ ಅಣ್ಣನ ಕಾಳಹೀನ ಮುಖ ನೋಡಿ ಗಾಬರಿಯಾಯ್ತು. ಅಣ್ಣ ಏನೂ ಮಾತಾಡದೆ, ಸುಮ್ಮನೆ ಒಳ ನಡೆದರೆ, ಅಮ್ಮ ಸೋಫಾ ಮೇಲೆ ಇವಳು ಬಂದಿದ್ದರ ಪರಿವೆಯೇ ಇಲ್ಲದಂತೆ ಕೂತಿದ್ದರು. ಡೈನಿಂಗ್ ಟೇಬಲ್ ಎದುರು ತಲೆ ಹಿಡಿದು ಕೂತಿದ್ದ ಮಥನ್. "ಏನಾಯ್ತು ಚಿನ್ನೂ?" ಎಂದದ್ದೇ ಅವಳನ್ನಪ್ಪಿ ಅಳಲಾರಂಭಿಸಿದ, ಇನ್ನಷ್ಟು ಗಾಬರಿಯಾಯ್ತು ಅವಳಿಗೆ "ಜಾಬ್ ಏನಾದ್ರೂ ಹೋಯ್ತಾ? ಪರ್ವಾಗಿಲ್ಲ, ಬೇರೆ ಹುಡುಕಿದ್ರಾಯ್ತು " ಅಂದೆಲ್ಲಾ ಬಡಬಡಿಸುತ್ತಿದ್ದವಳನ್ನು ತಡೆದ ಮಥನ್ "ನಮ್ಮ ನೀಹಾ ಸ್ಪೆಷಲ್ ಮಗು ಪುಟ್ಟಿ" ಎಂದು ಬೊಬ್ಬಿರಿದು ಕೂದಲು ಕಿತ್ತುಕೊಂಡು ಅಳಲಾರಂಭಿಸಿದ. ದೀಪ್ತಿ ಕಲ್ಲಂತೆ ನಿಂತಿದ್ದಳು.</div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
"ಮ್ಯಾಮ್, ನಿಮ್ಮ ಊಟದ ಆರ್ಡರ್ ಹೇಳ್ತೀರಾ?" ಎಂದು ಎಚ್ಚರಿಸಿದಳು ರಕ್ತ ಕೆಂಪು ಬಣ್ಣ ಬಳಿದ ಚೆಲುವೆ. ಮೆನು ಜಾಲಾಡಿ ಏನೋ ಹೇಳಿದ ದೀಪ್ತಿ ಕಿಟಕಿಯ ಕಡೆ ಮುಖತಿರುಗಿಸಿ ಕಾಣದ ಮೋಡಗಳ ಹುಡುಕಲಾರಂಭಿಸಿದಳು. ಶಕ್ಕು ಆಂಟಿ ನೋವನ್ನೇ ನೋಡಲಾಗದವಳಿಗೆ ಇದನ್ನ್ಯಾವುದನ್ನೂ ನೋಡುವ ಮನಸ್ಸಿರಲಿಲ್ಲ, ಒಂದಷ್ಟು ತಿಂಗಳುಗಳು ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳ ಸುತ್ತು ಹೊಡೆದಿದ್ದಾಯ್ತು, ಇದ್ದ ಬಿದ್ದವರ ಸಲಹೆ ಸೂಚನೆಗಳನ್ನು ಒತ್ತಾಯಪೂರ್ವಕವಾಗಿ ಕೇಳಿದ್ದಾಯ್ತು. ಉಹೂ,ಬದುಕು ಬದಲಾಗಲಿಲ್ಲ. ಮಥನ್, ಅಮ್ಮ, ಅಣ್ಣ ಎಲ್ಲರೂ ಸತ್ಯವನ್ನು ಅರಗಿಸಿಕೊಂಡು ನೀಹಾ ಬದುಕಿಗೆ ಬಣ್ಣ ತುಂಬಲು ಪ್ರಯತ್ನ ನಡೆಸುತ್ತಿದ್ದರೆ ಇವಳು ಮಾತ್ರ ಪ್ರತೀ ನಿಮಿಷವೂ ಸತ್ಯದಿಂದ ದೂರ ಓಡುತ್ತಿದ್ದಳು. </div>
<div data-originalcomputedfontsize="16" data-removefontsize="true" style="font-size: 1rem;">
ಒಂದೇ ಒಂದು ಸಲ "ಪುಟ್ಟಿ, ಕೆಲಸ ಬಿಡ್ತೀಯ, ನೀಹಾಗೆ ಹೆಚ್ಚು ಗಮನ ಬೇಕಿದೆ, ಅಣ್ಣಅಮ್ಮನಿಗೆ ಸಾಕಾಗ್ತಿದೆ, ಈ ಪ್ರಾಯದಲ್ಲಿ ಅವ್ರಿಷ್ಟು ಮಾಡೋದು ನಂಗೆ ನೋಡೋಕಾಗ್ತಿಲ್ಲ, ಅವರು ನೋಡಿಕೊಳ್ಳಲಿ ಅಂತ ನಾವು ನೀಹನನ್ನು ಬರ ಮಾಡಿಕೊಂಡಲ್ಲ ಅಲ್ವ?" ಎಂದಿದ್ದ. ಅವತ್ತಷ್ಟೇ ಕಷ್ಟುಪಟ್ಟು ತನ್ನದಾಗಿಸಿಕೊಂಡ ಪೊಸಿಷನ್ ಯಾರಿಗೋ ಬಿಟ್ಟುಕೊಟ್ಟು, ಅಲ್ಲಿ ಯಾರಿಗೂ ನೀಹಾ ಬಗ್ಗೆ ಏನೂ ಹೇಳದೆ ಮುಚ್ಚಿಟ್ಟ ದೀಪ್ತಿ, "ನಂಗ್ಯಾವಾಗಲೂ ಬೇಡ ಇತ್ತು, ನಿನ್ನಿಂದಾಗೆ ಆಗಿದ್ದು ಇವೆಲ್ಲಾ" ಅಂದುಬಿಟ್ಟಳು. ಮಥನ್ ಮಾತನಾಡಲಿಲ್ಲ, ಅದಾದ ನಂತರ ಆಫೀಸಿನಲ್ಲಿ ಕಾಡಿ ಬೇಡಿ ಬರುತ್ತಿದ್ದಕ್ಕಿಂತ ಕಡಿಮೆ ಸಂಬಳಕ್ಕೆ ವರ್ಕ್ಫ್ರಮ್ಹೋಂ ಆಯ್ಕೆಯನ್ನು ತನ್ನದಾಗಿಸಿಕೊಂಡಿದ್ದ. ತಿಂಗಳಿರೆಡು ಸಲ ಹೋಗಿ ಬರಬೇಕಿತ್ತು, ಅಣ್ಣಅಮ್ಮ ಮನೆಯಲ್ಲಿ ನೀಹಾಳನ್ನು ಬಿಡುವಾಗ ಓರ್ವ ನುರಿತ ನರ್ಸ್ ಕೂಡಾ ಆ ಎರಡು ದಿನಗಳಲ್ಲಿ ಅಲ್ಲಿರುವಂತೆ ನೋಡಿಕೊಂಡಿದ್ದ. </div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
ಅವಳಾಯ್ಕೆ ಮಾಡಿದ್ದ ಊಟ ಅವಳೆದುರು ಬಂದಿತ್ತು, ಸರಿಯಾಗಿ ಬೇಯದ ಆ ವಸ್ತುವನ್ನು, ಪ್ರತೀ ಗುಕ್ಕಿನೊಂದಿಗೂ ನೀರು ಕುಡಿಯುತ್ತಾ ಕಷ್ಟಪಟ್ಟು ಮುಗಿಸಿದಳು. ಹಸಿವಿರದೆ ಇದ್ದಿದ್ದರೆ ಇದನ್ನು ಮುಟ್ಟುತ್ತಲೇ ಇರಲಿಲ್ಲ ಅನಿಸಿತು. ಮತ್ತೆ ಮಥನ್ ಕಣ್ಣೆದಿರು ಸುಳಿದ.</div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
ದಿನಾ ಸಂಜೆ ತಂದೆ, ಮಗಳು ಅವರಿದ್ದ ಅಪಾರ್ಟ್ಮೆಂಟಿನ ಸುತ್ತ ವಾಕ್ ಮಾಡುತ್ತಿದ್ದರು, ಎದುರಿಗೆ ಸಿಕ್ಕಿದ ಎಲ್ಲರೂ ಚೆನ್ನಾಗಿಯೇ ಮಾತನಾಡಿಸುತ್ತಿದ್ದರು. "ಎಷ್ಟು ಇಂಪ್ರೂವ್ ಆಗ್ತಿದ್ದಾಳೆ ಗೊತ್ತಾ? ಇವತ್ತು ತಾರಾ ಆಂಟಿಯನ್ನು ಗುರುತಿಸಿ ನಕ್ಕಳು, ಬಾಲ್ ತೆಗೆದುಕೊಳ್ಳಲು ಪ್ರಯತ್ನಿಸಿದಳು" ಎಂದೋ ಮಥನ್ ಉತ್ಸಾಹದಿಂದ ವಿವರಿಸುತ್ತಿದ್ದರೆ ದೀಪ್ತಿ ನೋಟ ಅವನನ್ನೂ ದಾಟಿ ಗೋಡೆಯ ಮೇಲೆ ಚಿತ್ರದಲ್ಲಿ ಕೂತ ದೇವರಲ್ಲಿ ನೆಡುತಿತ್ತು. ’ಯಾಕೆ ಪುಟ್ಟಿ, ಮಾತಾಡು ’ಎಂದು ಮಥನ್ ಹೇಳಿದ್ದರೆ ಹೆಪ್ಪುಗಟ್ಟಿದ್ದ ಹಿಮ ಒಂಚೂರಾದರೂ ಕರಗುತ್ತಿತ್ತೋ ಏನೋ. ಎಂದಾದರೂ ಬೇಗ ಬಂದರೆ ದೀಪ್ತಿ ಕೂಡಾ ಇವರೊಂದಿಗೆ ವಾಕಿಂಗ್ ಬಂದರೆ ಯಾರೋ ಒಬ್ಬರಾದರೂ "ನಿಮ್ಮ ಆಫೀಸಿನಲ್ಲಿ ವರ್ಕ್ ಫ್ರಮ್ ಹೋಂ ಇಲ್ವಾ, ಇವಳು ದೊಡ್ಡವಳಾದ ಮೇಲೆ ಕಷ್ಟ ಆಲ್ವಾ?" ಎಂದೆಲ್ಲಾ ಹೇಳಿದಾಗ ಹುಚ್ಚು ಹಿಡಿದಂತಾಗುತಿತ್ತು. ಅಣ್ಣಅಮ್ಮನ ಬಳಿಯೂ ಮಾತು ಕಡಿಮೆ ಮಾಡಿದ್ದವಳಿಗೆ ಆಫೀಸಿನ ಗೋಡೆಗಳು, ಸ್ಯಾಲರಿ ಹೈಕುಗಳು, ಏರುತ್ತಲೇ ಇದ್ದ ಬ್ಯಾಂಕ್ ಬ್ಯಾಲೆನ್ಸ್, ಪಾರ್ಟಿಗಳು ನಶೆಯಂತೆ ಸುಖ ನೀಡುತ್ತಿದ್ದವು. ನೀಹಾ ಬಗ್ಗೆ ಯೋಚಿಸಿದಾಗೆಲ್ಲ ಎದೆಯಲ್ಲಿ ಅಸಾಧ್ಯ ನೋವೇಳುತ್ತಿತ್ತು, ಬಾತ್ರೂಮಿನ ನಲ್ಲಿಗಳು, ಬಕೆಟ್, ಮಗ್ಗುಗಳಿಗೆ ಸಾಧ್ಯವಿದ್ದರೆ ಅವಳ ಕಣ್ಣೀರಿನ ಅಳತೆ ಕೊಡುತ್ತಿದ್ದವೋ ಏನೋ. ಯಾವುದೋ ಪೇಯ್ನ್ ಕಿಲ್ಲರ್ ನುಂಗಿ ನೀರು ಕುಡಿದು ಮಲಗುತ್ತಿದ್ದಳು. </div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
ನೀಹಾ ಪ್ರತೀ ಹುಟ್ಟುಹಬ್ಬವನ್ನೂ ಅಪಾರ್ಟ್ಮೆಂಟಿನ ಮಕ್ಕಳನ್ನು ಕರೆದು ಕೇಕ್ ಕಟ್ ಮಾಡಿ ಆಚರಿಸುತ್ತಿದ್ದ ಮಥನ್, "ನಾಡಿದ್ದು ಜನವರಿ ೬, ಈ ಸಲ ಯಾವ ಥೀಮ್ ಮಾಡೋಣ ಕೇಕ್ ಅನ್ನ" ಎಂದ ಮಥನ್. ಅಷ್ಟೇ! ಕೈಲ್ಲಿದ್ದ ಮಗ್ ಅನ್ನು ಗೋಡೆಗೆ ಅಪ್ಪಳಿಸುವಂತೆ ಬಿಸುಟ ದೀಪ್ತಿ "ನಿಂಗೇನಾಗಿದೆ, ಒಂದ್ಸಲಾನಾದ್ರೂ ನಿಮ್ಮಮ್ಮನಿಗೆ, ಈ ಮಗೂಗೆ ಮಾಡಿದಷ್ಟು ಪ್ರೀತಿ ನಂಗೆ ಮಾಡಿದ್ಯಾ ಒಂದಿನ ಆದ್ರೂ, ಯಾವಾಗ್ಲೂ ನಾನ್ಯಾಕೆ ನಿಂಗೆ ಸೆಕೆಂಡ್ ಪ್ರಿಯಾರಿಟಿ, ಕೆಳಗೆ ಕರ್ಕೊಂಡು ಹೋಗ್ತಿಯಲ್ಲ ಇವಳನ್ನ, ಏನೆಲ್ಲಾ ಮಾತಾಡ್ತಾರೆ ಗೊತ್ತಾ? ಒಂಚೂರಾದ್ರೂ ಐಡಿಯಾ ಇದೆಯಾ? ಎಲ್ಲರ ಮನೆಗೆ ಫ್ರೆಂಡ್ಸ್, ರಿಲೇಟಿವ್ಸ್ ಬರ್ತಾರೆ, ನಮ್ಮನೆಗೆ ಯಾರೂ ಯಾರೂ ಬರಲ್ಲ...ನಂಗೂ ಎಲ್ಲರ ಥರ ಎಲ್ಲೆಲ್ಲೋ ತಿರುಗಾಡಬೇಕು, ಯು.ಎಸ್ ಅಲ್ಲೇ ಸೆಟ್ಲ್ ಆಗಬೇಕು ಅಂತಿದೆ, ನಾನೇನು ಮಾಡಿದೆ ಅಂತ ಇಂಥಹ ಶಿಕ್ಷೆ ಕೊಟ್ಟ ದೇವ್ರು? ಅಮ್ಮ ಹಾಗಾದ್ರು, ಇವಳು ಹೀಗೆ. ಇನ್ನು ಅಣ್ಣಅಮ್ಮನನ್ನೂ ನರಳೋದು ನೋಡೋದು ಬಾಕಿಯಿದೆ, ನನ್ನ ಕೈಲಾಗಲ್ಲ, ಬರೀ ನೋವಷ್ಟೇ ಬದುಕಾ? ಎಲ್ಲರೂ ಒಟ್ಟಿಗೆ ಸಾಯೋದೆ ಒಳ್ಳೇದು ಇದಕ್ಕಿಂತ" ಅಂದವಳೇ ಜೋರಾಗಿ ಅಳಲಾರಂಭಿಸಿದಳು. </div>
<div>
<br /></div>
<div data-originalcomputedfontsize="16" data-removefontsize="true" style="font-size: 1rem;">
ದೊಡ್ಡ ಶಬ್ದ, ಅಮ್ಮ ಕಿರುಚಿದ್ದಕ್ಕೆ ಕುರ್ಚಿಯಲ್ಲಿ ಕೂತಿದ್ದ ನೀಹಾ ಬೆಚ್ಚಿ ಬಿದ್ದು ಅಳಲೂ ಆಗದೆ ಹೆದರಿ ತಾಯಿಯನ್ನೇ ನೋಡುತ್ತಿದ್ದಳು. ಎದುರಿದ್ದ ಕುರ್ಚಿಯಿಂದ ಎದ್ದು ಬಂದು ದೀಪ್ತಿ ತಲೆಸವರಿದ ಮಥನ್ ಅವಳನ್ನಪ್ಪಿಕೊಂಡ. ಅವಳ ಅಳು ತಹಬಂದಿಗೆ ಬರುವವರೆಗೂ ತಟ್ಟಿ ಅವಳ ಪಕ್ಕದಲ್ಲೇ ಮೊಣಕಾಲೂರಿ ಕೂತು ಹೇಳಲಾರಂಭಿಸಿದ. "ಹೌದು ಪುಟ್ಟಿ, ನನಗೂ ಅನಿಸಿತ್ತು, ಆಮೇಲೆ ಯಾವುದು ಬದಲಾಗಲಾರದು ಎಂದು ಅರಿವಾದಾಗ ದೇವರ ವಿರುದ್ಧ ಯುದ್ಧ, ಅದೂ ಮುಗಿದ ಮೇಲೆ ಹತಾಶೆ, ನೋವು, ಕಣ್ಣೀರು. ಅಮ್ಮ ನನ್ನ ಪ್ರಪಂಚ ಆಗಿದ್ದರು ಪುಟ್ಟಿ, ನೀಹಾ ಬಗ್ಗೆ ಗೊತ್ತಾದಾಗ ಮತ್ತದೇ ನೋವು. ಎರಡೂ ನೋವುಗಳೂ ಪ್ರಚಂಡವಾದವುಗಳು, ಒಂದು ಎಲ್ಲರೂ ಅನುಭವಿಸಲೇಬೇಕಾದ ನೋವುಗಳಾದರೆ ಇನ್ನೊಂದು ದೇವರು ಚೂಸ್ ಮಾಡಿದವರಿಗೆ ಸಿಗುವ ನೋವು. ನಿನ್ನಂತೆ ನಾನೂ ದೂರ ಓಡಿದರೆ ನೀಹಾಗ್ಯಾರು? ನಮ್ಮದೇ ತುಣುಕಲ್ಲವೇ? ನಿಂಗೆಷ್ಟು ಕಷ್ಟ ಆಗ್ತಿದೆ ಗೊತ್ತು. ಅಣ್ಣಅಮ್ಮನನ್ನೇ ನೋಡು, ಅವರಿಗೂ ನೋವಿದೆಯಲ್ಲವೇ? ಇದ್ದಿದ್ದನ್ನು ಇದ್ದ ಹಾಗೆಯೇ ಒಪ್ಪಿಕೊಳ್ಳುವುದೇ ಬದುಕು, ಸೋಲನ್ನು ಒಪ್ಪಿಕೊಳ್ಳುವುದಲ್ಲ. ನಿಜ, ಅಣ್ಣಅಮ್ಮನೂ ಹೋಗುತ್ತಾರೆ, ಯಾರಿಗಿಲ್ಲ ಹೇಳು ಈ ನೋವು ಜಗತ್ತಿನಲ್ಲಿ, ನಮಗೆ ಮಾತ್ರವಲ್ಲವಲ್ಲ. ನಿಜಕ್ಕೂ ನಿನಗನಿಸುತ್ತಾ ನೀನು ಸೆಂಕಡ್ ಪ್ರಿಯಾರಿಟಿ ಅಂತ. ನಾನೇನೂ ಹೇಳಬೇಕಿಲ್ಲ, ಉತ್ತರ ನಿಂಗೇ ಗೊತ್ತಿದೆ. ಮತ್ತೆ ಯಾರೆಷ್ಟು ಆಡಿಕೊಳ್ಳುತ್ತಾರೋ ಗೊತ್ತಿದೆ ನಂಗೆ, ಹೆದರಿದರೆ ನೀಹಾ ಜೀವನ ಇನ್ನಷ್ಟು ಕಷ್ಟ, ಅವಳು ಎಲ್ಲದರ ಮಧ್ಯೆಯೇ ಬೆಳೆಯಬೇಕಾದವಳು, ಅವಳು ಬಾರ್ನ್ಸೋಲ್ಜರ್. ಅಷ್ಟೂ ಜನರಲ್ಲಿ ಒಂದೆರಡಾದರೂ ಒಳ್ಳೆಮನಸುಗಳಿವೆ, ನಮ್ಮನ್ನು ಪ್ರೋತ್ಸಾಹಿಸಿ ಬದುಕಲು ಸಹಾಯ ಮಾಡುತ್ತವೆ, ಅವನ್ನು ಗುರುತಿಸಬೇಕು, ನೀಹಾ ಕೂಡಾ ಕಲಿಯಬೇಕು ಅವನ್ನ ಗುರುತಿಸೋಕೆ. ಚೀರ್ ಅಪ್. ಈ ಸಲ ನೀಹಾ ಪಾರ್ಟಿಗೆ ನಿನ್ನ ಕಲೀಗ್ಸ್, ಎಲ್ಲಾ ರಿಲೇಟಿವ್ಸ್ ಅನ್ನೂ ಕರೆಯೋಣ, ನಾವೇ ನಮ್ಮ ಮಗುವನ್ನು ಒಪ್ಪಿಕೊಳ್ಳದಿದ್ದರೆ ಬೇರೆ ಯಾರು ಮಾಡ್ತಾರೆ?" ಎಂದ. </div>
<div data-originalcomputedfontsize="16" data-removefontsize="true" style="font-size: 1rem;">
ಹೌದು, ಬದುಕು ಎಷ್ಟು ಬದಲಾಗಿ ಹೋಯ್ತು, ಒಪ್ಪಿ ಗಟ್ಟಿಯಾದ ಕೂಡಲೇ ಕಾಲೂರಿ ಕೂತು ಬಿಟ್ಟಿತು, ನಿಜವಾದ ಸ್ನೇಹಿತರಾರು ಅನ್ನುವದನ್ನು ಕಾಲವೇ ತಿಳಿಸಿತು. ಆದರೆ ಕೈಲಿದ್ದ ಯು.ಎಸ್ ಪ್ರಾಜೆಕ್ಟ್ ಮಾತ್ರ ಬಿಡಲಾಗಲೇ ಇಲ್ಲ. ಇನ್ನೊಂದೆರಡು ವರ್ಷ, ಉಸಿರುಗಟ್ಟಿ ಬದುಕಿದರಾಯ್ತು, ದಿನಾ ಫೇಸ್ ಟೈಮ್ ಮಾಡಿದರಾಯ್ತು, ಅಣ್ಣ ಅಮ್ಮ ಇನ್ನು ಅಲ್ಲೇ ಬಂದಿರುತ್ತಾರೆ. ನನ್ನೀ ಕನಸು ನನಸಾದ ಕೂಡಲೇ ಬೇರೆ ಕೆಲಸ ನೋಡಬೇಕು. ಸಾಕಷ್ಟು ಕಾಂಟ್ಯಾಕ್ಟ್ಸ್ ಇದೆ, ಕನ್ಸನ್ಸಿ ಮಾಡಬೇಕು. ದುಡಿದ ಒಂದಿಷ್ಟು ಹಣವಿದೆ, ನೀಹನ ಕರ್ಕೊಂಡು ಒಂದಿಷ್ಟು ಸುತ್ತಾಡಬೇಕು.... ಕನಸು ಕಟ್ಟುತ್ತಲೇ ರೆಕ್ಕೆಬಿಚ್ಚಿ ಹಾರುತ್ತಿದ್ದ ಹಕ್ಕಿಯ ಮಡಿಲಲ್ಲಿ ದೀಪ್ತಿ ನಿದ್ದೆ ಹೋದಳು. ಬಾಲ್ಕನಿಯಲ್ಲಿ ಚೇರ್ ಅಲ್ಲಿ ಕೂತು ಬಾಯಿ ತುಂಬಾ ಅನ್ನ ತುಂಬಿದ್ದ ನೀಹಾಗೆ ದೂರದಲ್ಲಿ ಹಾರುತ್ತಿದ್ದ ವಿಮಾನ ತೋರಿಸಿ "ನೋಡು ನೀಹಾ, ಅದ್ರಲ್ಲಿ ಅಮ್ಮ ಇದ್ದಾರೆ!" ಅನ್ನುತ್ತಿದ್ದ ಮಥನ್.</div>
<div>
<br /></div>
</div>
</div>
</div>
<br class="Apple-interchange-newline" style="-webkit-text-size-adjust: auto;" /></div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-43907139548531172542018-07-15T22:08:00.001-07:002018-07-15T22:08:12.686-07:00ಚಿಟ್ಟೆ<div dir="ltr" style="text-align: left;" trbidi="on">
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಬಣ್ಣಗಳ ಕಳಕೊಂಡ ಚಿಟ್ಟೆಯೊಂದು</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಮತ್ತೆ ಹೊಸ ರಂಗು ಹುಡುಕ ಹೊರಟಿತು.</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಬಣ್ಣಗಳ ರಾಣಿ ಹೂವನ್ನು ಕೇಳಿತು </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಹೂವು ಮುಖ ತಿರುಗಿಸಿತು.</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ನೀಲಿ, ಬಿಳಿ, ಕೆಂಪು, ಬೂದು </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಆಕಾಶವ ಕೇಳಿತು,</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಅದೋ ಕ್ಷಣಕ್ಕೊಮ್ಮೆ ಬಟ್ಟೆ </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಬದಲಿಸಿರುವುದರಲ್ಲಿ ವ್ಯಸ್ತವಾಗಿತ್ತು.</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಆಸೆ ಬಿಡದೆ ನೀರಿನಾಳಕ್ಕಿಳಿದು </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಮೀನ ಬೇಡಿತು.</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಮಾತಾಡಲೂ ಸಮಯವಿಲ್ಲದ ಅದು </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಪುಳಕ್ಕನೆ ನೀರಲ್ಲಿ ಜಾರಿ ಹೋಯಿತು. </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ತಲೆಯೆತ್ತಿ ನೋಡಿದರೆ </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ನೂರು ವರ್ಣಗಳ ಹಕ್ಕಿ,</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಹಾರಿ ಅದರ ಬಳಿ ಹೋದರೆ</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಬಣ್ಣಗೆಟ್ಟ ಚಿಟ್ಟೆಯ ಕಂಡು</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಮುಖ ಸಿಂಡರಿಸಿ ಗಾಳಿಯಲ್ಲಿ ತೇಲಿ ಹೋಯಿತು.</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಪೂರ್ತಿ ಕುಸಿದ ತಥಾ ಕಥಿತ ಚಿಟ್ಟೆ</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಸುರಿವ ಮಳೆಯಲ್ಲಿ ಕೂತು </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಮನ ಪೂರ್ತಿ ಅತ್ತಿತ್ತು,</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಕಪ್ಪು ಬಿಳುಪು ಚಿಟ್ಟೆಯ ಕಂಡು</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಆಗಷ್ಟೇ ಉದಿಸಿದ ಕಾಮನಬಿಲ್ಲು ಬಾಗಿ </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಅಪ್ಪಿಕೊಂಡು ಸಂತೈಸಿತು, </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಇದೀಗ ಚಿಟ್ಟೆ ರಂಗು ರಂಗಾಗಿ </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ನಕ್ಕಿತು, ಕಾಮನಬಿಲ್ಲ ಮೇಲೊಂದು </div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಹೊಸ ಹಚ್ಚೆಯ ನೀವು ಕಂಡೀರಾ</div>
<div data-originalcomputedfontsize="16" data-removefontsize="true" dir="auto" style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 1rem; word-spacing: 1px;">
ಅವರಿಬ್ಬರೂ ಈಗ ಪ್ರಾಣ ಸ್ನೇಹಿತರು.</div>
</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-17205250698296755352018-07-03T08:21:00.003-07:002018-07-03T08:21:59.082-07:00ಗುತ್ತಿನ ಮನೆ<div dir="ltr" style="text-align: left;" trbidi="on">
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px;">
ಗುತ್ತಿನ ಮನೆಯ ಬಗ್ಗೆ ಬರೆಯಬೇಕು ಅಂದುಕೊಂಡು ಸುಮಾರು ತಿಂಗಳುಗಳೇ ಕಳೆದು ಹೋದವು. ಆಗಿರಲಿಲ್ಲ. ಕಾಡುವ ಜ್ವರದಿಂದ ಏನೂ ಕೆಲಸ ಮಾಡಲಾಗದೆ ಸುಮ್ಮನೆ ಮಲಗಿದ್ದವಳಿಗೆ ಇದನ್ನಾದರೂ ಬರೆಯೋಣ ಅನಿಸಿತು. ಈ ವಿವರಣೆಗಳೊಂದಿಗೆ ಒಂದಿಷ್ಟು ಫೋಟೋಗಳು ಮತ್ತು ಪುಟ್ಟ ವಿಡಿಯೊಗಳನ್ನೂ ಹಂಚಿಕೊಂಡಿದ್ದೇನೆ. ಒಟ್ಟಾರೆ ಕಣ್ಣಿಗೆ ಕಂಡದ್ದು, ಬುದ್ಧಿಗೆ ತಿಳಿದಿದ್ದು ಹಾಗೂ ನೆನಪಿರುವಷ್ಟನ್ನು ಇಲ್ಲಿ ಬರೆದಿದ್ದೇನೆ. </div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ಮಂಗಳೂರಿನ ಪಿಲಿಕುಳದಲ್ಲಿರುವ ಗುತ್ತಿನ ಮನೆಯ ಪ್ರತಿಕೃತಿ ಚೆಂದವಷ್ಟೇ ಅಲ್ಲ, ಅಚ್ಚುಕಟ್ಟಾಗಿ ಕೂಡಾ ನಿರ್ವಹಿಸಲ್ಪಟ್ಟಿದೆ. ವಿಸ್ತಾರವಾದ ಈ ಮನೆಯಲ್ಲಿ ಮೋಹನ್ ಎನ್ನುವ ವ್ಯಕ್ತಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಸುಮಾರು ನೂರು ಮರದ ಕಂಬಗಳು ಹಾಗೂ ತೊಲೆ, ದಾರಂದ, ಕುರ್ಚಿ, ಮೇಜು ಇತ್ಯಾದಿ ಸಾಕಷ್ಟು ಮರದ ವಸ್ತುಗಳಿರುವ ಈ ಮನೆಯಲ್ಲಿ ಒಂದೂ ಕಂಚುಕಾರದ ಗೂಡಾಗಲಿ, ಜೇಡನ ಬಲೆಯಾಗಲೀ ಕಾಣುವುದಿಲ್ಲ. ಪ್ರತೀ ಮೂಲೆ ಮೂಲೆಯೂ ಒಂದು ಚೂರು ಕಸ ಕಡ್ಡಿಯಿಲ್ಲದೆ ನೀಟಾಗಿದೆ. ಇಬ್ಬರು ಸಹಾಯಕರು ಇದ್ದಾರಂತೆ.</div>
<div style="background-color: white; color: #1d2129; font-family: Helvetica, Arial, sans-serif; font-size: 14px; margin-bottom: 6px; margin-top: 6px;">
ವಿಶಾಲವಾದ ಗುತ್ತಿನ ಮನೆಯ ಎದುರಿಗೆ ಒಂದು ದೊಡ್ಡ ತುಳಸಿ ಕಟ್ಟೆ ಹಾಗೂ ಬಾವಿಯಿದ್ದು ಅದರ ರಾಟೆ ಹಳೆಯ ಕಾಲದ್ದು, ಅಲ್ಲೊಂದು ಕಲ್ಲಿನ ಬಾನಿ, ಅದರಲ್ಲೊಂದು ಪುಟ್ಟ ಮೀನು. ನಾಯಿಗಳು ಮತ್ತು ಹಕ್ಕಿಗಳು ಅದರಿಂದ ನೀರು ಕುಡಿಯುತ್ತವಂತೆ. ಕಪ್ಪು ಮರದ ಕಂಬಗಳಿರುವ ದೊಡ್ಡ ಚಾವಡಿ, ಚಾವಡಿಯ ಬಲ ತುದಿಯಲ್ಲೊಂದು ದೈವ ಸ್ಥಾನದಂತಿರುವ ಕೋಣೆ. ಇಡೀ ಮನೆಯ ನೆಲಕ್ಕೆ ಹಾಸಿರುವ ಕೆಂಪು ಕಾಲಿಗೆ ತಂಪೆನಿಸುತ್ತದೆ. ಚಾವಡಿಯಲ್ಲೊಂದು ಮೇನೆ. ಅದಕ್ಕೆ ಹೊಂದಿಕೊಂಡಂತೆ ಇರುವ ಕೋಣೆಯಲ್ಲಿ ಒಂದು ಬಾಳೆಗೊನೆಯ ಪ್ರತಿಕೃತಿ , ಎರಡು ಕೋವಿಗಳು ಮತ್ತು ಬಗೆ ಬಗೆಯ ಕತ್ತಿಗಳನ್ನು ನೇತು ಹಾಕಲಾಗಿದೆ. ಮೆಟ್ಟಿಲಗಳ ಎರಡನೇ ಹಂತದಲ್ಲಿ ಮತ್ತೆ ಎರಡೂ ಕಡೆಗೆ ಇನ್ನೆರಡು ಕೋಣೆಗಳು. ಒಂದರಲ್ಲಿ ಒಂದು ಜೋಕಾಲಿಯಲ್ಲಿ ದೈವದ ಕತ್ತಿ, ಮುಖವಾಡಗಳನ್ನಿರಿಸಿದ್ದಾರೆ. ಆ ಕೋಣೆಯ ಹೊರ ಬರುತ್ತಿದಂತೆ ಗೋಡೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಮೂಲ ಗುತ್ತಿನ ಮನೆಗಳ ಹಲವಾರು ಚಿತ್ರಗಳನ್ನು ಅವುಗಳ ವಿವರಣೆಗಳೊಂದಿಗೆ ನೇತು ಹಾಕಿದ್ದಾರೆ. ಮಹಾ ದ್ವಾರದ ಬಾಗಿಲುಗಳ ಅಂದವಂತೂ ಹೇಳ ತೀರದು. ಬಾಗಿಲಿನ ಬಲಗಡೆ ಒಂದು ದೊಡ್ಡ, ಸಿಂಗಲ್ ಸೋಫಾದಂತಹ ಕುರ್ಚಿ. ಅದು ಸತ್ಯ ಪೀಠವಂತೆ. ಅದರ ಮೇಲೆ ಕೂತು ನ್ಯಾಯ ತೀರ್ಮಾನ ಹೇಳುತ್ತಿದ್ದರಂತೆ ಗುತ್ತಿನೊಡತಿ / ಒಡೆಯ.<br />ಒಳಗಡೆ ಕಾಲಿಡುತ್ತಿದಂತೆ ಎಡಗಡೆ ವಿಶಾಲವಾದ ಚಾವಡಿಯಂಥ ಜಾಗ. ಮೂಲೆಯಲ್ಲೊಂದು ಜೋಕಾಲಿ, ಅದರ ಮೇಲೆ ಮಾತ್ರ ಬೆಳಕು ಬಿದ್ದಿದೆ, ಅದರ ಮೇಲೆ ಅಜ್ಜಿ ಮೊಮ್ಮಕ್ಕಳಿಬ್ಬರು ಕೂತಿದ್ದಾರೆ, ಅರೆ! ಇವರ್ಯಾರು ಎಂದು ಹತ್ತಿರ ಹೋದರೆ ಅವು ಮಣ್ಣಿನ ಬೊಂಬೆಗಳು, ಆ ಇಡೀ ಜಾಗಕ್ಕೆ ಒಳ ಹೋಗದಂತೆ ಒಂದು ಕಬ್ಬಿಣದ ಸರಳಿನ ತಡೆ. ಅದಕ್ಕೆ ಅಂಟಿಕೊಂಡು ಅದೇನು ಎಂಬುದರ ವಿವರವುಳ್ಳ ಫಲಕ ಮತ್ತು ಒಂದು ಬಟನ್, ಒತ್ತುತ್ತಿದಂತೆ ಅದೆಲ್ಲೋ ಇಟ್ಟ ಸ್ಪೀಕರ್ ಇಂದ ಹೊಮ್ಮುವ ಒಂದು ಹಳೆ ಕಾಲದ ಕಥೆ, ಅದಕ್ಕೆ ಆ ಮಕ್ಕಳ ಪ್ರಶ್ನೆಗಳು, ಹೂಗುಟ್ಟುವಿಕೆ ಎಲ್ಲಾ ಸೇರಿ ನಿಜವಾಗಿಯೂ ಅವರಲ್ಲಿ ಇದ್ದಾರೇನೋ ಎಂಬ ಭ್ರಮೆ ಹುಟ್ಟಿಸಿಬಿಡುತ್ತದೆ. ಬಲಗಡೆಗೂ ಅಷ್ಟೇ ವಿಸ್ತಾರವಾದ ಜಾಗ ಹಾಗೂ ಮೂಲೆಯಲ್ಲೊಂದು ಕೊಠಡಿ. ಅಲ್ಲಿದ್ದವರು ಇವಾಗಷ್ಟೇ ಇಲ್ಲಿಂದ ಎದ್ದು ಹೋದರೋ ಎಂಬಂತಿರುವ ಬಟ್ಟೆ, ಬುಟ್ಟಿ, ಮಂಚ, ತೊಟ್ಟಿಲು ಹಾಗೂ ಕವಾಟುಗಳ ಜೋಡಣೆ. ಈ ಕೋಣೆಯನ್ನೂ ನೋಡಿ ಮುಗಿಸಿ, ಎರಡನೇ ಹಂತವನ್ನು ದಾಟಿ ಒಳ ಹೋದರೆ ಎದುರಿಗೆ ಕಣ್ಣಿಗೆ ಬೀಳುವ ವಿಶಾಲವಾದ ಅಂಗಳ, ಅದೊಂದು ಭವಂತಿ ಮನೆ. ಸೂರ್ಯನ ಬಿಸಿಲೂ, ಮಳೆ ಧಾರಾಳವಾಗಿ ಆ ಜಾಗಕ್ಕೆ ಬೀಳುತ್ತದೆ. ಎರಡು ಹೆಜ್ಜೆ ಇಳಿದರೆ ಆ ಅಂಗಳಕ್ಕೆ ಕಾಲಿಡಬಹುದು, ಆದರೆ ಅಲ್ಲಿಂದ ಏಳುವ ಧೂಳು ಹಾಗೂ ಹಕ್ಕಿಗಳು ಬಂದು ಗಲೀಜು ಮಾಡುತ್ತವೆ ಎಂದು ನೆಟ್ ಹಾಕಿ ಮುಚ್ಚಿದ್ದಾರೆ. ಬಾಗಿಲಿನ ಎರಡೂ ದಿಶೆಗಳಲ್ಲಿ ಬೇರೆ ಬೇರೆ ದೈವಗಳ ಪ್ರತಿಮೆಗಳು ಮತ್ತು ವಿವರಗಳ ಫಲಕಗಳು. ಮತ್ತೆ ಮುಂದೆ ಎಡಭಾಗಕ್ಕೆ ಸಾಗಿದರೆ ಒಂದು ಊಟಕ್ಕೆ ಕೂತುಕೊಳ್ಳುವ ಹಾಗಿರುವ ಹಜಾರದಂಥ ಜಾಗ. ಅಲ್ಲಿ ನೆಲದಲ್ಲಿ ಕೂತು ಸ್ವಲ್ಪ ಕುತ್ತಿಗೆ ಮೇಲೆ ಮಾಡಿ ನೋಡಿದರೆ ಅಲ್ಲೊಂದು ಟಿವಿಯಲ್ಲಿ ತಾಳೆ ಮರದಿಂದ ಹೆಂಡ ಇಳಿಸುವ ಒಂದು ಡಾಕ್ಯುಮೆಂಟರಿ ನೋಡಬಹುದು. ಅದೇ ಹಜಾರದ ಎಡಗಡೆ ಅಡುಗೆ ಮನೆ, ಥೇಟ್ ನನ್ನ ಅಜ್ಜಿಯ ಮನೆಯ ಅಡುಗೆ ಮನೆಯಂತೆ ಇದ್ದ ಇದರಲ್ಲಿ ಮಣ್ಣಿನ ಎಲ್ಲಾ ಪಾತ್ರೆ ಪಗಡಿಗಳು, ಭರಣಿಗಳು, ಹಾಲು ಮೊಸರು ತೂಗು ಹಾಕುವ ಸಾಮಗ್ರಿಗಳು, ಅಕ್ಕಿಮುಡಿ, ಅನ್ನ ಬಗ್ಗಿಸುವ ಬಾನಿ, ಕತ್ತಿಗಳು, ತುರಿಮಣೆ ಎಲ್ಲವೂ ಇವೆ. ಸಾಕಷ್ಟು ಕತ್ತಲಿದ್ದ ಒಲೆಯಲ್ಲಿ ಉರಿಯುವ ಕೃತಕ ಬೆಂಕಿಯ ಮಬ್ಬು ಬೆಳಕಲ್ಲಿ ಆ ಇಡೀ ಕೋಣೆಯನ್ನು ನಿಂತು ನೋಡುವುದು ಅದೆಷ್ಟು ಚೆಂದ. ಒಂದೆರಡು ಶತಮಾನಗಳು ಹಿಂದೆ ಹೋದ ಹಾಗಿನ ಅನುಭವ. ಮತ್ತೆ ಹಜಾರದಿಂದ ಕೆಳಗಿಳಿದು ಅಂಗಳದ ಅಂಚಿಗೆ ನಡೆಯುತ್ತಾ ಹೋದರೆ ಬಲಕ್ಕೆ ಹೊರಳುವಲ್ಲಿ ನಾಲ್ಕು ಯಕ್ಷಗಾನದ ವೇಷಗಳು. ಚೆಂದದ ಬಣ್ಣಗಳು ಹಾಗೂ ಉಡುಪುಗಳೊಂದಿಗೆ ನಿಂತಿರುವ ಮಾನವಾಕೃತಿಯ ಇವರನ್ನು ನೋಡುತ್ತಾ ಇರೋಣವೆನಿಸುತ್ತದೆ. ಅಲ್ಲೇ ಎಡಕ್ಕೆ ಮತ್ತೊಂದು ಕತ್ತಲೆ ಕೋಣೆ. ಏನಿದು ಎಂದು ಹೆದರುತ್ತಾ ಒಳ ಹೋದರೆ, ಫಲಕದ ಹತ್ತಿರ ಒಂದು ಬಟನ್, ಒತ್ತಿದ ಕೂಡಲೇ ಭಾಗವತರ ಆಲಾಪದೊಂದಿಗೆ ಎದುರಿನ ಗಾಜಿನ ಹಿಂದೆ ಒಬ್ಬಬ್ಬರೇ ಪಾತ್ರಧಾರಿಗಳು ನಿಧಾನಕ್ಕೆ ಮಂದ ಬೆಳಕಲ್ಲಿ ಕಾಣತೊಡಗುತ್ತಾರೆ. ಅದೊಂದು ಸುಂದರ ಅನುಭವ. ಅದೇ ಚಾವಡಿಯ ಕೊನೆಗಿರುವ ಇನ್ನೊಂದು ಕೋಣೆಯ ಆಟಿ ಕಳೆಂಜದ ಪಾತ್ರಧಾರಿಗಳೂ ಇದೇ ಥರ ಕಾಣಿಸಿಕೊಳ್ಳುತ್ತಾರೆ.<br />ಅಲ್ಲಿಂದ ಹೊರಬಿದ್ದು ಮತ್ತೆ ಅಂಗಳದ ಅಂಚಿಗೆ ನಡೆಯುತ್ತಾ ಹೋದಂತೆ ಖಾಲಿ ಜಾಗದಲ್ಲಿ ನೀಟಾಗಿ ಜೋಡಿಸಿಟ್ಟ ಬೇಸಾಯಕ್ಕೆ ಸಂಬಂಧಪಟ್ಟ ಸಾಮಾಗ್ರಿಗಳು, ತಲೆಯೆತ್ತಿದರೆ ಸಾಲಾಗಿ ಕಟ್ಟಿರುವ ಮಂಗಳೂರು ಸೌತೆಗಳು, ಇವೂ ಪ್ರತಿಕೃತಿಗಳೇ!</div>
<div style="background-color: white; color: #1d2129; display: inline; font-family: Helvetica, Arial, sans-serif; font-size: 14px; margin-top: 6px;">
ಅದೆಷ್ಟು ಸಲ ನೆನಪಲ್ಲೇ ಈ ಮನೆಯನ್ನು ಮತ್ತೆ ಮತ್ತೆ ಸುತ್ತು ಹಾಕಿದ್ದೀನೋ ಗೊತ್ತಿಲ್ಲ, ಅಷ್ಟು ಇಷ್ಟವಾಯಿತು. ನಿಜವಾದ ಗುತ್ತಿನ ಮನೆಗಳನ್ನು ನೋಡಿ ಬರಬೇಕೆಂಬುದು ನೆಕ್ಸ್ಟ್ ಪ್ಲಾನ್.<br />ನೀವೂ ಒಂದ್ಸಲ ಹೋಗಿ ಬನ್ನಿ</div>
</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-42425581423412549432018-07-02T11:09:00.000-07:002018-07-02T11:09:06.051-07:00The age of Adaline<div dir="ltr" style="text-align: left;" trbidi="on">
ಓಹ್ ಅಲ್ಲೊಂದು ಬೆಳ್ಳಿ ಕೂದಲು, ಇಲ್ಲೊಂದು ನೆರಿಗೆ, ಕಣ್ಣ ಅಂಚಿನಲ್ಲಿ ಒಂದು ಗೆರೆ ಛೆ, ಯಾಕಾದರೂ ವಯಸ್ಸಾಗುತ್ತದೆಯೋ ಎಂದು ನಿಟ್ಟಸಿರು ಬಿಡದವರುಂಟೆ? ಒಂದು ವೇಳೆ ಉರುಳುವ ವರ್ಷಗಳು ಯಾವ ಗುರುತನ್ನೂ ಮುಖದ ಮೇಲೆ ಗೀರದೆ ಇದ್ದಲ್ಲಿ ಹೇಗಿರುತ್ತಿತ್ತು? ಮಕ್ಕಳು ನಮ್ಮೆದಿರೆ ನಮಗಿಂತ ವೃದ್ಧರಾದರೆ, ಅದನ್ನು ಒಪ್ಪಿಕೊಳುವುದಾದರೂ ಹೇಗೆ? ವರವೆಂದು ನಾವೀಗ ಅಂದುಕೊಳ್ಳುವ ನಮ್ಮ ಬಯಕೆ ಘೋರ ಶಾಪವಾದರೆ?<br />
<br />
ಅವಳು ಅತೀ ಚೆಂದದ ಹೆಣ್ಣು, ಎಂಟು ದಶಕಗಳ ಕಾಲ ಅವಳ ಅಂದ ಒಂದಿನಿತೂ ಮಾಸಿಲ್ಲ, ಕಾಲರಾಯ ಅವಳ ಸೌಂದರ್ಯವನ್ನು ಕುಗ್ಗಿಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ, ಸಂಗಾತಿ ದೂರವಾಗಿ ಇದ್ದೋರ್ವ ಮಗಳು ಇವಳ ಅಜ್ಜಿಯಂತೆ ಕಾಣತೊಡಗಿದರೂ ಇವಳಲ್ಲಿ ಸ್ವಲ್ಪವೂ ಬದಲಾವಣೆಯಿಲ್ಲ. ಸಾಯುವ ಮನಸ್ಸಿಲ್ಲದ, ಬದುಕುವ ಅದಮ್ಯ ಪ್ರೀತಿಯ ಹೊತ್ತವಳು ಹೆಸರು, ವೇಷ ಬದಲಿಸಿ ಜನರಿಂದ, ಪ್ರೀತಿಸುವ ಮನಗಳಿಂದ ದೂರ, ಬಲು ದೂರ ಓಡತೊಡಗುತ್ತಾಳೆ. ಹೀಗೊಂದು ಅತೀ ವಿಚಿತ್ರ ಕಥೆ. ಲೀ ತೋಲಾಂಡ್ ಕ್ರೀಗರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ “The Age of Adaline” ನ ಕಥಾ ಹಂದರವಿದು. ಅಡಲೈನ್ ಫಿಲಂ ರೀಲ್ ನೋಡುತ್ತಾ ಕೂತಿರುವ ದೃಶ್ಯದೊಂದಿಗೆ ಆರಂಭವಾಗುವ ಕಥೆ ಇತಿಹಾಸದ ಹಲವು ಘಟನೆಗಳೊಂದಿಗೆ ನಮ್ಮ ಸುಂದರಿಯ ಕಥೆಯನ್ನೂ ಬಿಚ್ಚಿಡುತ್ತಾ ಹೋಗುತ್ತದೆ. ಪ್ರಕೃತಿಯ ವಿಚಿತ್ರ ವಿದ್ಯಮಾನದಿಂದ ಸತ್ತೇ ಹೋಗಿದ್ದ ೨೯ರ ಅಡಲೈನ್ ಗೆ ಮತ್ತೆ ಜೀವನ ದಾನವಾಗಿ ಸಿಗುವುದಲ್ಲದೆ ವಯಸ್ಸೇ ಆಗುವುದಿಲ್ಲ. ೧೦೭ ವರ್ಷಗಳ ನಂತರವೂ ೨೯ರ ಹರೆಯದಲ್ಲೇ ಕಾಲಿಟ್ಟವಳಿಗೆ ಸಿಗುವ ಜೀವನ ಸಂಗಾತಿ ಅದೆಲ್ಲವನ್ನೂ ಬದಲಿಸುತ್ತಾನೆ. ತಂದೆ, ಮಗ ಇಬ್ಬರನ್ನೂ ಪ್ರೀತಿಸುವ ಹೆಣ್ಣು ನಮ್ಮ ರಂಗನಾಯಕಿಯನ್ನು ನೆನಪಿಗೆ ತಂದಳು. ಎಲ್ಲೋ ಯಯಾತಿಯೂ ನೆನಪಾದ.<br />
ಯಾವುದೋ ಚಂದಮಾಮದ ಕಥೆಯಂತಿದ್ದರೂ ಚಿತ್ರ ಒಂದು ಒಳ್ಳೆ ಕಾದಂಬರಿ ಓದಿ ಮುಗಿಸಿದ ಭಾವನೆ ಕೊಡುತ್ತದೆ. ಸುಮಾರು ೨ ಘಂಟೆಗಳ ಕಾಲವಿರುವ, ಈ ಚಿತ್ರ netflix ಅಲ್ಲಿ ಲಭ್ಯವಿದೆ. ನೀವೂ ನೋಡಿ.</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-60300604617007130192018-07-02T11:08:00.001-07:002018-07-02T11:08:05.078-07:00Let it go<div dir="ltr" style="text-align: left;" trbidi="on">
ಇವತ್ತಿಗೂ ಸುಲಭವೇನಲ್ಲ<br />
<br />
ಬಿಟ್ಟು ಕೊಡುವುದು ಅಷ್ಟು ಸುಲಭವೇನಲ್ಲ<br />
<br />
ಬಿಟ್ಟು ಕೊಡುವುದು ಅಷ್ಟು ಸುಲಭವೇನಲ್ಲ<br />
ಇಷ್ಟೂ ದಿನ ತಪ್ಪದೇ ಕನಸುಗಳಲ್ಲಿ ಬಂದವರು<br />
ಎಚ್ಚರ ಭ್ರಮೆಗಳ ಸುಳಿಯಲ್ಲಿ ಒದ್ದಾಡುತ್ತಿದ್ದಾಗ<br />
ಎದೆಗಪ್ಪಿ ಸಂತೈಸಿ ನಾನಿಲ್ಲಿಯೆ ಇದ್ದೇನೆ ಎಂದವರು<br />
ಕಣ್ಣು ಬಿಟ್ಟು ಅತ್ತಾಗಿನಿಂದ ಪ್ರತೀ ಹೆಜ್ಜೆ ಹೆಜ್ಜೆಗೂ<br />
ಎಡವದಂತೆ ಸಾವರಿಸಿದವರು ಇನ್ನಿಲ್ಲವೆಂದು<br />
ಮುಚ್ಚಿದ ಕಣ್ಣುಗಳ ಹಿಂದೆ<br />
ಸರ ಭರ ಓಡುವ ಸಿನೆಮಾ ರೀಲುಗಳಲ್ಲಿ<br />
ಮಿಂಚಿ ಮರೆಯಾದವರು.<br />
ಇನ್ನೆಂದಿಗೂ ಸ್ಪರ್ಶಕ್ಕೆ, ನೋಟಕ್ಕೆ, ಮಾತಿಗೆ<br />
ನಿಲುಕಲಾರರು ಎಂಬುದು ಅರ್ಥವಾಗಬೇಕು<br />
ತಲೆಗಷ್ಟೇ ಅರ್ಥವಾದದ್ದು ಮನಸ್ಸಿನಾಳಕ್ಕೂ<br />
ಇಳಿಯಬೇಕು.<br />
ಮುಂದೆ ನಡೆಯುವ ಎಲ್ಲಾ ಶುಭ ಸಂಧರ್ಭಗಳಲ್ಲಿ<br />
ಚಿತ್ರದಲ್ಲಿ ಕೂತು ನಗುವ ಚೆಲ್ಲುವವರು ಇವರು.<br />
ತುಳಸಿ ನೀರು ಬಾಯಿಯಂಚಲ್ಲಿ ಇಳಿದು ಹೋಗಿದ್ದು<br />
ಕೈಯಾರೆ ಸುರಿದ ಬಿಸಿ ನೀರು, ತಣ್ಣೀರು<br />
ಸುಮ್ಮನೆ ಮೆತ್ತಿದ ಅರಸಿನ ಕುಂಕುಮ<br />
ಮೈಮೇಲೆ ಇರಿಸಿದ ಕರಿಮಣಿ, ಬಳೆ<br />
ಅಂಚಿನ ಹಳದಿ ಧಾರೆ ಸೀರೆ<br />
ಯಾವುದೂ, ಯಾವುದೂ, ಯಾವುದೂ ಸುಳ್ಳಲ್ಲ...<br />
ಕಾಡುವ ನೆನಪುಗಳ ಬಿರುಡೆ ಮುಚ್ಚಿ<br />
ಅದುಮಲಾಗುವುದಿಲ್ಲ , ಪದೇ ಪದೇ ಕಣ್ಣು ತುಂಬಬೇಕು<br />
ಜಿಟಿ ಜಿಟಿ ಮಳೆ ಸುರಿದಂತೆ.<br />
ಕಣ್ಣ ನೀರಿನಿಂದ ಎಷ್ಟು ತುಂಬಿದರು<br />
ತುಂಬಲಾಗದ ಬಾವಿಯೊಂದು ಎದೆಯಲ್ಲಿ<br />
ಇನ್ನೆಂದೂ ಸರಿಯಾಗದಂತೆ ಪೂರ್ತಿ ಬದಲಾಗಿ ಹೋದ ನಾವುಗಳು.<br />
<br />
ಬೊಬ್ಬಿರಿದು ಅಳಲು ಆಸ್ಪದ ಕೊಡದಂತೆ<br />
ನಮ್ಮದೇ ತುಂಡು ನಮ್ಮನ್ನೇ ದಿಟ್ಟಿಸಿ ನೋಡುತ್ತಿರಲು<br />
ಬಿಟ್ಟು ಕೊಡುವುದು ಅಷ್ಟು ಸುಲಭವೇನಲ್ಲ</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-23370571307912248792018-07-02T11:06:00.003-07:002018-07-02T11:06:52.425-07:00stories of Rabindranath Tagore<div dir="ltr" style="text-align: left;" trbidi="on">
ಚೆಂದ ಚೆಂದದ ಕಾಟನ್ ಸೀರೆಯುಟ್ಟು, ಕಿವಿಗೆ ರಿಂಗ್ ತೊಟ್ಟು ಓಡಾಡುವ ಹರೆಯದ ಹುಡುಗಿಯರು, ಕೆಂಪು ಹಣೆಬೊಟ್ಟು, ಸಿಂಧೂರವನ್ನು ಬೈತಲೆಗೆ ಬಳಿದ ಮದುವೆಯಾದ ಸ್ತ್ರೀಯರು, ಕಂಡೂ ಕಾಣದ ಮೇಕ್ ಅಪ್, ಬದಿಗೆ ಬೈತಲೆ ತೆಗೆದು ಎಣ್ಣೆ ಬಳಿದು ಬಾಚಿದ ಕೂದಲು, ಸದಾ ಜುಬ್ಬಾ ಪೈಜಾಮ ಅದಕ್ಕೊಂದು ಖಾದಿ ಕೋಟು ತೊಟ್ಟು, ದೊಡ್ಡ ಫ್ರೇಮಿನ ಕನ್ನಡಕದೊಳಗೆ ಮರೆಯಾದ ಮುಖ ಹೊತ್ತ ಸುಂದರರು. ಇವಿಷ್ಟೂ ಪಾತ್ರಧಾರಿಗಳ ವಿವರಣೆಯಾದರೆ, ಅವರಿರುವ ಜಾಗಗಳು ಇನ್ನಷ್ಟು ಚಂದ. ಸುಮ್ಮನೆ ತನ್ನ ಪಾಡಿಗೆ ಹರಿಯುವ ನದಿ, ಹಸಿರು ಉಟ್ಟ ಪರಿಸರ, ಅಲ್ಲಲ್ಲಿ ಗುಡಿಸಲುಗಳು, ಅಲ್ಲೊಂದು ಕೋಳಿ, ಮರಕ್ಕೆ ಕಲ್ಲೆಸೆಯುವ ಹುಡುಗರು. ಮನೆಗಳೋ ಅತೀ ಚೆಂದದವು, ಅವುಗಳಿಗೆ ಸುಂದರ ಬಾಲ್ಕನಿಗಳು, ಕಿಟಕಿಗಳು, ಅಲ್ಲಿಂದ ಇಣುಕುವ ಚೆಂದ ಚೆಂದದ ಮುಖಗಳು. ಊಟದ ಹಿತ್ತಾಳೆ ತಟ್ಟೆಗಳು, ಲೋಟಗಳು, ದಾದಾ ಬಾಬು, ಕಾಕಾ ಬಾಬು, ಕಾಕಿ ಮೊನಿ, ಶೋನ ಮುನಿ, ಪೊಧಿ(ಅತ್ತಿಗೆ) ಹೀಗೆ ಬಗೆ ಬಗೆ ಕಿವಿಗೆ ಹಿತವೆನಿಸುವ ಸಂಬೋಧನೆಗಳು. ಇಡೀ ಪರಿಸರ ಮನುಷ್ಯರ ಸಾದಾ ಸೀದಾ ಉಡುಗೆ ತೊಡುಗೆಯೊಂದಿಗೆ ಎಷ್ಟೊಂದು ಚೆನ್ನಾಗಿ ಹೊಂದುತ್ತಿತ್ತಲ್ಲ, ಆ ಕಾಲವೆಷ್ಟು ಚೆನ್ನವಿತ್ತು, ನಾನಿರಬಾರದಿತ್ತೇ ಆವಾಗ ಎಂದು ಖಂಡಿತಕ್ಕೂ ಅನಿಸುತ್ತದೆ . ಅನುರಾಗ್ ಬಸು ಎಪಿಕ್ ಚಾನೆಲ್ಲಿಗೋಸ್ಕರ ನಿರ್ದೇಶಿಸಿದ್ದ ‘ಸ್ಟೋರೀಸ್ ಒಫ್ ರವೀಂದ್ರ ನಾಥ್ ಟಾಗೋರ್” ನ ಪುಟ್ಟ ಪರಿಚಯವಿದು. ಟಾಗೋರರ ಕಥೆಗಳನ್ನ ಎಷ್ಟು ಬೇಕೋ ಅಷ್ಟೇ ನೀಟಾಗಿ ಕತ್ತರಿಸಿ ಇನ್ನಷ್ಟು ಚೆನ್ನಾಗಿ ಹೇಳಿದ್ದಾರೆ ಬಸು. ಟಾಗೋರರ ಕಥೆಗಳ ಬಗ್ಗೆ ಹೊಸತೇನೂ ಹೇಳುವಂತಿಲ್ಲ, ಅಷ್ಟು ಚೆಂದದ ಕಥೆಗಳನ್ನು ಅಷ್ಟೇ ಚೆನ್ನಾಗಿ ನಮ್ಮ ಕಣ್ಣಿಗೆ, ಮನಸ್ಸಿಗೆ ಕಟ್ಟಿಕೊಡುವಲ್ಲಿ ಬಸು ಗೆದ್ದಿದ್ದಾರೆ. ಇಂಪಾದ ಸಂಗೀತ, ಉತ್ತಮ ಛಾಯಾಗ್ರಹಣ ಮನಸ್ಸಿಗೆ ಖುಷಿ ಕೊಡುತ್ತದೆ. ಇನ್ನು ಪಾತ್ರದಾರಿಗಳಂತೂ ಅದ್ಭುತವಾಗಿ ನಟಿಸಿದ್ದಾರೆ, ಕಾಬೂಲಿವಾಲಾದ ಮುದ್ದು ಮಿನಿ ಮನಸ್ಸಲ್ಲಿ ಮನೆ ಮಾಡಿಬಿಟ್ಟಳು. ಇನ್ನು ಬಹುತೇಕ ಎಪಿಸೋಡುಗಳಲ್ಲಿ ಕಥೆಯ ಅಂತ್ಯದೊಡನೆ ಮುಂದಿನ ಕಥೆ ಶುರುವಾಗುತ್ತದೆ. ಈ ಪ್ರಯೋಗ ಖುಷಿ ಕೊಟ್ಟಿತು.<br />
<br /></div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-84580398560588271862018-07-02T11:05:00.003-07:002018-07-02T11:05:48.240-07:00Walking with wolves<div dir="ltr" style="text-align: left;" trbidi="on">
1 year ago,<br />
<br />
ವಿಶ್ವವಾಣಿ ವಿರಾಮದಲ್ಲಿ ಪ್ರಕಟವಾದದ್ದು , thanks to Raghu Apara.<br />
ಇದುವರೆಗೂ ತೋಳಗಳನ್ನ ಬೇಟೆಯಾಡಿಯೇ ಗೊತ್ತಿದ್ದ ಅಂಬರೀಷ ಇವತ್ತು ಒಂದು ವಾರದ ಹಿಂದೆಯಷ್ಟೇ ಸತ್ತ ಯುವ ತೋಳಗಳ ಎಲುಬುಗಳನ್ನು ಪರೀಕ್ಷಿಸುತ್ತಿದ್ದ ಗುಂಪಿನಿಂದ ಬೇರೆಯಾಗಿ ನಿಂತು ಯೋಚಿಸುತ್ತಿದ್ದಾನೆ. ಸುಮಾರು ಹದಿನೆಂಟು ತಿಂಗಳುಗಳಿಂದ ಹಿಂಬಾಲಿಸುತ್ತಿದ್ದ ಮರಿಗಳು ಇಂದು ಕೇವಲ ಎಲುಬುಗಳಾಗಿವೆ ಅನ್ನುವುದು ಅವನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಅವನ ಎದೆಯಾಳದಲ್ಲಿ ಏನು ನಡೆದಿರಬಹುದು? ಬಂಡೆಕಲ್ಲಿನ ರೂಪದಲ್ಲಿ ಕೂತ ದೇವರಿಗೆ ಕಾಯಿ ಒಡೆದು ನಮಸ್ಕರಿಸುತ್ತಾನೆ, ಯಾವುದೋ ದೇವಳದ ಕಲ್ಲಿನ ನಂದಿಯ ಕಾಲಿಗೆ ತಲೆಯಿಡುತ್ತಾನೆ. ಅವೆಲ್ಲವೂ ಮನದ ಕಲ್ಲನ್ನು ಕರಗಿಸುವ ಯತ್ನವೇ ಅಥವಾ ಪೂರ್ವ ಕರ್ಮಗಳಿಗೆ ಪ್ರಾಯಶ್ಚಿತವೇ?ತನಗೆ ತೊಂದರೆ ಬಂದೆಂತು ದ್ವೇಷ ಸಾಧಿಸುವ, ವಿನೋದಕ್ಕೆಂದು ಬೇಟೆಯಾಡುವ ಮನುಷ್ಯ ಜೀವಿಯ ಮನಕ್ಕೂ ಅಂಬರೀಷನ ಮನಕ್ಕೆ ಹೊಳೆದಿರಬಹುದಾದ ಭಾವ ತಟ್ಟಬಹುದೇ? ಈ ದೃಶ್ಯ ವನ್ಯಜೀವಿ ರಕ್ಷಣೆ ಹಾಗೂ ಉತ್ತಮ ಛಾಯಾಗ್ರಹಣಕ್ಕಾಗಿ ಪ್ರಶಸ್ತಿ ಪಡೆದಿರುವ ಸಾಕ್ಷ್ಯ ಚಿತ್ರದ್ದು.<br />
ಭಾರತ ದಕ್ಷಿಣ ಭಾಗಗಳಲ್ಲಿರುವ ತೋಳಗಳ ಮೇಲೆ ಸುಮಾರು ಮೂರು ವರ್ಷಗಳ ಕಾಲ ಕೃಪಾಕರ-ಸೇನಾನಿ ಜೋಡಿ ಮತ್ತು ಜೋಸೆಫ್ ರಾಜ ನಡೆಸಿರುವ ಸಂಶೋಧನೆಯ ಫಲವೇ 'ವಾಕಿಂಗ್ ವಿಥ್ ವೂಲ್ವ್ಸ್ ' ಸಾಕ್ಷ್ಯ ಚಿತ್ರ. ಕಾಲಗರ್ಭಕ್ಕೆ ಸೇರಿ ಹೋಗುತ್ತಿರುವ ಅಲೆಮಾರಿ ಕುರಿಗಾಹಿಗಳು ಹಾಗೂ ಮಡುಚು ಕಿವಿಯ ತೋಳರಾಯನ ಸಂಸಾರದ ಕಥೆಯನ್ನು ಕಲಾತ್ಮಕ ಹಾಗೂ ಕುತೂಹಲಕಾರಿಯಾಗಿ ಚಿತ್ರರೂಪಕ್ಕೆ ತಂದ ಹೆಗ್ಗಳಿಕೆ ಈ ತಂಡದ್ದು. ಕುರುಚಲು ಗಿಡಗಳ ಬಯಲಿನ ನಡುವೆ ಮಣ್ಣಿನ ಮಧ್ಯದಿಂದ ಪ್ರತ್ಯಕ್ಷವಾಗುವ ಚಿತ್ರದ ಹೀರೊ ಮಡುಚು ಕಿವಿ ಹಾಗೂ ಅವನ ಮಕ್ಕಳ ಒಡನಾಟ, ಬೇಟೆಯ ವಿಧಾನಗಳು, ಅಸಾಧ್ಯ ಬುದ್ಧಿಶಕ್ತಿ ಅತೀ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಮಡಚು ಕಿವಿಯ ಮಗ ಮತ್ತು ಬೇಲಿಯೊಳಗೆ ಭದ್ರವಾಗಿರಿಸಿರುವ ಚಿಕ್ಕ ಮರಿಗಳು ಹಾಗೂ ಹುಷಾರಿಲ್ಲದ ಕುರಿಗಳ ಮುಖಾಮುಖಿಯಂತೂ ರೋಮಾಂಚನ ಹುಟ್ಟಿಸುತ್ತದೆ. ಅದನ್ನು ಅತ್ಯದ್ಭುತವಾಗಿ ತಂಡ ಚಿತ್ರೀಕರಿಸಿದೆ.<br />
ಕುರಿಗಾಹಿಗಳ ತಂಡದ ಮುಖಂಡ ರಾಮಪ್ಪನ ತೋಳರಾಯನ ಬಗೆಗಿನ ಪ್ರೊಟೆಕ್ಟಿವ್ ನೆಸ್ ಹಿಂದಿರುವ ಒಂದು ಸುಂದರ (ಖಂಡಿತಾ ಮೂಢವಲ್ಲದ) ನಂಬಿಕೆ ಮನಸ್ಸು ತಟ್ಟುತ್ತದೆ. ಅದೇ ವೇಳೆ, ಮನುಷ್ಯರಿಟ್ಟ ವಿಷ ತಿಂದು ಸಾಯುವ ಮಡುಚು ಕಿವಿಯ ಯುವ ಮಕ್ಕಳ ಎಲುವುಗಳು ಕಣ್ಣಿಗೆ ಕಟ್ಟುತ್ತವೆ.<br />
<br />
ಅದಾಗಲೇ ಕಾಡು ನಾಯಿಗಳ 'ದಿ ಪ್ಯಾಕ್' ಚಿತ್ರಕ್ಕೆ ಗ್ರೀನ್ ಆಸ್ಕರ್ ಎಂದೇ ಪ್ರಸಿದ್ಧಿ ಪಡೆದ ವೈಟ್ಲಿ ಅವಾರ್ಡ್ ಪಡೆದ ಕೃಪಾಕರ-ಸೇನಾನಿ ಜೋಡಿಯ, ಸಹಬಾಳ್ವೆಯ ಬಗ್ಗೆ ಮಾತನಾಡುವ ೫೧ ನಿಮಿಷಗಳ ಈ ಚಿತ್ರ ಒಂದು ಸುಂದರ ಕಾವ್ಯ. ತಪ್ಪದೆ ನೋಡಿ.</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-36909672392740967682018-07-02T11:03:00.003-07:002018-07-02T11:03:34.272-07:00Bheemannana maga<div dir="ltr" style="text-align: left;" trbidi="on">
<span style="-webkit-text-size-adjust: auto; background-color: white; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">' ನಾನು ಭೀಮಸೇನರ ಮಗ' ಎಂದು ಹೇಳಿದಾಗಲೂ ಅಲ್ಲಿದ್ದವರೊಬ್ಬರು 'ಹೌದೇನು? ಹೆಂಗ ನಂಬೋಣು?' ಎಂದು ಕೇಳಿದರು. ನಾನು ನಿರ್ವಿಕಾರನಾಗಿ 'ಭಾರತದೊಳಗ ಅಪ್ಪನ ಸುಳ್ಳ ಹೆಸರ ಹೇಳೋ ಪದ್ಧತಿ ಇಲ್ಲ' ಎಂದು ಹೇಳಿದೆ. </span><br style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;" /><span style="-webkit-text-size-adjust: auto; background-color: white; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">ಭೀಮಸೇನ ಜೋಶಿ ಹಾಗೂ ಅವರ ಮೊದಲನೇ ಪತ್ನಿ ಸುನಂದರವರ ಹಿರಿಯ ಪುತ್ರ ರಾಘವೇಂದ್ರರ ಆತ್ಮಕಥನದ ಸಾಲುಗಳಿವು. ಲೋಕ ವಿಖ್ಯಾತ ಗಾಯಕ ತಂದೆಯ ಕುರಿತು ತನ್ನ ನೆನಪುಗಳು, ಅವರೆಡೆಗಿನ ಅತೀವ ಪ್ರೀತಿ, ಸಿಗದೇ ಹೋದಾಗ ಒದ್ದಾಡಿದ ರೀತಿ, ಪಟ್ಟ ಅವಮಾನಗಳು ಮತ್ತು ಎಲ್ಲವನ್ನೂ ಎದುರಿಸಿ ಬೆಳೆದ ರೀತಿಯನ್ನು ರಾಘವೇಂದ್ರರರು ನಿರ್ವಿಕಾರವಾಗಿ ಹೇಳುತ್ತಾ ಹೋದಂತೆ ಮನಸ್ಸು ವ್ಯಥೆಯಿಂದ ತುಂಬಿ ಹೋಯಿತು. </span><br style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;" /><span style="-webkit-text-size-adjust: auto; background-color: white; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">ಭೀಮಸೇನರು ಎರಡನೇ ಮದುವೆಯಾದ ಮೇಲೆ ಮೊದಲ ಪತ್ನಿ ಹಾಗೂ ಅವರ ಮಕ್ಕಳು ಪಟ್ಟ ಯಾತನೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ ಈ ಪುಸ್ತಕ. ತಂದೆಯದೇ ರೂಪ ಅಚ್ಚು ಒತ್ತಿದಂತಿದ್ದರೂ ಪದೇ ಪದೇ ತಾನು ಅದೇ ತಂದೆಯ ಮಗ ಎನ್ನುವುದನ್ನು ಜೀವನದುದ್ದಕ್ಕೂ ಸಾರಿ ಸಾರಿ ಹೇಳಬೇಕಾಗಿ ಬಂತು. ಎಲ್ಲವೂ ಸುರಳೀತವಾಗಿದ್ದಲ್ಲಿ ಅವರೂ ತನ್ನ ತಂದೆಯವರಂತೆ ಶ್ರೇಷ್ಠ ಗಾಯಕರಾಗುತ್ತಿದ್ದರೋ ಏನೋ. ಹಾಗಾಗಲಿಲ್ಲ. ದೇವರು ಕೊಟ್ಟ ಸಿರಿ ಕಂಠವಿದ್ದರೂ, ಪ್ರಪಂಚದ ಅತ್ಯುತ್ತಮ ಗಾಯಕ ತಂದೆಯಿದ್ದರೂ ಕೊನೆಯವರೆಗೂ ಅವರಿಂದ ಗಾಯನ ಕಲಿಯಲಾಗಲೇ ಇಲ್ಲ. ಹೆತ್ತ ತಂದೆಯಿಂದ ಸಿಗಬೇಕಾದ ವಿದ್ಯೆ, ಆಸರೆ, ರಕ್ಷಣೆ ಇವೆಲ್ಲವೂ ಬೇರೆಯವರ ಪಾಲಾಗಿ, ಎಂದೋ ಒಮ್ಮೊಮ್ಮೆ ಸಿಕ್ಕಾಗ ಅದಷ್ಟೇ ಅದೃಷ್ಟ ಎಂದು ಸ್ವೀಕರಿಸಿ ಕಹಿಯಿಲ್ಲದೆ ಅವರನ್ನು 'ಶಾಪಗ್ರಸ್ತ ಗಂಧರ್ವ' ಎಂದೇ ನಂಬಿ, ಅವರದೇ ರಾಗಗಳಲ್ಲಿ ಮುಳುಗಿ ಏಳುತ್ತಾ ಬದುಕ ಕಟ್ಟಿಕೊಂಡ ರಾಘವೇಂದ್ರರು ಭೀಮಸೇನರಷ್ಟೇ ಗೌರವ ಹುಟ್ಟಿಸುತ್ತಾರೆ. ತಂದೆಯ ಬಗೆಗಿನ ಅಸಾಧ್ಯ, ಅಪರಿಮಿತ, unconditional ಪ್ರೀತಿಯಿಂದ ಓದುಗರಿಗೆ ಹತ್ತಿರವೂ ಆಗುತ್ತಾರೆ. ಹಿರಿಯ ಮಗನಾಗಿ ಅತೀ ಚಿಕ್ಕ ವಯಸ್ಸಿನಲ್ಲೇ ತಾಯಿಯ ಕಷ್ಟ ಅರಿತು ಅದಕ್ಕಾಗಿ ಅವರು ಹಾಕುವ ಪ್ರಯತ್ನಗಳು ಹಾಗೂ ತಾಯಿಯ ಸಂಕಟವನ್ನು ಅವರು ಬಣ್ಣಿಸುವ ಪದಗಳು ಮೂಕರನ್ನಾಗಿಸುತ್ತವೆ. ಜಲಶೋಧನೆಯನ್ನು ಒಲಿಸಿಕೊಂಡ ರಾಘವೇಂದ್ರರು, ಆಳವಾದ ಬಾವಿಯ ತಳಕ್ಕಿಳಿದು ಸ್ವತಃ ಡ್ರಿಲ್ಲಿಂಗ್ ಮಾಡುತ್ತಾ, ಧೂಳನ್ನು ಮೆತ್ತಿಕೊಳ್ಳುತ್ತಾ ಕಂಪ್ರೆಸ್ಸರಿನ ಧ್ವನಿಯಲ್ಲಿ ಸ್ವರಗಳನ್ನು ಮಿಳಿತಗೊಳಿಸಿ ಭೀಮಣ್ಣರ ಹಾಡುಗಳನ್ನೇ ಹಾಡುತ್ತಾ ಬದುಕ ಸವೆಸುತ್ತಾರೆ. ಅವರೇ ಹೇಳುವಂತೆ ಭೀಮಣ್ಣರಿಂದಲೇ ನೋವಾದಾಗ ಅವರದೇ ರಾಗಗಳ ಮುಲಾಮು ಹಚ್ಚಿಕೊಳ್ಳುತ್ತಾರೆ. ಅವಮಾನ, ದುಃಖದಲ್ಲೇ ಬದುಕಿದ ರಾಘವೇಂದ್ರರು ನೆಮ್ಮದಿ ಹೊಂದುತ್ತಿದ್ದದ್ದು ತಂದೆಯ ಪ್ರೀತಿ ತುಂಬಿದ ಕಣ್ಣೋಟ ಹಾಗೂ ಅವರ ಕಾಲ ಸ್ಪರ್ಶದಿಂದ. ಕೃತಿಯುದ್ದಕ್ಕೂ ಪದೇ ಪದೇ ಅದರ ಪ್ರಸ್ತಾಪ ಬರುತ್ತದೆ. ತನ್ನ ತಂಗಿ, ತಮ್ಮಂದಿರ, ತಾಯಿಯ ಅಸಹಾಯಕತೆ ನೋಡುತ್ತಲೇ ಅದರ ಬಗ್ಗೆ ಹೇಳುತ್ತಲೇ ಅದಕ್ಕೆ ಕಾರಣರಾದವರ ಮೇಲೆ ಯಾವುದೇ ಕೆಟ್ಟ ಪದಗಳನ್ನು ಬಳಸದೆ 'ಅವರು' ಎಂದಷ್ಟೇ ಸಂಬೋಧಿಸುತ್ತಾರೆ. ಸಾಮಾಜಿಕ, ಆರ್ಥಿಕ ಭದ್ರತೆಯಿಲ್ಲದೆ ಅವಮಾನಗಳನ್ನಷ್ಟೇ ಉಂಡ ಓರ್ವ ವ್ಯಕ್ತಿ ಅಷ್ಟು ಉತ್ತಮವಾಗಿ ಬೆಳೆಯಬಲ್ಲನೆಂದರೆ, ಉಳಿಯಬಲ್ಲನೆಂದರೆ ಅದೊಂದು ಸಾಧನೆಯೇ. </span><br style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;" /><span style="-webkit-text-size-adjust: auto; background-color: white; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">ತಂದೆಯ ಬಾಲ್ಯದ ತುಣುಕುಗಳು, ಸಂಗೀತವನ್ನು ಅವರು ಹಠ ಕಟ್ಟಿ ಕಲಿತ ಪರಿ, ಸಂಸಾರದೊಂದಿಗೆ ಕಳೆದ ದಿನಗಳ, ಅವರ ಅವಲಕ್ಕಿ ಪ್ರೀತಿ, ಕಾರಿನ ವೇಗದ ಹುಚ್ಚು, ಕಬ್ಬಿಣದ ಸೌಟಿನ ಒಗ್ಗರಣೆ ಪ್ರೀತಿ, ಆರೋಗ್ಯದ ಬಗ್ಗೆ ಅವರಿಗಿದ್ದ ಕಾಳಜಿ, ಅಸಾಧ್ಯ ಜ್ಞಾನ ಇವೆಲ್ಲವನ್ನೂ ಹೇಳುತ್ತಾ ಭೀಮಸೇನರ ವ್ಯಕ್ತಿತ್ವದ ಮಜಲುಗಳನ್ನು ಪರಿಚಯಿಸುತ್ತಾರೆ. ಅವರ ನಿರ್ಧಾರದಿಂದ ಆದ ಘಟನೆಗಳು ಹಾಗೂ ಸಂಭಂದಪಟ್ಟ ಎಲ್ಲರೂ ಆಯುಷ್ಯವಿಡೀ ಒದ್ದಾಡಿದ ರೀತಿಗೆ ಅವರು ಒಳಗೊಳಗೇ ಪರಿತಪಿಸಿದ್ದನ್ನೂ ರಾಘವೇಂದ್ರರು ಗುರುತಿಸುತ್ತಾರೆ. </span><br style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;" /><span style="-webkit-text-size-adjust: auto; background-color: white; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">"ಇವರೆಲ್ಲಾ ನನ್ನ ಒಂದು ಸಾಕಿದ ಕರಡಿ ಮಾಡಿ ಇಟ್ಟಾರ. ಕೂಡು ಅಂದಕೂಡ್ಲೆ ಮೋಟಾರ್ ಸೈಕಲ್ ಮೇಲೆ (ಅಂದ್ರ ಸ್ಟೇಜ್ ಮ್ಯಾಲೆ) ಕೂಡಬೇಕು ಮತ್ತು ಸುತ್ತು ಹಾಕಬೇಕು (ಅಂದ್ರ ಹಾಡಬೇಕು) "</span><br style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;" /><span style="-webkit-text-size-adjust: auto; background-color: white; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">"ನಾ ಹಾಡಿ ಮನೆಗೆ ರೊಕ್ಕ ತರಲಿಲ್ಲ ಅಂದ್ರ ನನ್ನ ( ಮನೆಯ ನಾಯಿ) ಅದರ ಜಾಗಕ್ಕ ಕಟ್ಟತಾರ"</span><br style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;" /><span style="-webkit-text-size-adjust: auto; background-color: white; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">ಇವು ಭಾರತ ರತ್ನ ಭೀಮಸೇನ ಜೋಶಿಯವರ ಮಾತುಗಳೆಂದರೆ ನಂಬಲಾದೀತೇ? ಭೀಮಣ್ಣನ ಕೊನೆಯ ದಿನಗಳ ನೋವು ಓದುಗನನ್ನು ಅತೀ ಸಂಕಟಗೊಳಿಸುತ್ತದೆ. ಭಾರತರತ್ನ ಪ್ರಶಸ್ತಿಯ ಪ್ರಧಾನದ ವಿವರಗಳಂತೂ ಯಾರಿಗೂ ದುಃಖ ತರಿಸೀತು. ಹರಕು ಜಮಖಾನದ ಮೇಲೆ ಮಲಗಿದ ಭೀಮಸೇನರ ಪಾರ್ಥಿವ ಶರೀರ, ಚಪ್ಪಲು ಕಾಲುಗಳಿಂದ ಸುತ್ತ ಓಡಾಡುತ್ತಿದ್ದ ಜನ....ಛೆ! ಆ ಗಾನ ಗಂಧರ್ವನಿಗೂ ಇಂತಹ ಯಾತನೆಗಳು ಬೇಕಿದ್ದವೇ? ಗೊತ್ತಿಲ್ಲ...</span><br style="-webkit-text-size-adjust: auto; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;" /><span style="-webkit-text-size-adjust: auto; background-color: white; caret-color: rgb(49, 49, 49); color: #313131; font-family: -apple-system, HelveticaNeue; font-size: 16px; word-spacing: 1px;">ಈ ಪುಸ್ತಕ ಓದುತ್ತಾ ನನಗೆ ಭೀಮಸೇನರ ಬಗ್ಗೆ, ಅವರ ನಿರ್ಧಾರಗಳ ಬಗ್ಗೆ ಸಾವಿರಾರು ಪ್ರಶ್ನೆಗಳು ಹುಟ್ಟಿದವೇ ಹೊರತು ಕೋಪ ಬರಲಿಲ್ಲ. ರಾಘವೇಂದ್ರರು ತನ್ನ ಸಾಧನೆಗಳು, ಪತ್ನಿ, ಮಕ್ಕಳು, ತಾಯಿ ಎಲ್ಲರ ಬಗ್ಗೆಯೂ ಮುಕ್ತವಾಗಿ ಮಾತನಾಡುತ್ತಾರೆ. ಈ ತಂದೆ - ಮಗನ ಜುಗಲಬಂದಿಯಲ್ಲಿ ನಿಮಗ್ಯಾರು ಆಪ್ತರಾಗುತ್ತಾರೆ ಹೇಳುವುದು ಕಷ್ಟ.... ಬದುಕನ್ನು, ಮನುಷ್ಯರನ್ನು ಇನ್ನಷ್ಟು ಸರಳವಾಗಿ ನೋಡಲು, ರಾಗ ದ್ವೇಷಗಳಿಗೆ ಒಳಗಾಗದೆ ಇರಲು ಸಹಾಯ ಮಾಡಿತು ಈ ಕೃತಿ. ತಂದೆ ಮಗನ ವಾತ್ಸಲ್ಯವನ್ನು ಇದಕ್ಕಿಂತ ಚೆನ್ನಾಗಿ ವಿವರಿಸಿದ ಬೇರೆ ಪುಸ್ತಕ ನೆನಪಿಲ್ಲ ನನಗೆ</span></div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-70840720916991219192018-07-02T11:00:00.001-07:002018-07-02T11:00:07.612-07:00Putta<div dir="ltr" style="text-align: left;" trbidi="on">
ಹೀಗೆಲ್ಲ ಮಾಡೋ ಪುಟ್ಟ ಇವಾಗ ಪ್ರತೀ ಸಲ ಧೋನಿಯನ್ನು ನೋಡಿ, ಯಾಕೆ ರಿಟೈರ್ ಆದ ಅಂತ ಅಳುತ್ತಾನೆ.<br />
<br />
1. ಡೋರೆಮಾನ್ ಎಂಬ ರೋಬೊ ಬೆಕ್ಕಣ್ಣ ಮತ್ತು ಉಡಾಳ ಹುಡುಗ ನೊಬಿಟಾನ ದೊಡ್ಡ ಅಭಿಮಾನಿ ನನ್ನ ಪುಟ್ಟ. ಸುಮಾರು ೯ ವರ್ಷದಿಂದ ಡೋರೆಮಾನ್ ಪುಟ್ಟನ ಜೀವನದ ಭಾಗವಾಗಿದ್ದಾನೆ. ಒಂದು ದಿನ ಎಪಿಸೋಡ್ ನೋಡುತ್ತಾ ಕೂತಿದ್ದವನು ಅಳಲಾರಂಭಿಸಿದ. ಎಷ್ಟು ಸಮಾಧಾನ ಮಾಡಿದರೂ ಅಳು ನಿಲ್ಲುತ್ತಲೇ ಇಲ್ಲ, ಸುಮಾರು ಅರ್ಧ ಮುಕ್ಕಾಲು ಗಂಟೆ ಅತ್ತ ಮೇಲೆ ಅವನು ಹೇಳಿದ್ದಿಷ್ಟು. "ನೊಬಿಟಾ ದೊಡ್ಡವನಾಗಿದ್ದಾನೆ, ಅವನಿಗೊಬ್ಬ ಮಗನೂ ಇದ್ದಾನೆ, ಆದರೆ ಡೋರೆಮಾನ್ ಮಾತ್ರ ಹಾಗೆ ಇದ್ದಾನೆ, ಅವನು ರೋಬೊ ಅಲ್ವ? ನೊಬಿಟಾ ಕೆಲಸ ಮುಗಿಸಿ ಬಂದಿದ್ದಾನೆ, ರಾತ್ರಿಯಾಗಿದೆ. ಡೋರೆಮಾನ್ ಅವನನ್ನು ಕೇಳುತ್ತಾನೆ. ನೊಬಿಟಾ, ಹೋಂ ವರ್ಕ್ ಮುಗಿಸಿದ್ಯಾ? " ಅಂತ. ಅದು ಹೇಳುತ್ತಾ ಮತ್ತಿಷ್ಟು ಅತ್ತ. ಅದಕ್ಕೆ ನೀನ್ಯಾಕೆ ಅಳಬೇಕು ಅಂದೆ. "ನಿಂಗೇನೂ ಅನಿಸಲ್ವಾ, ನಿಂಗರ್ಥ ಆಗಲ್ಲ, ಹೋಗು" ಎಂದು ಸಿಟ್ಟಲ್ಲಿ ಕಿರುಚಿದ. ಆಮೇಲೆ ನಂಗರ್ಥ ಆಯ್ತು ಪುಟ್ಟ ನಿನ್ನ ಫೀಲಿಂಗ್ಸ್, ಡೋರೆಮಾನ್ ಪಾಪ, ಅವನೆಷ್ಟು ಇನ್ನೋಸೆಂಟ್ ಅಂದಾದ ಮೇಲೆ ಮಾತಾಡಿದ್ದು.<br />
<br />
2. ಪೋಕೆಮೊನ್ ಪುಟ್ಟನ ಇಷ್ಟದ ಇನ್ನೊಂದು ಕಾರ್ಟೂನು. ಅದ್ರಲ್ಲಿ ಪಿಕಾಚು ಅಂತ ಮುದ್ದು ಮುದ್ದಾಗಿರುವ ಅದೆಂತದೋ ಜೀವಿಯಿದೆ. ಒಬ್ಬ ಹುಡುಗನೊಟ್ಟಿಗೆ ಇರುವ ಅದನ್ನು ದೂರದ ಕಾಡಿಗೆ ತೆಗೆದುಕೊಂಡು ಹೋಗಿ ಅದರ ಹಾಗೆಯೇ ಇರುವ ಪಿಕಾಚುಗಳೊಂದಿಗೆ ಬಿಡುವ ಎಪಿಸೋಡಿಗೂ ಒಂದು ರಾಶಿ ಅತ್ತ. ನಾನು ಕೇಳಿದಾಗ ಮತ್ತದೇ ಡೈಲಾಗ್" ಹೋಗಮ್ಮ , ನಿಂಗೆ ಅರ್ಥ ಆಗಲ್ಲ".<br />
<br />
3. ಹೊಪ್ಪ ಝುನ್ಯ ಝುನ್ಯ ಅಂತ ಈ ಪುಟಾಣಿ ಪಿಗ್ಗಣ್ಣ (https://youtu.be/j5yKCUToLSw) ಕುಕಿಗೆ ಆಸೆ ಮಾಡಿ ಕುಣಿದು ಕುಪ್ಪಳಿಸಿ ಒದ್ದಾಡೋದನ್ನು ನೋಡಿ ನಕ್ಕರೂ, ಕೊನೆಗೆ ಅವನ ಕೈಗೆ ಕುಕಿ ಸಿಕ್ಕರೂ ತಿನ್ನಲಾಗದ ಹಾಗೆ ಅವನ ಮುಖಕ್ಕೆ ಗಾಜಿನ ಜಾಡಿ ಬಿದ್ದಾಗ ಅಯ್ಯೋ ಪಾಪ ಎಂದೆ. "ಅಮ್ಮ, ನಿಂಗೆ ಬೇಜಾರಾಯ್ತಾ?, ಬೇಜಾರು ಮಾಡ್ಕೋಬೇಡಮ್ಮ ಅದು ಅನಿಮೇಷನ್ " ಅಂದ ನನ್ನ ಪುಟ್ಟ!</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-82403225273508767472018-07-02T10:59:00.002-07:002018-07-02T10:59:33.463-07:00ಮೈಸೂರು ಜೂ ಬಗ್ಗೆ ಹೀಗೊಂದು ಚೆಂದದ ಡಾಕ್ಯುಮೆಂಟರಿ.<div dir="ltr" style="text-align: left;" trbidi="on">
ಇಲ್ಲಿ ನೀವು ಹ್ಯಾಂಡ್ಸಮ್ ಪೃಥ್ವಿ ಅವರಮ್ಮ ಮಾನ್ಯ, ಮ್ಯೂಸಿಷಿಯನ್ ಥರ ಕೈ ತಿರುಗಿಸೋ ಮೇಸನ್, ಗಳಿಗೆಗೊಮ್ಮೆ ಹುಲ್ಲಿನ ಹ್ಯಾಟ್ ತಲೆಗಿಟ್ಟು ಮತ್ತೆ ಬೀಳಿಸಿ ಮತ್ತೊಂದು ಹೊಸ ಹ್ಯಾಟ್ ಮಾಡಿಕೊಳ್ಳೋ ಅಭಿ, ಸುಮ್ಮನೆ ಬೋರ್ ಆದಾಗ ಜಗಳವಾಡೋ ಗಣೇಶ್ ಹಾಗೂ ದುರ್ಗಿ, ಸ್ನಾನ ಚೆನ್ನಾಗಿ ಮಾಡಿಸು ಅಂತ ಡಿಮ್ಯಾಂಡ್ ಮಾಡೋ ವಿರಾಟ್, ಹಲ್ಲುಜ್ಜಿಸಿಕೊಂಡು ಸರಿಯಾಗಿ ಬಾಯಿ ಕ್ಲೀನ್ ಮಾಡಿಸಿಕೊಳ್ಳುವ ಕೃಷ್ಣ, ತನ್ನ ಊಟ ಮುಗಿಸಿ ಬೇರೆಯವರ ಲಂಚ್ ಬಾಕ್ಸಿಗೆ ದಾಳಿಯಿಡುವ ಚಾಮುಂಡಿ, ಬೆನ್ನು ತುರಿಸಿಕೊಳ್ಳಲು ಟೊಂಗೆಯನ್ನೇ ಸ್ಕ್ರಬ್ ಮಾಡಿಕೊಳ್ಳುವ ಜಾಣ ಆನೆ ಎಲ್ಲರನ್ನೂ ನೋಡಬಹುದು. ಇವರೆಲ್ಲರ ಊಟದಲ್ಲಿ ಪಾಲು ಕೇಳಲು ಬರುವ ಅತಿಥಿಗಳನ್ನೂ ನೋಡಬಹುದು. 😊<br />
ಇವಿಷ್ಟೂ ಅಲ್ಲದೆ ಅಷ್ಟು ಪ್ರಾಣಿಗಳ ಊಟ, ಉಪಚಾರ, ಆರೈಕೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಆದರೆ ಸಮರ್ಥವಾಗಿ ಈ ವಿಡಿಯೋ ದಾಖಲಿಸಿದೆ. ಚೆಂದದ ನಿರೂಪಣೆ, ಸಂಗೀತ ಹಾಗೂ ಒಳ್ಳೆ ಕ್ವಾಲಿಟಿ ಇರುವ ಡಾಕ್ಯುಮೆಂಟರಿ. ಮಕ್ಕಳು ಇದನ್ನು ಖಂಡಿತಕ್ಕೂ ಇಷ್ಟಪಡುತ್ತಾರೆ.<br />
<br />
<a href="https://youtu.be/MuB7HHeuNbc">https://youtu.be/MuB7HHeuNbc</a></div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-52763600182918888772018-07-02T10:56:00.001-07:002018-07-02T10:56:59.359-07:00102 notout<div dir="ltr" style="text-align: left;" trbidi="on">
೧೦೨ ನಾಟ್ ಔಟ್<br />
<br />
ವೃದ್ಧ ಮನಸುಳ್ಳ ತರುಣರು ನೋಡಲೇಬೇಕಾದ ಚಿತ್ರವಿದು. <br />
ನೂರಾಎರಡು ವರ್ಷದ ತರುಣ ಹಾಗೂ ಎಪ್ಪತ್ತೈದು ವರ್ಷದ ಅಜ್ಜ ಮಗ, ಇಬ್ಬರ ನಡುವಿನ ಜಟಾಪಟಿ ಈ ಚಿತ್ರದ ತಿರುಳು. ಯಾವಾಗಲೂ ಸಪ್ಪೆ ಮುಖ ಹಾಕಿ ಕೂರುವ, ಅವಶ್ಯಕತೆಯಿಲ್ಲದಿದ್ದರೂ ದಿನವೂ ವೈದ್ಯರನ್ನು ಭೇಟಿಯಾಗುವ ಸಿಡುಕ ಮಗನಾಗಿ ರಿಷಿ ಕಪೂರ್ ಹಾಗೂ ಕಿಡಿಗೇಡಿ, ಚಿರ ಬಾಲಕನಾಗಿ ಅಮಿತಾಭ್ ಅದ್ಭುತವಾಗಿ ನಟಿಸಿದ್ದಾರೆ. ಬಗೆ ಬಗೆ ಸ್ಟೈಲಿಶ್ ಉಡುಪು, ತಕ್ಕಂತೆ ಕೇಶ ಶೈಲಿ, ಟೊಪ್ಪಿ, ಕೋಟು ಎಂದೆಲ್ಲ ಅಮಿತಾಭ್ ಮಿಂಚಿದರೆ, ಸಾದಾ ಬಟ್ಟೆಗಳಲ್ಲಿ ಡುಮ್ಮ ಹೊಟ್ಟೆಯ ರಿಷಿ ಕಾಣಿಸಿಕೊಳ್ಳುತ್ತಾರೆ. ಈ ಘಟಾನುಘಟಿಗಳ ಮಧ್ಯೆ ಮೂರನೇ ಪಾತ್ರವಾಗಿರುವ ಬೆರಗು ಕಣ್ಣಿನ, ಸಾದಾ ಸೀದಾ ಹುಡುಗ ಧೀರು (ಜಿಮೀತ್) ಕೂಡ ಇಷ್ಟವಾಗುತ್ತಾನೆ. <br />
ಚಿತ್ರದ ಕಥೆ, ಜಾರುತ್ತಿರುವ ವಯಸ್ಸು ಅದರೊಂದಿಗೆ ಬದುಕುವ ರೀತಿ, ಮುರಿದೇ ಹೋದರೂ ಇದೆಯೆಂದು ಭ್ರಮೆ ಹುಟ್ಟಿಸುವ ಸಂಬಂಧಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಾ ‘ಲೆಟ್ ಗೋ’ ಅನ್ನು ಹೇಳಿಕೊಡುತ್ತದೆ.<br />
ಸಾವಿನ ಸೀನ್ ನೇರ ಇಲ್ಲದೆ ಹೋದರೂ ತನ್ನ ಭಾರ ಸ್ವರದಲ್ಲಿ, ಹತಾಶೆಯ ಮುಖಭಾವದಲ್ಲಿ ಅಮಿತಾಭ್ ಅದರ ನೆನಪನ್ನು ಬಿಚ್ಚಿಡುವ ಭಾಗವಂತೂ ಅತ್ಯದ್ಭುತ. ವಿಷಾದ ರಸವನ್ನು ಮನದಲ್ಲಿ ಕಡೆದು ತೆಗೆಯುತ್ತದೆ ಆ ಸಂಭಾಷಣೆ. ಇಡೀ ಚಿತ್ರದಲ್ಲಿ ತುಂಬಿ ತುಳುಕುವ ಹಾಸ್ಯ ಈ ಭಾಗದಲ್ಲಿ ಮುಖ ಮುಚ್ಚಿ ಬಿಕ್ಕಳಿಸಿ ಅತ್ತುಬಿಡುತ್ತದೆ.<br />
ಚಿತ್ರ ಶುರುವಾಗಿ ಮುಗಿದದ್ದೂ ಗೊತ್ತೇ ಆಗುವುದಿಲ್ಲ. ನಂಗಿಷ್ಟ ಇಲ್ಲ ದೊಡ್ಡವರ ಸಿನೆಮಾ ನೋಡೋದು ಎಂದು ದಪ್ಪ ಮುಖ ಹೊತ್ತು ಬಂದ ಹನ್ನೊಂದು ವರ್ಷದ ಪುಟ್ಟ ಕಿಟಿಕಿಟಿ ನಗುತ್ತಲೇ, ತುಂಬಾ ಖುಷಿಯಿಂದ ನೋಡಿದ.</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-41116326253925451372018-07-02T10:55:00.001-07:002018-07-02T10:55:35.398-07:00Laura<div dir="ltr" style="text-align: left;" trbidi="on">
ಚುಕ್ಕುಬುಕ್ಕುವಿಗಾಗಿ 4 ವರ್ಷದ ಹಿಂದೆ ಬರೆದಿದ್ದು.<br />
<br />
ನನ್ನ ಲಾರಾ<br />
<br />
ಲಾರಾ ನನ್ನ ಜೀವನಕ್ಕೆ ಬಂದು ಎಷ್ಟು ವರ್ಷಗಳಾದವೋ ನೆನಪಿಲ್ಲ. ನನ್ನ ಜೀವನದ ಭಾಗ ಅವಳು. ಮೊದಲು ನನಗೆ ಆ ಪುಸ್ತಕ ಸರಣಿಯ ಕೆಲವು ಭಾಗಗಳು ಮಾತ್ರ ದೊರಕಿದ್ದವು. ಅನಂತರ, ಮುದ್ರಣವಾಗಿರದ ಪುಸ್ತಕಗಳಿಗೆ ಅಲೆಯದ ಜಾಗವಿಲ್ಲ. ಯಾರ್ಯಾರ ಕಾಲು ಹಿಡಿದೆನೋ ನನಗೇ ತಿಳಿಯದು! ಉಡುಪಿಯಿಂದ ಮಂಗಳೂರು, ಮೂಡಿಗೆರೆ, ಮೈಸೂರು, ಬೀದರ್, ಬೆಂಗಳೂರು ಎಲ್ಲಾ ಜಾಲಾಡಿ ಮುಗಿಸಿದರೂ ಪುಸ್ತಕವೆಲ್ಲೂ ಸಿಗಲೇ ಇಲ್ಲ. ತುಂಬಾ ವರ್ಷಗಳು ಹುಡುಕಾಡಿದೆ ಲಾರಾಳಿಗಾಗಿ, ನೆನೆದಾಗೆಲ್ಲಾ ಬೇಸರವೆನಿಸುತ್ತಿತ್ತು. ನಾಲ್ಕು ವರ್ಷದ ಹಿಂದೆ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿಯವರು ಕೇವಲ ಮುಖಪರಿಚಯ ಮತ್ತು ಅವಾಗಲೇ ನೂರು ಸಲ ಪೀಡಿಸಿ ಪೀಡಿಸಿ ಇಟ್ಟಿದ್ದರಿಂದ ಅವರ ಬಳಿ ಹಳೇ ಕಾಪಿಗಳು ಇವೆ ಅಂದರು. ಅವರ ದಯೆಯಿಂದ ಅದನ್ನು ಜೆರಾಕ್ಸ್ ಮಾಡಿಸಿ (ಅವರು ನನಗೆ ಜೆರಾಕ್ಸ್ ಮಾಡಲು ಕೊಟ್ಟದ್ದೇ ನನ್ನ ಸಂತೋಷಕ್ಕೆ ಮಿತಿಯಲ್ಲದಂತಾಗಿತ್ತು, ನಾನ್ಯಾವತ್ತೂ ಋಣಿ ಅವರಿಗೆ) ಎಲ್ಲಾ ಪುಸ್ತಕಗಳನ್ನು ಒಟ್ಟಿಗೇ ಅಪ್ಪಿಕೊಂಡಾಗ ಆದ ಖುಷಿ ಹೇಳಲು ನನ್ನಲ್ಲಿ ಪದಗಳಿಲ್ಲ. ಅವನ್ನು ಓದಿ ಮುಗಿಸುವವರೆಗೆ ಮಾತು-ಕಥೆ ಎಲ್ಲಾ ಮರೆಯುತ್ತಿದ್ದೆ. ಇಂದಿಗೂ, ಲಾರಾ ಪುಸ್ತಕಗಳು ನನಗೆ ಚಟವಿದ್ದಂತೆ, ೨-೩ತಿಂಗಳಿಗೊಮ್ಮೆ ಓದದಿದ್ದರೆ ಏನೋ ಕಳಕೊಂಡ ಭಾವನೆ. ಸ್ವಭಾವತಃ ಪುಸ್ತಕ ಪ್ರೇಮಿಯಾದ ನನಗೆ ಈ ಪುಸ್ತಕಗಳು, ಅತೀ ಅಪರೂಪದ ಮಿಠಾಯಿಯೊಂದನ್ನು ಮುಚ್ಚಿಟ್ಟು ಪದೇ ಪದೇ ಕದ್ದು ಸವಿದ ಭಾವ. ಅಷ್ಟು ರುಚಿಯಾದ ಪುಸ್ತಕಗಳಿವು.<br />
<br />
ಲಾರಾ ಕೊಡುವ ಜೀವನಾನುಭವ ತೀರಾ ದೊಡ್ಡದು, ಅವಳ ಬದುಕು, ಹೋರಾಟ, ಗಟ್ಟಿಗತನ ಎಂದೂ ಆದರ್ಶಪ್ರಾಯವೇ. ಅವಳ ಜೀವನ ಪಯಣ, ಆಗಿನ ಕಾಲದ ಜೀವನ ಶೈಲಿ, ಗೌರವಯುತ ನಡವಳಿಕೆ, ಮಕ್ಕಳಿಗೆ ಕಲಿಸುವ ಬಗೆ, ಮಕ್ಕಳು ಕಲಿಯುವ ಬಗೆ ಎಲ್ಲವನ್ನೂ ಒಂದೇ ಸಲಕ್ಕೆ ಹೇಳುವ ರೀತಿ ತೀರಾ ಆಪ್ತವೆನಿಸುತ್ತದೆ. ಓರ್ವ ತಾಯಿ ಅಥವಾ ತಂದೆಯ ಸ್ಥಾನದಲ್ಲಿ ನಿಂತು ನೋಡಿದಾಗ ಮಕ್ಕಳಿಗೆ ಒಳ್ಳೆಯ ವಿಚಾರ, ಶಿಸ್ತು, ಜೀವನ ಸಹಿಷ್ಣುತೆಯನ್ನು ಹೇಳುವ ಬಗೆಯನ್ನು ಅರ್ಥ ಮಾಡಿಕೊಡಿಸುವ ಈ ಕೃತಿ, ಮಕ್ಕಳ ಸ್ಥಾನದಲ್ಲಿ ನಿಂತು ನೋಡಿದಾಗ ಅವರ ಭಾವನೆಗಳು, ಅವರಿಗೆ ಹಿರಿಯರ ಭಾವಗಳು ಅರ್ಥವಾಗುವ ಪರಿಯನ್ನು ಎಳೆ ಎಳೆಯಾಗಿ, ಮೃದುವಾಗಿ ಬಿಡಿಸಿಕೊಡುತ್ತದೆ. ಬಹುಶಃ ಅವಳು ಪಟ್ಟ ಪ್ರತಿಯೊಂದು ನೋವು-ನಲಿವುಗಳು ಎಂದಿಗೂ ಪ್ರಸ್ತುತವೆನಿಸುವ ಜೀವನ ಪಾಠಗಳು. ನೋವನ್ನು ವೈಭವೀಕರಿಸದೇ ನಲಿವನ್ನು ಎತ್ತಿ ಹಿಡಿಯುವ ಅವಳ ಬರಹ ಅನನ್ಯ. ಎಲ್ಲೂ ಬೇಸರವಾಗದಂತೆ ಓದಿಸಿಕೊಂಡು ಹೋಗುವ ಭಾಗಗಳು ಅವಳೊಂದಿಗೆ ನಮ್ಮನ್ನೂ ದೊಡ್ಡ ಪ್ರಯರಿಯಲ್ಲಿ, ಸಿಲ್ವರ್ ಲೇಕ್ ದಡದಲ್ಲಿ, ವಿಸ್ಕಾನ್ಸ್ ಸನ್ನಿನಲ್ಲಿ, ದಟ್ಟ ಕಾಡುಗಳಲ್ಲಿ, ಪ್ಲಮ್ ನದಿ ತೀರದಲ್ಲಿ, ದೊಡ್ಡ ತೋಳಗಳೊಂದಿಗೆ, ಮಂಜಿನ ವಾತಾವರಣದಲ್ಲಿ ನಡೆದಾಡಿಸುತ್ತವೆ. ಹೆಜ್ಜೆ ಹೆಜ್ಜೆಗೂ ಅವಳ ಸಂತಸ, ದುಗುಡ, ಬಿದ್ದಲ್ಲೇ ಮತ್ತೆದ್ದು ನಡೆಯುವ ಛಲವನ್ನು ನಮ್ಮೊಳಗೇ ಪಡಿ ಮೂಡಿಸುತ್ತದೆ. <br />
<br />
ಬೇರೆ ದೇಶದ ಕಥೆಯಾದರೂ ನಮ್ಮ ನೆಲದ ಛಾಯೆ ಈ ಕತೆಗಳಲ್ಲಿ ಸುಳಿದಾಡುತ್ತಿರುತ್ತದೆ. ದನ-ಕರು ಸಾಕುವುದು, ಕಸೂತಿ-ಹೆಣಿಗೆ, ಬೆಣ್ಣೆ-ಮಜ್ಜಿಗೆ, ಕುಂಬಳಕಾಯಿಯ ಖಾದ್ಯಗಳು, ಚೀಸ್ ಮಾಡುವ ರೀತಿ, ಹಳೇ ಉಡುಪುಗಳಿಂದ ತಯಾರಿಸಿದ ಕರ್ಟನ್ ಗಳೂ, ಟೇಬಲ್ ಕ್ಲಾತ್ ಗಳೂ, ಲೇಸ್ ಗಳೂ, ಹೊರ ಜಗತ್ತಿಗೆ ಬರುವ ಮೊದಲು ಮನೆಯಿಂದ ಹೊರಡುವ ರೀತಿ, ಮನೆಯ ಹೊರಗಿನವರೊಂದಿಗೆ ನಡೆದುಕೊಳ್ಳಬೇಕಾದ ರೀತಿ-ನೀತಿಗಳು, ಊಟ-ತಿಂಡಿ, ಅದಕ್ಕೆ ಕೊಡಬೇಕಾದ ಗೌರವ, ಶಿಕ್ಷಣದ ಅಗತ್ಯತೆ ಮತ್ತು ಅದಕ್ಕೆ ಕೊಡುವ ಪ್ರಾಧಾನ್ಯತೆ ಹೀಗೆ ಎಲ್ಲವೂ, ಎಲ್ಲವೂ ನಮ್ಮದೇ ನೆಲದ ಕಥೆ ಅನಿಸಿಬಿಡುತ್ತದೆ.<br />
<br />
ಅತೀ ಭೀಕರ ಚಳಿಗಾಲದ ಸುಳಿಯಲ್ಲಿ ಅವಳ ಕುಟುಂಬ ಸಿಕ್ಕಿಬಿದ್ದಾಗ ಪಡುವ ಕಷ್ಟಗಳು, ಹಕ್ಕಿಗಳ ಧಾಳಿ, ಬೆಳೆ ನಾಶವಾದಾಗ ಅವರು ಒದ್ದಾಡುವ ರೀತಿ ಇವೆಲ್ಲಾ ನಿಮ್ಮಲ್ಲಿ ಅನುಕಂಪ ಹುಟ್ಟಿಸುವುದಿಲ್ಲ, ಬದಲಿಗೆ ಅವರು ಜೀವನ ಎದುರಿಸುವ ರೀತಿಗೆ ಸಲಾಮ್ ಹೊಡೆಯುವಂತೆ ಮಾಡುತ್ತದೆ. ಪದೇ ಪದೇ ಅಂಕಲ್ ಸ್ಯಾಮ್(ಸರಕಾರ) ನ ಪಣ ತೀರಿಸಲು ಹೋರಾಡುವ ಪಾ ಮತ್ತು ಲಾರಾಳ ಪತಿ ಅಲ್ಮಾಂಜೋ ವೈಲ್ಡರ್, ಪತಿಗೆ ಸಹಕಾರ ನೀಡುವ ಮಾ ಮತ್ತು ಲಾರಾ ಅಷ್ಟೇ ಅಲ್ಲ, ತಂದೆ-ತಾಯಿಗೆ ಮನೆ ನಡೆಸಲು ಸಹಾಯಕಳಾಗಿ ನಿಲ್ಲುವ ಲಾರಾ ಭಾರತದ ಯಾವುದೇ ಸಂಸಾರದ ಬಿಂದುಗಳು ಅನಿಸುವುದರಲ್ಲಿ ಒಂದಿನಿತೂ ಅಚ್ಚರಿಯಿಲ್ಲ. ತಗಡಿನ ಲೋಟ, ಕಲ್ಕಂಡು ಮಿಠಾಯಿಗಳಿಂದ ಕ್ರಿಸ್ ಮಸ್ ಆಚರಿಸುವ ಬಗೆ, ವಾರದ ದಿನಗಳಲ್ಲಿ ಕೆಲಸದ ಹಂಚಿಕೆ, ಲಾರಾಳ ಚಾರ್ಲಟ್ - ಅದನ್ನು ಕಳೆದು ಮತ್ತೆ ಪಡೆದದ್ದು, ಜಾಕ್ ಮತ್ತು ಲಾರಾಳ ಬಂಧ, ಮೊದಲ ರೈಲಿನ ಪಯಣವನ್ನು ಮಿಠಾಯಿಯಿಂದ ಆಚರಿಸಿದ ರೀತಿ, ಮೇರಿಗೆ ಲಾರಾ ಬೆಳಕಾಗುವ ಪರಿ, ಓಹ್! ಒಂದೇ ಎರಡೇ ಯಾವುದನ್ನು ಯೋಚಿಸಿದರೂ ನಿಜಕ್ಕೂ ವಿಭಿನ್ನ ರೀತಿಯ ಖುಷಿ, ಸ್ಪಂದನೆ, ಭಾವಗಳನ್ನು ಕೊಡುವ ಬರಹಗಳಿವು.<br />
<br />
ಲಾರಾ-ಮೇರಿಯಂತೆ ಹುಲ್ಲುಗಾವಲಿನಲ್ಲಿ ಬಿದ್ದು ಹೊರಳಾಡಬೇಕೆನಿಸುವ, ನದೀ ತೀರದಲ್ಲಿ ಪ್ಲಮ್ ಆರಿಸುವ, ಏಡಿಯೊಡನೆ ಆಟವಾಡುವ, ನದಿಯಲ್ಲಿ ಮೀನು ಹಿಡಿಯುವ, ಅಲ್ಮಾಂಜೋವಂತೆ ಬೇಸಿಗೆಯಲ್ಲಿ ಐಸ್ಕ್ರೀಮ್ ಮಾಡಿ ಸವಿಯುವ, ಅವನಂತೆ ಕುದುರೆ ಪಳಗಿಸುವ ಆಸೆ ಪ್ರತೀ ಸಲ ಓದುವಾಗ ನನ್ನಲ್ಲೂ ಉಕ್ಕುತ್ತದೆ. ಮಿ ಬೋಸ್ಟ್, ನೆಲ್, ರೆವೆರೆಂಡ್ ಆಲ್ಡೆನ್, ನೆಲ್ಲಿ, ಕ್ಯಾಪ್ ಗಾರ್ಲೆಂಡ್, ಐಡಾ, ಜಾಕ್, ಶೆಪ್, ಮಿಸ್ ವೈಲ್ಡರ್, ಬಿಗ್ ಸ್ಯಾಮ್ ಎಲ್ಲಾ ಪಾತ್ರಗಳೂ ಕಣ್ಣ ಮುಂದೆ ಹೋಗುತ್ತವೆ. ಆ ವ್ಯಕ್ತಿಗಳ ಜೊತೆ ಲಾರಾಳಂತೆ ನನಗೂ ಒಡನಾಟವಿದೆ. ಜಾಕ್ ಅಂತೂ ನನ್ನದೇ ಜತೆಗಾರನಾಗಿ ಬಿಟ್ಟಿದ್ದಾನೆ, ಅವನ ಪರಲೋಕ ಪಯಣ ಮನಸ್ಸನ್ನು ಪ್ರತೀಸಲ ಪೀಡಿಸುತ್ತದೆ.<br />
<br />
ಮೂಲತಃ ಸಸ್ಯಾಹಾರಿಗಳಾದ ನಮಗೇ ಬಾಯಿಯಲ್ಲಿ ನೀರೂರಿಸುವಂತೆ ಮಾಡಿದ್ದಾಳೆ ಲಾರಾ, ಅವಳು ವಿವರಿಸಿದ ಹಂದಿ ಮಾಂಸವನ್ನು ಒಮ್ಮೆ ತಿನ್ನಬೇಕು ಅನಿಸಿತ್ತು ಎಂದು ಪ್ರಕಾಶ್ ಹಾಗೂ ಪ್ರಭಾ ದಂಪತಿಗಳು ನನ್ನಲ್ಲಿ ಹೇಳಿದ್ದು ನೆನಪಿದೆ. ಅಷ್ಟು ಚೆಂದದ ವಿವರಣೆ ಲಾರಳದ್ದು ಹಾಗೂ ನನಗೂ ಹಾಗೆಯೇ ಅನಿಸಿದ್ದು ಸುಳ್ಳಲ್ಲ! ಚೀಸ್, ಹಂದಿ ಮಾಂಸದ ಸಾಸೆಜ್, ಹಿಕರಿ ಹೊಗೆಯಾಡಿಸಿದ ಜಿಂಕೆ ಮಾಂಸ, ಜಜ್ಜಿದ ಈರುಳ್ಳಿ, ಬೇಯಿಸಿದ ಬಿಳಿಯಾದ ಆಲೂಗಡ್ಡೆ, ಆಪಲ್ ಪೈ, ಕುಂಬಳ ಕಾಯಿ ಪೈ, ಬ್ಲಾಕ್ ಬರ್ಡ್ ಪೈ, ಟೊಮೇಟೊ ಮುರಬ್ಬ, ಕರಡಿ ಮಾಂಸ, ಕ್ಯಾರೆಟ್ ತುರಿಯಿಂದ ಬಣ್ಣಗೊಳಿಸಿದ ಹೊಂಬಣ್ಣದ ಬೆಣ್ಣೆ, ಕೆಂಪು ಕಪ್ಪು ಶುಂಠಿ ಖಾರ ಬಗೆ ಬಗೆ ಸ್ವಾದದ ಕಲ್ಕಂಡು ಮಿಠಾಯಿಗಳು, ಪ್ಲಂ ಹಣ್ಣುಗಳು, ಟರ್ನಿಪ್, ಮೇಪಲ್ ಸಕ್ಕರೆ, ಆಯಿಸ್ಟರ್ ಮೀನು-ಸೂಪು, ಪಾಪ್ ಕಾರ್ನ್ ಎಲ್ಲಾ ಬಿಡಿ ಕೊನೆಗೆ ಕೈಲ್ಲಿ ಬೀಸಿದ ಗೋಧಿಯಿಂದ ಮಾಡಿದ ಕಂದು ಒರಟು ಬ್ರೆಡ್ ಹೀಗೆ ಲಾರ ಬರೆದಿರುವ ತಿನಿಸುಗಳೆಲ್ಲವೂ ಓದುಗರ ಬಾಯಿಯಲ್ಲಿ ನೀರೂರಿಸುವಂತಿದೆ.<br />
<br />
ಪ್ರತೀ ಮಗುವಿಗೂ, ತಾಯಿ-ತಂದೆಗೂ, ಗೆಳೆಯ-ಗೆಳತಿ ಯಾರಿಗೂ ಕೊಡಬಹುದಾದ ಅತೀ ಸುಂದರ ಉಡುಗೊರೆಯೆಂದರೆ ಈ ಪುಸ್ತಕಗಳು. ಎಷ್ಟು ಸಲ ಓದಿದರೂ ಮತ್ತೆ ಮತ್ತೆ ಓದಬೇಕೆನಿಸುವ, ಮತ್ತೂ ಹೊಸ ಹೊಸ ವಿಷಯಗಳನ್ನು ತಿಳಿಸಿಕೊಡುವ, ಕಷ್ಟಗಳ ಸರಮಾಲೆ ಎದುರಾದರೂ ಮುನ್ನುಗ್ಗಿ ನಡೆಯುವ ರೀತಿ ಹೇಳಿಕೊಡುವ ಅಪರೂಪದ ಪುಸ್ತಕಗಳಿವು.<br />
<br />
ಅಂಕಿತ ಪುಸ್ತಕ ಸರಣಿಯ ಎಲ್ಲಾ ಪುಸ್ತಕಗಳನ್ನು ಮುದ್ರಿಸಿದೆ.</div>
Sowmyahttp://www.blogger.com/profile/04986610432583636943noreply@blogger.com0tag:blogger.com,1999:blog-77035279950324348.post-5410652037203499682018-07-02T10:44:00.001-07:002018-07-02T10:44:17.155-07:00satyajit ray<div dir="ltr" style="text-align: left;" trbidi="on">
ಯಾವ ಇಸವಿ ನೆನಪಿಲ್ಲ, ತುಷಾರದಲ್ಲಿ ಕಾರ್ವಸ್ ಎಂಬ ಜಾಣ ಕಾಗೆಯೊಂದರ ಕಥೆ ಓದಿದ್ದೆ. ಒಳ್ಳೆಯ ಮನಸ್ಸಿನ, ಭಾವುಕ ವಿಜ್ಞಾನಿಯೊಬ್ಬ ಕಾಗೆಯ ಜೊತೆಗೆ ಸ್ನೇಹ ಬೆಳೆಸಿ, ಅದನ್ನು ತರಬೇತಿಗೊಳಿಸಿ ಜಾಣನನ್ನಾಗಿಸುವ ಫ್ಯಾಂಟಸಿ ಕಥೆಯದು. ಮೊದಲ ಓದಿಗೆ ಅನಿಸಿದ್ದು, ಇದು ಖಂಡಿತಾ ಇಂಗ್ಲಿಷ್ ಕಥೆ, ಅದನ್ನು ಯಾರೋ ಅನುವಾದಿಸಿದ್ದಾರೆ ಎಂದು. ಆಮೇಲೆ ಅದೆಷ್ಟು ಸಲ ಓದಿದ್ದೇನೋ ತಿಳಿದಿಲ್ಲ, ಆ ಕಥೆ ತಲೆಯಲ್ಲಿ ಅಚ್ಚೊತ್ತಿದಂತೆ ಕುಳಿತುಬಿಟ್ಟಿತ್ತು, ಸಾಲದೆಂಬಂತೆ ಮನೆ ಹಿತ್ತಿಲಿಗೆ ಬರುವ ಕಾಗೆಗಳನ್ನೆಲ್ಲ ಗಮನವಿಟ್ಟು ನೋಡೋದು, ಯಾರಿಗೊತ್ತು ನನಗೂ ಒಂದು ಕಾರ್ವಸ್ ಸಿಗಬಹುದು, ಅದೂ ನನ್ನ ಜತೆ ಮಾಥ್ಸ್, ನಂಬರ್ಸ್ ಎಲ್ಲಾ ಕಲೀಬಹುದು ಎಂಬ ಕನಸುಗಳು ಬೇರೆ. ಆ ತುಷಾರವನ್ನು ನನ್ನ ನೋಟ್ ಬುಕ್ಕಿನೊಳಗೆ ಅಡಗಿಸಿ ಕದ್ದು ತಿನ್ನುವ ಬೆಲ್ಲದಂತೆ ಪದೇ ಪದೇ ಓದಿ ಖುಷಿಪಡುತ್ತಿದ್ದೆ. (ತರುವ ಪ್ರತೀ ಮಾಸಪತ್ರಿಕೆಗಳನ್ನು ತಿಂಗಳು ಹಾಗೂ ವರ್ಷಗಳ ಪ್ರಕಾರ ನೀಟಾಗಿ ಜೋಡಿಸಿ ಇಡುತ್ತಿದ್ದರು ನನ್ನ ತಂದೆ) ಸ್ವಲ್ಪ ಬುದ್ಧಿ ಬಂದ ಮೇಲೆ, ಆ ಕಥೆಯ ಬರಹಗಾರನ ಬರೆದ ಬೇರೆ ಕಥೆಗಳನ್ನೂ ಓದಬೇಕೆಂಬ ಹುಚ್ಚು ಬಲಿಯಲಾರಂಭಿಸಿತು. ಆ ಕಥೆಗಾರನ ಬಗ್ಗೆ ಆಗೊಮ್ಮೆ ಈಗೊಮ್ಮೆ ದೂರದರ್ಶನದಲ್ಲಿ ಕೇಳಿದ, ನೋಡಿದ ನೆನಪು. ಆತ ಸತ್ಯಜಿತ್ ರೇ. ಒಬ್ಬ ಒಳ್ಳೆ ಚಿತ್ರ ನಿರ್ದೇಶಕ ಎಂಬ ಮಾಹಿತಿ ಬಿಟ್ಟರೆ ಬೇರೆ ಏನೂ ತಿಳಿಯಲಿಲ್ಲ. ಯಥಾಪ್ರಕಾರ ಉಡುಪಿಯಲ್ಲಿ ಇದ್ದ ಕಾಮತ್ ಲೈಬ್ರರಿ, ಸಾರ್ವಜನಿಕ ಗ್ರಂಥಾಲಯಗಳನ್ನು ತಲೆ ಕೆಳಗೆ ಮಾಡಿದರೂ ಯಾವುದೇ ಪುಸ್ತಕವೂ ನನಗೆ ಸಿಗಲಿಲ್ಲ. ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ, ಧಾರವಾಡ, ಸಾಹಿತ್ಯ ಸಮ್ಮೇಳನಗಳು, ಬೆಂಗಳೂರಿನ ಎಲ್ಲಾ ಪುಸ್ತಕ ಮಳಿಗೆಗಳು ಹೀಗೆ ಹೋದ ಕಡೆಯೆಲ್ಲಾ ಜಾಲಾಡಿದೆ, ಇಂಗ್ಲೀಷಿನಲ್ಲಿ ಬೇರೆ ಬೇರೆ ಪುಸ್ತಕಗಳು ದೊರೆತವೇ ಹೊರತು, ಅನುವಾದಿತ ಕಥಾ ಸಂಕಲನ ಸಿಗಲಿಲ್ಲ. ಆ ವ್ಯಕ್ತಿಯ ಬಗ್ಗೆ, ಪಥೇರ್ ಪಾಂಚಾಲಿಯ ಬಗ್ಗೆ ಇನ್ನಷ್ಟು ತಿಳಿಯಿತು, ಎಂತಹ ಅದ್ಭುತ ವ್ಯಕ್ತಿ ಎಂಬುದು ಅರಿವಾದಂತೆ ಕನ್ನಡಕ್ಕೆ ಅನುವಾದವಾದ ಅವರ ಎಲ್ಲ ಕಥೆಗಳನ್ನೂ ಓದಬೇಕೆಂಬ ಚಡಪಡಿಕೆ ಶುರುವಾಯಿತು. ಇವೆಲ್ಲದರ ಮಧ್ಯೆ ನಾನು ಅಡಗಿಸಿಟ್ಟ ಪ್ರತಿ ಕಳೆದು ಹೋಗಿ ಅನುವಾದಕರ ಹೆಸರೂ ತಿಳಿಯದೆ ಒದ್ದಾಡುವಂತಾಯಿತು. ಇಂಟರ್ನೆಟ್, youtube ಬಂದ ಮೇಲೆ ಅವರ ಇಂಡಿಗೋ ಕಥೆಯನ್ನು ಇಂಗ್ಲೀಷಿನಲ್ಲಿ ಓದಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಇದರ ಮಧ್ಯೆ ಸಾಹಿತ್ಯ ಸಮ್ಮೇಳನವೊಂದರಲ್ಲಿ ಸತ್ಯಜಿತ್ ರೇ ಕಥೆಗಳು ಎಂಬ ಪುಸ್ತಕ ಕಣ್ಣಿಗೆ ಬಿದ್ದಾಗ ಕುಣಿಯುವುದೊಂದೇ ಬಾಕಿ. ಈ ಪುಸ್ತಕ ಕೈಗೆ ಬಂದ ನಂತರ ಕಡಿಮೆಯೆಂದರೆ ೨೦ ಸಲವಾದರೂ ಓದಿರಬೇಕು. ಪ್ರತೀ ಸಲವೂ ಅದೇ ಬೆರಗು, ಕೌತುಕವನ್ನು ಹುಟ್ಟಿಸುತ್ತದೆ. ಎಂತೆಂತ ಕಥೆಗಳಪ್ಪ! ಈ ಮನುಷ್ಯನಿಗೆ ಈ ಥರದ ಯೋಚನೆಯಾದರೂ ಹೇಗೆ ಹುಟ್ಟಿತ್ತು ?<br />
ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ, ಅನುವಾದಕ ಹೇಳುವಂತೆ ಕಲ್ಪನೆ, ವಾಸ್ತವ, ಫ್ಯಾಂಟಸಿ, ವೈಜ್ಞಾನಿಕ ಸತ್ಯ, ಮನುಷ್ಯ ಸ್ವಭಾವದ ನಿಗೂಢತೆ ಹೀಗೆ ಅನೇಕ ಸಂಗತಿಗಳನ್ನು ಉಚಿತ ಪ್ರಮಾಣದಲ್ಲಿ ಬಳಸಿ ರಚಿತವಾದ ಕಥೆಗಳಿವು.<br />
ಖಗಂನಲ್ಲಿ ಹಾವಾಗುವ ಮನುಷ್ಯ, ಸಿನಿಮಾದಲ್ಲಿ ಅಭಿನಯಿಸುವ ಪಟೊಲ್ ಬಾಬು (youtube ಅಲ್ಲಿ ಕಾಮಿಕ್ ಬುಕ್ ಇದೆ), ತುಳಸಿಬಾಬುವಿನ ಬಿಲ್ ಎಂಬ ಹಕ್ಕಿ, ಅಶಮಂಜ ಬಾಬುವಿನ ನಗುವ ಬ್ರೌನಿ, ತದ್ರೂಪಿಯ ರತನ್ ಬಾಬು - ಮಣಿಲಾಲ್, ಪದೇ ಪದೇ ಕಾಡುವ ನೀಲಿ ತೋಟದ ಇರುಳು (ಇಂಡಿಗೋ), ದ್ವಂದ ಯುದ್ಧ, ಮೊದಲೇ ಹೇಳಿದ ಜಾಣ ಕಾರ್ವಸ್, ಅದ್ಭುತ ಟೆಲಸ್, ಸಹಾರಾ ರಹಸ್ಯದ ಡೆಮಿಟ್ರಿಯಸ್ ಎಂಬ ಜೀವವಿಜ್ಞಾನಿ, ಕಂಡೂ ಕಾಣದ ಏಕ ಶೃಂಗಿ ಎಲ್ಲರೂ ಈ ಪುಸ್ತಕದ ಪಯಣದ ಸಹಪಯಣಿಗರು. ಪ್ರತೀ ಕಥೆಯನ್ನೂ ನಿಧಾನವಾಗಿ ಹನಿಹನಿಯಾಗಿ ಚಪ್ಪರಿಸಿಕೊಂಡು ಓದಬಹುದು. ಕಣ್ಣು ಮುಚ್ಚಿದರೆ ಅತಿಮಾನುಷ ಲೋಕಕ್ಕೆ ತೆರಳಿದ ಅನುಭವ. ವಾಸ್ತವ ಮತ್ತು ಫ್ಯಾಂಟಸಿ ನಡುವಿನ ಗೆರೆಯನ್ನು ಅಲ್ಲಲ್ಲಿ ಸತ್ಯಜಿತ್ ರೇ ಅಳಿಸಿಬಿಡುತ್ತಾರೆ. ಪ್ರಾಣಿ, ಪಕ್ಷಿಗಳು ಮತ್ತು ಪರಿಸರದ ಅವರ ಅಪಾರ ಜ್ಞಾನ ಪದೇ ಪದೇ ಈ ಕಥೆಗಳಲ್ಲಿ ಕಂಡುಬರುತ್ತದೆ. ಆಸಕ್ತಿದಾಯಕ ವಿಚಾರಗಳನ್ನು ತಿಳಿಸುತ್ತದೆ. ಮಾನಸ ಸರೋವರದಲ್ಲಾಚೆಯೆಲ್ಲೋ ಇರಬಹುದಾದ ಡುಂಗ್-ಲುಂಗ್-ಡೋ ಕೈಬೀಸಿ ಕರೆಯುತ್ತದೆ! ಪುಸ್ತಕ ಕೆಳಗಿಟ್ಟ ಮೇಲೆ ಒಂದು ಚಿಕ್ಕ ನಿಟ್ಟುಸಿರು,' ಅಯ್ಯೋ, ಕಥೆಗಳು ಮುಗಿದೇ ಹೋದವಲ್ಲ? '<br />
ತದ್ರೂಪಿ ಕಥೆಯನ್ನು ನಾನು ಓದಿ ರೆಕಾರ್ಡ್ ಮಾಡಿಕೊಂಡು ನನ್ನ ಮಗನಿಗೆ ಕೇಳಿಸಿದ್ದೇನೆ. ದೊಡ್ಡವರಿಗಷ್ಟೇ ಅಲ್ಲದೆ ಮಕ್ಕಳಿಗೆ ಕಾಣಿಕೆಯಾಗಿ ನೀಡಬಹುದಾದ ಒಂದೊಳ್ಳೆ ಪುಸ್ತಕ.<br />
ಪ್ರಿಸಂ ಬುಕ್ಸ್ ಇದನ್ನು ಪ್ರಕಟಿಸಿದ್ದು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿರುವವರು ಎನ್ ಶ್ರೀನಿವಾಸ್ ಉಡುಪ.</div>
Sowmyahttp://www.blogger.com/profile/04986610432583636943noreply@blogger.com1